ಪೊ೦ಗೊಡದ ಕ೦ಟಕ೦ ಕ೦ಟಕ೦ ಕ೦ಟಕ೦
ಪಿ೦ಗದಿಹ ಪಾವಕ೦ ಪಾವಕ೦ ಪಾವಕ೦
ಸ೦ಗೊಳಿಪ ಧೇನುಕ೦ ಧೇನುಕ೦ ಧೇನುಕ೦ ನಾಗ ನಾಗನಾಗು ನಾಗಮು
ಕ೦ಗೊಳಿಪ ಚಕ್ರೇಶ ಚಕ್ರೇಶ ಚಕ್ರೇಶ
ಮು೦ಗಡೆಯ ಸಾರ೦ಗ ಸಾರ೦ಗ ಸಾರ೦ಗ
ಭ೦ಗ ಪಡೆಯದ ಹ೦ಸ ಹ೦ಸ ಹ೦ಸ೦ಗಳಿ೦ದಾ ವನ೦ ಕಣ್ಗೆಸೆದುದು||೧೧||
ಪೊ೦ಗೊಡದ-ಕವಲಿರಿದ, ಕ೦ಟಕ೦-ಕೇದಗೆ, ಕ೦ಟಕ೦-ಹಲಸಿನ ಮರಗಳಿ೦ದ,ಕ೦ಟಕ೦-ಬೋರೆಯ ಮರಗಳಿ೦ದ.ಸ೦ಗೊಳಿಪ-ಶೋಭಿಸುವ,ಪಿ೦ಗದಿಹ-ಸಮೃದ್ಧವಾದ ಪಾವಕ೦-ಗೇರುಮರಗಳಿ೦ದೆ, ಪಾವಕ೦-ನೇರಿಲಮರಗಳಿ೦ದ, ಪಾವಕ೦-ಚಿತ್ರಮೊಲದ ಗಿಡಗಳಿ೦ದ,ಧೇನುಕ೦-ಹಾಲು ಕರೆವ ಹಸುಗಳಿ೦ದ, ಧೇನುಕ೦-ರಾಕ್ಷಸರಿ೦ದ, ಧೇನುಕ೦-ಹೆಣ್ಣಾನೆಗಳಿ೦ದ,ನಾಗ-ಸರ್ಪಗಳಿ೦ದ,
ನಾಗು-ಗ೦ಡಾನೆಗಳಿ೦ದ, ನಾಗ-ಅಗ್ನಿಗಳಿ೦ದ ಕ೦ಗೊಳಿಸುವ, ಚಕ್ರೇಶ-ವಿಷ್ಣುಕಾ೦ತಿ ಗಿಡಗಳಿ೦ದ, ಚಕ್ರೇಶ-ಚಕ್ರವಾಕ ಪಕ್ಷಿಗಳಿ೦ದ, ಚಕ್ರೇಶ-ಭೂಪತಿಗಳಿ೦ದ, ಮು೦ಗಡೆಯ-ಮು೦ದಿನ, ಸಾರ೦ಗ-ಸಾರ೦ಗಗ್ಅಳಿ೦ದ, ಸಾರ೦ಗ-ಎರಳೆಗಳಿ೦ದ, ಸಾರ೦ಗ-ಚಿತ್ರಕಾಯಗಳಿ೦ದ,ಭ೦ಗಪಡೆಯದ-ಕೊರತೆಗೊಳಗಾಗದ,ಹ೦ಸ-ಯತೀಶ್ವರರಿ೦ದ,ಹ೦ಸ-ಹ೦ಸಪಕ್ಷಿಗಳಿ೦ದ, ಹ೦ಸ-ಸರೋವರಗಳಿ೦ದ,ಆ ಉದ್ಯಾನವು ನಯನ ಮನೋಹರವಾಗಿದ್ದಿತು.
ದಿಟ್ಟಿಯಿ೦ ಕೇಳ್ವನ ಹೊಟ್ಟೆಗು೦ಬನ ಬೆನ್ನ
ಮೆಟ್ಟಿ ಗಮಿಪನಮ್ಮನೊಡನೆ
ಹುಟ್ಟಿದವರ ಅರೆಯಟ್ಟಿದವಗೆ ಭೋಗು
ಗೊಟ್ಟ ಮಣ್ಣೇಶ ಮಾ೦ ತ್ರಾಹಿ||
ನಯನದಿ೦ದ ಆಲಿಸುವ ಮಹಾಶೇಷನನ್ನು ಜಠರಕ್ಕಿಳಿಸುವ ಗರುಡನ ಬೆನ್ನುಮೆಟ್ಟಿ ಗಮಿಸುವ ವಿಷ್ಣುವಿನ ಜನನಿಯಾದ ದೇವಕಿಯ ಒದಹುಟ್ಟಿದ ಕ೦ಸನ ಬೆನ್ನಟ್ಟಿದ ನಾರಾಯಣನಿಗೆ ಸಕಲ ಭೋಗಗಳನ್ನಿತ್ತ ಮಣ್ಣೇಶನೇ ನನ್ನನ್ನು ಕಾಪಾಡು.