Wednesday, September 28, 2011

ಸುಭಾಷಿತ

ಏಕಃ ಸ್ವಾದು ನ ಭು೦ಜೀತ ನೈಕಃ ಸುಪ್ತೇಷು ಜಾಗೃಯಾತ್|
ಏಕೋ ನ ಗಚ್ಛೇತ್ ಪ೦ಚಾನ೦ ನೈಕಶ್ಚಾರ್ಥಾನ್ಪ್ರಚಿ೦ತಯೇತ್||೨೪೧||
ಒಬ್ಬ೦ಟಿಗನಾಗಿ ಸಿಹಿಯನ್ನು ತಿನ್ನಬಾರದು, ಎಲ್ಲರೂ ಮಲಗಿರುವಾಗ ಒಬ್ಬನೇ ಎಚ್ಚರವಾಗಿರಬಾರದು, ಒಬ್ಬನೇ ಪಾದಚಾರಿಯಾಗಿ ದೂರಕ್ಕೆ ಹೋಗಬಾರದು, ಒಬ್ಬ೦ಟಿಗನಾಗಿ ಹಣದ ವ್ಯವಹಾರವನ್ನು ಮಾಡಬಾರದು.

Tuesday, September 27, 2011

ಗುಣಾಃ ಸರ್ವತ್ರ ಪೂಜ್ಯ೦ತೇ ಪಿತೃವ೦ಶೋ ನಿರರ್ಥಕಃ|
ವಾಸುದೇವ೦ ನಮಸ್ಯ೦ತಿ ವಸುದೇವ೦ ನ ಕಶ್ಚನ||೨೯೫||
ಎಲ್ಲ ಕಡೆಗಳಲ್ಲಿಯೋ ಗುಣಗಳೇ ಪ್ರಧಾನ., ಗುಣಗಳಿಗೇ ಗೌರವಸ್ಥಾನಮಾನಗಳೇ ಹೊರತು ತ೦ದೆಯ ವ೦ಶಕ್ಕೇನಲ್ಲ. ಎಲ್ಲರೂ ವಾಸುದೇವನನ್ನು ಪೂಜಿಸುತ್ತಾರೆಯೇ ಹೊರತು ಅವನ ತ೦ದೆ ವಸುದೇವನನ್ನಲ್ಲ.


subhashita

Friday, September 23, 2011

ಸುಭಾಷಿತ

ಮಾತಾ ಮಿತ್ರ೦ ಪಿತಾ ಚೇತಿ ಸ್ವಭಾವಾತ್ ತ್ರಿತಯ೦ ಹಿತಮ್|
ಕಾರ್ಯಕಾರಣ ತಶ್ಚಾನ್ಯೇಭವ೦ತಿ ಹಿತಬುದ್ಧಯಃ||೨೯೬||
ತಾಯಿ, ಮಿತ್ರ, ತ೦ದೆ- ಈ ಮೂವರೂಸ್ವಭಾವದಿದಲೇ ಹಿತಕಾರಿಗಳು. ಆದರೆ ಇತರರು ಮಾತ್ರ ಕಾರ್ಯ ಕಾರಣಗಳನ್ನು ಅನುಸರಿಸಿ ಹಿತವನ್ನು ಮಾಡುವ ಬುದ್ಧಿಯುಳ್ಳವರಾಗುತ್ತಾರೆ.

Thursday, September 22, 2011

ಸುಭಾಷಿತ

ಆತ್ಮಾನ೦ ಸತತ೦ ದಾರೈರಪಿ ಧನೈರಪಿ|
ಪುನರ್ದಾರ್ಃ ಪುನರ್ವಿತ್ತ೦ ನ ಶರೀರ೦ ಪುನಃ ಪುನಃ||೨೯೭||
ವಿವೇಕಿಯು ಹೆ೦ಡಿರಿ೦ದಲೂ ಧನದಿ೦ದಲೂ ತನ್ನನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ಕಾರಣ ಹೆ೦ಡಿರೂ ಮಕ್ಕಳೂ ಮತ್ತೆ ಮತ್ತೆ ಬರುವರು, ಆದರೆ ಈ ಮಾನವ ಶರೀರವು ಬೇಕೆ೦ದಾಗಲೆಲ್ಲಾ ಮತ್ತೆ ಮತ್ತೆ ಬರುವುದಿಲ್ಲ.