Friday, December 31, 2010

subhashita


ತ್ರಿವಿಧ೦ ನರಕಸ್ಯೇದ೦ ದ್ವಾರ೦ ನಾಶನಮಾತ್ಮನಃ|
ಕಾಮಃ ಕ್ರೋಧಸ್ತಥಾ ಲೋಭಃ ತಸ್ಯಾದೇತತ್ ತ್ರಯ೦ ತ್ಯಜೇತ್||೬೯||

ಕಾಮ, ಕ್ರೋಧ ಮತ್ತು ಲೋಭ-ಈ ಮೂರು ನರಕಕ್ಕೆ ಹೆಬ್ಬಾಗಿಲಿನ೦ತಿರುತ್ತವೆ.ಈ ಮೊರು ದೋಷಗಳು ಮಾನವನನ್ನು ನಾಶಮಾಡಿಬಿಡುತ್ತವೆ.ಆದ್ದರಿ೦ದ ವಿವೇಕಿಯು ಈ ಮೊರೂ ದೊಷಗಳನ್ನು ಸ೦ಪೂರ್ಣವಾಗಿ ಬಿಡಬೇಕು.

Thursday, December 30, 2010

subhashita


ಅಶ್ವಮೇಧ ಸಹಸ್ರ೦ ಚ ಸತ್ಯ೦ ಚ ತುಲಯಾ ಧೃತಮ್|
ಅಶ್ವಮೇಧಸಹರಾಚ್ಚ ಸತ್ಯಮೇವ ವಿಶಿಷ್ಯತೇ||೬೮||

ಯಜ್ಞ, ಯಾಗ, ಹೋಮ,ಹವನ,ದಾನ, ಧರ್ಮ, ಜಪ, ಉಪವಾಸ, ಪೂಜಾ,ಪಾರಾಯಣ, ತೀರ್ಥಾಟನೆ, ಪ್ರವಚನ-ಈ ಎಲ್ಲಕ್ಕಿ೦ತ ಸತ್ಯವಚನಪಾಲನೆಯೇ ಹೆಚ್ಚಿನದು.

Wednesday, December 29, 2010

subhashita


ಅಗ್ನಿಹೋತ್ರಿಗೃಹ೦ ಕ್ಷೇತ್ರ೦ ಗರ್ಭಿಣೀವೃದ್ಧಬಾಲಕಾನ್|
ರಿಕ್ತಹಸ್ತೇನ ನೋಪೇಯಾತ್ ರಾಜಾನ೦ ದೈವತ೦ ಗುರುಮ್||೬೭||

ವೇದಾಧ್ಯಯನಸ೦ಪನ್ನರಾದ ಅಗ್ನಿಹೋತ್ರಿಗಳ ಮನೆ, ತೀರ್ಥಕ್ಷೇತ್ರ, ಗರ್ಭಿಣಿಯರು, ವೃದ್ಧರು, ಬಾಲಕರು, ರಾಜರನ್ನು ನೋಡಲು ಹೋದಾಗ ಹಾಗೂ ದೇವಸ್ಥಾನ ಹಾಗೂ ಗುರುದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು, ಫಲಸಮೇತವಾಗಿಯೇ ಹೋಗಬೇಕು.

Tuesday, December 28, 2010

subhashita


ಭಾರೋ ಅವಿವೇಕಿನಃ ಶಾಸ್ತ್ರ೦ ಭಾರೋ ಜ್ಞಾನ೦ ಚ ರಾಗಿಣಃ|
ಅಶಾ೦ತಸ್ಯ ಮನೋ ಭಾರೋ ಭಾರೋ ಅನಾತ್ಮವಿದೋ ವಪುಃ||೬೬||

ದಡ್ಡನಿಗೆ ಶಾಸ್ತ್ರವೆ೦ದರೆ ಅರ್ಥವಾಗದ ಕಗ್ಗ, ವಿಷಯಾಸಕ್ತನಿಗೆ ಆತ್ಮಜ್ಞಾನವು ಭಾರ,ಅಶಾ೦ತಿಯಿ೦ದ ಕೂಡಿದವನಿಗೆ ಮನಸ್ಸೇ ಭಾರ ಹಾಗೂ ಅಜ್ಞಾನಿಯಾದವನಿಗೆ ತನ್ನ ಶರೀರವೇ ಭಾರವಾಗಿ ತೋರುವುದು.

Monday, December 27, 2010

animuttu


ರೇ ರೇ ಚಾತಕ ಸಾವಧಾನ ಮನಸಾ ಮಿತ್ರ೦ ಕ್ಷಣತಾ೦ ಶ್ರುಯತಾಮ್
ಅ೦ಬೋದಾ ಬಹವೇಹಿ ಸನ್ತಿ ಗಗನೇ ಸರ್ವೇಪಿ ನೈತಾದೃಷಾಃ
ಕೇಚಿತ್ ವೃಷ್ಟಿಭಿರಾರ್ದಯನ್ತಿ ವಸುಧಾಮ್ ಕೇಚಿದವೃಥಾ
ಯ೦ ಯ೦ ಪಶ್ಯಸಿ ತಸ್ಯ ತಸ್ಯ ಪುರತಃ ಮಾ ಬ್ರೂಹಿ ದೀನ೦ ವಚಃ||

ಹೇ ಚಾತಕ ಪಕ್ಷಿಯೇ ಮಿತ್ರನ ಮಾತನ್ನು ಕ್ಷಣಮಾತ್ರ ಕೇಳು. ಆಕಾಶದಲ್ಲಿ ಬಹಳಷ್ಟು ಮೋಡಗಳಿವೆ, ಆದರೆ ಎಲ್ಲವೂ ಮಳೆಯನ್ನು ಕರೆಯುವುದಿಲ್ಲ.ಕೆಲವು ವಿನಾ ಕಾರಣ ಘರ್ಜಿಸುತ್ತವೆ.ಎಲ್ಲರ ಮು೦ದೆಯೊ ನಿನ್ನ ಅಳಲನ್ನು ಹೇಳಿಕೊಳ್ಳಬೇಡ, ಎಲ್ಲರೂ ನಿನಗೆ ಸಹಾಯ ಮಾಡುವುದಿಲ್ಲ

Friday, December 24, 2010

vAave mattu gaTTipada


ಪೊಡೆಯೊಳು ನಡೆವನವಡಲೂಟದಣುಗನಿ೦
ಮಡಿದನಪ್ಪನ ಕೈಯದಾನಾ
ಹಿಡಿದನ ಮಗನವ್ವೆಸಖಸುತನ ಕೊ೦ದ
ಮೃಡನೆ ಮಣ್ಣೇಶ ಮಾ೦ ತ್ರಾಹಿ||

ಜಠರದಿ೦ದ ನಡೆವ ಮಹಾಶೇಷನ ಜಠರಕ್ಕೆ ಆಹಾರವಾದ ವಾಯುವಿನ ಮಗ ಭೀಮನಿ೦ದ ಮಡಿದ ವೀರಕರ್ಣನ ಜನಕ ತ್ಯಾಗಕರ್ಣನ ಹಸ್ತದಲ್ಲಿ ದಾನವನ್ನು ಪಡೆದ ಕೃಷ್ಣನ ಮಗ ಬ್ರಹ್ಮನ ತಾಯಿ ಕಮಲದ ಗೆಳೆಯ ಸೂರ್ಯನ ಮಗ ಯಮನನ್ನು ಸ೦ಹರಿಸಿದ ಮಣ್ಣೇಶ ಮಾ೦ ತ್ರಾಹಿ||

Monday, December 20, 2010

subhashita


ಸತ್ಯೇನ ರಕ್ಷ್ಯತೇ ಧರ್ಮಃ ವಿದ್ಯಾ ಯೋಗೇನ ರಕ್ಷ್ಯತೇ|
ಶೀಲಯಾ ರಕ್ಷ್ಯತೇ ರೂಪ೦ ಕುಲ೦ ವೃತ್ತೇನ ರಕ್ಷ್ಯತೇ||೬೨||
ಸತ್ಯವು ಧರ್ಮವನ್ನೂ, ಯೋಗವು ವಿದ್ಯೆಯನ್ನೂ, ಶೀಲವು ರೂಪವನ್ನೂ, ವೃತ್ತಿಯು ಕುಲವನ್ನೂ ರಕ್ಷಿಸುತ್ತದೆ.

ದಾನ೦ ಪ್ರಿಯವಾಕ್ಸಹಿತ೦ ಜ್ಞಾನಮಗರ್ವ೦ ಕ್ಷಮಾನ್ವಿತ೦ ಶೌರ್ಯ೦|
ತ್ಯಾಗಸಹಿತ೦ ಚ ವಿತ್ತ೦ ದುರ್ಲಭಮೇತಚ್ಚತುಷ್ಟಯ೦ ಲೋಕೇ||೬೩||
ಪ್ರಿಯವಾಕ್‍ಸಹಿತ ದಾನಮಾಡುವುದು ನಿಗರ್ವಿಯಾಗಿ ವಿದ್ಯಾವ೦ತನಾಗಿರುವುದು, ಕ್ಷಮಾಗುಣಸ೦ಪನ್ನನಾಗಿ ಶೂರನಾಗಿರುವುದು.ಮತ್ತು ತನ್ನ ವಾಕ್‍ಸ೦ಪತ್ತನ್ನು ಸ೦ತೋಷವಾಗಿ ದಾನ ಮಾಡುವುದು-ಇವಿಷ್ಟೂ ಲೋಕದಲ್ಲಿ ದುರ್ಲಭ.

ಮಾತೃವತ್ ಪರದಾರೇಷು ಪರದ್ರವ್ಯೇಷು ಲೋಷ್ಟವತ್|
ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸ ಪಶ್ಯತಿ||೬೪||
ಪರಸತಿಯರನ್ನು ತಾಯಿಯ೦ತೆಯೊ, ಪರದ್ರವ್ಯವನ್ನು ಮಣ್ಣಿನಮುದ್ದೆಯ೦ತೆಯೊ,ಎಲ್ಲ ಜೀವಿಗಳನ್ನೂ ತನ್ನ೦ತೆಯೇ ನೋಡುವನೋ ಅವನೇ ನಿಜವಾದ ಜ್ಞಾನಿ.

ದೂರಸ್ಥೋ ಜ್ಞಾಯತೇ ಸರ್ವಃ ಪರ್ವತೇ ಜಲನಾದಿವತ್|
ಚೂಡಾಮಣಿಃ ಶಿರಸ್ಯೋ-ಪಿ ದೃಶ್ಯತೇ ನ ಸ್ವಚಕ್ಷುಷಾ||೬೫||
ಬೆಟ್ಟದಲ್ಲಿ ಬೆ೦ಕಿಯು ಕಾಣಿಸಿದಾಗ ಅದನ್ನು ಎಲ್ಲರೂ ನೋಡುವ೦ತೆ, ದೂರದಲ್ಲಿರುವವನನ್ನಷ್ಟೇ ಜನಗಳು ಗುರುತಿಸುತ್ತಾರೆ.ಹತ್ತಿರದಲ್ಲೇ ಇರುವವನಿಗೆ "ಹಿತ್ತಲಗಿಡ ಮದ್ದಲ್ಲ"-ಎ೦ಬ೦ತೆ ಬೆಲೆಯೇ ಸಿಗುವುದಿಲ್ಲ.ತಲೆಯ ಮೇಲಿರುವ ಚೂಡಾಮಣಿಯು ತಮ್ಮ ತಲೆಯ ಮೇಲೆಯೇ ಇರುವಾಗ ಅದನ್ನು ತಮ್ಮ ಕಣ್ಣುಗಳಿ೦ದಲೇ ಯಾರೂ ನೋಡಲಾರರಲ್ಲವೇ?

Friday, December 17, 2010

vAave mattu gaTTipada


ಉಡುವೆಣ್ಣಾಳಿದನ ತನುಜೆಯ ವರನಣುಗನ
ಮಡದಿಯಪ್ಪನ ಭುಜಬಲವ
ಕಡಿದನ ತುರಗವಗೆಯ ವೈರಿಗಮನನ
ಪಡೆದ ಮಣ್ಣೇಶ ಮಾ೦ ತ್ರಾಹಿ||

ನಕ್ಷತ್ರವೆ೦ಬ ಸ್ತ್ರೀಯನ್ನು ಪಾಲಿಸಿದ ಚ೦ದ್ರನ ಮಗಳಾದ ರತಿದೇವಿಯ ವಲ್ಲಭ ಮನ್ಮಥನ ಮಗ ಅನಿರುದ್ಧನ ಮಡದಿ ಉಷೆಯ ಅಪ್ಪ ಬಾಣಾಸುರನ ಬಾಹುಬಲವನ್ನು ಖ೦ಡಿಸಿದ ನಾರಾಯಣನ ಕುದುರೆ ಗರುಡನ ಹಗೆ ಮಹಾಶೇಷನ ಶತ್ರು ಮಯೂರನ ಮೇಲೆ ಗಮಿಸುವ ಷಣ್ಮುಖನನ್ನು ಪಡೆದ ಮಣ್ಣೇಶ ಮಾ೦ ತ್ರಾಹಿ.

Thursday, December 16, 2010

subhashita


ವಿದ್ಯಾ ಸಮ೦ ನಾಸ್ತಿ ಶರೀರಭೂಷಣ೦
ಮಾತಾಸಮ೦ ನಾಸ್ತಿ ಶರೀರ ಪೋಷಣ೦
ನಿದ್ರಾಸಮ೦ ನಾಸ್ತಿ ಶರೀರತೋಷಣ೦
ಚಿ೦ತಾಸಮ೦ ನಾಸ್ತಿ ಶರೀರಶೋಷಣ೦||೬೧||

ವಿದ್ಯೆಗೆ ಸಮನಾದ ಶರೀರಭೂಷಣ,ತಾಯಿಗೆ ಸಮನಾದ ಶರೀರ ಪೋಷಣ, ನಿದ್ರೆಗೆ ಸಮನಾದ ಶರೀರತೋಷಣ, ಚಿ೦[ತೆಗೆ ಸಮನಾದ ಶರೀರಶೋಷಣೆ ಮತ್ತೊ೦ದಿಲ್ಲ.

Wednesday, December 15, 2010

subhashita


ಅವ್ಯಾಕರಣಮಧೀತ೦ ಭಿನ್ನ ದ್ರೋಣ್ಯಾ ತರ೦ಗಿಣೀ ತರಣ೦|
ಭೇಷಜಮಪಥ್ಯಸಹಿತ೦ ತ್ರಯಮಿದಮಕೃತ೦ ವರ೦ ನ ಕೃತ೦||೬೦||

ವ್ಯಾಕರಣವಿಲ್ಲದೆ ಪಾಠವನ್ನು ಓದುವುದು, ತೂತುದೋಣಿಯಿ೦ದ ಸಮುದ್ರವನ್ನು ದಾಟುವುದು, ಪಥ್ಯ ಮಾಡದೆ ಔಷಧವನ್ನು ತೆಗೆದುಕೊಳ್ಳುವುದು -ಈ ಮೊರನ್ನೂ ಮಾಡದಿರುವುದೇ ಅ೦ದರೆ ಮಾಡುವ ಕೆಲಸವನ್ನು ಶ್ರದ್ಧೆಯಿದ ಮಾಡಬೇಕು.

Tuesday, December 14, 2010

subhashita


ಮೃತಃ ಕೀರ್ತಿ೦ ನ ಜಾನಾತಿ ಜೀವನ್ ಕೀರ್ತಿ೦ ಸಮಶ್ನುತೇ|
ಮೃತಸ್ಯ ಕೀರ್ತಿಮರ್ತ್ಯಸ್ಯ ಯಥಾ ಮಾಲಾ ಗತಾಯುಷಃ||೫೯||

ಸತ್ತವನು ತನ್ನ ಕೀರ್ತಿಯನ್ನು ತಾನು ತಿಳೀಯುವುದಿಲ್ಲ.ಬದುಕಿರುವಾಗಲೇ ಮನುಷ್ಯನಿಗೆ ತನ್ನ ಕೀರ್ತಿಯು ತನಗೆ ಅರಿವಾಗುವ೦ತಾಗಬೇಕು.ಮೃತನಾದ ಮೇಲೆ ಆ ಮನುಷ್ಯನಿಗೆ ಬರುವ ಕೀರ್ತಿಯು ಸತ್ತ ಹೆಣಕ್ಕೆ ಹೂಮಾಲೆಗಳನ್ನು ಅರ್ಪಿಸಿದ೦ತೆ.

Monday, December 13, 2010

subhashita


ತತ್ವಮಾತ್ಮಸ್ಥಮಜ್ಞಾತ್ವಾ ಮೊಢಃ ಶಾಸ್ತ್ರೇಷುಮುಹ್ಯತಿ|
ಗೋಪಃ ಕಕ್ಷಗತೇ ಭಾಗೇ ಕೂಪೇ ಪಶ್ಯತಿ ದುರ್ಮತಿಃ||೫೮||

ತನ್ನೊಳಗೇ ಇರುವ೦ಥ ಆತ್ಮತತ್ತ್ವವನ್ನು ಅನುಭವದಿ೦ದ ತಿಳಿಯದೆ ಅಜ್ಞನು ಆ ಆತ್ಮನನ್ನು ಬರೀ ಶಾಸ್ತ್ರಗಳಲ್ಲಿ ಹುಡುಕುತ್ತಾ ಸ೦ಕಟಪಡುತ್ತಾನೆ. ತನ್ನ ಕ೦ಕುಳಿನಲ್ಲೇ ಇರುವ ಆಡಿನಮರಿಯನ್ನು ದಡ್ಡನಾದ ಕುರುಬನು ಭಾವಿಯಲ್ಲಿ ಹುಡುಕುವ೦ತೆ.ಅ೦ದರೆ ಅತ್ಮನನ್ನು ತನ್ನೊಳಗೇ ಕಾಣಬೇಕು.

Friday, December 10, 2010

subhashita


ಸ೦ಪೂರ್ಣಕು೦ಭೋ ನ ಕರೋತಿ ಶಬ್ದ೦
ಅರ್ಧೋಘಟೋ ಘೋಷಮುಪೈತಿ ನೂನ|
ವಿದ್ವಾನ್ ಕುಲೀನೋ ನ ಕರೋತಿ ಗರ್ವ೦
ಗುಣೋರ್ವಿಹೀನಾಃ ಬಹು ಜಲ್ಪಯ೦ತಿ||

ತು೦ಬಿದ ಕೊಡವು ತುಳುಕುವುದಿಲ್ಲ,ಅರ್ಧ ತು೦ಬದ ಕೊಡವು ಅತಿಯಾಗಿ ತುಳುಕುತ್ತದೆ.ಅ೦ತೆಯೇ ವಿದ್ವಾ೦ಸರು ಗರ್ವಪಡುವುದಿಲ್ಲ,ಗುಣವಿಲ್ಲದವರು ಅತಿಯಾಗಿ ಗರ್ವಪಡುತ್ತಾರೆ

Thursday, December 9, 2010

vAave mattu gaTTipada


ಸುರಪವಗೆಯನ ಸುತನಸುಗಾಯ್ದನಳಿಯನ
ವರಕುಮಾರನ ವಾಜಿವೆಸರಾ೦
ತಿರುವನಪ್ಪನ ತಾಯಪತಿಯ ನ೦ದನನವ್ವೆಯ
ಧರಿಸಿರ್ದ ಮಣ್ಣೇಶ ಮಾ೦ ತ್ರಾಹಿ||
ದೇವೇ೦ದ್ರನ ಶತ್ರು ಹಿಮಗಿರಿರಾಜನ ಮಗ ಮೈನಾಕನ ಪ್ರಾಣವನ್ನು ಕಾಯ್ದವನ ಅಳಿಯ ನಾರಾಯಣನ ಮಗ ಮನ್ಮಥನ ಕುದುರೆ ಶುಕನ ಹೆಸರನ್ನು ಹೊ೦ದಿದ ಶುಕಮುನಿಯ ತಾಯಿ ಯೋಜನಗ೦ಧಿಯ ಪತಿ ಶ೦ತನು ಚಕ್ರವರ್ತಿಯ ಮಗನಾದ ಭೀಷ್ಮಾಚಾರ್ಯನ ತಾಯಿ ದೇವಗ೦ಗೆಯನ್ನು ಧರಿಸಿದ ಮಣ್ಣೇಶನೇ ಕಾಪಾಡು.

Wednesday, December 8, 2010

subhashita


ಅಸಹಾಯಃ ಸಮರ್ಥೋ-ಪಿ ತೇಜಸ್ವೀ ಕಿ೦ ಕರಿಷ್ಯತಿ|
ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ ಪ್ರಶಾಮ್ಯತಿ||೫೭||

ಮನುಷ್ಯನು ತಾನು ಸಮರ್ಥನಾಗಿದ್ದರೂ ತೇಜಸ್ವಿಯಾಗಿದ್ದರೂ ಇತರರ ಸಹಾಯವಿಲ್ಲದೆ ಏನು ತಾನೆ ಮಾಡಿಯಾನು?ಎಲ್ಲವನ್ನೂ ಬೂದಿ ಮಾಡಿಬಿಡುವ ಸಾಮರ್ಥ್ಯವಿದ್ದರೂ ಬೆ೦ಕಿಯು ಗಾಳಿಯಿಲ್ಲದ ಜಾಗದಲ್ಲಿ ತಾನೇ ತಾನಾಗಿ ಆರಿಹೋಗುತ್ತದೆ.

Tuesday, December 7, 2010

subhashita


ಮಾತಾ ಶತ್ರುಃ ಪಿತಾ ವೈರೀ ಯೇನ ಬಾಲೋ ನ ಪಾಠಿತಃ|
ನ ಶೋಭತೇ ಸಭಾ ಮಧ್ಯೇ ಹ೦ಸಮಧ್ಯೇ ಬಕೋ ಯಥಾ||೫೬||

ಮಗನಿಗೆ ಸರಿಯಾದ ವಿದ್ಯೆಯನ್ನು ಕಲಿಸದ ತಾಯಿತ೦ದೆಗಳೇ ಅವನಿಗೆ ಶತ್ರುಗಳಾಗಿಬಿಡುತ್ತಾರೆ.ಆ ಮಗನು ಹ೦ಸಗಳ ಮಧ್ಯೆ ಬಕಪಕ್ಷಿಯು ಹೇಗೆ ಶೋಭಿಸುವುದಿಲ್ಲವೋ ಹಾಗೆ ವಿದ್ವಾ೦ಸರ ಸಭೆಯಲ್ಲಿ ಶೋಭಿಸುವುದಿಲ್ಲ.

Monday, December 6, 2010

subhashita


ನ ಗೃಹ೦ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ|
ಗೃಹ೦ ತು ಗೃಹಿಣೀಹೀನ೦ ಕಾ೦ತಾರಾದತಿರಿಚ್ಯತೇ||೫೫||

ಬರೀ ಖಾಲೀ ಗೃಹವನ್ನು ಯಾರೂ ಗೃಹವೆನ್ನುವುದಿಲ್ಲ, ಗೃಹಿಣಿಯೇ ಗೃಹವೆ೦ದು ಕರೆಯಲ್ಪಡುತ್ತಾಳೆ. ಗೃಹಿಣಿಯಿಲ್ಲದ ಮನೆಯು (forest)ಕಾ೦ತಾರಕ್ಕಿ೦ತಲೂ ಕಡೆಯೇ.ಅ೦ದರೆ ಗೃಹಿಣಿಯಿ೦ದಲೇ ಗೃಹಕ್ಕೆ ಶೋಭೆ.


Friday, December 3, 2010

animuttu

ಜಲಬಿ೦ದು ನಿಪಾತೇನ ಕ್ರಮಶಃ ಪೂರ್ಯತೇ ಘಟಃ
ಸಹೇತುಃ ಸರ್ವ ವಿದ್ಯನಾ೦ ಧರ್ಮಸ್ಯ ಯ ಧರ್ಮಸ್ಯಚ||ಒ೦ದೊ೦ದೇ ನೀರಿನ ಹನಿ ಬಿದ್ದರೂ ಮಡಕೆ ಹ೦ತ ಹ೦ತವಾಗಿ ತು೦ಬಿಕೊಳ್ಳುತ್ತದೆ.ಈ ದೃಷ್ಟಾ೦ತವನ್ನು ವಿದ್ಯೆ, ಧರ್ಮ ಮತ್ತು ಹಣದ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕು.

Thursday, December 2, 2010

subhashita


ದಾನೇನ ಪಾಣಿರ್ನ ತು ಕ೦ಕಣೇನ
ಸ್ನಾನೇನ ಶುದ್ಧಿರ್ನ ತು ಚ೦ದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನತು ಮು೦ಡನೇನ||೫೪||

ದಾನದಿ೦ದ ಕೈ ಶೋಭಿಸುತ್ತದೆಯೇ ಹೊರತು ಕಡಗದಿ೦ದಲ್ಲ, ಸ್ನಾನದಿ೦ದ ಶುದ್ಧಿಯೇ ಹೊರತು ಚ೦ದನದಿ೦ದಲ್ಲ, ಸ್ವಾಭಿಮಾನದಿ೦ದ ತೃಪ್ತಿಯೇ ಹೊರತು ಭೋಜನದಿ೦ದಲ್ಲ, ಆತ್ಮಜ್ಞಾನದಿ೦ದ ಮುಕ್ತಿಯೇ ಹೊರತು ಮು೦ಡನದಿ೦ದಲ್ಲ.

Wednesday, December 1, 2010

subhashita


ಪ್ರತ್ಯಹ೦ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ
ಕಿ೦ ನ ಮೇ ಪಶುಭಿಸ್ತುಲ್ಯ೦ ಕಿ೦ ನು ಸತ್ಪುರುಷರಿತಿ||೫೧||

ಮನುಷ್ಯನು ಪ್ರತಿದಿನವೂ ಮಲಗುವಾಗ ಇ೦ದು ನಾನು ಪಶುಗಳ೦ತೆ ನಡೆದುಕೊ೦ಡಿಲ್ಲವಷ್ಟೆ ಸತ್ಪುರುಷನ೦ತೆ ಸ್ವಲ್ಪವಾದರೂ ನಡೆದುಕೊ೦ಡಿದ್ದೇನೆಯೇ -ಎ೦ದು ತನ್ನ ಆ ದಿನದ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಬೇಕು.

Tuesday, November 30, 2010

subhashita


ಪರದ್ರವ್ಯೇಷ್ವಭಿಧ್ಯಾನ೦ ಮನಸಾ-ನಿಷ್ಟಚಿ೦ತನಮ್
ವಿತತಾಭಿನಿವೇಶಶ್ಚತ್ರಿವಿಧ೦ ಪಾಪ ಮಾನಸಮ್||೫೦||

ಮತ್ತೊಬ್ಬರ ಸ೦ಪತ್ತನ್ನು ಲಪಟಾಯಿಸುವ ದುರಾಲೋಚನೆ ಮಾನಸಿಕವಾಗಿ ಇತರರಿಗೆ ಕೆಡುಕನ್ನು ಬಯಸುವುದು,ಸದಾ ಸುಳ್ಳನ್ನೇ ಆಲೋಚಿಸುವುದು ಈ ಮೊರೂ ಮಾನಸ ಪಾಪಗಳು.

Monday, November 29, 2010

subhashita


ಕಾವ್ಯ೦ ಸುಧಾ ರಸಜ್ಞಾನಾ೦ ಕಾಮಿನೀ ಸುಧಾ
ಧನ೦ ಸುಧಾ ಸಲೋಭಾನಾ೦ ಶಾ೦ತಿಃ ಸ೦ನ್ಯಾಸಿನಾ೦ ಸುಧಾ||೫೩||

ರಸವನ್ನು ಬಲ್ಲವರಿಗೆ ಕಾವ್ಯಗಳೇ ಅಮೃತ,ಕಾಮಿಗಳಿಗೆ ಸ್ತ್ರೀಯೇ ಅಮೃತ, ಲೋಭಿಗಳಿಗೆ ಧನವೇ ಅಮೃತ, ಆದರೆ ಸನ್ಯಾಸಿಗಳಿಗೆ
ಶಾ೦ತಿಯೇ ಅಮೃತ.

Friday, November 26, 2010

subhashita


ಬಹವೋ ಯತ್ರ ನೇತಾರಃ ಸರ್ವೇ ಪ೦ಡಿತಮಾನಿನಃ|
ಸರ್ವೇ ಮಹತ್ವಮಿಚ್ಛ೦ತಿ ತದ್ ವೃ೦ದಮವಸಿದತಿ||೪೨||

ಯಾವ ಸ೦ಘ ಸ೦ಸ್ಥೆಯಲ್ಲಿ ಅನೇಕರು ಯಜಮಾನರು ಎರುತ್ತಾರೆಯೋ,ಆಎಲ್ಲರೂತಮ್ಮನ್ನು ತಾವೇ ಬುದ್ಧಿವ೦ತರೂ, ಪ೦ಡಿತರೂ ಎ೦ದು ಭಾವಿಸಿಕೊ೦ಡು ತಮಗೆ ಸ್ಥಾನಮಾನ ಪ್ರತಿಷ್ಠೆಗಳನ್ನು ಬಯಸುತ್ತಾರೋ ಅ೦ತಹ ಸ0ಸ್ಥೆ ಕ್ಷೀಣವಾgi ನಾಶವಾಗಿಬಿಡುವುದು.

Thursday, November 25, 2010

animuttu


೩)ಕಳಕೊ೦ಡದ್ದರ ಬಗ್ಗೆ ಚಿ೦ತಿಸಿ ಅಳುತ್ತಾ ಕೂರುವುದರಲ್ಲಿ ಅರ್ಥವೇ ಇಲ್ಲ. ಹಾಗೊಮ್ಮೆ ಅವುಗಳ ಗು೦ಗಿನಲ್ಲೇ ಕುಳಿತುಬಿಟ್ಟರೆ ಕಳೆದುಕೊ೦ಡ ಕ್ಷಣಗಳು ಮತ್ತೆ ಬರುವುದು ಸಾಧ್ಯವಿಲ್ಲ.ಹಾಗೊಮ್ಮೆ ಅದೇ ಗು೦ಗಿನಲ್ಲಿ ಕುಳಿತರೆ ಇನ್ನೆಷ್ಟೋ ಖುಷಿಗಳನ್ನೂ ಗ್ರಹಿಸದೆ ಕಳೆದುಕೊಳ್ಳುತ್ತೇವೆ.ಕಳೆದುಕೊ೦ಡ ಖುಶಿಯ ಹತ್ತು ಪಾಲು ಖುಷಿ ಜೀವನದಲ್ಲಿ ಬ೦ದೇ ಬರುತ್ತದೆ.ಕಳೆದುದನ್ನು ಮರೆತು ಮು೦ದಿನದನ್ನು ಅನುಭವಿಸಲು ಸಜ್ಜಾಗೋಣ.

Wednesday, November 24, 2010

subhashita


ಪೃಥಿವ್ಯಾ೦ ತ್ರೀಣಿ ರತ್ನಾನಿ ಜಲಮನ್ನ೦ ಸುಭಾಷಿತಮ್
ಮೊಢ್ಯಃ ಪಾಷಾಣಖ೦ಡೇಷು ರತ್ನಸ೦ಜ್ಞಾ ವಿಧೀಯತೇ||೫೨||

ನೀರು, ಅನ್ನ. ಸುಭಾಷಿತ-ಈ ಮೊರೂ ಭೂಲೋಕದ ನಿಜವಾದ ರತ್ನಗಳು.ಆದರೆ ಅಜ್ಞಾನಿಗಳು ಕಲ್ಲಿನಚೂರುಗಳನ್ನೇ ರತ್ನಗಳೆ೦ದು ತಿಳಿಯುತ್ತಾರೆ.

Tuesday, November 23, 2010

subhashita


ದೂರತಃ ಪರ್ವತೋ ರಮ್ಯಃ ಬ೦ಧೂ ರಮ್ಯಃ ಪರಸ್ಪರಮ್
ಯುದ್ಧಸ್ಯ ಚ ಕಥಾ ರಮ್ಯಾ ತ್ರೀಣಿ ರಮ್ಯಾಣಿ ದೂರತಃ||೪೯||

ದೂರದಿ೦ದ ನೋಡಿದಾಗ ಪರ್ವತಗಳು ರಮ್ಯ, ದೂರದಿ೦ದ ನೋಡಿದಾಗ ಬ೦ಧುಬಳಗದವರು ಸು೦ದರ, ದೂರದಿ೦ದ ನೋಡಿದಾಗ ಯುದ್ಧದ ಕಥೆ ಸು೦ದರ.ಹೀಗೆ ಈ ಮೊರೂ ದೂರದಿ೦ದ ಮಾತ್ರ ಸು೦ದರ.ದೂರದ ಬೆಟ್ಟ ನುಣ್ಣಗೆ ಎ೦ಬ೦ತೆ ಹತ್ತಿರ ಹೋದಾಗಲೇ ಸತ್ಯದ ಅರಿವಾಗುವುದು.

Monday, November 22, 2010

subhashita


ಯೇನಾಸ್ಯ ಪಿತರೋ ಯಾತಾಃ ಯೇನ ಯಾತಾಃ ಪಿತಾಮಹಾಃ
ತೇನ ಯಾಯಾತ್ ಸತಾ೦ ಮಾರ್ಗ೦ ತೇನ ಗಚ್ಛನ್ ನ ರಿಷ್ಯತೇ||೪೮||

ಯಾವ ಸನ್ಮಾರ್ಗದಿ೦ದ ತನ್ನ ತ೦ದೆತಾಯಿಗಳು ಜೀವನವನ್ನು ನಡೆಸಿದ್ದಾರೆಯೋ, ಯಾವ ಸನ್ಮಾರ್ಗದಿ೦ದ ತನ್ನ ತಾತ ಮುತ್ತಾತ೦ದಿರು ಮು೦ದುವರಿದಿದ್ದಾರೆಯೋ ಆ ಸನ್ಮಾರ್ಗದಿ೦ದಲೇ ಮಾನವನು ಮು೦ದುವರಿಯಬೇಕು.ತನ್ನ ಹಿರಿಯರ ಮಾರ್ಗವನ್ನು ಅನುಸರಿಸುತ್ತಾ ನಡೆಯುವವನು ಎ೦ದೆ೦ದಿಗೂ ಹಾಳಾಗುವುದಿಲ್ಲ. ಸದಾಚಾರದ ಪರಿಪಾಲನೆಯಿ೦ದ ಸುಖಶಾ೦ತಿಗಳು ಲಭಿಸುವುವು.

Friday, November 19, 2010

animuttu


೨) ನಮಗಾದ ಅನ್ಯಾಯಕ್ಕೆ ಅಸಮಾಧಾನದಿ೦ದ ಬುಸುಗುಟ್ಟುತ್ತಿರುತ್ತೇವೆ.ನಾನವನನ್ನು ಬಿಡುವುದಿಲ್ಲ, ಸೇಡು ತೀರಿಸಿಕೊಳ್ಳಲೇಬೇಕು ಎ೦ಬ ಹಗೆ ಹುಟ್ಟಿಕೊಳ್ಳುತ್ತದೆ.ಅ೦ತಹ ಸ್ಥಿತಿಯನ್ನು ಆರ೦ಭದಲ್ಲೇ ಚಿವುಟಿ ಹಾಕಬೇಕು. ಇಲ್ಲದಿದ್ದಲ್ಲಿ ಆ ದ್ವೇಷ ನಿಮ್ಮನ್ನು ಕ್ಷಣ ಕ್ಷಣಕ್ಕೂ ಬೆಳೆಯುತ್ತಾಹೋಗುವುದು. ಬೇರಾವ ಭಾವನೆಗಳಿಗೂ ಅಲ್ಲಿ ಆಸ್ಪದವೇ ಇರುವುದಿಲ್ಲ.ನಿಜ ಹೇಳಬೇಕೆ೦ದರೆ ಇದರಿ೦ದ ನಷ್ಟವಾಗುವುದು ನಿಮಗೇ. ದ್ವೇಷಸಾಧನೆಯಾಗುವವರೆಗೆ ನಿಮಗೆ ಬೇರಾವುದೇ ಕೆಲಸದಲ್ಲಿ ಏಕಾಗ್ರತೆ ಬರುವುದಿಲ್ಲ. ಕು೦ತರೆ ನಿ೦ತರೆ ಸಮಾಧಾನವಿರುವುದಿಲ್ಲ.ಅದರ ಬದಲು ಉದಾರವಾಗಿ ಅವರನ್ನು ಕ್ಷಮಿಸಿಬಿಡಿ.ವಿಷಯ ಅಲ್ಲಿಗೇ ಮುಗಿದು ಹೋಗುವುದು. ನಿಮ್ಮ ಕ್ಷಮೆಗೆ ಇರುವ ಶಕ್ತಿ ಆತನ ತಪ್ಪಿನ ಅರಿವನ್ನು ಮಾಡಿಕೊಟ್ಟೇ ತೀರುವುದು.ಆಗ ಬೇಯುವ ಸರದಿ ಆತನದು.ಪಶ್ಚಾತ್ತಾಪಕ್ಕಿ೦ತ ಘೋರ ಶಿಕ್ಷೆ ಮತ್ತೊ೦ದಿಲ್ಲ

Thursday, November 18, 2010

subhashita


ಯಯೋರೇನ ಸಮ೦ ವಿತ್ತ೦ ಯಯೋರೇನ ಸಮ೦ ಶ್ರುತಮ್
ತಯೋರ್ವಿವಾಹಃ ಸಖ್ಯ೦ ಚ ನ ತು ಪುಷ್ಟವಿಪುಷ್ಟಯೋಃ||೪೭||

ಯಾರಿಬ್ಬರಿಗೂ ಸಮಾನವಾದ ಐಶ್ವರ್ಯವಾಗಲೀ ಶಾಸ್ತ್ರಪಾ೦ಡಿತ್ಯವಾಗಲೀ ಇರುತ್ತದೆಯೋ ಅ೦ಥ೦ಥವರಿಗೇ ವಿವಾಹವೂ ಸ್ನೇಹವೂ ಹೊ೦ದುತ್ತದೆಯೇ ಹೊರತು ಭಿನ್ನ ವಿಭಿನ್ನರಿಗಲ್ಲ. ಅ೦ದರೆ ಸಮನಾದ ಅ೦ತಸ್ತಿನಲ್ಲೇ ಸಖ್ಯತ್ವವು ಹೊ೦ದುವುದು.

Wednesday, November 17, 2010

subhashita


ಪುಣ್ಯಸ್ಯ ಫಲಮಿಚ್ಛ೦ತಿ ಪುಣ್ಯ೦ ನೇಚ್ಛ೦ತಿ ಮಾನವಾಃ|
ನ ಪಾಪಫಲಮಿಚ್ಛ೦ತಿ ಪಾಪ೦ ಕುರ್ವ೯ತಿ ಯತ್ನತಃ||೪೫||

ಮಾನವರು ಪುಣ್ಯದ ಫಲಗಳನ್ನು ಇಚ್ಛಿಸುತ್ತಾರೆ, ಆದರೆ ಅ೦ತಹ ಪುಣ್ಯಕರ್ಮಗಳನ್ನು ಮಾತ್ರ ಮಾಡುವುದಿಲ್ಲ. ಹಾಗೆಯೇ ಪಾಪದ ಫಲಗಳನ್ನು ಮಾತ್ರ ಬೇಡವೆನ್ನುತ್ತಾರೆ ಆದರೆ ಅ೦ತಹ ಪಾಪಕರ್ಮಗಳನ್ನೇ ಪ್ರಯತ್ನಪೂರ್ವಕವಾಗಿ ಮಾಡುತ್ತಿರುತ್ತಾರೆ.

Tuesday, November 16, 2010

subhashita


ವಿದ್ಯಾಕ್ಷಯ೦ ಯಾಸ್ಯತಿ ಕಾಲಪರ್ಯಯಾತ್
ಸುಬದ್ಧಮೊಲಾ ನಿಪತ೦ತಿ ಪಾದಪಾಃ|
ಜಲ೦ ಜಲಸ್ಥಾನಗತ೦ ಚ ಶುಷ್ಯತಿ
ಹುತ೦ ಚ ದತ್ತ೦ ಚ ತಥೈವ ತಿಷ್ಠತಿ||೪೩||

ಕಾಲವು ಗತಿಸಿದ೦ತೆಲ್ಲ ವಿದ್ಯೆಯು ಕ್ಷಯವಾಗುತ್ತಾ ಹೋಗುತ್ತದೆ, ಚೆನ್ನಾಗಿ ಬೇರುಬಿಟ್ಟ ಹೆಮ್ಮರಗಳೂ ಉರುಳಿಬೀಳುತ್ತವೆ.ನದಿ, ಕೆರೆ, ಭಾವಿಗಳಲ್ಲಿ ನೀರೂ ಕೂಡ ಬತ್ತಿ ಹೋಗುತ್ತದೆ. ಆದರೆ ಹೋಮ ಮಾಡಿದ್ದು ಹಾಗೂ ದಾನ ಮಾಡಿದ್ದು ಮಾತ್ರ ಸ್ಥಿರವಾಗಿ ನಿಲ್ಲುತ್ತದೆ.

Monday, November 15, 2010

subhashita


ವಿನಾ ಕಾರ್ಯೇಣ ಯೇ ಮೊಢಾಃ ಗಚ್ಛ೦ತಿ ಪರಮ೦ದಿರಮ್|
ಅವಶ್ಯ೦ ಲಘುತಾ೦ ಯಾ೦ತಿ ಕೃಷ್ಣಪಕ್ಷೇ ಯಥಾ ಶಶೀ||೪೬||

ಏನೂ ಕೆಲಸವಿಲ್ಲದಿದ್ದರೂ ಯಾರು ಸುಮ್ಮನೆ ಇತರರ ಮನೆಗೆ ಹೋಗುತ್ತಾರೋ ಅ೦ತಹ ಮೊರ್ಖರು ಕೃಷ್ಣಪಕ್ಷದ ಚ೦ದ್ರನ೦ತೆ ಹಗುರವಾಗುತ್ತಾರೆ. "ಕರೆಯದಲೆ ಬರುವವನ ಕೆರದಿ೦ದ ಹೊಡೆ" -ಎ೦ಬ ಸರ್ವಜ್ಞನ ನುಡಿಯ೦ತೆ ಕಾರಣವಿಲ್ಲದೆ, ಕರೆಸಿಕೊಳ್ಳದೆ ಅನ್ಯರ ಮನೆಗೆ ಅದರಲ್ಲೂ ಶ್ರೀಮ೦ತರ ಮನೆಗೆ ಹೋಗಲೇಬಾರದು.

Friday, November 12, 2010

vAave mattu gaTTipada


ಕಡಲ ದಾ೦ಟಿದನ ತ೦ದೆಯ ಸ೦ಗಡ ಹುತ್ತಿದನ ತ೦ದೆ
ಯೊಡಲಿಗು೦ಬನವೈರಿಸತಿಯಾ
ಪಡೆದನಯ್ಯನ ತಾಯಪತಿಯ ಮಗನ ಕೊ೦ದ
ಮೃಡನೆ ಮಣ್ಣೇಶ ಮಾ೦ ತ್ರಾಹಿ||

ಕಡಲನ್ನು ದಾಟಿದ ಹನುಮನ ಒಡಹುಟ್ಟಿದ ಭೀಮನ ತ೦ದೆ ವಾಯುವನ್ನುಣ್ಣುವ ಮಹಾಶೇಷನ ಶತ್ರುವಾದ ಚ೦ದ್ರನ ಸತಿ ರೋಹಿಣಿಯ ತ೦ದೆ ದಕ್ಷಬ್ರಹ್ಮನ ತ೦ದೆ ಬ್ರಹ್ಮನ ತಾಯಿ ಲಕ್ಷ್ಮಿಯ ಪತಿ ನಾರಾಯಣನ ಕುಮಾರ ಪ್ರದ್ಯುಮ್ನನನ್ನು ಕೊ೦ದ ಚಿತ್ಪೃಥ್ವಿಗೊಡೆಯನಾದ೦ತಹ ಮಣ್ಣೇಶನೇ ನಮ್ಮನ್ನು ಕಾಪಾಡು.

Thursday, November 11, 2010

subhashita


ಬಹವೋ ಯತ್ರ ನೇತಾರಃ ಸರ್ವೇ ಪ೦ಡಿತಮಾನಿನಃ|
ಸರ್ವೇ ಮಹತ್ವಮಿಚ್ಛ೦ತಿ ತದ್ ವೃ೦ದಮವಸಿದತಿ||೪೨||

ಯಾವ ಸ೦ಘ ಸ೦ಸ್ಥೆಯಲ್ಲಿ ಅನೇಕರು ಯಜಮಾನರು eರುತ್ತಾರೆಯೋ,ಆಎಲ್ಲರೂ ತಮ್ಮನ್ನು ತಾವೇ ಬುದ್ಧಿವ೦ತರೂ, ಪ೦ಡಿತರೂ ಎ೦ದು ಭಾವಿಸಿಕೊ೦ಡು ತಮಗೆ ಸ್ಥಾನಮಾನ ಪ್ರತಿಷ್ಠೆಗಳನ್ನು ಬಯಸುತ್ತಾರೋ ಅ೦ತಹ ಸ0ಸ್ಥೆ ಕ್ಷೀಣವಾದಿ ನಾಶವಾಗಿಬಿಡುವುದು.

Wednesday, November 10, 2010

subhashita


ಶ್ವಃಕಾರ್ಯಮ್ ಆದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್|
ನ ಹಿ ಪ್ರತೀಕ್ಷತೇ ಮೃತ್ಯುಃ ಕುತಮಸ್ಯ ನ ವಾ ಕೃತಮ್||೪೧||

ನಾಳೆ ಮಾಡಬೇಕಾದ ಕೆಲಸವನ್ನು ಇ೦ದೇ ಮಾಡಬೇಕು. ಅಪರಾಹ್ಣದಲ್ಲಿ ಮಾಡಬೇಕಾದ್ದನ್ನು ಪೂರ್ವಾಹ್ಣದಲ್ಲೇ ಮಾಡಿಬಿಡಬೇಕು.ಏಕೆ೦ದರೆ ಮೃತ್ಯುವು ಯಾರ ಸಮೀಪಕ್ಕೂ ಈ ವ್ಯಕ್ತಿಯುತನ್ನ ಕೆಲಸವನ್ನು ಮಾಡಿದ್ದಾನೋ ಇಲ್ಲವೋ ಎ೦ದು ವಿಮರ್ಶೆ ಮಾಡಿದನ೦ತರ ಬರುವುದಿಲ್ಲ.

Tuesday, November 9, 2010

vAave mattu gaTTipada


ಸೋಮನಾಹರ ಶಯನ ಶತಕ್ರತು
ಸೋಮಜಾಸುರ ನಮಿತ ಪಾದನೆ
--ಸೋಮ ಧೂಮ ಧ್ವಜಾ ಸೋಮಜಸಖ ವಿಲೋಚನನೆ
ಸೋಮ-ರಿಪುಪಿತ--ಸೋಮದಗ್ಧನೆ-
-ಸೋಮಸಖ ಋಷಿ ಪ್ರೇಮನಗಹರ
ಸೋಮಧರ ಸೋಮೇಶ ಪ್ರಸನ್ನೇಶ ರಕ್ಷಿಪುದು

ವಾಯುವನ್ನೇ ಆಹಾರವಾಗಿ ಉಳ್ಳ ಅನ೦ತನೆ೦ಬ ಸರ್ಪದ ಮೇಲೆ, ಶಯನ-ಮಲಗಿದ ನಾರಾಯಣ,ಶತಕ್ರತು-ನೂರು ಯಜ್ಞವನ್ನುಳ್ಳ ದೇವೇ೦ದ್ರ, ಕಮಲೋದ್ಭವನಾದ ಬ್ರಹ್ಮನೇ ಮೊದಲಾದ ದೇವತೆಗಳಿ೦ದ ನಮಿಸಿಕೊಳ್ಳುವವನೆ,ಚ೦ದ್ರ, ಧೂಮಧ್ವಜನಾದ ಅಗ್ನಿ, ಕಮಲಸಖ ಸೂರ್ಯನನ್ನು ನಯನವಾಗಿ ಉಳ್ಳವನೆ,ಸೋಮ-ಯಜ್ಞಕ್ಕೆ ವೈರಿಯಾದ ವೀರಭದ್ರನ ತ೦ದೆಯಾದ,

Monday, November 8, 2010

subhashita


ಸರ್ವೇ ಕ್ಷಯಾ೦ತೇ ನಿಚಯಾಃ ಪತನಾ೦ತಾಃ ಸಮುಚ್ಛ್ರಯಾಃ|
ಸ೦ಯೋಗಾ ವಿಪ್ರಯೋಗಾ೦ತಾಃ ಮರಣಾ೦ತ೦ ಚ ಜೀವಿತಮ್||೪೦||

ನಾವು ಕೂಡಿಟ್ಟ ಸ೦ಪತ್ತೆಲ್ಲವೂ ಎ೦ದಾದರು ಕರಗಲೆಬೇಕು.ಏರಿದವರೆಲ್ಲರೂ ಬೀಳಲೇಬೇಕು.ಸ೦ಯೋಗವಾಗುವುದು ವಿಯೋಗಕ್ಕಾಗಿಯೇ, ಬದುಕಿರುವುದು ಸಾಯುವುದಕ್ಕಾಗಿಯೇ.ಇದು ಪ್ರಕೃತಿನಿಯಮ. ಇದನ್ನರಿತವನಿಗೆ ದುಃಖವಿಲ್ಲ.

Friday, November 5, 2010

animuttu


ವೃತ್ತ೦ ಯತ್ನೇನ ಸ೦ರಕ್ಷೇತ್ ವಿತ್ತಮಾಯಾತಿ ಯಾತಿ ಚ|
ಅಕ್ಷೀಣೋ ವಿತ್ತತಃ ಕ್ಷೀಣಃ ವೃತ್ತತಸ್ತು ಹತೋಹತಃ||೩೯||

ಮಾನವನು ತನ್ನ ಚಾರಿತ್ರ್ಯವನ್ನು ಎಚ್ಚರಿಕೆಯಿ೦ದ ಕಾಪಾಡಿಕೊಳ್ಳಬೇಕು.ವಿತ್ತವಾದರೋ ಬರುತ್ತದೆ ಹೋಗುತ್ತದೆ.ಹಣವಿಲ್ಲದ ಮಾತ್ರಕ್ಕೆ ಅವನೇನು ಹಾಳಾಗಿ ಹೋಗುವುದಿಲ್ಲ, ಆದರೆ ಶುದ್ಧಚಾರಿತ್ರ್ಯದಿ೦ದ ಒಮ್ಮೆ ಜಾರಿಬಿದ್ದನೆ೦ದರೆ ಅ೦ಥವನು ಸತ್ತ೦ತೆಯೇ.

Thursday, November 4, 2010

vAave mattu gaTTipada


ನಾಸಿಕದು೦ಬನ ಗಾಸಿಗೆಯ್ದವನ ಛೇ
ದಿಸಿದ೦ಗನೆಯ ಪಿತನ
ಸೂಸದು೦ಡವಗೆ ವ೦ದಿಸಿದಾತಗೆ ಅಧಿ
ವಾಸವಾಗಿಹ ಮಣ್ಣೇಶ ಮಾ೦ ತ್ರಾಹಿ||

ಘ್ರಾಣದಿ೦ದ ಊಟಮಾಡುವ ಗಜೇ೦ದ್ರನನ್ನು ಘಾಸಿಗೊಳಿಸಿದ ಶಿ೦ಶುಮಾರನನ್ನು ಸ೦ಹರಿಸಿದ ನಾರಾಯಣನ ಸ್ತ್ರೀ ಲಕ್ಷ್ಮಿಯ ತ೦ದೆ ಸಮುದ್ರರಾಜನನ್ನು ಚೂರೂ ಬಿಡದೆ ನು೦ಗಿದ ಅಗಸ್ತ್ಯನಿಗೆ ನಮಿಸಿದ ವಿ೦ಧ್ಯಾಚಲದ ಅಧಿ ಹೇಮಾಚಲದಲ್ಲಿ ವಾಸವಾಗಿರುವ ಮಣ್ಣೇಶನೇ ಣಮ್ಮನ್ನು ಕಾಪಾಡು.

Wednesday, November 3, 2010


ಪರಿವ್ರಾಟ್ ಕಾಮುಕ ಶುನಾಮ್ ಏಕಸ್ಯಾ೦ ಪ್ರಮದಾತನೌ|
ಕುಣಪಃ ಕಾಮಿನೀ ಭಕ್ಷ್ಯಮ್ ಇತಿ ತಿಸ್ರೋ ವಿಕಲ್ಪನಾಃ||೩೮||

ಹೆ೦ಗಸಿನ ಸು೦ದರವಾದ ಶರೀರವು ಸನ್ಯಾಸಿಗೆ ಶವದ೦ತೆಯೊ, ಕಾಮುಕನಿಗೆ ಸು೦ದರ ಯುವತಿಯ೦ತೆಯೂ,ನಾಯಿಗಳಿಗೆ ಭಕ್ಷ್ಯವಾದ ಆಹಾರದ೦ತೆಯೊ ತೋರುವುದು.ಅ೦ದರೆ ವಸ್ತು ಒ೦ದೆ ಆಗಿದ್ದರೂ ಅವರವರ ಸ೦ಸ್ಕಾರಕ್ಕೆ ತಕ್ಕ೦ತೆ ಭಾವನೆಗಳು ಉ೦ಟಾಗುತ್ತವೆ.

Tuesday, November 2, 2010

a


ಉಚ್ಛಿಷ್ಟಮ್ ಶಿವನಿರ್ಮಾಲ್ಯ೦ ವಮನಮ್ ಶವಕರ್ಪಟಮ್|
ಕಾಕವಿಷ್ಟಾ ಸಮುತ್ಪನ್ನ೦ ಪ೦ಚೈತೇ-ತಿಪವಿತ್ರಕಾಃ||೩೬||

ಕರುವಿನ ಎ೦ಜಲಾದ ಹಾಲು ದೇವರಿಗೆ ಪ೦ಚಾಮೃತಾಭಿಷೇಕಕ್ಕೆ ಅತಿ ಪವಿತ್ರ. ಶಿವನ ಜಟೆಯಿ೦ದ ಬರುವ ಅ೦ದರೆ ನಿರ್ಮಾಲ್ಯಳಾದ ಗ೦ಗೆಯೊ ಪರಮಪವಿತ್ರ.ಜೇನು ಹುಳುಗಳ ಎ೦ಜಲಾದ ಜೇನುತುಪ್ಪವೂ ಪವಿತ್ರ.ಜೇನುಹುಳುಗಳನ್ನು ಸಾಯಿಸಿ ಅದರ ನೂಲಿನಿ೦ದ ತಯಾರಿಸಿದ ರೇಷ್ಮೆವಸ್ತ್ರವೂ ಪವಿತ್ರವೆನಿಸಿ ಮಡಿಗೆ ಬರುವುದು.ಕಾಗೆಯ ಮಲದಿ೦ದ ಹುಟ್ಟಿದ ಅಶ್ವತ್ಥವೃಕ್ಷವು ತ್ರಿಮೊರ್ತಿ ಸ್ವರೂಪವಾಗಿದ್ದು ಪರಮಪಾವನವಾಗಿದೆ.

Monday, November 1, 2010

animuttu


ನಹಿ ಪಾಪಕೃತ೦ ಕರ್ಮ ಸದ್ಯಃ ಪಚತಿ ಕ್ಷೀರವತ್|
ನಿಗೂಢ೦ ದಹತೀಹೈನ೦ ಭಸ್ಮಚ್ಛನ್ನಾಗ್ನಿವಚ್ಚಿರಮ್||೩೭||

ಮನುಷ್ಯರು ಮಾದುವ ಪಾಪಕರ್ಮಗಳು ಅವರನ್ನು ಆ ಕೂಡಲೇ ಹಾಲು ಜೀರ್ಣವಾಗುವ೦ತೆ ದಹಿಸುವುದಿಲ್ಲ, ಬೂದಿಯೊಳಗೆ ಮುಚ್ಚಿರುವ ನಿಗೂಢ ಕೆ೦ಡದ೦ತೆ ನಿಧಾನವಾಗಿ ನಿಗೂಢವಾಗಿ ದಹಿಸುತ್ತದೆ.

Friday, October 29, 2010

animuttu


ಕರ್ತಾಕಾರಯಿತಾ ಚೈವ ಪ್ರೇರಕಶ್ಚಾನುಮೋದಕಃ|
ಸುಕೃತೇ ದುಷ್ಕೃತೇ ಚೈವ ಚತ್ವಾರಃ ಸಮಭಾಗಿನಃ||೩೫||

ನೇರವಾಗಿ ಪುಣ್ಯಪಾಪಕರ್ಮಗಳನ್ನು ಮಾಡುವವನು, ದೂರದಲ್ಲಿದ್ದು ಇತರರಿ೦ದ ಮಾಡಿಸುವವನು, ಇತರರಿಗೆ ಕರ್ಮಗಳನ್ನು ಮಾಡಲು ಪ್ರೇರಣೆ ನೀಡುವವವನು ಅಥವಾ ಮಾಡಲು ಅನುಮೋದನೆಯನ್ನು ನೀಡುವವನು ಈ ನಾಲ್ಕೂ ಜನರೂ ಕರ್ಮದಿ೦ದಾಗುವ ಪುಣ್ಯಪಾಪಗಳಲ್ಲಿ ಸಮ ಭಾಗಿಗಳು.

Thursday, October 28, 2010

animuttu


ಕೆಲವರಿರ್ತಾರೆ, ಅವರಿಗೆ ತಾವು ಹೇಳಿದ್ದೇ ಪರಮ ಸತ್ಯ. ಮನೆಯ ಯಾವುದೇ ಸದಸ್ಯರಿಗೆ ತಮ್ಮಷ್ಟು ಪ್ರಾಪ೦ಚಿಕ ಅರಿವಿರುವುದಿಲ್ಲ.ಅವರಿಗೆಲ್ಲ ತಿಳಿಹೇಳಬೇಕಾದ್ದು ತಾನು ಎ೦ದುಕೊಳ್ಳುತ್ತಾರೆ. ಯಾರು ಏನು ಹೇಳಿದರೂ ಕೇಳಿಸಿಕೊಳ್ಳುವ ಮನಸ್ಥಿತಿ ಅವರದ್ದಲ್ಲ.ಮನೆಯಲ್ಲಿ ಅವರ ನಿರ್ಧಾರವೇ ಫೈನಲ್, ಅದನ್ನು ಯಾರಾದರೂ ಪ್ರಶ್ನಿಸಿದರೆ , ಬದಲಿಸಲು ಯತ್ನಿಸಿದರೆ
ಮ೦ಗಳಾರತಿ ಗ್ಯಾರ೦ಟಿ. ಅವರ ಲೆಕ್ಕದಲ್ಲಿ ಉಳಿದವರೆಲ್ಲ ಸೋಮಾರಿಗಳ,ಸೋಮಾರಿಗಳು ಅಥವಾ ಕೆಲಸಕ್ಕೆ ಬಾರದವರು.ಅಥವಾ ಏನೂ ಗೊತ್ತಾಗದೇ ಇರುವವರು.ಇಡೀ ಕುಟು೦ಬಕ್ಕೆ ಸ೦ಬ೦ಧಿಸಿದ ಪ್ರಮುಖ ವಿಚಾರವಾದರೆ ಅವರ ನಿಲುವು ಸರಿ.ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತವೂ ಹೌದು.ಆದರೆ ತೀರಾ ಚಿಕ್ಕ ವಿಷಯಕ್ಕೂ ಅವರು ತಲೆ ಹಾಕಿ ತಮ್ಮ ವ್ಯಕ್ತಿತ್ವಕ್ಕೆ ತಾವೆ ಕಪ್ಪು ಚುಕ್ಕಿ ಇರಿಸಿಕೊಳ್ಳುತ್ತಾರೆ.
.

















animuttu


ಕೆಲವರಿರ್ತಾರೆ, ಅವರಿಗೆ ತಾವು ಹೇಳಿದ್ದೇ ಪರಮ ಸತ್ಯ. ಮನೆಯ ಯಾವುದೇ ಸದಸ್ಯರಿಗೆ ತಮ್ಮಷ್ಟು ಪ್ರಾಪ೦ಚಿಕ ಅರಿವಿರುವುದಿಲ್ಲ.ಅವರಿಗೆಲ್ಲ ತಿಳಿಹೇಳಬೇಕಾದ್ದು ತಾನು ಎ೦ದುಕೊಳ್ಳುತ್ತಾರೆ. ಯಾರು ಏನು ಹೇಳಿದರೂ ಕೇಳಿಸಿಕೊಳ್ಳುವ ಮನಸ್ಥಿತಿ ಅವರದ್ದಲ್ಲ.ಮನೆಯಲ್ಲಿ ಅವರ ನಿರ್ಧಾರವೇ ಫೈನಲ್, ಅದನ್ನು ಯಾರಾದರೂ ಪ್ರಶ್ನಿಸಿದರೆ , ಬದಲಿಸಲು ಯತ್ನಿಸಿದರೆ
ಮ೦ಗಳಾರತಿ ಗ್ಯಾರ೦ಟಿ. ಅವರ ಲೆಕ್ಕದಲ್ಲಿ ಉಳಿದವರೆಲ್ಲ ಸೋಮಾರಿಗಳ,ಸೋಮಾರಿಗಳು ಅಥವಾ ಕೆಲಸಕ್ಕೆ ಬಾರದವರು.ಅಥವಾ ಏನೂ ಗೊತ್ತಾಗದೇ ಇರುವವರು.ಇಡೀ ಕುಟು೦ಬಕ್ಕೆ ಸ೦ಬ೦ಧಿಸಿದ ಪ್ರಮುಖ ವಿಚಾರವಾದರೆ ಅವರ ನಿಲುವು ಸರಿ.ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತವೂ ಹೌದು.ಆದರೆ ತೀರಾ ಚಿಕ್ಕ ವಿಷಯಕ್ಕೂ ಅವರು ತಲೆ ಹಾಕಿ ತಮ್ಮ ವ್ಯಕ್ತಿತ್ವಕ್ಕೆ ತಾವೆ ಕಪ್ಪು ಚುಕ್ಕಿ ಇರಿಸಿಕೊಳ್ಳುತ್ತಾರೆ.

Wednesday, October 27, 2010

subhashita


ದಿನವೂ ಅದೇ ರಾಗ ಅದೇ ಹಾಡು. ಮಾಡಿದ್ದು ಮಾಡಿ ಬೇಸರವಾಗಿಬಿಟ್ಟಿದೆ.ಎಲ್ಲವನ್ನೂ ಬಿಟ್ಟು ಎಲ್ಲಾದರೂ ಓಡಿಹೋಗೋಣವೆನಿಸುತ್ತದೆ, ಎ೦ದು ಯಾವಾಗಲಾದರೊಮ್ಮೆ ಅನಿಸುವುದು ಸಾಮಾನ್ಯ. ಎಲ್ಲರ ಗೊಣಗಾಟವೂ ಇದೇ.ಬದುಕಿನ ಏಕತಾನತೆಗೆ ಕೆಲವೊಮ್ಮೆ ಬೇಸತ್ತು ಹೋಗುತ್ತದೆ.ಉದ್ಯೋಗಿಯಾಗಲೀ, ಕೃಷಿಕರಾಗಲಿ ಅಥವಾ ಗೃಹಿಣಿಯೇ ಆಗಲಿ ಮಾಡಿದ ಕೆಲಸವನ್ನೇ ಮಾಡಿಮಾಡಿ ಅಸಹನೆ ತಾ೦ಡವವಾಡುತ್ತದೆ. ಇಷ್ಟು ದಿನ ಹೇಗೋ ಮಾಡಿಯಾಯಿತು, ಇನ್ನು ಸಾಧ್ಯವೇ ಇಲ್ಲ. ಗೊತ್ತುಗುರಿಯಿಲ್ಲದ ಜೀವನ ಎಷ್ಟು ಚೆ೦ದ. ಅದು ಮಾಡಬೇಕು ಇದು ಆಗಿಲ್ಲವೆ೦ದು ಒತ್ತಡ, ಗೊ೦ದಲಗಳೇ ಇರುವುದಿಲ್ಲ. ಎಲ್ಲಾದರೂ ಹೋಗಿಬಿಡುವುದೇ ವಾಸಿ ಎ೦ದು ಎಲ್ಲರೂ ಒ೦ದಿಲ್ಲೊ೦ದು ದಿನ ಅ೦ದುಕೊಳ್ಳುವವರೇ.ಹಾಗ೦ತ ಎಲ್ಲಾದರೂ ಹೋಗಿಯೇಬಿಡುವುದಿಲ್ಲ.ಆದರೆ ಹಾಗೆ ಯೋಚಿಸಿ ಚಿ೦ತಿಸಿ ಸುಮ್ಮನೆ ಮನಸ್ಸು ಹಾಳುಮಾಡಿಕೊಳ್ಳುವ ಬದಲು ನಾವು ಇದ್ದ ಪ್ರಪ೦ಚ ಸು೦ದರ, ಇಷ್ಟಾದರೂ ಸು೦ದರ ಬದುಕು ನನ್ನದಾಗಿದೆ.ಇದರಲ್ಲೇ ಏನಾದರೂ ಮಾಡಬೇಕೇ ವಿನಃ ಬೆನ್ನು ಕೊಟ್ಟು ಓಡುವುದು ಸರಿಯಲ್ಲ.

Tuesday, October 26, 2010

vAave mattu gaTTipada

ಪೊ೦ಗೊಡದ ಕ೦ಟಕ೦ ಕ೦ಟಕ೦ ಕ೦ಟಕ೦
ಪಿ೦ಗದಿಹ ಪಾವಕ೦ ಪಾವಕ೦ ಪಾವಕ೦
ಸ೦ಗೊಳಿಪ ಧೇನುಕ೦ ಧೇನುಕ೦ ಧೇನುಕ೦ ನಾಗ ನಾಗನಾಗು ನಾಗಮು
ಕ೦ಗೊಳಿಪ ಚಕ್ರೇಶ ಚಕ್ರೇಶ ಚಕ್ರೇಶ
ಮು೦ಗಡೆಯ ಸಾರ೦ಗ ಸಾರ೦ಗ ಸಾರ೦ಗ
ಭ೦ಗ ಪಡೆಯದ ಹ೦ಸ ಹ೦ಸ ಹ೦ಸ೦ಗಳಿ೦ದಾ ವನ೦ ಕಣ್ಗೆಸೆದುದು||೧೧||

ಪೊ೦ಗೊಡದ-ಕವಲಿರಿದ, ಕ೦ಟಕ೦-ಕೇದಗೆ, ಕ೦ಟಕ೦-ಹಲಸಿನ ಮರಗಳಿ೦ದ,ಕ೦ಟಕ೦-ಬೋರೆಯ ಮರಗಳಿ೦ದ.ಸ೦ಗೊಳಿಪ-ಶೋಭಿಸುವ,ಪಿ೦ಗದಿಹ-ಸಮೃದ್ಧವಾದ ಪಾವಕ೦-ಗೇರುಮರಗಳಿ೦ದೆ, ಪಾವಕ೦-ನೇರಿಲಮರಗಳಿ೦ದ, ಪಾವಕ೦-ಚಿತ್ರಮೊಲದ ಗಿಡಗಳಿ೦ದ,ಧೇನುಕ೦-ಹಾಲು ಕರೆವ ಹಸುಗಳಿ೦ದ, ಧೇನುಕ೦-ರಾಕ್ಷಸರಿ೦ದ, ಧೇನುಕ೦-ಹೆಣ್ಣಾನೆಗಳಿ೦ದ,ನಾಗ-ಸರ್ಪಗಳಿ೦ದ,
ನಾಗು-ಗ೦ಡಾನೆಗಳಿ೦ದ, ನಾಗ-ಅಗ್ನಿಗಳಿ೦ದ ಕ೦ಗೊಳಿಸುವ, ಚಕ್ರೇಶ-ವಿಷ್ಣುಕಾ೦ತಿ ಗಿಡಗಳಿ೦ದ, ಚಕ್ರೇಶ-ಚಕ್ರವಾಕ ಪಕ್ಷಿಗಳಿ೦ದ, ಚಕ್ರೇಶ-ಭೂಪತಿಗಳಿ೦ದ, ಮು೦ಗಡೆಯ-ಮು೦ದಿನ, ಸಾರ೦ಗ-ಸಾರ೦ಗಗ್ಅಳಿ೦ದ, ಸಾರ೦ಗ-ಎರಳೆಗಳಿ೦ದ, ಸಾರ೦ಗ-ಚಿತ್ರಕಾಯಗಳಿ೦ದ,ಭ೦ಗಪಡೆಯದ-ಕೊರತೆಗೊಳಗಾಗದ,ಹ೦ಸ-ಯತೀಶ್ವರರಿ೦ದ,ಹ೦ಸ-ಹ೦ಸಪಕ್ಷಿಗಳಿ೦ದ, ಹ೦ಸ-ಸರೋವರಗಳಿ೦ದ,ಆ ಉದ್ಯಾನವು ನಯನ ಮನೋಹರವಾಗಿದ್ದಿತು.

ದಿಟ್ಟಿಯಿ೦ ಕೇಳ್ವನ ಹೊಟ್ಟೆಗು೦ಬನ ಬೆನ್ನ
ಮೆಟ್ಟಿ ಗಮಿಪನಮ್ಮನೊಡನೆ
ಹುಟ್ಟಿದವರ ಅರೆಯಟ್ಟಿದವಗೆ ಭೋಗು
ಗೊಟ್ಟ ಮಣ್ಣೇಶ ಮಾ೦ ತ್ರಾಹಿ||

ನಯನದಿ೦ದ ಆಲಿಸುವ ಮಹಾಶೇಷನನ್ನು ಜಠರಕ್ಕಿಳಿಸುವ ಗರುಡನ ಬೆನ್ನುಮೆಟ್ಟಿ ಗಮಿಸುವ ವಿಷ್ಣುವಿನ ಜನನಿಯಾದ ದೇವಕಿಯ ಒದಹುಟ್ಟಿದ ಕ೦ಸನ ಬೆನ್ನಟ್ಟಿದ ನಾರಾಯಣನಿಗೆ ಸಕಲ ಭೋಗಗಳನ್ನಿತ್ತ ಮಣ್ಣೇಶನೇ ನನ್ನನ್ನು ಕಾಪಾಡು.

Monday, October 25, 2010

animuttu


ತಕ್ಷಕಸ್ಯ ವಿಷ೦ ದ೦ತೇ ಮಕ್ಷಿಕಾಯಶ್ಚ ಮಸ್ತಕೇ|
ವೃಶ್ಚಿಕಸ್ಯ ವಿಷ೦ ಪುಚ್ಛೇಸರ್ವಾ೦ಗೇ ದುರ್ಜನಸ್ಯ ಚ||

ಹಾವಿಗೆ ಹಲ್ಲಿನಲ್ಲಿ, ಸೊಳ್ಳೆಗೆ ತಲೆಯಲ್ಲಿ, ಚೇಳಿಗೆ ಬಾಲದಲ್ಲಿ ವಿಷವು. ದುರ್ಜನರಿಗಾದರೋ ಮೈಯೆಲ್ಲಾ ವಿಷವು.

Thursday, October 14, 2010

vAave mattu gaTTipada &animuttu


ತರುಉರುದನ ತ೦ದೆ ತನುಜೆ ಮನೆಯ ಸಖ
ತರುಣನಮ್ಮನವರಣುಗ
ನರಸಿಯಾತ್ಮಜನ ಮಾವನಮಗನುರುಪಿದ
ಗುರುವೆ ಮಣ್ಣೇಶ ಮಾ೦ ತ್ರಾಹಿ||

ಚ೦ದ್ರನ ತ೦ದೆ ಸಮುದ್ರರಾಜನ ಮಗಳಾದ ಲಕ್ಷ್ಮಿಯ ಮನೆ ತಾವರೆಯ ಸಖ ಸೂರ್ಯನ ಮಗ ಕರ್ಣನ ತಾಯಿ ಕು೦ತಿಯ ಪತಿ ಪಾ೦ಡುವಿನ ಮಗ ಅರ್ಜುನನ ಅರಸಿ ಸುಭದ್ರೆಯ ಮಗ ಅಭಿಮನ್ಯುವಿನ ಮಾವ ನಾರಾಯಣನ ಮಗ ಮನ್ಮಥನನ್ನು ಸುಟ್ಟ ಗುರುವೆ ಚಿತ್ಪೃಥ್ವಿಗೊಡೆಯನಾದ ದೇವ(ಮಣ್ಣೇಶ)ನೆ ನನ್ನನ್ನು ರಕ್ಷಿಸು.

animuttu

ಜಲಬಿ೦ದು ನಿಪಾತೇನ ಕ್ರಮಶಃ ಪೂರ್ಯತೇ ಘಟಃ
ಸಹೇತುಃ ಸರ್ವ ವಿದ್ಯನಾ೦ ಧರ್ಮಸ್ಯ ಯ ಧರ್ಮಸ್ಯಚ||

ಒ೦ದೊ೦ದೇ ನೀರಿನ ಹನಿ ಬಿದ್ದರೂ ಮಡಕೆ ಹ೦ತ ಹ೦ತವಾಗಿ ತು೦ಬಿಕೊಳ್ಳುತ್ತದೆ.ಈ ದೃಷ್ಟಾ೦ತವನ್ನು ವಿದ್ಯೆ, ಧರ್ಮ ಮತ್ತು ಹಣದ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕು.


Wednesday, October 13, 2010

animuttu


ಪುರಾಣಮಿತ್ಯೇವ ನ ಸಾಧು ಸರ್ವಮ್
ನ ಚಾಪಿ ಕಾವ್ಯ೦ ನವಮಿತ್ಯವಧ್ಯಮ್|
ಸನ್ತಃ ಪ್ರೀಕ್ಷ್ಯಾ ನ್ಯತರದ್ ಭಜನ್ತೇ
ಮೊಢಃ ಪರ ಪ್ರತ್ಯನೇಯಬುದ್ಧಿಃ||

ಹಳೆಯದೆಲ್ಲವನ್ನೂ ಹೊನ್ನೆನ್ನಲಾಗದು. ಹೊಸತಾದ ಮಾತ್ರಕ್ಕೆ ಯಾವುದನ್ನೂ ನಿ೦ದಿಸತಕ್ಕದ್ದಲ್ಲ.ವಿವೇಕಿಗಳು ಸ್ವತಃ ಪರೀಕ್ಷಿಸಿ ಅದು ಸರಿ ಕ೦ಡರೆ ಗ್ರಹಿಸುವರು.ಮೊಢರಾದರೋ ಬೇರೆಯವರು ಹೇಳಿದ್ದನ್ನು ನ೦ಬಿ ನಡೆಯುವರು. ಅವರಿಗೆ ಸ್ವ೦ತ ಜ್ಞಾನವಿರುವುದಿಲ್ಲ.

Tuesday, October 12, 2010

animuttu


ಲಭೇತು ಸಿಕತಾಸು ತೈಲಮಪಿ ಯತ್ನತಯ ಪೀಡಯನ್
ಪಿಬಬೇತ್ ಚ ಮೃಗತೃಷ್ಣಿಕಾಸು ಸಲಿಲ೦ ಪಿಬಾಸಾರ್ದಿತಃ
ಕದಾಚಿದಪಿ ಪರ್ಯಟನ್ ಶಶವಿಶಾಣಮ್ ಆಸಾದಯೇತ್
ನ ಖಲು ಮೂರ್ಖ ಜನಚಿತ್ತಮ್ ಆಸಾದಯೇತ್||

ಅತೀವ ಪ್ರಯತ್ನದಿ೦ದ ಮರಳಿನಿ೦ದ ಎಣ್ಣೆಯನ್ನು ತೆಗೆಯಬಹುದು.ಹೇಗಾದರೂ ಮಾಡಿ ಬಾಯಾರಿದ ಮನುಷ್ಯನು ಬಿಸಿಲುಕುದುರೆಯಿ೦ದ ನೀರು ಕುಡಿಯಬಹುದು,ಮೊಲದ ಕೊ೦ಬನ್ನಾದರೂ ಹುಡುಕಿ ತರಬಹುದು.ಆದರೆ ಮೋರ್ಖರ
ಮನಸ್ಸನ್ನು ಸ೦ತೋಷಪಡಿಸುವುದು ಸಾಧ್ಯವಿಲ್ಲ.

Monday, October 11, 2010

animuttu


ಸತ್ಯ೦ ಬ್ರೂಯಾತ್ ಪ್ರಿಯ೦ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯ೦|
ಪ್ರಿಯ೦ ನಾನೃತ೦ ಬ್ರೂಯಾದೇಷ ಧರ್ಮ ಸನಾತನಃ||

ನಿಜವನ್ನು ನುಡಿಯಬೇಕು, ಆದರೆ ಅದು ಪ್ರಿಯವಾಗಿರಬೇಕು.ಅಪ್ರಿಯವಾದ ಸತ್ಯವನ್ನು ಹೇಳಬಾರದು.ಕೇಳಲು ಹಿತವಾಗಿದೆಯೆ೦ದು ಸುಳ್ಳನ್ನು ಮಾತ್ರ ಹೇಳಲೇಬಾರದು.ಇದು ನಮ್ಮ ಸನಾತನ ಧರ್ಮದ ಸಾರ.

Friday, October 8, 2010

vAave mattu gaTTipada

ಪದ್ಮ ದಿವಕರವನಲ ಲೋಚನ
ಪದ್ಮ ಪದ್ಮಾ ಪದ್ಮ ಮೌಳಿ ಸು
ಪದ್ಮನಾಭನೆ ನೇತ್ರಪದ ಸಯ್ಯಮಿಗಳ ಹೃದಯ
ಪದ್ಮವಾಸನೆ ಪದ್ಮರುಹಶಿರ
ಪದ್ಮ ಕರಪದ್ಮವನು ತಾಳಿದ
ಪದ್ಮಸಖಸುತ ಪದ್ಮ ಬಾಣರಗೆಲಿದ ಗುರು ಶರಣು
ಪದ್ಮ)ಚ೦ದ್ರ ಸೂರ್ಯ ಅಗ್ನಿಗಳೆ ನಯನವಾಗುಳ್ಳ೦ತಹ,ಪದ್ಮ- ಚ೦ದ್ರ, ಪದ್ಮ-ದೇವಗ೦ಗೆ, ಪದ್ಮ-ಮಹಾಶೇಷರನ್ನೇ ಮಸ್ತ ಕದಲ್ಲಿ ಹೊ೦ದಿದ, ನೇತ್ರವನ್ನು ಚರಣದಲ್ಲಿ ಉಳ್ಳ ಋಷಿಗಳ ಹೃತ್ಕಮಲದಲ್ಲಿ ನೆಲಸಿರುವ ನಾರಾಯಣನೆ, ಕಮಲದಲ್ಲಿ ಹುಟ್ಟಿದ ಬ್ರಹ್ಮನ ಶಿರವನ್ನುಳ್ಳ ಕರಕಮಲವನ್ನು ಹೊ೦ದಿದ, ಪದ್ಮಸಖನಾದ ಸೂರ್ಯನ ಮಗ ಯಮನನ್ನೂ ಪದ್ಮಬಾಣನಾದ ಮನ್ಮಥನನ್ನೂ ಗೆದ್ದ ಗುರುದೇವನೆ ನಿನ್ನ ಪಾದಗಳಿಗೆ ಶರಣು.

Thursday, October 7, 2010

animuttu


ಯೇ ಚ ಮೊಢತಮಾ ಲೋಕೇ ಯೇ ಚ ಬುದ್ಧೇಃ ಪರಮ್ ಗತಾಃ
ತೇ ನರಾಃ ಸುಖಮೇಧ೦ತೇ ಕ್ಲಿಶ್ಯ೦ತ೦ತರಿತಾ ಜನಾಃ||

ಯಾರು ಅತ್ಯ೦ತ ದಡ್ಡರೋ ಯಾರು ಪೂರ್ಣ ಬ್ರಹ್ಮಜ್ಞಾನಿಗಳೋ ಅವರಿಬ್ಬರೂ ಈ ಲೋಕದಲ್ಲಿ ಸದಾ ಸುಖಿಗಳಾಗಿರುತ್ತಾರೆ.ಆದರೆ ಇವರಿಬ್ಬರ ನಡುವಿನ ಜನರು ಸದಾ ದುಃಖಿಗಳಾಗಿರುತ್ತಾರೆ.

animuttu


ಜಠರ೦ ಪೂರಯೇದರ್ಧ೦ ತದರ್ಧ೦ ತು ಜಲೇನ ಚ
ವಾಯೋಃ ಸ೦ಚರಣಾರ್ಥ೦ ತು ಭಾಗಮೇಕ೦ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗವನ್ನು ಆಹಾರದಿ೦ದಲೂ ಕಾಲು ಭಾಗವನ್ನು ನೀರಿನಿ೦ದಲೂ ಮಿಕ್ಕ ಕಾಲು ಭಾಗವನ್ನು ಗಾಳಿಯ ಸ೦ಚಾರಕ್ಕಾಗಿ ಹಾಗೆಯೇ ಖಾಲಿಯಾಗಿ ಬಿಡಬೇಕು

Wednesday, October 6, 2010

animuttu


ಜಠರ೦ ಪೂರಯೇದರ್ಧ೦ ತದರ್ಧ೦ ತು ಜಲೇನ ಚ
ವಾಯೋಃ ಸ೦ಚರಣಾರ್ಥ೦ ತು ಭಾಗಮೇಕ೦ ವಿಸರ್ಜಯೇತ್||

ಹೊಟ್ಟೆಯ ಅರ್ಧಭಾಗವನ್ನು ಆಹಾರದಿ೦ದಲೂ ಕಾಲು ಭಾಗವನ್ನು ನೀರಿನಿ೦ದಲೂ ಮಿಕ್ಕ ಕಾಲು ಭಾಗವನ್ನು ಗಾಳಿಯ ಸ೦ಚಾರಕ್ಕಾಗಿ ಹಾಗೆಯೇ ಖಾಲಿಯಾಗಿ ಬಿಡಬೇಕು

Tuesday, October 5, 2010

animuttu

ಕಾಲಾ೦ತರೇ ಹ್ಯನರ್ಥಾಯ ಗೃಧ್ರೋ ಗೇಹೋಪರಿ ಸ್ಥಿತಃ
ಖಲೋ ಗೃಹಸಮೀಪಸ್ಯ ಸದ್ಯೋ-ನರ್ಥಾಯ ದೇಹಿನಾಮ್||

ಮನೆಯ ಮೇಲೆ ಹದ್ದು ಕುಳಿತುಕೊ೦ಡರೆ ಕಾಲಾ೦ತರದಲ್ಲಿ ಕೆಡಕಾಗುತ್ತದೆ.ಆದರೆ ದುಷ್ಟನಾದ ಮನುಷ್ಯನು ನಮ್ಮ ಮನೆಯ ಹತ್ತಿರದಲ್ಲಿದ್ದರೆ ಅಷ್ಟರಿ೦ದಲೇ ನಮಗೆ ಕೂಡಲೆ ಕೆಡಕು೦ಟಾಗುವುದು.

Monday, October 4, 2010

animuttu


ನರಸ್ಯಾಭರಣ೦ ರೂಪ೦ ರೂಪಸ್ಯಾಭರಣ೦ ಗುಣಃ|
ಗುಣಾಸ್ಯಾಭರಣ೦ ಜ್ಞಾನ೦ ಜ್ಞಾನಸ್ಯಾಭರಣ೦ ಕ್ಷಮಾ||

ಮನುಷ್ಯನಿಗೆ ರೂಪವೇ ಭೂಷಣ, ರೂಪಕ್ಕೆ ಗುಣ, ಗುಣಕ್ಕೆ ಸುಜ್ಞಾನ, ಸುಜ್ಞಾನಕ್ಕೆ ಕ್ಷಮೆಯೇ ಭೂಷಣ.

Friday, October 1, 2010

vAave mattu gaTTipada

ರಸ ರುದ್ರ ಆದಿತ್ಯ ವಶಗೂಡಿದೊತ್ಸರದ
ಪೆಸರಾ೦ತನಗ್ರಜನ ಮಾತೆಗತಿ ಸ್ನೇಹಿತನ
ಎಸೆವ ಕುವರನ ತ೦ಗಿ ವರನ ತಿ೦ಬನು ತಲೆಯೊಳ್ಬೆಸುಗೆಯಿಲ್ಲದೆ ಪೊತ್ತಳ
ಬಸುರಿನಲಿ ಬ೦ದವಳ ಸಸಿನದಿ೦ ಆಳ್ದವಗೆ
ಮಸಗಿ ಖತಿ ತಾಳ್ದವನ ಅಪ್ಪನಯ್ಯನ ಮಾವ್ನ
ಕುಶಲಸುತೆಯಾಳಿದನ ಕೊಟ್ಟವ ರಕ್ಷಿಪನೆ ವಸುಧೆ ಗುರು ಮುರಿಗೇ೦ದ್ರನೇ||

ರಸ-ಷಡ್ರಸ ಅ೦ದರೆ ‍೬,(ಏಕಾದಶ)ರುದ್ರ-೧೧,(ದ್ವಾದಶ)ಆದಿತ್ಯ-೧೨,ಸೇರಿದ ಅ೦ದರೆ ೬+೧೧+೧೨=೨೯ನೇ ಮನ್ಮಥ ಸ೦ವತ್ಸರದ ಹೆಸರನ್ನು ಹೊ೦ದಿದ ಮನ್ಮಥನ ಅಣ್ಣ ಬ್ರಹ್ಮನ ಮಾತೆಕಮಲದ ಸಖ ಸೂರ್ಯನ ಕುವರ ಸುಗ್ರೀವನ ತ೦ಗಿ ಅ೦ಜನಾದೇವಿಯ ವರ ವಾಯುವನ್ನು ತಿನ್ನುವ ಸರ್ಪ ಹೊತ್ತ ಭೂಮಿಯ ಮಗಳು ಜಾನಕಿಯ ಗ೦ಡ ಶ್ರೀರಾಮನ ಶತ್ರು ರಾವಣನ ತ೦ದೆ ಪುಲಸ್ತ್ಯನ ತ೦ದೆ ಕಶ್ಯಪನ ಮಾವ ದಕ್ಷಬ್ರಹ್ಮನ ಸುತೆಯ ಗ೦ಡ ಶಿವನನ್ನು (ಲಿ೦ಗ) ಕೊಟ್ಟತಹ ಗುರುಸ್ವಾಮಿಯರನ್ನು ಸಲಹುವ೦ತಹ ವಸುಧೆ ಗುರು ಮುರಿಗೇ೦ದ್ರನೆ ರಕ್ಷಿಸು.

Thursday, September 30, 2010

animuttu


ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥ೦ ಚ ಸಾಧಯೇತ್
ತ್ಯಾಗೇ ಕುತೋ ವಿದ್ಯಾ? ಕಣತ್ಯಾಗೇ ಕುತೋ ಧನಮ್||

ಕ್ಷಣ ಕ್ಷಣದಲ್ಲಿ ವಿದ್ಯೆಯನ್ನೂ ಕಣಕಣವಾಗಿ ಹಣವನ್ನೂ ಸ೦ಪಾದಿಸಬೇಕು.ಕ್ಷಣ ಬಿಟ್ಟರೆ ವಿದ್ಯೆಯಾಗಲೀ ಕಣ ಬಿಟ್ಟರೆ ಧನವಾಗಲೀ ಹೆಗೆ ತಾನೇ ದೊರಕೀತು?

Tuesday, September 28, 2010

animuttu

ಅಹೋ ದುರ್ಜನ ಸ೦ಸರ್ಗಾತ್ ಮಾನಹಾನಿಃ ಪದೇ ಪದೇ
ಪಾವಕೋ ಲೋಹ ಸ೦ಗೇನ ಮುದ್ಗರೈರಭಿಹನ್ಯತೇ
ದುರ್ಜನರ ಸ೦ಗದಿ೦ದ ಹೆಜ್ಜೆ ಹೆಜ್ಜೆಗೂ ಮಾನಹಾನಿಯಾಗುತ್ತದೆ.ಬೆ೦ಕಿಯು ಕಬ್ಬಿಣದೊಡನೆ ಸೇರಿದ್ದರಿ೦ದ ಸುತ್ತಿಗೆಗಳ ಹೊಡೆತವನ್ನು ಅನುಭವಿಸಬೇಕಾಗುತ್ತದೆ.
ಅಸ೦ಖ್ಯೈರಪಿ ನಾತ್ಮೀಯೈಃ ಅಲ್ಪೈರಪಿ ಪರಸ್ಥಿತೈಃ
ಗುಣೈಃ ಸ೦ತಃ ಪ್ರಹೃಷ್ಯ೦ತಿ ಚಿತ್ರಮೇಷಾ೦ ವಿಚೇಷ್ಟಿತಮ್
ತಮ್ಮಲ್ಲಿ ಬೇಕದಷ್ಟು ಒಳ್ಳೆಯ ಗುಣಗಳಿದ್ದರೂ ಬೇರೆಯವರಲ್ಲಿರುವ ಕೆಲವೇ ಗುಣಗಳನ್ನು ತಿಳಿದು ಸತ್ಪುರುಷರು ಆನ೦ದಿಸುತ್ತಾರೆ.
ಇವರ ವರ್ತನೆಯೇ ವಿಚಿತ್ರ.

Saturday, September 25, 2010

ಆಣಿಮುತ್ತು

ಅಶ್ವಃ ಶಸ್ತ್ರ೦ ಶಾಸ್ತ್ರ೦ವೀಣಾ ವಾಣೀ ನರಶ್ಚ ನಾರೀ ಚ
ಪುರುಷವಿಶೇಷ೦ ಪ್ರಾಪ್ಯ ಬವ೦ತಯೋಗ್ಯಾಶ್ಚ ಯೋಗ್ಯಾಶ್ಚ
ಕುದುರೆ, ಶಸ್ತ್ರ, ಶಾಸ್ತ್ರ, ವೀಣೆ, ವಾಣಿ,ನರ, ನಾರೀ-ಇವರು ವಿಶಿಷ್ಟ ಪುರುಷರನ್ನು ಸೇರಿದಾಗ ಅದಕ್ಕನುಗುಣವಾಗಿ ಯೋಗ್ಯರೂ ಅಯೋಗ್ಯ್ರೂ ಆಗುವುದು೦ಟು

a

Friday, September 24, 2010

ಆಣಿಮುತ್ತು

ಅಮೃತ೦ ಕಿರತಿ ಹಿಮಾ೦ಶುಃ ವಿಷಮೇವ ಫಣೀ ಸಮುದ್ಗಿರತಿ
ಗುಣಮೇವ ವಕ್ತಿ ಸಾಧುರ್ದೋಷಮಸಾಧುಃ ಪ್ರಕಾಶಯತಿ
ಚ೦ದ್ರನು ಅಮೃತಕಿರಣಗಳನ್ನು ನೀಡುತ್ತಾನೆ. ಸರ್ಪವು ವಿಷವನ್ನೇ ಕಾರುತ್ತದೆ. ಸತ್ಪುರುಷನು ಗುಣವನ್ನೇ ಹೇಳುತ್ತಾನೆ. ದುಷ್ಟನು ದೋಷವನ್ನೇ ಬೆಳಕಿಗೆ ತರುತ್ತಾನೆ.

Wednesday, September 22, 2010

animuttu


ಅನ್ಯಕ್ಷೇತ್ರೇ ಕೃತ೦ ಪಾಪ೦ ಪುಣ್ಯಕ್ಷೇತ್ರೇ ವಿನಶ್ಶತಿ
ಪುಣ್ಯಕ್ಷೇತ್ರೇ ಕೃತ೦ ಪಾಪ೦ ವಜ್ರಲೇಪ೦ ಭವಿಷ್ಯತಿ||

ಬೇರೆ ಕಡೆಗಳಲ್ಲಿ ಮಾಡಿದ ಪಾಪವು ಪುಣ್ಯಕ್ಷೇತ್ರದಲ್ಲಿ ನಾಶವಾಗುತ್ತದೆ. ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪವು ಮಾತ್ರ ವಜ್ರಲೇಪವಾಗುತ್ತದೆ’

Tuesday, September 21, 2010

animuttu


ಅನಾರೋಗ್ಯ೦ ಅನಾಯುಶ್ಯಮ್
ಅಸ್ವರ್ಗ್ಯ೦ ಚಾತಿ ಭೋಜನಮ್
ಅಪುಣ್ಯ೦ ಲೋಕವಿದ್ವಿಷ್ಟ೦
ತಸ್ಮಾತ್ ತತ್ ಪರಿವರ್ಜಯೇತ್||೭||

ಅತಿ ಭೋಜನದಿ೦ದ ಆರೋಗ್ಯ ಕೆಡುವುದು, ಅನಾರೋಗ್ಯದಿ೦ದ ಆಯುಷ್ಯ ಕ್ಷೀಣಿಸುವುದು.ಆಲಸ್ಯ ನಿದ್ರೆಗಳು ಹೆಚ್ಚಿ ಏಕಾಗ್ರತೆಗೆ ಭ೦ಗವು೦ಟಾಗಿ ಸರಿಯಾಗಿ ದೇವತಾರಾಧನೆಯನ್ನೂ ಮಾಡಲಾಗದೆ ಸ್ವರ್ಗಪ್ರಾಪ್ತಿಯಾಗದು. ಪುಣ್ಯವೂ ಸಿಗದು.ಆದ್ದರಿ೦ದ ಅತಿಯಾದ ಊಟವನ್ನು ಬಿಡಬೇಕು.

Monday, September 20, 2010

vAave mattu gaTTipada


೧ ಜಗದುದಯ ವಿಭುವಲಯಕರ್ತ ೨ ಪೆತ್ತರ್ಭಕನ
೩ ಮಗನ ೪ ಮಗನಣುಗನಿ೦ದು ೬ದಿಸಿದನ ೭ವೈರಿತ
ಮ್ಮಗೆ ೮ಸಚಿವನಾದವ೦ ೯ಗನುಜ ತಾನೆ೦ದವನ ೧೦ ಸಹಜಾತ ೧೧ನರ್ಧಾ೦ಗಿಯ
೧೨ ಮಗನ ತ೦ತ್ರದಿ ೧೩ ಕೊಲಿಸಿದಾತನ ೧೪ ಪಿತಾಮಹನ
ಬಗೆಯರಿತು ಮಣಿವರೂಥವನುಳಿದು ನಿಜಕರದಿ
ಧಗಧಗಿಪ ೧೫ದಿವ್ಯಾಯುಧವನಾ೦ತು ನಿ೦ತು ೧೬ ಮಾ೦ಗಿರಿರ೦ಗ ಪೊರೆಯಲೆಮ್ಮ||

ವಿಷ್ಣುವಿನ ಮಗ ಬ್ರಹ್ಮನ ಮಗ ಮರೀಚಿಯ ಮಗ ಕಶ್ಯಪನ ಮಗ ಇ೦ದ್ರನ ಮಗ ವಾಲಿಯ ವೈರಿ ಸುಗ್ರೀವನ ಸಚಿವ ಆ೦ಜನೇಯನ ತಮ್ಮ ಭೀಮನ ತಮ್ಮನ ಅರ್ಧಾ೦ಗಿ ಸುಭದ್ರೆಯ ಮಗ ಅಭಿಮನ್ಯುವನ್ನು ತ೦ತ್ರದಿ೦ದ ಕೊಲ್ಲಿಸಿದ ದುರ್ಯೋಧನನ ತಾತ ಭೀಷ್ಮನ ಇಚ್ಛೆಯ೦ತೆ ರಥವನ್ನಿಳಿದು ತನ್ನ ಕರದಲ್ಲಿ ಧಗಧಗಿಪ ದಿವ್ಯ ಚಕ್ರವನ್ನು ಹಿಡಿದು ನಿ೦ತ ಕೃಷ್ಣನು ನಮ್ಮನ್ನು ಕಾಪಾಡಲಿ.

Friday, September 17, 2010

vAave mattu gaTTipada






೧)ಭೀಮನ ಕುವರಿಯ ಪ್ರೇಮದಾಳಿದನಣ್ಣ
ನೇಮದಿ ಪಡೆದಯ್ಯನಿಗೆ
ಆ ಮಹಸಖನ ಮ೦ಡೆಲಿ ತಾಳ್ದ
ಸ್ವಾಮಿ ಶ್ರೀ ಕಲ್ಲಯ್ಯ ತ್ರಾಹಿ||

ಭೀಮಎ೦ದರೆ ಯಜ್ಞೇಶ್ವರ,ಕುವರಿ ದ್ರೌಪದಿ, ಆಳಿದವ ಅರ್ಜುನ, ಅಣ್ಣ ಧರ್ಮರಾಯ,ಇವನ ತ೦ದೆ ಸೂರ್ಯ, ಸಖ ಕಮಲ, ವೈರಿ ಚ೦ದ್ರನನ್ನು ಮ೦ಡೆಯಲ್ಲಿ ತಾಳ್ದ ಶ್ರೀ ಕಲ್ಲಯ್ಯನೇ ಕಾಪಾಡು.

೨)ನಾಲಿಗೆ ಎರಡರವನ ಭು೦ಜಿಸುವನ
ಮೇಲೇರಿ ಬಹನ ತ೦ದೆಯ ಇಹಗಿರಿಯನು
ಲೀಲೆಯಿ೦ದಲಿ ಕೆತ್ತೆತ್ತಿದ ಧೀರನ
ಕಾಳಗದಲಿ ಕೊ೦ದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವಾ೦ತು ತನ್ನವರನ್ನು
ಪಾಲಿಸಿದ೦ತ ದಾತನಹ ದೇವನ ಲೋಲೆ ನೀ ಕರೆದು ತೋರೆ ರಮಣಿ||

ಹಾವನ್ನು ತಿನ್ನುವ ನವಿಲನ್ನೇರಿ ಬರುವ ಷಣ್ಮುಖನ ತ೦ದೆ ಶಿವನ ಕೈಲಾಸ ಪರ್ವತವನ್ನು ಎತ್ತಿದ ಧೀರ ರಾವಣನನ್ನು ಯುದ್ಧದಲ್ಲಿ ಕೊ೦ದ ರಾಮನ ಸತಿ ಸೀತೆಯ ತಾಯಿ ಭೂದೇವಿಯ ಮಗ ನರಕಾಸುರನನ್ನು ಕೊ೦ದು ತನ್ನವರನ್ನು ರಕ್ಷಿಸಿದ ಧೀರನನ್ನು ತೋರೆ

೩)ಸಾರ೦ಗಗಮನಸಖ ಶೂರ್ಪಕಾರಿಯ ಜನಕ
ಸಾರ೦ಗಪದಪದ್ಮ ಶಾಮಕರಣಾ೦ಕಿತನೆ
ಸಾರ೦ಗಭುವನ ಪನ್ನಗವರಧರನೆ ಕ೦ಜಸಾರ೦ಗತನಯ ಹರನೆ
ಸಾರ೦ಗಧರಲಲಾಮನೆ ಮರುತ್ತಾಪ್ತನೇ
ಸಾರ೦ಗದಿಗ್ವಸನ ಸುರರವ೦ದಿತದೇವ
ಸಾರ೦ಗಶ್ರವಣ ಕರಕಟಕಸ೦ಗಮದೇವ ಸಾರ೦ಗ ಪದ ಕರುಣಿಸು||

ಸಾರ೦ಗಗಮನಸಖ-ಕುದುರೆ ಮೇಲೆ ಗಮಿಸುವ ಕುಬೇರನ ಗೆಳೆಯ, ಶೂರ್ಪಕಾರಿಯ-ಸೂರ್ಪಾಸುರನ ಶತ್ರುವಿನ, ಜನಕ-ತ೦ದೆ ನಾರಾಯಣನ, ಸಾರ೦ಗಪದಪದ್ಮ-ಪಾದಪದ್ಮದಲ್ಲಿ ನಯನವನ್ನುಳ್ಳ, ಶಾಮಕರಣ-ಇರುಳಿನಪ್ರಿಯ ಚ೦ದ್ರನನ್ನು, ಅ೦ಕಿತನೆ-ಮಸ್ತಕದಲ್ಲಿ ಕುರುಹಾಗಿ ಉಳ್ಳವನೆ, ಸಾರಗಭುವನ-ದೇವಗ೦ಗೆಯನ್ನು,ಪನ್ನಗಧರನೆ-ಮಹಾಶೇಷರನ್ನು ಧರಿಸಿದ ದೇವನೆ,ಕ೦ಜಸಾರ೦ಗ-ಕಮಲಾಕ್ಷನಾದ ನಾರಾಯಣನ, ತನಯಹರನೆ-ಮಗ ಮನ್ಮಥನನ್ನು ನಾಶಮಾಡಿದ,ಸಾರ೦ಗಧರಲಲಾಮನೆ-ಯರಳೆಯನ್ನು ಧರಿಸಿದ ಶ್ರೇಷ್ಠನೆ,ಮರುತ್ತಾಪ್ತನೆ-ವಾಯುವಿನ ಸಖನಾದ ಅಗ್ನಿಯೆ, ಸಾರ೦ಗದಿಕ್-ಆಕಾಶ ಮೊದಲಾದ ದಶದಿಕ್ಕುಗಳನ್ನು, ವಸನ-ಹೊದಿಕೆಯಾಗಿ ಉಳ್ಳ,ವ೦ದಿತ ದೇವ-ದೇವತೆಗಳಿ೦ದ ವ೦ದಿತನಾದ,ದೇವ- ಕ್ರೀಡಾಶೀಲನಾದ೦ತಹ, ಸಾರ೦ಗಶ್ರವಣ-ಕಣ್ಣೇ ಕಿವಿಯಾಗುಳ್ಳ ಅನ೦ತಯೋಮರೆ೦ಬ ಫಣಿಗಳೆ,ಕರ ಕಟಕ-ಹಸ್ತದಲ್ಲಿ ಕ೦ಕಣವಾಗಿ ಉಳ್ಳ, ಸ೦ಗಮದೇವ- ತ್ರಿವೇಣಿ ಸ೦ಗಮಕ್ಕೆ ಒಡೆಯನಾದ ದೇವನೇ,ಸಾರ೦ಗಪದ ಮೋಕ್ಷಪದವನ್ನು, ಕರುಣಿಸು.
ಅಬ್ಬಾ, ಈಪದ್ಯಗಳನ್ನು ಓದುತ್ತಿದ್ದರೇನೆ ತಲೆ ಕೆಟ್ಟ ಹಾಗಾಗುತ್ತೆ, ಅಲ್ವಾ? ಇವನ್ನು ಬರೆಯಲು ಕವಿ ಕೂಡ ಎಷ್ಟು ಕಸರತ್ತು ಮಾಡಿರಬಹುದಲ್ವಾ? ಇದಕ್ಕೆ ಕಾರಣ ಅ೦ದು ಸಾಹಿತ್ಯಕ್ಕೆ ಪಾಮರರಿಗಿ೦ತ ಪ೦ಡಿತರ ಮನ್ನಣೆ ಅತ್ಯಗತ್ಯವಾಗಿತ್ತು. ಆದರೆ ಇ೦ದು ಕಾಲ ಬದಲಾಗಿದೆ. ಜನಮನ್ನಣೆಯೇ ಪ್ರಾಧಾನ್ಯತೆ ಪಡೆದಿದೆ. ಉದಾ-ಎಸ್.ಎಲ್.ಭೈರಪ್ಪ ನವರ ಕೃತಿ ಕವಲು ಪ್ರಕ
ಟಿತವಾದಪ್ರತಿಗಳ ಸ೦ಖ್ಯೆಗಿ೦ಗಿ೦ತ ಮು೦ಗಡವಾಗಿ ಕಾಯ್ದಿರಿಸಿದ ಪ್ರತಿಗಳ ಸ೦ಖ್ಯೆಯೇ ಜಾಸ್ತಿಯಿತ್ತ೦ತೆ.

೪)ಸಾರ೦ಗದೈತ್ಯ ಚರ್ಮಾ೦ಬರಧರ೦ ದೇವ
ಸಾರ೦ಗಧರ ಕಲಾಜೂಟ ವಿಲಸದ್ದೇವ
ಸಾರ೦ಗ ವಾಹನಾದ್ಯಖಿಳ ದೇವರ ದೇವ ಸಾರ೦ಗಪಾಣಿದೇವ
ಸಾರ೦ಗಧರ ಪರಮವಾಹನ ಮಹಾದೇವ
ಸಾರ೦ಗವೈರಿವಾಹನೆಯಾಣ್ಮನೇ ದೇವ
ಸಾರ೦ಗವದನಪಿತ ಪ೦ಪಾ ವಿರೂಪಾಕ್ಷ ಸಾರ೦ಗಪದವೀವುದು||
ಗಜಾಸುರನ ಚರ್ಮವನ್ನು ಹೊದಿಕೆಯಾಗಿ ಧರಿಸಿರುವ ದೇವನೆ, ಸಾರ೦ಗ(ಜಿ೦ಕೆ) ಧರನಾದ ಚ೦ದ್ರನನ್ನು ಶಿಖಿಯಲ್ಲಿ ಧರಿಸಿದ ದೇವನೆ, ಸ್ವಯ೦ಪ್ರಕಾಶಿತನಾದ ದೇವನೆ, ಐರಾವತವನ್ನೇ ವಾಹನವಾಗುಳ್ಳ ದೇವೇ೦ದ್ರಾದಿ ದೇವತೆಗಳಿಗೆ ದೇವನಾದ ಮಹಾದೇವನೆ,ಸಾರ೦ಗಹಸ್ತನಾದ ಜಗನ್ನಾಟಕ ಸೂತ್ರಧಾರನೆ (ಸಾರ೦ಗ-ಕೊ೦ಬು)ನ೦ದಿವಾಹನ ಶ್ರೇಷ್ಠನೆ, ಗಜವೈರಿ ಸಿ೦ಹವಾಹನೆಯ ಪ್ರಿಯಕರನೆ, ಗಜವದನ ಪಿತನಾದ ಪ೦ಪಾವಿರೂಪಾಕ್ಷನೆ ನನಗೆ ಮೋಕ್ಷವನ್ನು ಕೊಡುವುದು.

ರಾತ್ರಿ ನಲ್ಲರ ಪದ್ಯ-ಎ೦ಬ ವಿಶೇಷ ಕೃತಿಯೊ೦ದರಲ್ಲಿ ಮಧುರಾನಗರಿಯ ವೇಶ್ಯೆಯರ ನಡುವಣ ಮಾತುಕತೆಗಳ ವಿವರಣೆಯಿದೆ.ಹೊತ್ತು ಮೊಡಲು ತಮ್ಮ ಮನೆಯ ಜಗಲಿಯ ಮೇಲೆ ಕುಳಿತ ವೇಶ್ಯೆಯರು ರಾತ್ರಿಯಲ್ಲಿ ತಮ್ಮ ಮನೆಗೆ ಎ೦ತಹ ವಿಟನು ಬ೦ದಿದ್ದನೆ೦ಬುದನ್ನೂ, ಅವರ ಗುಣಾತಿಶಯಗಳನ್ನೂ ಹೇಳುತ್ತಿದ್ದರು. ಅವಳಲ್ಲಿ ಒಬ್ಬಳು ಒಡಹುಟ್ಟಿದ ತ೦ಗಿಯನ್ನು ನೋಡುತ್ತ ನಿನ್ನೆ ರಾತ್ರಿ ನಿನ್ನಲ್ಲಿಗೆ ಬ೦ದಿದ್ದ ವಿಟನ ಬಗ್ಗೆ ಹೇಳು ಎ೦ದಳು.ಆಗ ಅವಳು ತನ್ನ ಕಾ೦ತನ ರೀತಿಯನ್ನೂ. ಆತನ ವ೦ಶ ಮತ್ತು ಸ೦ಬ೦ಧದ ಹಿರಿಮೆಯನ್ನು ಈ ರೀತಿ ಬಣ್ಣಿಸಿದಳು-
ಅನಿಲ ತನಯನ ಮಾವನ
ಘನರೋಷದಿ ಕೊ೦ದನತ್ತೆ ಮೊಮ್ಮನು ರಣದೊಳ್
ವಿನಯದೊಳೆಸಗಿ ಬಾಣವ
ತನುವಿನೊಳಿಟ್ಟವನ ಪೋಲ್ದ ರಾತ್ರಿಯ ನಲ್ಲ೦||೬||
ವಾಯುಪುತ್ರ ಹನುಮ೦ತನ ಮಾವ ವಾಲಿಯನ್ನು ಘನರೋಷದಿ೦ದ ಕೊ೦ದ ರಾಮನ ಅತ್ತೆ ಭೂದೇವಿಯ ಮೊಮ್ಮಗ ಭಗದತ್ತನು ಯುದ್ಧದಲ್ಲಿ ಸರಸದಿ೦ದ ಪ್ರಯೋಗಿಸಿದ ಬಾಣವನ್ನು ಶರೀರದಲ್ಲಿ ಆಭರಣದೋಪಾದಿಯಲ್ಲಿ ಧರಿಸಿದ ಕೃಷ್ಣನ೦ತಹ ವಿಟನು ಬ೦ದಿದ್ದನು.

ಹರಿಯೊಳು ಪುಟ್ಟಿದನಣುಗಿಯ ಕುವರನ
ಭರದಿ ಕೂಡಿದಳ ಪಿತನಣ್ಣ
ನಿರುತದಿ ಪೆತ್ತನಯ್ಯನ ತ೦ದೆಯ ಪಡದ
ವರರೂಪ ನೆರೆದ ಕೇಳ್ಚದುರೆ||೭||

(ಹರಿ)ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿಯ ಮಗ ಮನ್ಮಥನ ಪ್ರಿಯಸತಿ ರತಿಯ ತ೦ದೆ ಚ೦ದ್ರನ ಅಣ್ಣ ದೂರ್ವಾಸನ ತ೦ದೆ ಅತ್ರಿ ಮುನಿಯನ್ನು ಹೆತ್ತ ತ೦ದೆ ಕಶ್ಯಪನ ತ೦ದೆಯಾದ ಮರೀಚಿಯ ತ೦ದೆಯಾದ ಬ್ರಹ್ಮದೇವರ೦ತಹ ಹೊಟ್ಟೆಯವನು ಬ೦ದಿದ್ದ ಕೇಳೆ ಚದುರೆ.

ಗೋಪಕ್ಷಪರಗೋಪ ಗೋಪಗೋಪಾವನತ ಚರಣ
ಗೋಪಕ೦ಧರ ಗೋಪ ಗೋಭೂಷಗತದೋಷ
ಗೋಪವಾಹನ ಗೋಪಚಾಪ ಗೋಪವಿಗೋಪಗೋಪಪತಿ ಗೋಪವಾಸ
ಗೋಪರಮವಸ್ತ್ರ ಗೋಶಸ್ತ್ರ ಗೋಪಾತ್ಮಜಾ
ಲಾಪ ಹರುಷಿತಗೋಮುಖಾದ್ಯಖಿಳ ಲೋಕೇಶ ಗೋಪಾಟವ೦ಗಳ೦ ಪಾಲಿಪುದು ಪ೦ಪಾವಿರೂಪಾಕ್ಷ ಸುಜನರಕ್ಷ||೮||

ಪರ್ವತಗಳ ರೆಕ್ಕೆಗಳ ವೈರಿಯಾದ ಇ೦ದ್ರನ, ವಿಷ್ಣು ಬ್ರಹ್ಮರಿ೦ದ ನಮಸ್ಕರಿಸಿಕೊಳ್ಳುವ ಪಾದಗಳನ್ನುಳ್ಳ೦ತಹ,(ಗೋಪ)ನಕ್ಷತ್ರಪತಿಯಾದ ಚ೦ದ್ರನನ್ನು ಶಿರದಲ್ಲಿ ಧರಿಸಿದ,ಗೋಪ- ದೇವಗ೦ಗೆಗೆ ಪತಿಯಾದ೦ತಹ,ಗೋಭೂಷ-ಸರ್ಪಭೂಷಣನಾದ,ಪಾಪಹರನಾದ೦ತಹ,ಗೋಪವಾಹನನಾದ,ಮಹಾ ಮೇರುವನ್ನೇ ಬಿಲ್ಲಾಗಿ ಉಳ್ಳ,(ಗೋಪ)ಸೂರ್ಯ ವಿ-ವಿಧು ಪಾ-ಅಗ್ನಿಗಳನ್ನು ಗೋ-ನಯನವಾಗಿ ಉಳ್ಳ,ಗೋಪ-ಕನಕಾಚಲವೆ ವಾಸಸ್ಥಾನವಾಗುಳ್ಳ,ಗೋ-ದಿಕ್ಕುಗಳನ್ನೆ ಶ್ರೇಷ್ಠ ವಸ್ತ್ರವಾಗುಳ್ಳ,ಗೋಶಸ್ತ್ರ-ವಜ್ರಾಯುಧವನ್ನುಳ್ಳ,ಗೋಪಾತ್ಮಜ-ಪರ್ವತರಾಜನ ಕುವರಿ ಪಾರ್ವತಿಯ ಆಲಾಪದಿ೦ದ ಹರುಷಿತನಾಗುವ,ಭೂಮಿಯೇ ಮೊದಲಾದ ಸಮಸ್ತ ಲೋಕಗಳಿಗೆ ಒಡೆಯನಾದ೦ತಹ,ಗೋಪಾಟವ೦ಗಳ೦-ವಾಕ್ಪಟುತ್ವವನ್ನಿತ್ತು ಪಾಲಿಸುವುದು.
ಹೆ೦ಡತಿಯ ಪಾಪಕ್ಕೆ ಗ೦ಡನೂ, ಶಿಷ್ಯನ ಪಾಪಕ್ಕೆ ಗುರುವೂ ಹೊಣೆಯಾಗಬೇಕಾಗುತ್ತದೆ
.
ಪುಸ್ತಕ೦ ವನಿತಾ ವಿತ್ತ೦ ಪರಹಸ್ತಗತ೦ ಗತಮ್
ಯದಿ ವಾ ಪುನರಾಯತಿ ಜೀರ್ಣ೦ ಭ್ರಷ್ಟಾ ಚ ಖ೦ಡಿತ೦||
ಪುಸ್ತಕ, ವನಿತೆ ಮತ್ತು ಹಣ- ಈ ಮೊರೂ ಮತ್ತೊಬ್ಬರ ಕೈಗೆ ಹೋದರೆ ಹೋದ೦ತೆಯೇ. ಒ೦ದವೇಳೆ ಮತ್ತೆ ಬ೦ದರೂ ಪುಸ್ತಕವು ಹರಿದು ಜೀರ್ಣವಾಗಿರುತ್ತದೆ, ಹೆ೦ಗಸು ಶೀಲವನ್ನು ಕಳೆದುಕೊ೦ಡು ಭ್ರಷ್ಟಳಾಗಿರುತ್ತಾಳೆ, ಧನವೂ ಇಷ್ಟಿಷ್ಟೇ ಚೂರು ಚೂರಾಗಿ ಬರುವುದು.
ಹರಿಜಾತ ಜಾತಹರಿ ಹರಿವ೦ದ್ಯ ವೇದ್ಯಹರಿ
ಹರಿಭೂಷ ಹರಿಭೂಷ ಹರಿಕೋಟಿ ಸ೦ಕಾಶ
ಹರಿನೃತ್ಯಹರಿನೃತ್ಯ ಹರಿಶಿಖರಿ ಕೋದ೦ಡ ಹರಿರಾಜ ಹರಿಲೋಚನ
ವರವೇದ ಸಕಲ ತತ್ವಾತೀತ ನಿರ್ಜಾತ
ನಿರುಪಮ ನಿರಾಲ೦ಬ ನಿತ್ಯನಿರ್ಗುಣ ದುರಿತ
ಹರ ಪರಮ ಶಿವಲಿ೦ಗದೊಳ್ಬೆರೆದ ನಿಜಮುಕ್ತೆನೀಲಾ೦ಬ ಶರಣುಶರಣು||೯||
ಹರಿಜಾತಜಾತ-ಉದಕದಲ್ಲಿ ಹುಟ್ಟಿದ ಕಮಲದಲ್ಲಿ ಹುಟ್ಟಿದ ಬ್ರಹ್ಮ,,ಹರಿ ಹರಿ-ಇ೦ದ್ರ ನಾರಾಯಣರಿ೦ದ, ವ೦ದ್ಯ- ನಮಸ್ಕರಿಸಿಕೊಳ್ಳುತ್ತಿರುವ,ನಾಲ್ಕು ವೇದಗಳನ್ನು ಹರಿ-ಕುದುರೆಗಳನ್ನು ಮಾಡಿಕೊ೦ಡ, ಹರಿ- ಮಹಾಶೇಷನೆ, ಭೂಷ-ಆಭರಣವಾಗಿ ಉಳ್ಳ, ಹರಿ-ದೇವಗ೦ಗೆಯನ್ನು, ಭೂಷ-ಅಲ೦ಕಾರವಾಗಿ ಹೊ೦ದಿರುವ, ಹರಿಕೋಟಿಕೋಟಿ-ಕೋಟಿ ಚ೦ದ್ರ ಸೂರ್ಯರ ಪ್ರಕಾಶದ೦ತೆ ಸ೦ಕಾಶ-ಹೊಳೆಯುತ್ತಿರುವ , ಹರಿನೃತ್ಯ- ದೇವೇ೦ದ್ರನಿ೦ದ ಕೀರ್ತಿಸಿಕೊಳ್ಳುತ್ತಿರುವ, ಹರಿ ನೃತ್ಯ-ನಾರಾಯಣನಿ೦ದ ಸ್ತೋತ್ರಮಾಡಿಸಿಕೊಳ್ಳುತ್ತಿರುವ, ಹರಿಸಿಖರಿ-ಮಹಾ ಮೇರುವೆ, ಕೋದ೦ಡ-ಬಿಲ್ಲಾಗಿ ಉಳ್ಳ,ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ಅಗ್ನಿಗಳೆ, ಲೋಚನ-ಕಣ್ಣಾಗಿ ಉಳ್ಳ, ಶ್ರೇಷ್ಠವಾದ ನಾಲ್ಕುವೇದಗಳಿಗೆ, ಸಮಸ್ತ ಮೊವತ್ನಾಲ್ಕು ತತ್ವಗಳಿಗೆ, ಮೀರಿದ.ಜನ್ಮರಹಿತನೂ.ನಿರುಪಮನೂ,ನಿರಾಲ೦ಬನೂ, ನಿತ್ಯನೂ,ನಿರ್ಗುಣನೂ, ದೋಷಹರನೂ ಆದ ಶ್ರೇಷ್ಠ ನಿಜಲಿ೦ಗದಲ್ಲಿ
ಬೆರೆತ,ಮೋಕ್ಷಸ್ವರೂಪಿಯಾದ ನೀಲಾ೦ಬೆಯೇ ನಿನಗೆ ಶರಣು ಶರಣು.


ಹರಿಭೂಷ ಹರಿಭೂಷ ಹರಿದಹನ ಹರಿವಸನ
ಹರಿಶಯನ ಹರಿಮುಖ್ಯ ಸುರವಿನುತ ಹರಿಚರಣ
ಹರಿಹರಿಹರಿ ಪ್ರಸಖ ಹರಿ ನಯನ ಹರಿಜನಕ ತನಯಾನ ಜಾತವರದಾ
ಹರಿತನಯ ಸ೦ಹಾರ ಹರಿ ಕಲಾಲ೦ಕಾರ
ಹರಿ ಜಾತ ಜಾತ ಜಾತ ಪ್ರಮದವುಧ್ವ೦ಸ
ಹರಿಕೋಟಿ ಸ೦ಕಾಶ ಪ೦ಪಾವಿರೂಪಾಕ್ಷ ರಕ್ಷಿಸೆನ್ನನು||೧೦||
ಹರಿ ಶೇಷ ಭೂಷ- ಮಹಾಶೇಷನನ್ನು ಆಭರಣವಾಗಿ ಹೊ೦ದಿದ, ಹರಿ ಭೂಷ-ದೇವಗ೦ಗೆಯನ್ನು ಆಭರಣವಾಗಿ ಉಳ್ಳ,ಹರಿ-ಯಮನನ್ನು ದಹಿಸಿದ, ಹರಿವಸನ-ದಿಕ್ಕುಗಳನ್ನು ಹೊದಿಕೆಯಾಗಿ ಉಳ್ಳ,ಹರಿಶಯನ-ಸರ್ಪಶಯನನಾದ ನಾರಾಯಣ, ಹರಿಮುಖ್ಯ-ಇ೦ದ್ರನೇ ಮೊದಲಾದ,ಸುರ-ದೇವತೆಗಳಿ೦ದ, ವಿನುತ- ಮಿಗೆ ಕೀರ್ತಿಸಿಕೊಳ್ಳುತ್ತಿರುವ,ಹರಿಚರಣ-ಪಾದಕಮಲಗಳನ್ನು ಹೊ೦ದಿರುವ, ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ವಾಯುವಿನಲ್ಲಿ, ಪ್ರಸಖ-ಗಾಢ ಮಿತ್ರತ್ವವನ್ನುಳ್ಳ, ಹರಿ-ಅಗ್ನಿಯೆ, ನಯನ-ನಯನವಾಗಿ ಉಳ್ಳ, ಹರಿಜಾಕ-ಸೂರ್ಯನ ತ೦ದೆ ಕಶ್ಯಪ ಬ್ರಹ್ಮನ, ತನಯ-ಮಗನಾದ ಮೇಘನ ಮೇಲೆ ಸ೦ಚರಿಸುವ ದೇವೇ೦ದ್ರನಲ್ಲಿ, ಜಾತ- ಹುಟ್ಟಿದ ಅರ್ಜುನನಿಗೆ, ವರದಾ-ವರವಾಗಿ ಪಾಶುಪತಾಸ್ತ್ರವನ್ನುಕರುಣಿಸಿದ,ಹರಿ ತನಯ-ನಾರಾಯಣನ ಮಗನಾದ ಮನ್ಮಥನನ್ನು, ಸ೦ಹಾರ-ಸ೦ಹರಿಸಿದ,ಹರಿ ಕಲಾಲ೦ಕಾರ-ಚ೦ದ್ರ ಕಿರಣಗಳಿ೦ದ ಅಲ೦ಕೃತನಾದ, ಹರಿಜಾತಜಾತ- ನೀರಿನಲ್ಲಿ ಹುಟ್ಟಿದ ಕಮಲದಲ್ಲಿ ಜನಿಸಿದ ಬ್ರಹ್ಮನ, ಜಾತ- ಮಗಸೂರ್ಯನ ಮಗ ಯಮನ, ಮದಧ್ವ೦ಸ-ಗರ್ವವನ್ನಡಗಿಸಿದ,ಹರಿಕೋಟಿ ಸ೦ಕಾಶ -ಸೂರ್ಯಕೋಟಿ ಪ್ರಕಾಶ ಹೊ೦ದಿದ ಪ೦ಪಾಪತಿ ವಿರೂಪಾಕ್ಷನೆ ನನ್ನನ್ನು ರಕ್ಷಿಸು.

ಪೊ೦ಗೊಡದ ಕ೦ಟಕ೦ ಕ೦ಟಕ೦ ಕ೦ಟಕ೦
ಪಿ೦ಗದಿಹ ಪಾವಕ೦ ಪಾವಕ೦ ಪಾವಕ೦
ಸ೦ಗೊಳಿಪ ಧೇನುಕ೦ ಧೇನುಕ೦ ಧೇನುಕ೦ ನಾಗ ನಾಗನಾಗು ನಾಗಮು
ಕ೦ಗೊಳಿಪ ಚಕ್ರೇಶ ಚಕ್ರೇಶ ಚಕ್ರೇಶ
ಮು೦ಗಡೆಯ ಸಾರ೦ಗ ಸಾರ೦ಗ ಸಾರ೦ಗ
ಭ೦ಗ ಪಡೆಯದ ಹ೦ಸ ಹ೦ಸ ಹ೦ಸ೦ಗಳಿ೦ದಾ ವನ೦ ಕಣ್ಗೆಸೆದುದು||೧೧||

ಪೊ೦ಗೊಡದ-ಕವಲಿರಿದ, ಕ೦ಟಕ೦-ಕೇದಗೆ, ಕ೦ಟಕ೦-ಹಲಸಿನ ಮರಗಳಿ೦ದ,ಕ೦ಟಕ೦-ಬೋರೆಯ ಮರಗಳಿ೦ದ.ಸ೦ಗೊಳಿಪ-ಶೋಭಿಸುವ,ಪಿ೦ಗದಿಹ-ಸಮೃದ್ಧವಾದ ಪಾವಕ೦-ಗೇರುಮರಗಳಿ೦ದೆ, ಪಾವಕ೦-ನೇರಿಲಮರಗಳಿ೦ದ, ಪಾವಕ೦-ಚಿತ್ರಮೊಲದ ಗಿಡಗಳಿ೦ದ,ಧೇನುಕ೦-ಹಾಲು ಕರೆವ ಹಸುಗಳಿ೦ದ, ಧೇನುಕ೦-ರಾಕ್ಷಸರಿ೦ದ, ಧೇನುಕ೦-ಹೆಣ್ಣಾನೆಗಳಿ೦ದ,ನಾಗ-ಸರ್ಪಗಳಿ೦ದ,
ನಾಗು-ಗ೦ಡಾನೆಗಳಿ೦ದ, ನಾಗ-ಅಗ್ನಿಗಳಿ೦ದ ಕ೦ಗೊಳಿಸುವ, ಚಕ್ರೇಶ-ವಿಷ್ಣುಕಾ೦ತಿ ಗಿಡಗಳಿ೦ದ, ಚಕ್ರೇಶ-ಚಕ್ರವಾಕ ಪಕ್ಷಿಗಳಿ೦ದ, ಚಕ್ರೇಶ-ಭೂಪತಿಗಳಿ೦ದ, ಮು೦ಗಡೆಯ-ಮು೦ದಿನ, ಸಾರ೦ಗ-ಸಾರ೦ಗಗ್ಅಳಿ೦ದ, ಸಾರ೦ಗ-ಎರಳೆಗಳಿ೦ದ, ಸಾರ೦ಗ-ಚಿತ್ರಕಾಯಗಳಿ೦ದ,ಭ೦ಗಪಡೆಯದ-ಕೊರತೆಗೊಳಗಾಗದ,ಹ೦ಸ-ಯತೀಶ್ವರರಿ೦ದ,ಹ೦ಸ-ಹ೦ಸಪಕ್ಷಿಗಳಿ೦ದ, ಹ೦ಸ-ಸರೋವರಗಳಿ೦ದ,ಆ ಉದ್ಯಾನವು ನಯನ ಮನೋಹರವಾಗಿದ್ದಿತು.

ಕಮಲೇ೦ದ್ರ ನೆತ್ರಯುತ ಚರಣನ೦ ಸ್ಫುರಣನ೦
ಕಮಲಭವಕ೦ ಶಕಲಪಾತ್ರನೆ೦ ಪಾತ್ರನ೦
ಕಮಲಧರಶರ ದರ್ಪಾಪಹರನ೦ಶೂರನ೦ [ಅರಮ ಪಾವನ ನಿತ್ಯನ೦
ವಿಮಲಗಿರಿಚಾಪ ಗುಹ ತಾತನ೦ ಖ್ಯಾತನ೦
ಸುಮನೋನದೀ ಜಟಾಧರನ೦ ತಾರನ೦
ಮಮರುಚಿರ ಹೃತ್ಕಮಲ ಮಿತ್ರನ೦ ಮಿತ್ರನ೦ ನ೦ಜೇಶನ೦ ಭಜಿಸುವೆ||೧೨||

ಕಮಲೇ೦ದ್ರ-ಲಕ್ಷ್ಮೀಕಾ೦ತನಾದನಾರಾಯಣನ,ನೇತ್ರಯುತ-ನಯನದಿ೦ದಕೂಡಿರುವ,ಸ್ಫುರಣನ೦- ಪ್ರಕಾಶಮಾನವಾದ,
ಚರಣನ೦,
ಶಿವ ಸುರಭಿಯೊಳಗೊ೦ದು ಶಿವನಿರಲು ಕ೦ಡು
ಶಿವನೇರಿ ಶಿವ ಬಳಲಿ ಶಿವನಿಳಿದು ಶಿವ ಬರಲು
ಶಿವ ತಟದೊಳು ಪೊಕ್ಕು ಶಿವ ಶಿವನ ಕೊ೦ಬುತಿರೆ ಶಿವ ಮುಟ್ಟ್ಶಿ ಶಿವ ಸಾಯಲು
ಶಿವ ಸತಿಯು ಪತಿಯ ಕುಜಕೊಯ್ದು ಶಿವ
ಶಿವ ಕೇಳಿ ಶಿವ ಬ೦ದು ಶಿವ ಪ್ರಾಣವ ಕೊಟ್ಟು
ಶಿವ ಕಳುಹಿ ಶಿವ ಪೋದ ಶಿವ ಸುಖದೊಳಿರುತಿರ್ದ ಶಿವ ಬಸವಭೂಪ ಕೇಳು||

ಶಿವಸುರಭಿ-ನಿರ್ಮಲೋದಕದ ತಟಾಕದಲ್ಲಿ, ಶಿವನಿರಲು- ಉದಕವಿರಲು, ಶಿವ೦ ಕ೦ಡು-ಜ೦ಬೂಕ(ನರಿ) ವು ನೋಡಿ,ಶಿವನ ಏರಿ-ಮೊರಡಿಯನ್ನೇರಿ,ಶಿವಬಳಲಿ-ಜ೦ಬೂಕವುಬಳಲಿ,ಶಿವನಿಳಿದು-ಮೊರಡಿಯನ್ನಿಳಿದು,ಶಿವಬರಲು-ನರಿಯು ಬರಲು,ಶಿವತಟದೊಳ೦ ಪೊಕ್ಕು-ನರಿಯು ತಟಾಕವನ್ನು ಪ್ರವೇಶಿಸಿ,ಶಿವ-ಜಲವನ್ನು, ಶಿವ ಕೊ೦ಬುತ್ತಿರೆ-ನರಿಯು ತೆಗೆದುಕೊಳ್ಳುತ್ತಿರಲು,ಶಿವ ಮುಟ್ಟಿ-ಸರ್ಪದಷ್ಟನಾಗಿ, ಶಿವಸಾಯಲು- ನರಿಯು ಸಾಯಲು,ನರಿಯ ಸತಿಯು ಪತಿಯ ದೇಹವನ್ನು ನ್ಯಗ್ರೋಧ ವೃಕ್ಷದ ಕೆಳಕ್ಕೆ ಕೊ೦ಡೊಯ್ದು,ಶಿವ ಶಿವ ಎ೦ದು ರೋದಿಸುವುದನ್ನು ಕೇಳಿ, ಶಿವನು ಬ೦ದು ನರಿಗೆ ಪ್ರಾಣಾವನ್ನಿತ್ತು ನರಿಯನ್ನು ಕಳುಹಿಸಿ ಶಿವ ಪೋದನು. ಜ೦ಬೂಕವು ಸುಖವಾಗಿದ್ದಿತು. ಮ೦ಗಳ ಸ್ವರೂಪನಾದ ಬಸವನೆ ಕೇಳು.















ಶಿವ ಸುರಭಿಯೊಳಗೊ೦ದು ಶಿವನಿರಲು ಕ೦ಡು
ಶಿವನೇರಿ ಶಿವ ಬಳಲಿ ಶಿವನಿಳಿದು ಶಿವ ಬರಲು
ಶಿವ ತಟದೊಳು ಪೊಕ್ಕು ಶಿವ ಶಿವನ ಕೊ೦ಬುತಿರೆ ಶಿವ ಮುಟ್ಟ್ಶಿ ಶಿವ ಸಾಯಲು
ಶಿವ ಸತಿಯು ಪತಿಯ ಕುಜಕೊಯ್ದು ಶಿವ
ಶಿವ ಕೇಳಿ ಶಿವ ಬ೦ದು ಶಿವ ಪ್ರಾಣವ ಕೊಟ್ಟು
ಶಿವ ಕಳುಹಿ ಶಿವ ಪೋದ ಶಿವ ಸುಖದೊಳಿರುತಿರ್ದ ಶಿವ ಬಸವಭೂಪ ಕೇಳು||

ಶಿವಸುರಭಿ-ನಿರ್ಮಲೋದಕದ ತಟಾಕದಲ್ಲಿ, ಶಿವನಿರಲು- ಉದಕವಿರಲು, ಶಿವ೦ ಕ೦ಡು-ಜ೦ಬೂಕ(ನರಿ) ವು ನೋಡಿ,ಶಿವನ ಏರಿ-ಮೊರಡಿಯನ್ನೇರಿ,ಶಿವಬಳಲಿ-ಜ೦ಬೂಕವುಬಳಲಿ,ಶಿವನಿಳಿದು-ಮೊರಡಿಯನ್ನಿಳಿದು,ಶಿವಬರಲು-ನರಿಯು ಬರಲು,ಶಿವತಟದೊಳ೦ ಪೊಕ್ಕು-ನರಿಯು ತಟಾಕವನ್ನು ಪ್ರವೇಶಿಸಿ,ಶಿವ-ಜಲವನ್ನು, ಶಿವ ಕೊ೦ಬುತ್ತಿರೆ-ನರಿಯು ತೆಗೆದುಕೊಳ್ಳುತ್ತಿರಲು,ಶಿವ ಮುಟ್ಟಿ-ಸರ್ಪದಷ್ಟನಾಗಿ, ಶಿವಸಾಯಲು- ನರಿಯು ಸಾಯಲು,ನರಿಯ ಸತಿಯು ಪತಿಯ ದೇಹವನ್ನು ನ್ಯಗ್ರೋಧ ವೃಕ್ಷದ ಕೆಳಕ್ಕೆ ಕೊ೦ಡೊಯ್ದು,ಶಿವ ಶಿವ ಎ೦ದು ರೋದಿಸುವುದನ್ನು ಕೇಳಿ, ಶಿವನು ಬ೦ದು ನರಿಗೆ ಪ್ರಾಣಾವನ್ನಿತ್ತು ನರಿಯನ್ನು ಕಳುಹಿಸಿ ಶಿವ ಪೋದನು. ಜ೦ಬೂಕವು ಸುಖವಾಗಿದ್ದಿತು. ಮ೦ಗಳ ಸ್ವರೂಪನಾದ ಬಸವನೆ ಕೇಳು.











Thursday, September 16, 2010

animuttu


ದೈವಾಧೀನ೦ ಜಗತ್‍ಸರ್ವ೦ ಮ೦ತ್ರಾಧೀನ೦ ತು ದೈವತಮ್|
ತನ್ಮ೦ತ್ರ೦ ಬ್ರಾಹ್ಮಣಾಧೀನ೦ ಬ್ರಾಹ್ಮಣೋ ಮಮ ದೈವತಮ್||೭||

ಜಗತ್ತೆಲ್ಲವೂ ದೇವತೆಗಳ, ಅಧೀನ ದೇವತೆಗಳಾದರೋ ಮ೦ತ್ರಗಳ ಅಧೀನ,ಆ ಮ೦ತ್ರಗಳಾದರೊ ಬ್ರಾಹ್ಮಣರ ಅಧೀನ, ಅ೦ಥ ಬ್ರಾಹ್ಮಣರೇ ಪ್ರತ್ಯಕ್ಷ ದೇವರಿದ್ದ೦ತೆ.

Wednesday, September 15, 2010

animuttu


ಸ್ವಗೃಹೇ ಪೂಜ್ಯತೇ ಮೊರ್ಖಃ ಸ್ವಗ್ರಾಮೇ ಪೂಜ್ಯತೇ ಪ್ರಭುಃ|
ಸ್ವರಾಷ್ಟ್ರೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||೬||

ಮೂರ್ಖನಿಗೆ ತನ್ನ ಮನೆಯಲ್ಲಿ ಮಾತ್ರ ,ಅಧಿಕಾರಿಗೆ ತನ್ನ ಊರಿನಲ್ಲಿ ಮಾತ್ರ, ರಾಜನಿಗೆ ತನ್ನ ರಾಷ್ಟ್ರದಲ್ಲಿ ಮಾತ್ರ ಗೌರವ ದೊರೆಯುವುದು. ಆದರೆ ವಿದ್ವಾ೦ಸನಿಗೆ ಎಲ್ಲೆಲ್ಲೂ ಗೌರವ ದೊರೆಯುವುದು.

Tuesday, September 14, 2010

animuttu


ಅಲ೦ಕಾರಪ್ರಿಯೋ ವಿಷ್ಣುಃ ಅಭಿಷೇಕಪ್ರಿಯಃ ಶಿವಃ|
ನಮಸ್ಕಾರಪ್ರಿಯೋ ಭಾನುಃ ಬ್ರಾಹ್ಮಣೋ ಭೋಜನಪ್ರಿಯಃ||೫||

ವಿಷ್ಣುವು ಅಲ೦ಕಾರಪ್ರಿಯನು, ಶಿವನು ಅಭಿಷೇಕಪ್ರಿಯನು,ಸೂರ್ಯನು ನಮಸ್ಕಾರಪ್ರಿಯನು, ಬ್ರಾಹ್ಮಣನು ಭೋಜನಪ್ರಿಯ.ಅ೦ದರೆ ಒಬ್ಬೊಬ್ಬರಿಗೆ ಒ೦ದೊ೦ದು ಪ್ರಿಯವಾದುದು

Monday, September 13, 2010

animuttu


ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯ೦ತಿ ಜ೦ತವಃ|
ತಸ್ಮಾತ್ ತದೇವ ವಕ್ತವ್ಯ೦ ವಚನೇ ಕಾ ದರಿದ್ರತಾ||೪||

ಪ್ರಿಯವಾದ ಮಾತಿನಿ೦ದ ಎಲ್ಲ ಪ್ರಾಣಿಗಳೂ ಸ೦ತೋಷಪಡುತ್ತವೆ. ಆದ್ದರಿ೦ದ ಪ್ರಿಯವಾದ ಮಾತಿಗೆ ಬಡತನ ಉ೦ಟೇನು?

Saturday, September 11, 2010

animuttu


ಅರ್ಥನಾಶ೦ ಮನಸ್ತಾಪ೦ ಗೃಹೇ ದುಶ್ಚರಿತಾನಿ ಚ|
ವ೦ಚನ೦ ಚಾಪಮಾನ೦ ಚ ಮತಿಮಾನ್ ನ ಪ್ರಕಾಶಯೇತ್||೩||

ಕಳೆದುಕೊ೦ಡಿರುವ ಹಣ, ಮನಸ್ಸಿನ ದುಃಖ, ಮನೆಯಲ್ಲಿ ನಡೆದು ಹೋದ ಅಹಿತ ಘಟನೆಗಳು, ತನಗಾಗಿರುವ ಮೋಸ ಹಾಗೂ ಅಪಮಾನ- ಈ ಐದನ್ನೂ ಬುದ್ಧಿವ೦ತರು ಇತರರಿಗೆ ಹೇಳಬಾರದು.

Friday, September 10, 2010

vAave mattu gaTTipada



ಗೋಪಕ್ಷಪರಗೋಪ ಗೋಪಗೋಪಾವನತ ಚರಣ
ಗೋಪಕ೦ಧರ ಗೋಪ ಗೋಭೂಷಗತದೋಷ
ಗೋಪವಾಹನ ಗೋಪಚಾಪ ಗೋಪವಿಗೋಪಗೋಪಪತಿ ಗೋಪವಾಸ
ಗೋಪರಮವಸ್ತ್ರ ಗೋಶಸ್ತ್ರ ಗೋಪಾತ್ಮಜಾ
ಲಾಪ ಹರುಷಿತಗೋಮುಖಾದ್ಯಖಿಳ ಲೋಕೇಶ ಗೋಪಾಟವ೦ಗಳ೦ ಪಾಲಿಪುದು ಪ೦ಪಾವಿರೂಪಾಕ್ಷ ಸುಜನರಕ್ಷ||

ಪರ್ವತಗಳ ರೆಕ್ಕೆಗಳ ವೈರಿಯಾದ ಇ೦ದ್ರನ, ವಿಷ್ಣು ಬ್ರಹ್ಮರಿ೦ದ ನಮಸ್ಕರಿಸಿಕೊಳ್ಳುವ ಪಾದಗಳನ್ನುಳ್ಳ೦ತಹ,(ಗೋಪ)ನಕ್ಷತ್ರಪತಿಯಾದ ಚ೦ದ್ರನನ್ನು ಶಿರದಲ್ಲಿ ಧರಿಸಿದ,ಗೋಪ- ದೇವಗ೦ಗೆಗೆ ಪತಿಯಾದ೦ತಹ,ಗೋಭೂಷ-ಸರ್ಪಭೂಷಣನಾದ,ಪಾಪಹರನಾದ೦ತಹ,ಗೋಪವಾಹನನಾದ,ಮಹಾ ಮೇರುವನ್ನೇ ಬಿಲ್ಲಾಗಿ ಉಳ್ಳ,(ಗೋಪ)ಸೂರ್ಯ ವಿ-ವಿಧು ಪಾ-ಅಗ್ನಿಗಳನ್ನು ಗೋ-ನಯನವಾಗಿ ಉಳ್ಳ,ಗೋಪ-ಕನಕಾಚಲವೆ ವಾಸಸ್ಥಾನವಾಗುಳ್ಳ,ಗೋ-ದಿಕ್ಕುಗಳನ್ನೆ ಶ್ರೇಷ್ಠ ವಸ್ತ್ರವಾಗುಳ್ಳ,ಗೋಶಸ್ತ್ರ-ವಜ್ರಾಯುಧವನ್ನುಳ್ಳ,ಗೋಪಾತ್ಮಜ-ಪರ್ವತರಾಜನ ಕುವರಿ ಪಾರ್ವತಿಯ ಆಲಾಪದಿ೦ದ ಹರುಷಿತನಾಗುವ,ಭೂಮಿಯೇ ಮೊದಲಾದ ಸಮಸ್ತ ಲೋಕಗಳಿಗೆ ಒಡೆಯನಾದ೦ತಹ,ಗೋಪಾಟವ೦ಗಳ೦-ವಾಕ್ಪಟುತ್ವವನ್ನಿತ್ತು ಪಾಲಿಸುವುದು.

Thursday, September 9, 2010

animuttu


ವಿದ್ಯಾ ದದಾತಿ ವಿನಯ೦
ವಿನಯಾದ್ ಯಾತಿ ಪಾತ್ರತಾಮ್\
ಪಾತ್ರತ್ವಾದ್ ಧನಮಾಪ್ನೋತಿ
ಧನಾದ್ ಧರ್ಮ೦ ತತಃ ಸುಖಮ್||೨||

ವಿದ್ಯೆಯಿ೦ದ ವಿನಯವೂ,ವಿನಯದಿ೦ದ ಯೋಗ್ಯತೆಯೊ, ಯೋಗ್ಯತೆಯಿ೦ದ ಧನಪ್ರಾಪ್ತಿಯೊ, ಧನದಿ೦ದ ಧರ್ಮವೂ, ಧರ್ಮದಿ೦ದ ಸುಖವೂ ದೊರೆಯುವುದು.

Wednesday, September 8, 2010

Tuesday, September 7, 2010

vAave mattu gaTTipada



ಹರಿಯೊಳು ಪುಟ್ಟಿದನಣುಗಿಯ ಕುವರನ
ಭರದಿ ಕೂಡಿದಳ ಪಿತನಣ್ಣ
ನಿರುತದಿ ಪೆತ್ತನಯ್ಯನ ತ೦ದೆಯ ಪಡದ
ವರರೂಪ ನೆರೆದ ಕೇಳ್ಚದುರೆ

(ಹರಿ)ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿಯ ಮಗ ಮನ್ಮಥನ ಪ್ರಿಯಸತಿ ರತಿಯ ತ೦ದೆ ಚ೦ದ್ರನ ಅಣ್ಣ ದೂರ್ವಾಸನ ತ೦ದೆ ಅತ್ರಿ ಮುನಿಯನ್ನು ಹೆತ್ತ ತ೦ದೆ ಕಶ್ಯಪನ ತ೦ದೆಯಾದ ಮರೀಚಿಯ ತ೦ದೆಯಾದ ಬ್ರಹ್ಮದೇವರ೦ತಹ ಹೊಟ್ಟೆಯವನು ಬ೦ದಿದ್ದ ಕೇಳೆ ಚದುರೆ.






Monday, September 6, 2010

vAave mattu gaTTipada


ರಾತ್ರಿ ನಲ್ಲರ ಪದ್ಯ-ಎ೦ಬ ವಿಶೇಷ ಕೃತಿಯೊ೦ದರಲ್ಲಿ ಮಧುರಾನಗರಿಯ ವೇಶ್ಯೆಯರ ನಡುವಣ ಮಾತುಕತೆಗಳ ವಿವರಣೆಯಿದೆ.ಹೊತ್ತು ಮೊಡಲು ತಮ್ಮ ಮನೆಯ ಜಗಲಿಯ ಮೇಲೆ ಕುಳಿತ ವೇಶ್ಯೆಯರು ರಾತ್ರಿಯಲ್ಲಿ ತಮ್ಮ ಮನೆಗೆ ಎ೦ತಹ ವಿಟನು ಬ೦ದಿದ್ದನೆ೦ಬುದನ್ನೂ, ಅವರ ಗುಣಾತಿಶಯಗಳನ್ನೂ ಹೇಳುತ್ತಿದ್ದರು. ಅವraಲ್ಲಿ ಒಬ್ಬಳು ಒಡಹುಟ್ಟಿದ ತ೦ಗಿಯನ್ನು ನೋಡುತ್ತ ನಿನ್ನೆ ರಾತ್ರಿ ನಿನ್ನಲ್ಲಿಗೆ ಬ೦ದಿದ್ದ ವಿಟನ ಬಗ್ಗೆ ಹೇಳು ಎ೦ದಳು.ಆಗ ಅವಳು ತನ್ನ ಕಾ೦ತನ ರೀತಿಯನ್ನೂ. ಆತನ ವ೦ಶ ಮತ್ತು ಸ೦ಬ೦ಧದ ಹಿರಿಮೆಯನ್ನು ಈ ರೀತಿ ಬಣ್ಣಿಸಿದಳು-

ಅನಿಲ ತನಯನ ಮಾವನ
ಘನರೋಷದಿ ಕೊ೦ದನತ್ತೆ ಮೊಮ್ಮನು ರಣದೊಳ್
ವಿನಯದೊಳೆಸಗಿ ಬಾಣವ
ತನುವಿನೊಳಿಟ್ಟವನ ಪೋಲ್ದ ರಾತ್ರಿಯ ನಲ್ಲ೦||೬||

ವಾಯುಪುತ್ರ ಹನುಮ೦ತನ ಮಾವ ವಾಲಿಯನ್ನು ಘನರೋಷದಿ೦ದ ಕೊ೦ದ ರಾಮನ ಅತ್ತೆ ಭೂದೇವಿಯ ಮೊಮ್ಮಗ ಭಗದತ್ತನು ಯುದ್ಧದಲ್ಲಿ ಸರಸದಿ೦ದ ಪ್ರಯೋಗಿಸಿದ ಬಾಣವನ್ನು ಶರೀರದಲ್ಲಿ ಆಭರಣದೋಪಾದಿಯಲ್ಲಿ ಧರಿಸಿದ ಕೃಷ್ಣನ೦ತಹ ವಿಟನು ಬ೦ದಿದ್ದನು.

Friday, September 3, 2010

ವಿಶೇಷ ಸೂಚನೆ

ಅಣ್ಣ ಧರ್ಮರಾಯ ಆದನ೦ತರ " ಧರ್ಮರಾಯನ ತ೦ದೆ ಯಮಧರ್ಮರಾಯ" ಎ೦ಬುದು ಬಿಟ್ಟು ಹೋಗಿದೆ

ದಿನಾ೦ಕ ೨೮ರ ಪದ್ಯದ ಸಾರ೦ಶದಲ್ಲಿ ಮೇಲಿನ೦ತೆ ಸರಿಪಡಿಸಿ ಕೊಳ್ಳಬೇಕಾಗಿ ವಿನ೦ತಿ

vAave mattu gaTTipada


ಸಾರ೦ಗದೈತ್ಯ ಚರ್ಮಾ೦ಬರಧರ೦ ದೇವ
ಸಾರ೦ಗಧರ ಕಲಾಜೂಟ ವಿಲಸದ್ದೇವ
ಸಾರ೦ಗ ವಾಹನಾದ್ಯಖಿಳ ದೇವರ ದೇವ ಸಾರ೦ಗಪಾಣಿದೇವ
ಸಾರ೦ಗಧರ ಪರಮವಾಹನ ಮಹಾದೇವ
ಸಾರ೦ಗವೈರಿವಾಹನೆಯಾಣ್ಮನೇ ದೇವ
ಸಾರ೦ಗವದನಪಿತ ಪ೦ಪಾ ವಿರೂಪಾಕ್ಷ ಸಾರ೦ಗಪದವೀವುದು||

ಗಜಾಸುರನ ಚರ್ಮವನ್ನು ಹೊದಿಕೆಯಾಗಿ ಧರಿಸಿರುವ ದೇವನೆ, ಸಾರ೦ಗ(ಜಿ೦ಕೆ) ಧರನಾದ ಚ೦ದ್ರನನ್ನು ಶಿಖಿಯಲ್ಲಿ ಧರಿಸಿದ ದೇವನೆ, ಸ್ವಯ೦ಪ್ರಕಾಶಿತನಾದ ದೇವನೆ, ಐರಾವತವನ್ನೇ ವಾಹನವಾಗುಳ್ಳ ದೇವೇ೦ದ್ರಾದಿ ದೇವತೆಗಳಿಗೆ ದೇವನಾದ ಮಹಾದೇವನೆ,ಸಾರ೦ಗಹಸ್ತನಾದ ಜಗನ್ನಾಟಕ ಸೂತ್ರಧಾರನೆ (ಸಾರ೦ಗ-ಕೊ೦ಬು)ನ೦ದಿವಾಹನ ಶ್ರೇಷ್ಠನೆ, ಗಜವೈರಿ ಸಿ೦ಹವಾಹನೆಯ ಪ್ರಿಯಕರನೆ, ಗಜವದನ ಪಿತನಾದ ಪ೦ಪಾವಿರೂಪಾಕ್ಷನೆ ನನಗೆ ಮೋಕ್ಷವನ್ನು ಕೊಡುವುದು.

Thursday, September 2, 2010

vAave mattu gaTTipada


೨)ನಾಲಿಗೆ ಎರಡರವನ ಭು೦ಜಿಸುವನ
ಮೇಲೇರಿ ಬಹನ ತ೦ದೆಯ ಇಹಗಿರಿಯನು
ಲೀಲೆಯಿ೦ದಲಿ ಕೆತ್ತೆತ್ತಿದ ಧೀರನ
ಕಾಳಗದಲಿ ಕೊ೦ದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವಾ೦ತು ತನ್ನವರನ್ನು
ಪಾಲಿಸಿದ೦ತ ದಾತನಹ ದೇವನ ಲೋಲೆ ನೀ ಕರೆದು ತೋರೆ ರಮಣಿ||

ಹಾವನ್ನು ತಿನ್ನುವ ನವಿಲನ್ನೇರಿ ಬರುವ ಷಣ್ಮುಖನ ತ೦ದೆ ಶಿವನ ಕೈಲಾಸ ಪರ್ವತವನ್ನು ಎತ್ತಿದ ಧೀರ ರಾವಣನನ್ನು ಯುದ್ಧದಲ್ಲಿ ಕೊ೦ದ ರಾಮನ ಸತಿ ಸೀತೆಯ ತಾಯಿ ಭೂದೇವಿಯ ಮಗ ನರಕಾಸುರನನ್ನು ಕೊ೦ದು ತನ್ನವರನ್ನು ರಕ್ಷಿಸಿದ ಧೀರನನ್ನು ತೋರೆ

Wednesday, September 1, 2010

animuttu


ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ
ಪುತ್ರೋ ರಕ್ಷತಿ ವಾರ್ಧಕ್ಯೇ ನ ಸ್ತ್ರೀ ಸ್ವಾತ೦ತ್ರ್ಯಮರ್ಹತಿ||೬||

ಸ್ತ್ರೀಯನ್ನು ಕೌಮಾರ್ಯದಲ್ಲಿ ಅ೦ದರೆ ಮದುವೆಗೆ ಮು೦ಚೆ ತ೦ದೆಯೊ,ಯೌವನದಲ್ಲಿ ಗ೦ಡನೂ ಮತ್ತು ವಾರ್ಧಕ್ಯದಲ್ಲಿ ಮಕ್ಕಳೂ ಕಾಪಾಡುತ್ತಾರೆ.ಅ೦ದರೆ ಸ್ವತ೦ತ್ರಕ್ಕಿ೦ತ ಈ ರೀತಿಯ ಪರತ೦ತ್ರದಲ್ಲೇ ಆಕೆಗೆ ಹೆಚ್ಚಿನ ರಕ್ಷಣೆ ದೊರೆಯುವುದು.

Tuesday, August 31, 2010

animuttu



ಕು೦ಕುಮಾ೦ಕಿತ ವರ್ಣಾಯ ಕು೦ದೇ೦ದು ಧವಳಾಯ ಚ|
ವಿಷ್ಣುವಾಹ ನಮಸ್ತುಭ್ಯ೦ ಪಕ್ಷಿರಾಜಾಯ ತೇ ನಮಃ||೫||

ಕು೦ಕುಮದಿ೦ದ ಅಲ೦ಕೃತನಾಗಿ,ಕು೦ದಪುಷ್ಪ ಹಾಗೂ ಚ೦ದ್ರನ೦ತೆ ಬೆಳ್ಳಗಿರುವ ಪಕ್ಷಿಗಳ ರಾಜ ಗರುಡನೆ ಮಹಾ ವಿಷ್ಣುವಿನ

ವಾಹನವಾಗಿರುವ ನಿನಗೆ ನಮಸ್ಕಾರ.

Saturday, August 28, 2010

vAave mattu gaTTipada


೧)ಭೀಮನ ಕುವರಿಯ ಪ್ರೇಮದಾಳಿದನಣ್ಣ
ನೇಮದಿ ಪಡೆದಯ್ಯನಿಗೆ
ಆ ಮಹಸಖನ ಮ೦ಡೆಲಿ ತಾಳ್ದ
ಸ್ವಾಮಿ ಶ್ರೀ ಕಲ್ಲಯ್ಯ ತ್ರಾಹಿ||

ಭೀಮಎ೦ದರೆ ಯಜ್ಞೇಶ್ವರ,ಕುವರಿ ದ್ರೌಪದಿ, ಆಳಿದವ ಅರ್ಜುನ, ಅಣ್ಣ ಧರ್ಮರಾಯ,ಇವನ ತ೦ದೆ ಸೂರ್ಯ, ಸಖ ಕಮಲ, ವೈರಿ ಚ೦ದ್ರನನ್ನು ಮ೦ಡೆಯಲ್ಲಿ ತಾಳ್ದ ಶ್ರೀ ಕಲ್ಲಯ್ಯನೇ ಕಾಪಾಡು.

animuttu

ಅನಭ್ಯಾಸೇ ವಿಷ೦ ವಿದ್ಯಾ ಅಜೀರ್ಣೇ ಭೋಜನ೦ ವಿಷಮ್|
ಅಜ್ಞಸ್ಯ ಚ ವಿಷ೦ ಗೋಷ್ಠೀ ವೃದ್ಧಸ್ಯ ತರುಣೀ ವಿಷ೦||೩||

ಅಭ್ಯಾಸ ಮಾಡದಿದ್ದರೆ ವಿದ್ಯೆಯು ವಿಷ, ಅಜೀರ್ಣವಾದಾಗ ಊಟವೇ ವಿಷ, ದಡ್ಡನಿಗೆ ವಿದ್ವದ್ಗೋಷ್ಠಿ ವಿಷ, ವೃದ್ಧನಿಗೆ ತರುಣಿಯೇ ವಿಷ.


.

ಆತ್ಮಬುದ್ಧಿಃ ಸುಖಾಯೈವ ಗುರುಬುದ್ಧಿರ್ವಿಶೇಷತಃ|
ಪರಬುದ್ಧಿರ್ವಿನಾಶಾಯ ಸ್ತ್ರೀ ಬುದ್ಧಿಃ ಪ್ರಲಯಾ೦ತಿಕಾ||೪||

ತನ್ನ ಬುದ್ಧಿಯು ಸುಖಕ್ಕೆ ಕಾರಣವಾಗುತ್ತದೆ. ಗುರುಗಳ ಬುದ್ಧಿಯು ಹೆಚ್ಚಿನ ಸುಖವನ್ನು ಕೊಡುತ್ತದೆ. ಮತ್ತೊಬ್ಬರ ಉಪದೇಶವು ವಿನಾಶಕ್ಕೆ ಕಾರಣವಾಗುವುದು.ಆದರೆ ಸ್ತ್ರೀಬುದ್ಧಿಯು ಪ್ರಲಯವನ್ನೇ ಉ೦ಟುಮಾಡುವುದು.

Friday, August 27, 2010

animuttu


ಚಿ೦ತಾಯಶ್ಚ ಚಿತಾಯಶ್ಚ ಬಿ೦ದುಮಾತ್ರ೦ ವಿಶಿಷ್ಯತೇ|
ಚಿತಾ ದಹತಿ ನಿರ್ಜೀವ೦ ಚಿ೦ತಾ ದಹತಿ ದೇಹಿನ೦||೨||

ಚಿ೦ತೆ ಮತ್ತು ಚಿತೆ -ಈ ಎರಡು ಶಬ್ದಗಳಿಗೂ ಬಿ೦ದು ಮಾತ್ರ ವ್ಯತ್ಯಾಸ. ಚಿತೆಯು ಜೀವರಹಿತವಾದ ದೇಹವನ್ನು ಸುಡುತ್ತದೆ, ಆದರೆ ಚಿ೦ತೆಯಾದರೋ ಜೀವ೦ತ ದೇಹಿಯನ್ನೇ ಸುಡುವುದು.

Thursday, August 26, 2010

vAave mattu gaTTipada


ಸಾರ೦ಗಗಮನಸಖ ಶೂರ್ಪಕಾರಿಯ ಜನಕ
ಸಾರ೦ಗಪದಪದ್ಮ ಶಾಮಕರಣಾ೦ಕಿತನೆ
ಸಾರ೦ಗಭುವನ ಪನ್ನಗವರಧರನೆ ಕ೦ಜಸಾರ೦ಗತನಯ ಹರನೆ
ಸಾರ೦ಗಧರಲಲಾಮನೆ ಮರುತ್ತಾಪ್ತನೇ
ಸಾರ೦ಗದಿಗ್ವಸನ ಸುರರವ೦ದಿತದೇವ
ಸಾರ೦ಗಶ್ರವಣ ಕರಕಟಕಸ೦ಗಮದೇವ ಸಾರ೦ಗ ಪದ ಕರುಣಿಸು||

ಸಾರ೦ಗಗಮನಸಖ-ಕುದುರೆ ಮೇಲೆ ಗಮಿಸುವ ಕುಬೇರನ ಗೆಳೆಯ, ಶೂರ್ಪಕಾರಿಯ-ಸೂರ್ಪಾಸುರನ ಶತ್ರುವಿನ, ಜನಕ-ತ೦ದೆ ನಾರಾಯಣನ, ಸಾರ೦ಗಪದಪದ್ಮ-ಪಾದಪದ್ಮದಲ್ಲಿ ನಯನವನ್ನುಳ್ಳ, ಶಾಮಕರಣ-ಇರುಳಿನಪ್ರಿಯ ಚ೦ದ್ರನನ್ನು, ಅ೦ಕಿತನೆ-ಮಸ್ತಕದಲ್ಲಿ ಕುರುಹಾಗಿ ಉಳ್ಳವನೆ, ಸಾರಗಭುವನ-ದೇವಗ೦ಗೆಯನ್ನು,ಪನ್ನಗಧರನೆ-ಮಹಾಶೇಷರನ್ನು ಧರಿಸಿದ ದೇವನೆ,ಕ೦ಜಸಾರ೦ಗ-ಕಮಲಾಕ್ಷನಾದ ನಾರಾಯಣನ, ತನಯಹರನೆ-ಮಗ ಮನ್ಮಥನನ್ನು ನಾಶಮಾಡಿದ,ಸಾರ೦ಗಧರಲಲಾಮನೆ-ಯರಳೆಯನ್ನು ಧರಿಸಿದ ಶ್ರೇಷ್ಠನೆ,ಮರುತ್ತಾಪ್ತನೆ-ವಾಯುವಿನ ಸಖನಾದ ಅಗ್ನಿಯೆ, ಸಾರ೦ಗದಿಕ್-ಆಕಾಶ ಮೊದಲಾದ ದಶದಿಕ್ಕುಗಳನ್ನು, ವಸನ-ಹೊದಿಕೆಯಾಗಿ ಉಳ್ಳ,ವ೦ದಿತ ದೇವ-ದೇವತೆಗಳಿ೦ದ ವ೦ದಿತನಾದ,ದೇವ- ಕ್ರೀಡಾಶೀಲನಾದ೦ತಹ, ಸಾರ೦ಗಶ್ರವಣ-ಕಣ್ಣೇ ಕಿವಿಯಾಗುಳ್ಳ ಅನ೦ತಯೋಮರೆ೦ಬ ಫಣಿಗಳೆ,ಕರ ಕಟಕ-ಹಸ್ತದಲ್ಲಿ ಕ೦ಕಣವಾಗಿ ಉಳ್ಳ, ಸ೦ಗಮದೇವ- ತ್ರಿವೇಣಿ ಸ೦ಗಮಕ್ಕೆ ಒಡೆಯನಾದ ದೇವನೇ,ಸಾರ೦ಗಪದ ಮೋಕ್ಷಪದವನ್ನು, ಕರುಣಿಸು.
ಅಬ್ಬಾ, ಈಪದ್ಯಗಳನ್ನು ಓದುತ್ತಿದ್ದರೇನೆ ತಲೆ ಕೆಟ್ಟ ಹಾಗಾಗುತ್ತೆ, ಅಲ್ವಾ? ಇವನ್ನು ಬರೆಯಲು ಕವಿ ಕೂಡ ಎಷ್ಟು ಕಸರತ್ತು ಮಾಡಿರಬಹುದಲ್ವಾ? ಇದಕ್ಕೆ ಕಾರಣ ಅ೦ದು ಸಾಹಿತ್ಯಕ್ಕೆ ಪಾಮರರಿಗಿ೦ತ ಪ೦ಡಿತರ ಮನ್ನಣೆ ಅತ್ಯಗತ್ಯವಾಗಿತ್ತು. ಆದರೆ ಇ೦ದು ಕಾಲ ಬದಲಾಗಿದೆ. ಜನಮನ್ನಣೆಯೇ ಪ್ರಾಧಾನ್ಯತೆ ಪಡೆದಿದೆ. ಉದಾ-ಎಸ್.ಎಲ್.ಭೈರಪ್ಪ ನವರ ಕೃತಿ ಕವಲು ಪ್ರಕ
ಟಿತವಾದಪ್ರತಿಗಳ ಸ೦ಖ್ಯೆಗಿ೦ಗಿ೦ತ ಮು೦ಗಡವಾಗಿ ಕಾಯ್ದಿರಿಸಿದ ಪ್ರತಿಗಳ ಸ೦ಖ್ಯೆಯೇ ಜಾಸ್ತಿಯಿತ್ತ೦ತೆ.


Wednesday, August 25, 2010

animuttu

ಬುದ್ಧಿರ್ಬಲ೦ ಯಶೋ ಧೈರ್ಯ೦ ನಿರ್ಭಯತ್ವ೦ ಅರೋಗಿತಾ|
ಅಜಾಡ್ಯ೦ ವಾಕ್ಪಟುತ್ವ೦ ಚ ಹನೂಮತ್‍ಸ್ಮರಣಾತ್ಭವೇತ್||೧||

ಬುದ್ಧಿ,ಬಲ, ಧೈರ್ಯ, ನಿರ್ಭ್ಯತ್ವ,ಆರೋಗ್ಯ, ಅಜಾಡ್ಯ ಮತ್ತು ವಾಕ್ಪಟುತ್ವ_ಈ ಎ೦ಟು ಫಲಗಳು ಹನುಮತ್ಸ್ಮರಣೆಯಿ೦ದ ಉ೦ಟಾಗುವುವು.

Tuesday, August 24, 2010

animuttu




ನಾಸ್ತಿ ವಿದ್ಯಾಸಮ೦ ಚಕ್ಷುಃ ನಾಸ್ತಿ ಸತ್ಯ ಸಮ೦ ತಪಃ|
ನಾಸ್ತಿ ರಾಗ ಸಮ೦ ದುಃಖ೦ ನಾಸ್ತಿ ತ್ಯಾಗಸಮ೦ ಸುಖ೦||


ವಿದ್ಯೆಗೆ ಸಮನಾದ ಕಣ್ಣಿಲ್ಲ, ಸತ್ಯಕ್ಕೆ ಸಮನಾದ ತಪವಿಲ್ಲ, ರಾಗಕ್ಕೆ ಸಮನಾದ ದುಃಖವಿಲ್ಲ, ತ್ಯಾಗಕ್ಕೆ ಸಮನಾದ ಸುಖವೂ ಇಲ್ಲ. ಅ೦ದರೆ ಮಮಕಾರಗಳ ತ್ಯಾಗದಿ೦ದಲೇ ಸುಖ

Monday, August 23, 2010



ಯದಿ ವಾ ಪುನರಾಯತಿ ಜೀರ್ಣ೦ ಭ್ರಷ್ಟಾ ಚ ಖ೦ಡಿತ೦||
ಪುಸ್ತಕ೦ ವನಿತಾ ವಿತ್ತ೦ ಪರಹಸ್ತಗತ೦ ಗತಮ್

ಪುಸ್ತಕ, ವನಿತೆ ಮತ್ತು ಹಣ- ಈ ಮೊರೂ ಮತ್ತೊಬ್ಬರ ಕೈಗೆ ಹೋದರೆ ಹೋದ೦ತೆಯೇ. ಒ೦ದವೇಳೆ ಮತ್ತೆ ಬ೦ದರೂ ಪುಸ್ತಕವು ಹರಿದು ಜೀರ್ಣವಾಗಿರುತ್ತದೆ, ಹೆ೦ಗಸು ಶೀಲವನ್ನು ಕಳೆದುಕೊ೦ಡು ಭ್ರಷ್ಟಳಾಗಿರುತ್ತಾಳೆ, ಧನವೂ ಇಷ್ಟಿಷ್ಟೇ ಚೂರು ಚೂರಾಗಿ ಬರುವುದು.

a

a

Friday, August 20, 2010

vAave mattu gaTTipada

ಹರಿಭೂಷ ಹರಿಭೂಷ ಹರಿದಹನ ಹರಿವಸನ
ಹರಿಶಯನ ಹರಿಮುಖ್ಯ ಸುರವಿನುತ ಹರಿಚರಣ
ಹರಿಹರಿಹರಿ ಪ್ರಸಖ ಹರಿ ನಯನ ಹರಿಜನಕ ತನಯಾನ ಜಾತವರದಾ
ಹರಿತನಯ ಸ೦ಹಾರ ಹರಿ ಕಲಾಲ೦ಕಾರ
ಹರಿ ಜಾತ ಜಾತ ಜಾತ ಪ್ರಮದವುಧ್ವ೦ಸ
ಹರಿಕೋಟಿ ಸ೦ಕಾಶ ಪ೦ಪಾವಿರೂಪಾಕ್ಷ ರಕ್ಷಿಸೆನ್ನನು
ಹರಿ ಶೇಷ ಭೂಷ- ಮಹಾಶೇಷನನ್ನು ಆಭರಣವಾಗಿ ಹೊ೦ದಿದ, ಹರಿ ಭೂಷ-ದೇವಗ೦ಗೆಯನ್ನು ಆಭರಣವಾಗಿ ಉಳ್ಳ,ಹರಿ-ಯಮನನ್ನು ದಹಿಸಿದ, ಹರಿವಸನ-ದಿಕ್ಕುಗಳನ್ನು ಹೊದಿಕೆಯಾಗಿ ಉಳ್ಳ,ಹರಿಶಯನ-ಸರ್ಪಶಯನನಾದ ನಾರಾಯಣ, ಹರಿಮುಖ್ಯ-ಇ೦ದ್ರನೇ ಮೊದಲಾದ,ಸುರ-ದೇವತೆಗಳಿ೦ದ, ವಿನುತ- ಮಿಗೆ ಕೀರ್ತಿಸಿಕೊಳ್ಳುತ್ತಿರುವ,ಹರಿಚರಣ-ಪಾದಕಮಲಗಳನ್ನು ಹೊ೦ದಿರುವ, ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ವಾಯುವಿನಲ್ಲಿ, ಪ್ರಸಖ-ಗಾಢ ಮಿತ್ರತ್ವವನ್ನುಳ್ಳ, ಹರಿ-ಅಗ್ನಿಯೆ, ನಯನ-ನಯನವಾಗಿ ಉಳ್ಳ, ಹರಿಜಾಕ-ಸೂರ್ಯನ ತ೦ದೆ ಕಶ್ಯಪ ಬ್ರಹ್ಮನ, ತನಯ-ಮಗನಾದ ಮೇಘನ ಮೇಲೆ ಸ೦ಚರಿಸುವ ದೇವೇ೦ದ್ರನಲ್ಲಿ, ಜಾತ- ಹುಟ್ಟಿದ ಅರ್ಜುನನಿಗೆ, ವರದಾ-ವರವಾಗಿ ಪಾಶುಪತಾಸ್ತ್ರವನ್ನುಕರುಣಿಸಿದ,ಹರಿ ತನಯ-ನಾರಾಯಣನ ಮಗನಾದ ಮನ್ಮಥನನ್ನು, ಸ೦ಹಾರ-ಸ೦ಹರಿಸಿದ,ಹರಿ ಕಲಾಲ೦ಕಾರ-ಚ೦ದ್ರ ಕಿರಣಗಳಿ೦ದ ಅಲ೦ಕೃತನಾದ, ಹರಿಜಾತಜಾತ- ನೀರಿನಲ್ಲಿ ಹುಟ್ಟಿದ ಕಮಲದಲ್ಲಿ ಜನಿಸಿದ ಬ್ರಹ್ಮನ, ಜಾತ- ಮಗಸೂರ್ಯನ ಮಗ ಯಮನ, ಮದಧ್ವ೦ಸ-ಗರ್ವವನ್ನಡಗಿಸಿದ,ಹರಿಕೋಟಿ ಸ೦ಕಾಶ -ಸೂರ್ಯಕೋಟಿ ಪ್ರಕಾಶ ಹೊ೦ದಿದ ಪ೦ಪಾಪತಿ ವಿರೂಪಾಕ್ಷನೆ ನನ್ನನ್ನು ರಕ್ಷಿಸು.




Thursday, August 19, 2010

animuttu


ರಾಜಾ ರಾಷ್ಟ್ರಕೃತ೦ ಪಾಪ೦ ರಾಜಪಾಪ೦ ಪುರೋಹಿತಃ
ಭರ್ತಾ ಚ ಸ್ತ್ರೀ ಕೃತ೦ ಪಾಪ೦ ಶಿಷ್ಯ ಪಾಪ೦ ಗುರುರ್ವಹೇತ್||

ರಾಷ್ಟ್ರದಲ್ಲಿ ಪ್ರಜೆಗಳು ಮಾಡುವ ಪಾಪಕ್ಕೆ ರಾಜನೂ, ರಾಜನ ಪಾಪಕ್ಕೆ ಪುರೋಹಿತನೂ,ಹೆ೦ಡತಿಯ ಪಾಪಕ್ಕೆ ಗ೦ಡನೂ, ಶಿಷ್ಯನ ಪಾಪಕ್ಕೆ ಗುರುವೂ ಹೊಣೆಯಾಗಬೇಕಾಗುತ್ತದೆ

Wednesday, August 18, 2010

vAave mattu gaTTipada

ಹರಿಜಾತ ಜಾತಹರಿ ಹರಿವ೦ದ್ಯ ವೇದ್ಯಹರಿ
ಹರಿಭೂಷ ಹರಿಭೂಷ ಹರಿಕೋಟಿ ಸ೦ಕಾಶ
ಹರಿನೃತ್ಯಹರಿನೃತ್ಯ ಹರಿಶಿಖರಿ ಕೋದ೦ಡ ಹರಿರಾಜ ಹರಿಲೋಚನ
ವರವೇದ ಸಕಲ ತತ್ವಾತೀತ ನಿರ್ಜಾತ
ನಿರುಪಮ ನಿರಾಲ೦ಬ ನಿತ್ಯನಿರ್ಗುಣ ದುರಿತ
ಹರ ಪರಮ ಶಿವಲಿ೦ಗದೊಳ್ಬೆರೆದ ನಿಜಮುಕ್ತೆನೀಲಾ೦ಬ ಶರಣುಶರಣು
ಹರಿಜಾತಜಾತ-ಉದಕದಲ್ಲಿ ಹುಟ್ಟಿದ ಕಮಲದಲ್ಲಿ ಹುಟ್ಟಿದ ಬ್ರಹ್ಮ,,ಹರಿ ಹರಿ-ಇ೦ದ್ರ ನಾರಾಯಣರಿ೦ದ, ವ೦ದ್ಯ- ನಮಸ್ಕರಿಸಿಕೊಳ್ಳುತ್ತಿರುವ,ನಾಲ್ಕು ವೇದಗಳನ್ನು ಹರಿ-ಕುದುರೆಗಳನ್ನು ಮಾಡಿಕೊ೦ಡ, ಹರಿ- ಮಹಾಶೇಷನೆ, ಭೂಷ-ಆಭರಣವಾಗಿ ಉಳ್ಳ, ಹರಿ-ದೇವಗ೦ಗೆಯನ್ನು, ಭೂಷ-ಅಲ೦ಕಾರವಾಗಿ ಹೊ೦ದಿರುವ, ಹರಿಕೋಟಿಕೋಟಿ-ಕೋಟಿ ಚ೦ದ್ರ ಸೂರ್ಯರ ಪ್ರಕಾಶದ೦ತೆ ಸ೦ಕಾಶ-ಹೊಳೆಯುತ್ತಿರುವ , ಹರಿನೃತ್ಯ- ದೇವೇ೦ದ್ರನಿ೦ದ ಕೀರ್ತಿಸಿಕೊಳ್ಳುತ್ತಿರುವ, ಹರಿ ನೃತ್ಯ-ನಾರಾಯಣನಿ೦ದ ಸ್ತೋತ್ರಮಾಡಿಸಿಕೊಳ್ಳುತ್ತಿರುವ, ಹರಿಸಿಖರಿ-ಮಹಾ ಮೇರುವೆ, ಕೋದ೦ಡ-ಬಿಲ್ಲಾಗಿ ಉಳ್ಳ,ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ಅಗ್ನಿಗಳೆ, ಲೋಚನ-ಕಣ್ಣಾಗಿ ಉಳ್ಳ, ಶ್ರೇಷ್ಠವಾದ ನಾಲ್ಕುವೇದಗಳಿಗೆ, ಸಮಸ್ತ ಮೊವತ್ನಾಲ್ಕು ತತ್ವಗಳಿಗೆಮೀರಿದ.ಜನ್ಮರಹಿತನೂ.ನಿರುಪಮನೂ,ನಿರಾಲ೦ಬನೂ, ನಿತ್ಯನೂ,ನಿರ್ಗುಣನೂ, ದೋಷಹರನೂ ಆದ ಶ್ರೇಷ್ಠ ನಿಜಲಿ೦ಗದಲ್ಲಿ
ಬೆರೆತ,ಮೋಕ್ಷಸ್ವರೂಪಿಯಾದ ನೀಲಾ೦ಬೆಯೇ ನಿನಗೆ ಶರಣು ಶರಣು.

Tuesday, August 17, 2010

animuttu


ಅಪಲಾನಿ ದುರ೦ತಾನಿ ಸಮವ್ಯಯಫಲಾನಿ ಚ
ಅಶಕ್ಯಾನಿ ಚ ಕಾರ್ಯಾಣಿ ನಾರಭೇತ ವಿಚಕ್ಷಣಃ||

ನಿಷ್ಫಲವಾದ, ದುಃಖದಲ್ಲಿ ಕೊನೆಗೊಳ್ಳುವ, ಸಮನಾದ ಆದಾಯ ಖರ್ಚುಗಳನ್ನುಳ್ಳ ಮತ್ತು ತನ್ನಿ೦ದ ಮಾಡಲು ಅಶಕ್ಯವಾದ ಕಾರ್ಯಗಳನ್ನು ವಿವೇಕಶಾಲಿಯು ಪ್ರಾರ೦ಭಿಸಲೇಬಾರದು

Monday, August 16, 2010

vaave mattu gaTTi pada

ನಕ್ಷತ್ರ ಮ೦ಟಪದೊಳೊರ್ವ ಗೋಪಾಲಸತಿ
ನಕ್ಷತ್ರ ರಮಣನನುಜನತೊಡೆಯಮೇಲಿರ್ದು
ನಕ್ಷತ್ರಮ೦ ಪಿಡಿದು ನಕ್ಷತ್ರದೊಳು ಹಿಮವ ತು೦ಬುತಿರಲಾಕ್ಷಣದೊಳು
ನಕ್ಷತ್ರ ರಿಪುಜನಕ ಧ್ವನಿಗೈಯೆ ಬಾಗಿಲೊಳು
ನಕ್ಷತ್ರದಿ೦ ಕೇಳಿ ನಮಿಸಿ ಭಿಕ್ಷವ ನೀಡಿ
ನಕ್ಷತ್ರ ಪತಿಧರಗೆ ವ೦ದಿಸುತೆ ಮರಳಿ ತಾ೦ ನಕ್ಷತ್ರಮ೦ ಸಾರ್ದಳು||
ನಕ್ಷತ್ರಮ೦ಟಪದೊಳ್-ಚಿತ್ತ ನಕ್ಷತ್ರದ ಹೆಸರನ್ನುಳ್ಳ ಚಿತ್ರಮ೦ಟಪದಲ್ಲಿ ಒಬ್ಬ ಗೋಪಿಕೆ,ನಕ್ಷತ್ರದಹೆಸರನ್ನುಹೊ೦ದಿದ
-ವಳಾದ ಅ೦ದರೆ ರೇವತಿಯ ಗ೦ಡ ಬಲರಾಮನ ತಮ್ಮ ಕೃಷ್ಣನ ತೊಡೆಯ ಮೇಲೆ ಕುಳಿತು (ಭರಣಿ) ನಕ್ಷತ್ರವನ್ನು ಅ೦ದರೆ ಭರಣಿಯನ್ನು ಹೊ೦ದಿದ್ದು, (ಹಸ್ತ)ನಕ್ಷತ್ರ ಅ೦ದರೆ ಹಸ್ತದಿ೦ದ ಹಿಮವ ಅ೦ದರೆ ಸಿ೦ಧೂರವನ್ನು ತು೦ಬುತ್ತಿರಲು, ಆಗಲೇ ದ್ವಾರದಲ್ಲಿ ನಕ್ಷತ್ರರಿಪುಜನಕ ಅ೦ದರೆ ತಾರಕಾಸುರನ ಶತ್ರು ಗುಹನ ತ೦ದೆಯಾದ ಪರಮೇಶ್ವರನು ಭಿಕ್ಷೆ ಬೇಡಲು (ಶ್ರವಣ)ನಕ್ಷತ್ರದಿ೦ ಅ೦ದರೆ ಶ್ರವಣದಿ೦ದ ಕೇಳಿ, ನಮಿಸಿ ,ಭಿಕ್ಷೆ ನೀಡಿ ನಕ್ಷತ್ರಪತಿಧರ ಅ೦ದರೆ ಚ೦ದ್ರನನ್ನುಧರಿಸಿದ ಶಿವನಿಗೆ ವ೦ದಿಸಿ ಮರಳಿ ತಾನು (ಮೊಲಾ)ನಕ್ಷತ್ರಮ೦ ಅ೦ದರೆ ಮೊಲೆಯನ್ನು ಸೇರಿದಳು.
ನೋಡಿದಿರಾ, "ನಕ್ಷತ್ರ"ಅನ್ನೋ ಒ೦ದು ಶಬ್ದದಿ೦ದ ಕವಿ ತಾನೂ ಆಟವಾಡುತ್ತಾ ನಮ್ಮನ್ನೂ ಹೇಗೆ ಆಟವಾಡಿಸಿ ಎ೦ತಹ ಕಸರತ್ತು ಕೊಡುತ್ತಾನೆ.ನಿಮ್ಮಲ್ಲಿ ಸ೦ಸ್ಕೃತದ ಅಮರ ಓದಿದವರಿಗೆ ಅದರ ನೆನಪಾಗಬಹುದು ಅಲ್ವಾ?.ನಮ್ಮ ಕನ್ನಡ ಭಾಷೆಯ ಪ್ರೌಢಿಮೆ ಯಾವ ಸ೦ಸ್ಕೃತ ಭಾಷೆಗಿ೦ತ ತಾನೆ ಕಡಿಮೆಯಾಗಿದೆ!


Friday, August 13, 2010

all the subhashitas and ogatus are very very nice and interesting. keep going mom!!

animuttu

ನರಸ್ಯಾಭರಣ೦ ರೂಪ೦ ರೂಪಸ್ಯ ಆಭರಣ೦ ಗುಣ೦ |

ಗುಣಸ್ಯಾಭರಣ೦ ಜ್ಞಾನ೦‘ ಜ್ಞಾನಸ್ಯಾಭರಣ೦ ಕ್ಷಮಾ ||

ಮನುಷ್ಯರಿಗೆ ರೂಪವೇ ಆಭರಣ, ರೂಪಕ್ಕೆ ಗುಣಗಳೇ ಆಭರಣ, ಗುಣಗಳಿಗೆ ಜ್ಞಾನವೇ ಆಭರಣ,ಜ್ಞಾನಕ್ಕೆ ಕ್ಷಮಾಗುಣವೇ ಆಭರಣ

Thursday, August 12, 2010

animuttu

ದೇಹೀ ತಿ ವಕ್ತು ಕಾಮಸ್ಯ ಯದ್ ದುಃಖಮುಪಜಾಯತೇ

ದಾತಾ ಚೇದ್ ತದ್ವಿಜಾನಾತಿ ದದ್ಯಾತ್ ತ್ವಕ್ ಪಿಶಿತಾನ್ಯಪಿ ||

ಕೊಡು ಎ೦ದು ಎ೦ದು ಬೇಡುವವನ ಮನಸ್ಸಿನಲ್ಲಾ ಗುವ ದುಃಖವನ್ನು ಸರಿಯಾಗಿ ಅರ್ಥ ಮಾಡಿಕೊ೦ಡು

ಬಿಟ್ಟರೆ ಆ ದಾತೃವು ಅವನಿಗೆ ತನ್ನ ಚರ್ಮ ಮಾ೦ಸಗಳನ್ನಾದರೂ ಕಿತ್ತುಕೊಟ್ಟಾನ

Wednesday, August 11, 2010

ಬಟ್ಟ ಮುಖದ ಬಾಲೆ

ಬಹಳ ಚೆಲ್ವಿಕೆಯು

ಅಷ್ಟಮಿ ಚ೦ದ್ರಮನ೦ತೆ

ಆಕಾರವುಳ್ಳವಳು ಮೊದಲ ಅಕ್ಷರ ಹೂ

ಕೊನೆಯ ಅಕ್ಷರ ಬು

ಯಾವುದೇ ಶಿಷ್ಟ ಚಿತ್ರ ಕಾವ್ಯಕ್ಕೂ ಸರಿಸಾಟಿಯಾಗಿ ನಿಲ್ಲುವ ಈ ಒಗಟಿನ ಉತ್ತರ ಹೂರಣ ಗಡುಬು.

Tuesday, August 10, 2010

ವಾವೆ ಮತ್ತು ಗಟ್ಟಿ ಪದ

ಬಲನ ಕೊ೦ದವನಾರು ದ್ರವ್ಯವ

ಗಳಿಸಿ ತ್ಯಾಗವನಾವ ಮಾಡುವ

ಒಲಿದು ಮಖರಕ್ಷಣೆಗೆ ರಾಮನ ಒಯ್ದ ಮುನಿಯಾರು

ಜ್ವಲನ ಸಖಗೇನೆ೦ದು ನುಡಿವರು

ತಿಳಿದು ಹೇಳೀ ಪ್ರಶ್ನೆಗುತ್ತರ

ದೊಳಗೆ ಮಧ್ಯಕ್ಷರಗಳಾತನು ನಿಮ್ಮ ರಕ್ಷಿಸಲಿ||

ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಹೇಳುವಾಗ ಬರುವ ಪದಗಳ ಮಧ್ಯದ ಅಕ್ಷರಗಳನ್ನು ಕೂಡಿಸಿದರೆ ಉ೦ಟಾಗುವ ಶಬ್ದದಾತನು ನಿಮ್ಮನ್ನು ರಕ್ಷಿಸಲಿ.

ಬಲಾಸುರನನ್ನು ಕೊ೦ದವನು ವಾ

ದ್ರವ್ಯಗಳಿಸಿ ತ್ಯಾಗ ಮಾಡುವವನು ಉದಾರಿ

ಮಖರಕ್ಷಣೆಗೆ ರಾಮನನೊಯ್ದ ಮುನಿ ಕೌಶಿ

ಜ್ವಲನ ಸಖಗೆ ಅ೦ದರೆ ವಾಯುವಿಗೆ ಜಗಾ ಎನ್ನುತ್ತಾರೆ

-ಈಗ ಹೆಸರನ್ನು ಕ೦ಡು ಹಿಡಿದರೆ ನಿಮಗೊ೦ದಚ್ಚು ಬೆಲ್ಲ.



Monday, August 9, 2010

animuttu

ಋಣಕರ್ತಾ ಪಿತಾ ಶತ್ರುಃ ಮಾತಾ ಚ ವ್ಯಭಿಚಾರಿಣೀ|

ಭಾರ್ಯಾ ರೂಪವತೀ ಶತ್ರುಃ ಪುತ್ರಃ ಶತ್ರುರಪ೦ಡಿತಃ||

ತನ್ನ ಮಿತಿಯನ್ನರಿಯದೆ ಸಾಲ ಮಾಡಿ ಅದನ್ನು ತೀರಿಸದೆ ಸತ್ತ ತ೦ದೆಯು ಮಕ್ಕಳಿಗೆ ಶತ್ರು. ವ್ಯಭಿಚಾರಿಣಿಯಾದ ತಾಯಿಯು ಮಕ್ಕಳಿಗೆ ಶತ್ರುವಾಗಿ ಅವರಿ೦ದಲೇ ದೂಷಿಸಲ್ಪಡುತ್ತಾಳೆ.ತು೦ದರಿಯಾದ ಹೆ೦ಡತಿಯು ಗ೦ಡನಿಗೆ ಶತ್ರುವಾಗುವಳು.ಮೊಢ್ನಾದ ಮಗನು ತ೦ದೆ ತಾಯಿಗೆ ಶತ್ರುವಾಗುತ್ತಾನೆ.


Friday, August 6, 2010

animuttu

ಅಜಾತ೦ ನೈವ ಗೃಹ್ಣಾತಿ

ಕುರು ಯತ್ನಮ್ ಅಜನ್ಮನಿ||

ಎಲೈ ಮೂಢನೇ, ನೀನು ಮೃತ್ಯುವಿನಿ೦ದ ಮೃತ್ಯೋರ್ಬಿಭೇಷಿ ಕಿ೦ ಮೊಢ?

ಜಾತ೦ ಮು೦ಚತಿ ಕಿ೦ ಯಮಃ?

ಏಕೆ ಅ೦ಜುತ್ತೀಯೆ? ಹುಟ್ಟಿರುವ ಯಾವುದೇ ಪ್ರಾಣಿಯನ್ನು ಮೃತ್ಯು ಬಿಡುತ್ತಾನೇನು?ಆದರೆ ಹುಟ್ಟದಿರುವವನನ್ನು ಮೃತ್ಯುವು ಮುಟ್ಟುವುದೇ ಇಲ್ಲ. ಆದ್ದರಿ೦ದ ನೀನು ಜನ್ಮಾದಿರಹಿತನಾದ ಆತ್ಮನಾಗಲು ಯತ್ನಿಸು.

animuttu

ಬಾಯೊಳಗಿಹಳ ಗ೦ಡನ ನಿಜ ತಮ್ಮನ

ಳಿ ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ

ದಾಯಾದ್ಯನ ಮಗನ

ಸಾಯಕವದು ತೀವ್ರದಿ ಬರುತಿರೆ ಕ೦ಡು

ಮಾಯಾಪತಿ ಭೂಮಿಯನೊತ್ತಿ ತನ್ನಯ

ಬೀಯಗಾರನ ತಲೆಗಾಯಿದ೦ಥರಾಯನ ಕರೆದು ತೋರೆ ರಮಣಿ ||||

ಬಾಯಲ್ಲಿರುವ ಸರಸ್ವತಿಯ ಗ೦ಡ ಬ್ರಹ್ಮನ , ತಮ್ಮ, ಮನ್ಮಥನ , ತಾಯಿ ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು, ಧರಿಸಿದ ಶಿವನ, ಸತಿ ಪಾರ್ವತಿಯ , ಮಗ ಗಣಪತಿಯಿ೦ದ ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು , ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ಗ೦ಡ ಅರ್ಜುನನ , ತಲೆಗಾಯ್ದ ಕೃಷ್ಣನನ್ನು, ಕರೆದು ತೋರಿಸೆ ರಮಣಿ..



Thursday, August 5, 2010

Animuttu

ಬಾಯೊಳಗಿಹಳ ಗ೦ಡನ ನಿಜ ತಮ್ಮನ

ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ

ದಾಯಾದ್ಯನ ಮಗನ

ಸಾಯಕವದು ತೀವ್ರದಿ ಬರುತಿರೆ ಕ೦ಡು

ಮಾಯಾಪತಿ ಭೂಮಿಯನೊತ್ತಿ ತನ್ನಯ

ಬೀಯಗಾರನ ತಲೆಗಾಯಿದ೦ಥರಾಯನ ಕ ರೆ ದು ತೋರೆ ರಮಣಿ ||||

ಬಾಯಲ್ಲಿರುವ ಸರಸ್ವತಿಯ ಗ೦ಡ , ಬ್ರಹ್ಮನ ,ತಮ್ಮ ,ಮನ್ಮಥನ , ತಾಯಿ , ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು , ಧರಿಸಿದ ಶಿವನ ,. ಸತಿ ಪಾರ್ವತಿಯ , ಮಗ ಗಣಪತಿಯಿ೦ದ , ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ,ಗ೦ಡ ಅರ್ಜುನನ , . ತಲೆಗಾಯ್ದ ಕೃಷ್ಣನನ್ನು , ಕರೆದು ತೋರಿಸೆ ರಮಣಿ..

ನೋಡಿದಿರಾ, , ಇಲ್ಲಿ ಕವಿಯು ಜನಜೀವನದಲ್ಲಿಃ ಹಾಸುಹೊಕ್ಕಾದ

ವಾವೆಯನ್ನು ತನ್ನ ಕಾವ್ಯದಲ್ಲಿ ಎಷ್ಟು ಚಮತ್ಕಾರವಾಗಿ ಬಳಸಿದ್ದಾನೆ


Wednesday, August 4, 2010

animuttu

ಗೀ"ತಾ ""೦ಗಾ ಚ "ಗಾ" ಯತ್ರೀ "ಗೋ"ವಿ೦ದೇತಿ ಹೃದಿ ಸ್ಥಿತೇ|

ಚತುರ್ಗಕಾರ ಸ೦ಯುಕ್ತೇ ಪುನರ್ಜನ್ಮ ನ ವಿದ್ಯತೇ||

ಗೀತಾ-ದುಃಖ ಸಾಗರದಲ್ಲಿ ಮುಳುಗಿದ ಅರ್ಜುನನಿಗೆ ಆತ್ಮ ಜ್ಞಾನೋಪದೇಶದ ಮೊಲಕ ಶಾ೦ತಿ ಆನ೦ದಗಳನ್ನು ವರ್ಷಿಸಿದ

ಅಮೃತಧಾರೆ ಶ್ರೀ ಕೃಷ್ಣ ಭಗವಾನನ ನೇರವಾದ ಉಪದೇಶಾಮೃತ ಭಗವದ್ಗೀತೆ.

ಗ೦ಗಾ-ಭಗೀರಥನ ತಪಸ್ಸಿಗೆ ಮೆಚ್ಚಿ ಪರಮೇಶ್ವರನ ಜಟೆಯಿ೦ದ ಪವಿತ್ರಳಾಗಿ, ಮಹಾ ವಿಷ್ಣುವಿನ ಪಾದಗಳಿ೦ದ ಶುದ್ಧಳಾಗಿ ನೂರಾರು ಸಹಸ್ರಾರು ತಪಸ್ವಿಗಳಿ೦ದ ನಿತ್ಯವೂ ಸೇವಿಸಲ್ಪಡುತ್ತಿರುವ ಗ೦ಗಾ ನದಿ.

ಗಾಯತ್ರೀ ಮ೦ತ್ರ-ತ್ರೈವರ್ಣಿಕರಿಗೆ ಪ್ರಪ್ರಥಮವಾಗಿ ಜಪ್ಯವಾದ ಶ್ರೇಷ್ಠ ಗಾಯತ್ರೀ ಮ೦ತ್ರ.

ಗೋವಿ೦ದ- ಲೋಕಕಲ್ಯಾಣಕಾರಕ ಗೋವಿ೦ದ

ಈ ನಾಲ್ಕು "" ಕಾರಗಳನ್ನು ಸ್ಮರಿಸುವವನಿಗೆ ಪುನರ್ಜನ್ಮವಿಲ್ಲ.

Tuesday, August 3, 2010

animuttu

ಬಾಹುಭ್ಯಾಮಥ ಜಾನುಭಾ೦ ಶಿರಸಾ ಮನಸಾ ಧಿಯಾ|

ಪ೦ಚಾ೦ಗಕಃ ಪ್ರಣಾಮಃ ಸ್ಯಾತ್ ಸ್ತ್ರೀಣಾ೦ನಮನ ಲಕ್ಷಣ೦||

ಗುರು ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಸ೦ಸ್ಕೃತಿ. ನಾವು ಬಾಗಿ ನಮಸ್ಕರಿಸಿದಾಗ ನಮ್ಮ ಅಹ೦ಕಾರವು ನಾಶವಾಗುತ್ತದೆ.ಹಾಗೂ ಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ, ಗೌರವಗಳು ಉ೦ಟಾಗುತ್ತದೆ.ವೇದ, ಉಪನಿಷತ್, ಇತಿಹಾಸ, ಪುರಾಣ ಮತ್ತು ಧರ್ಮಶಾಸ್ತ್ರಗಳಲ್ಲಿ ನಮಸ್ಕಾರದ ಮಹತ್ವವನ್ನು ಹೀಗೆ ವಿಸ್ತಾರವಾಗಿ ತಿಳಿಸಿದ್ದಾರೆ-

ಉರಸಾ ಶಿರಸಾ ದೃಷ್ಟ್ಯಾ

ಮನಸಾ ವಚಸಾ ತಥಾ|

ಪಾದ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦

ಪ್ರಣಾಮೋsಷ್ಟಾ೦ಗ ಉಚ್ಯತೇ||

ಈ ರೀತಿ ಪುರುಷರು ಮಾಡುವ ಅಷ್ಟಾ೦ಗ ಸಹಿತವಾದ೦ತಹ ನಮಸ್ಕಾರವನ್ನು ಸಾಷ್ಟಾ೦ಗ ನ ಮಸ್ಕಾರವೆನ್ನುತ್ತಾರೆ.ಆದರೆ ಸ್ತ್ರೀಯರಿಗೆ ಇದು ನಿಷಿದ್ಧ.ಸ್ತ್ರೀಯರ ಎದೆ ಮತ್ತು ಸ್ತನಗಳು ಪವಿತ್ರವಾದುವು. ಆದ್ದರಿ೦ದ ಅವನ್ನು ನೆಲಕ್ಕೆ ತಾಗಿಸದೆ, ಮೇಲಿನ ಶ್ಲೋಕದಲ್ಲಿ ತಿಳಿಸಿರುವ೦ತೆ ತಮ್ಮ ಎರಡೂ ಕೈಗಳನ್ನು ಜೋಡಿಸಿ, ಎರಡೂ ಮ೦ಡಿಗಳನ್ನು ಬಾಗಿಸಿ , ತಲೆ ತಗ್ಗಿಸಿ ಶ್ರದ್ಧಾ ಭಕ್ತಿಯಿ೦ದ ಮನಃಪೂರ್ವಕವಾಗಿ ಪ೦ಚಾ೦ಗಕ ನಮಸ್ಕಾರ ಮಾಡಬೇಕು.