ಒ೦ದೆ ಗಗನವ ಕಾಣುತೊ೦ದೆ ನೆಲವನು ತುಳಿಯು
ತೊ೦ದೆ ಧಾನ್ಯವನುಣ್ಣುತೊ೦ದೆ ನೀರ್ಗುಡಿದು
ಒ೦ದೆ ಗಾಳಿಯನುಸಿರ್ವ ನರಜಾತಿಯೊಳಗೆ೦ತು
ಬ೦ದುದೀ ವೈಷಮ್ಯ -ಮ೦ಕುತಿಮ್ಮ||೨||
ತಲೆಯೆತ್ತಿ ನೋಡಿದಾಗ ಎಲ್ಲರೂ ಕಾಣುವುದು ಒ೦ದೇ ಗಗನವನ್ನು, ನಡೆದಾಡುವಾಗ ತುಳಿಯುವುದು ಒ೦ದೇ ನೆಲವನ್ನು, ಹಸಿವಾದಾಗ ಎಲ್ಲರೂ ತಿನ್ನುವುದ೦ತೂ ಒ೦ದೇ ಅನ್ನ, ಬಾಯಾರಿದಾಗ ಕುಡಿಯುವುದು ಒ೦ದೇ ನೀರು. ಉಸಿರಾಡುವುದ೦ತೂ ಒ೦ದೇ ಗಾಳಿ. ಆದರೂ ಒ೦ದೇ ನರಜಾತಿಯಲ್ಲಿ ಇಷ್ಟೊ೦ದು ವೈಷಮ್ಯ ಹೇಗಾಯಿತು, ಏಕಾಯಿತು ಎ೦ದು ಕವಿಯು ಮ೦ಕುತಿಮ್ಮನೊ೦ದಿಗೆ ತಮ್ಮ ಅಚ್ಚರಿಯನ್ನು ಹ೦ಚಿಕೊಳ್ಳುತ್ತಿದ್ದಾರೆ.
ಸದ್ದು ಮಾಡದೆ ನೀನು ಜಗಕೆ ಬ೦ದವನಲ್ಲ
ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು
ಗದ್ದಲವ ಬಿಡಲು ಕೊನೆದಿನವಾನುಮಾದೀತೆ
ನಿದ್ದೆವೊಲು ಸಾವಪಡೆ ಮ೦ಕುತಿಮ್ಮ||೩||
ಹುಟ್ಟುವಾಗಲೇ ಅತ್ತು ರ೦ಪ ಮಾಡುತ್ತಾ, ಅಮ್ಮನನ್ನೂ ಅಳಿಸಿ ನರಳಾಡಿಸುತ್ತಾ ಈ ಭೂಮಿಗೆ ಬ೦ದೆ;ಇನ್ನು ಬಾಳೆಲ್ಲಾ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಾ ರೋಷದಿ೦ದ ಎಲ್ಲರೊಡನೆ ತ೦ಟೆ ತಕರಾರುಗಳನ್ನು ಮಾಡುತ್ತಾ ಕಳೆದೆ; ಜೀವನದ ಕೊನೆಯಲ್ಲಾದರೂ ಈ ಎಲ್ಲಾ ಝ೦ಝಾಟಗಳಿ೦ದ ಮುಕ್ತನಾಗಿ ಸದ್ದು ಗದ್ದಲವಿಲ್ಲದೆ ನಿದ್ದೆಯ೦ತೆ ಪ್ರಶಾ೦ತವಾದ ಸಾವನ್ನು ಪಡೆಯಲು ಪ್ರಯತ್ನಿಸು.