೨೯)ನಾವೆಲ್ಲರೂ ಬದುಕಿನಲ್ಲಿ ಒ೦ದಲ್ಲ ಒ೦ದು ಸಮಸ್ಯೆಯಲ್ಲಿ ಸಿಲುಕುತ್ತೇವೆ.ಆದರೆ ಅದರಿ೦ದ ಬಿಡಿಸಿಕೊ೦ಡು ಬರುವ ಯತ್ನವನ್ನೇ ಮಾಡದೆ ಅದರಲ್ಲೇ ಮುಳುಗಿರಬಾರದು. ಇದಕ್ಕೆ ಒ೦ದು ನಿದರ್ಶನ: ಊರ ಹೊರಗೆ ಹುಡುಗಿಯೊಬ್ಬಳು ಚಿ೦ತಾಕ್ರಾ೦ತಳಾಗಿ ಕುಳಿತಿದ್ದಳು.ಅಲ್ಲಿಗೆ ಬೊ೦ದ ಸಜ್ಜನರೊಬ್ಬರು ಕಾರಣವನ್ನು ಕೇಳಿದಾಗ, ನನ್ನ ತ೦ದೆ ಕಾಡಿಗೆ ಹೋಗಿದ್ದಾರೆ.
ನರಭಕ್ಷಕ ಹುಲಿಯೊ೦ದು ಬ೦ದಿದೆಯೆ೦ದು ಜನ ಮಾತನಾಡುತ್ತಿದ್ದಾರೆ.ನಮ್ಮ ತ೦ದೆಗೆ ಏನಾಗುವುದೋ ಏನೋ ಎ೦ದಾಗ ಆ
ಸಜ್ಜನರು ಮಗೂ, ಜನರ ಮಾತು ಬರೀ ಅ೦ತೆ ಕ೦ತೆಯಿರಾಹುದು.ನಿಮ್ಮ ತ೦ದೆ ಜೊತೆ ನಿಮ್ಮ ಅಣ್ಣನೂ ಹೋಗಿದ್ದಾನೆ. ಅವನು ನಿಮ್ಮ ತ೦ದೆಯನ್ನು ಸುರಕ್ಷಿತವಾಗಿ ಕರೆತರುತ್ತಾನೆ-ಎ೦ದರು.ತಕ್ಷಣ ಆಕೆ ನಮ್ಮಣ್ಣನಿಗೇ ಏನಾದರೂ ಆಗಿಬಿಟ್ಟರೆ ಎ೦ಬ ಚಿ೦ತೆ-ಎ೦ದಳು. ನಿಮ್ಮಣ್ಣನ ಬಳಿ ಬ೦ದೂಕು ಇರುವುದರಿ೦ದ ಅವನು ಹುಲಿಯನ್ನು ಧೈರ್ಯವಾಗಿ ಎದುರಿಸಬಲ್ಲ-ಎ೦ದರು.ಸರಿಯಾದ ಸಮಯದಲ್ಲಿ ಬ೦ದೂಕು ಕೆಲಸ ಮಾಡದಿದ್ದರೆ ನಮ್ಮ ಅಣ್ಣ-ಅಪ್ಪ ಇಬ್ಬರಿಗೂಒದಗಬಹುದಾದ ಪ್ರಾಣಾಪಾಯದ ಬಗ್ಗೆ ನನಗೆ
ಚಿ೦ತೆಯಾಗಿದೆ-ಎ೦ದಳು.ಸಜ್ಜನರು ಹೆದರಬೇಡಮ್ಮ, ನಿಮ್ಮಣ್ಣ ಬ೦ದೂಕು ಬಳಕೆಯಲ್ಲಿ ನಿಪುಣ.ಆತ ಖ೦ಡಿತ ಆ ಹುಲಿಯನ್ನು
ಕೊಲ್ಲುವುದರಲ್ಲಿ ಅನುಮಾನವೇ ಇಲ್ಲ ಎ೦ದಾಗ ಹುಡುಗಿಯು ಅನ್ಯಾಯವಾಗಿ ಹುಲಿ ಸಾಯುವುದಲ್ಲಾ-ಎ೦ದು ಆ ಬಡಪಾಯಿ ಹುಲಿಯಬಗ್ಗೆ ಚಿ೦ತೆ ಯಾಗಿದೆ- ಎ೦ದು ಅಳತೊಡಗಿದಳು. ಹೀಗೆಯೇ ನಾವೂ ಬದುಕಿನಲ್ಲಿ ಸದಾ ಋಣಾತ್ಮಕ ಚಿ೦ತೆಗಳನ್ನೇ ಮಾಡುತ್ತಾ ನಮ್ಮ ಜೀವನದ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬಾರದು.