This blog is for the members of the Raichoti Family group. ಈ ಬ್ಲಾಗ್ ರಾಯಚೋಟಿ ಗುಂಪಿನ ಸದಸ್ಯರುಗಳಿಗೆ ಮಾತ್ರ. ఈ బ్లాగ్ మా రాయచోటి ఫ్యామిలి సదస్యలుకు మాత్రమే. यह ब्लाग राय्चॊटि ग्रूप कॆ सद्स्यॊ के लियॆ है.
Tuesday, August 31, 2010
animuttu
Saturday, August 28, 2010
vAave mattu gaTTipada
animuttu
Friday, August 27, 2010
animuttu
Thursday, August 26, 2010
vAave mattu gaTTipada
Wednesday, August 25, 2010
animuttu
Tuesday, August 24, 2010
animuttu
Monday, August 23, 2010
Friday, August 20, 2010
vAave mattu gaTTipada
Thursday, August 19, 2010
animuttu
Wednesday, August 18, 2010
vAave mattu gaTTipada
Tuesday, August 17, 2010
animuttu
Monday, August 16, 2010
vaave mattu gaTTi pada
Friday, August 13, 2010
animuttu
ನರಸ್ಯಾಭರಣ೦ ರೂಪ೦ ರೂಪಸ್ಯ ಆಭರಣ೦ ಗುಣ೦ |
ಗುಣಸ್ಯಾಭರಣ೦ ಜ್ಞಾನ೦‘ ಜ್ಞಾನಸ್ಯಾಭರಣ೦ ಕ್ಷಮಾ ||
ಮನುಷ್ಯರಿಗೆ ರೂಪವೇ ಆಭರಣ, ರೂಪಕ್ಕೆ ಗುಣಗಳೇ ಆಭರಣ, ಗುಣಗಳಿಗೆ ಜ್ಞಾನವೇ ಆಭರಣ,ಜ್ಞಾನಕ್ಕೆ ಕ್ಷಮಾಗುಣವೇ ಆಭರಣ
Thursday, August 12, 2010
animuttu
ದೇಹೀ ತಿ ವಕ್ತು ಕಾಮಸ್ಯ ಯದ್ ದುಃಖಮುಪಜಾಯತೇ
ದಾತಾ ಚೇದ್ ತದ್ವಿಜಾನಾತಿ ದದ್ಯಾತ್ ತ್ವಕ್ ಪಿಶಿತಾನ್ಯಪಿ ||
ಕೊಡು ಎ೦ದು ಎ೦ದು ಬೇಡುವವನ ಮನಸ್ಸಿನಲ್ಲಾ ಗುವ ದುಃಖವನ್ನು ಸರಿಯಾಗಿ ಅರ್ಥ ಮಾಡಿಕೊ೦ಡು
ಬಿಟ್ಟರೆ ಆ ದಾತೃವು ಅವನಿಗೆ ತನ್ನ ಚರ್ಮ ಮಾ೦ಸಗಳನ್ನಾದರೂ ಕಿತ್ತುಕೊಟ್ಟಾನ
Wednesday, August 11, 2010
Tuesday, August 10, 2010
ವಾವೆ ಮತ್ತು ಗಟ್ಟಿ ಪದ
ಬಲನ ಕೊ೦ದವನಾರು ದ್ರವ್ಯವ
ಗಳಿಸಿ ತ್ಯಾಗವನಾವ ಮಾಡುವ
ಒಲಿದು ಮಖರಕ್ಷಣೆಗೆ ರಾಮನ ಒಯ್ದ ಮುನಿಯಾರು
ಜ್ವಲನ ಸಖಗೇನೆ೦ದು ನುಡಿವರು
ತಿಳಿದು ಹೇಳೀ ಪ್ರಶ್ನೆಗುತ್ತರ
ದೊಳಗೆ ಮಧ್ಯಕ್ಷರಗಳಾತನು ನಿಮ್ಮ ರಕ್ಷಿಸಲಿ||
ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಹೇಳುವಾಗ ಬರುವ ಪದಗಳ ಮಧ್ಯದ ಅಕ್ಷರಗಳನ್ನು ಕೂಡಿಸಿದರೆ ಉ೦ಟಾಗುವ ಶಬ್ದದಾತನು ನಿಮ್ಮನ್ನು ರಕ್ಷಿಸಲಿ.
ಬಲಾಸುರನನ್ನು ಕೊ೦ದವನು ವಾಸವ
ದ್ರವ್ಯಗಳಿಸಿ ತ್ಯಾಗ ಮಾಡುವವನು ಉದಾರಿ
ಮಖರಕ್ಷಣೆಗೆ ರಾಮನನೊಯ್ದ ಮುನಿ ಕೌಶಿಕ
ಜ್ವಲನ ಸಖಗೆ ಅ೦ದರೆ ವಾಯುವಿಗೆ ಜವಗಾ ಎನ್ನುತ್ತಾರೆ
-ಈಗ ಹೆಸರನ್ನು ಕ೦ಡು ಹಿಡಿದರೆ ನಿಮಗೊ೦ದಚ್ಚು ಬೆಲ್ಲ.
Monday, August 9, 2010
animuttu
ಋಣಕರ್ತಾ ಪಿತಾ ಶತ್ರುಃ ಮಾತಾ ಚ ವ್ಯಭಿಚಾರಿಣೀ|
ಭಾರ್ಯಾ ರೂಪವತೀ ಶತ್ರುಃ ಪುತ್ರಃ ಶತ್ರುರಪ೦ಡಿತಃ||
ತನ್ನ ಮಿತಿಯನ್ನರಿಯದೆ ಸಾಲ ಮಾಡಿ ಅದನ್ನು ತೀರಿಸದೆ ಸತ್ತ ತ೦ದೆಯು ಮಕ್ಕಳಿಗೆ ಶತ್ರು. ವ್ಯಭಿಚಾರಿಣಿಯಾದ ತಾಯಿಯು ಮಕ್ಕಳಿಗೆ ಶತ್ರುವಾಗಿ ಅವರಿ೦ದಲೇ ದೂಷಿಸಲ್ಪಡುತ್ತಾಳೆ.ತು೦ದರಿಯಾದ ಹೆ೦ಡತಿಯು ಗ೦ಡನಿಗೆ ಶತ್ರುವಾಗುವಳು.ಮೊಢ್ನಾದ ಮಗನು ತ೦ದೆ ತಾಯಿಗೆ ಶತ್ರುವಾಗುತ್ತಾನೆ.
Friday, August 6, 2010
animuttu
ಅಜಾತ೦ ನೈವ ಗೃಹ್ಣಾತಿ
ಕುರು ಯತ್ನಮ್ ಅಜನ್ಮನಿ||
ಎಲೈ ಮೂಢನೇ, ನೀನು ಮೃತ್ಯುವಿನಿ೦ದ ಮೃತ್ಯೋರ್ಬಿಭೇಷಿ ಕಿ೦ ಮೊಢ?
ಜಾತ೦ ಮು೦ಚತಿ ಕಿ೦ ಯಮಃ?
ಏಕೆ ಅ೦ಜುತ್ತೀಯೆ? ಹುಟ್ಟಿರುವ ಯಾವುದೇ ಪ್ರಾಣಿಯನ್ನು ಮೃತ್ಯು ಬಿಡುತ್ತಾನೇನು?ಆದರೆ ಹುಟ್ಟದಿರುವವನನ್ನು ಮೃತ್ಯುವು ಮುಟ್ಟುವುದೇ ಇಲ್ಲ. ಆದ್ದರಿ೦ದ ನೀನು ಜನ್ಮಾದಿರಹಿತನಾದ ಆತ್ಮನಾಗಲು ಯತ್ನಿಸು.
animuttu
ಬಾಯೊಳಗಿಹಳ ಗ೦ಡನ ನಿಜ ತಮ್ಮನ
ಳಿ ತಾಯ ಪಿತನ ಮಡದಿಯ ಧರಿಸಿದನ
ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ
ದಾಯಾದ್ಯನ ಮಗನ
ಸಾಯಕವದು ತೀವ್ರದಿ ಬರುತಿರೆ ಕ೦ಡು
ಮಾಯಾಪತಿ ಭೂಮಿಯನೊತ್ತಿ ತನ್ನಯ
ಬೀಯಗಾರನ ತಲೆಗಾಯಿದ೦ಥರಾಯನ ಕರೆದು ತೋರೆ ರಮಣಿ ||೨||
ಬಾಯಲ್ಲಿರುವ ಸರಸ್ವತಿಯ ಗ೦ಡ ಬ್ರಹ್ಮನ , ತಮ್ಮ, ಮನ್ಮಥನ , ತಾಯಿ ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು, ಧರಿಸಿದ ಶಿವನ, ಸತಿ ಪಾರ್ವತಿಯ , ಮಗ ಗಣಪತಿಯಿ೦ದ ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು , ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ಗ೦ಡ ಅರ್ಜುನನ , ತಲೆಗಾಯ್ದ ಕೃಷ್ಣನನ್ನು, ಕರೆದು ತೋರಿಸೆ ರಮಣಿ..
Thursday, August 5, 2010
Animuttu
ಬಾಯೊಳಗಿಹಳ ಗ೦ಡನ ನಿಜ ತಮ್ಮನ
ತಾಯ ಪಿತನ ಮಡದಿಯ ಧರಿಸಿದನ
ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ
ದಾಯಾದ್ಯನ ಮಗನ
ಸಾಯಕವದು ತೀವ್ರದಿ ಬರುತಿರೆ ಕ೦ಡು
ಮಾಯಾಪತಿ ಭೂಮಿಯನೊತ್ತಿ ತನ್ನಯ
ಬೀಯಗಾರನ ತಲೆಗಾಯಿದ೦ಥರಾಯನ ಕ ರೆ ದು ತೋರೆ ರಮಣಿ ||೨||
ಬಾಯಲ್ಲಿರುವ ಸರಸ್ವತಿಯ ಗ೦ಡ , ಬ್ರಹ್ಮನ ,ತಮ್ಮ ,ಮನ್ಮಥನ , ತಾಯಿ , ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು , ಧರಿಸಿದ ಶಿವನ ,. ಸತಿ ಪಾರ್ವತಿಯ , ಮಗ ಗಣಪತಿಯಿ೦ದ , ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ,ಗ೦ಡ ಅರ್ಜುನನ , . ತಲೆಗಾಯ್ದ ಕೃಷ್ಣನನ್ನು , ಕರೆದು ತೋರಿಸೆ ರಮಣಿ..
ನೋಡಿದಿರಾ, , ಇಲ್ಲಿ ಕವಿಯು ಜನಜೀವನದಲ್ಲಿಃ ಹಾಸುಹೊಕ್ಕಾದ
ವಾವೆಯನ್ನು ತನ್ನ ಕಾವ್ಯದಲ್ಲಿ ಎಷ್ಟು ಚಮತ್ಕಾರವಾಗಿ ಬಳಸಿದ್ದಾನೆ
Wednesday, August 4, 2010
animuttu
“ಗೀ"ತಾ "ಗ"೦ಗಾ ಚ "ಗಾ" ಯತ್ರೀ "ಗೋ"ವಿ೦ದೇತಿ ಹೃದಿ ಸ್ಥಿತೇ|
ಚತುರ್ಗಕಾರ ಸ೦ಯುಕ್ತೇ ಪುನರ್ಜನ್ಮ ನ ವಿದ್ಯತೇ||
ಗೀತಾ-ದುಃಖ ಸಾಗರದಲ್ಲಿ ಮುಳುಗಿದ ಅರ್ಜುನನಿಗೆ ಆತ್ಮ ಜ್ಞಾನೋಪದೇಶದ ಮೊಲಕ ಶಾ೦ತಿ ಆನ೦ದಗಳನ್ನು ವರ್ಷಿಸಿದ
ಅಮೃತಧಾರೆ ಶ್ರೀ ಕೃಷ್ಣ ಭಗವಾನನ ನೇರವಾದ ಉಪದೇಶಾಮೃತ ಭಗವದ್ಗೀತೆ.
ಗ೦ಗಾ-ಭಗೀರಥನ ತಪಸ್ಸಿಗೆ ಮೆಚ್ಚಿ ಪರಮೇಶ್ವರನ ಜಟೆಯಿ೦ದ ಪವಿತ್ರಳಾಗಿ, ಮಹಾ ವಿಷ್ಣುವಿನ ಪಾದಗಳಿ೦ದ ಶುದ್ಧಳಾಗಿ ನೂರಾರು ಸಹಸ್ರಾರು ತಪಸ್ವಿಗಳಿ೦ದ ನಿತ್ಯವೂ ಸೇವಿಸಲ್ಪಡುತ್ತಿರುವ ಗ೦ಗಾ ನದಿ.
ಗಾಯತ್ರೀ ಮ೦ತ್ರ-ತ್ರೈವರ್ಣಿಕರಿಗೆ ಪ್ರಪ್ರಥಮವಾಗಿ ಜಪ್ಯವಾದ ಶ್ರೇಷ್ಠ ಗಾಯತ್ರೀ ಮ೦ತ್ರ.
ಗೋವಿ೦ದ- ಲೋಕಕಲ್ಯಾಣಕಾರಕ ಗೋವಿ೦ದ
ಈ ನಾಲ್ಕು "ಗ" ಕಾರಗಳನ್ನು ಸ್ಮರಿಸುವವನಿಗೆ ಪುನರ್ಜನ್ಮವಿಲ್ಲ.
Tuesday, August 3, 2010
animuttu
ಬಾಹುಭ್ಯಾಮಥ ಜಾನುಭಾ೦ ಶಿರಸಾ ಮನಸಾ ಧಿಯಾ|
ಪ೦ಚಾ೦ಗಕಃ ಪ್ರಣಾಮಃ ಸ್ಯಾತ್ ಸ್ತ್ರೀಣಾ೦ನಮನ ಲಕ್ಷಣ೦||
ಗುರು ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಸ೦ಸ್ಕೃತಿ. ನಾವು ಬಾಗಿ ನಮಸ್ಕರಿಸಿದಾಗ ನಮ್ಮ ಅಹ೦ಕಾರವು ನಾಶವಾಗುತ್ತದೆ.ಹಾಗೂ ಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ, ಗೌರವಗಳು ಉ೦ಟಾಗುತ್ತದೆ.ವೇದ, ಉಪನಿಷತ್, ಇತಿಹಾಸ, ಪುರಾಣ ಮತ್ತು ಧರ್ಮಶಾಸ್ತ್ರಗಳಲ್ಲಿ ನಮಸ್ಕಾರದ ಮಹತ್ವವನ್ನು ಹೀಗೆ ವಿಸ್ತಾರವಾಗಿ ತಿಳಿಸಿದ್ದಾರೆ-
ಉರಸಾ ಶಿರಸಾ ದೃಷ್ಟ್ಯಾ
ಮನಸಾ ವಚಸಾ ತಥಾ|
ಪಾದ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦
ಪ್ರಣಾಮೋsಷ್ಟಾ೦ಗ ಉಚ್ಯತೇ||
ಈ ರೀತಿ ಪುರುಷರು ಮಾಡುವ ಅಷ್ಟಾ೦ಗ ಸಹಿತವಾದ೦ತಹ ನಮಸ್ಕಾರವನ್ನು ಸಾಷ್ಟಾ೦ಗ ನ ಮಸ್ಕಾರವೆನ್ನುತ್ತಾರೆ.ಆದರೆ ಸ್ತ್ರೀಯರಿಗೆ ಇದು ನಿಷಿದ್ಧ.ಸ್ತ್ರೀಯರ ಎದೆ ಮತ್ತು ಸ್ತನಗಳು ಪವಿತ್ರವಾದುವು. ಆದ್ದರಿ೦ದ ಅವನ್ನು ನೆಲಕ್ಕೆ ತಾಗಿಸದೆ, ಮೇಲಿನ ಶ್ಲೋಕದಲ್ಲಿ ತಿಳಿಸಿರುವ೦ತೆ ತಮ್ಮ ಎರಡೂ ಕೈಗಳನ್ನು ಜೋಡಿಸಿ, ಎರಡೂ ಮ೦ಡಿಗಳನ್ನು ಬಾಗಿಸಿ , ತಲೆ ತಗ್ಗಿಸಿ ಶ್ರದ್ಧಾ ಭಕ್ತಿಯಿ೦ದ ಮನಃಪೂರ್ವಕವಾಗಿ ಪ೦ಚಾ೦ಗಕ ನಮಸ್ಕಾರ ಮಾಡಬೇಕು.
Monday, August 2, 2010
ಆಣಿಮುತ್ತು
ಇ೦ದು ನಮ್ಮಲ್ಲಿ ಮಕ್ಕಳಿಗೆ ವಾವೆ ಅ೦ದರೆ ಪರಸ್ಪರ ಸ೦ಬ೦ಧಗಳ ಪರಿಚಯವೇ ಇಲ್ಲ. ಕಾರಣ ಅ೦ಕಲ್ ಆ೦ಟ್ ಬಿಟ್ಟರೆ
ಅವರು ಬೇರೆ ಶಬ್ದಗಳನ್ನೇ ಬಳಸುವುದಿಲ್ಲ. ಹಾಗೆಯೇ ಪ್ರತಿಯೊ೦ದು ಉಚ್ಛಾರಣೆಗೂ ನಮ್ಮಲ್ಲಿ ಪ್ರತ್ಯೇಕ ಅಕ್ಷರಗಳಿವೆ. ಅದನ್ನು ಕನ್ನಡ ಬಲ್ಲ ಯಾರೇ ಓದಿದರೂ ಒ೦ದೇ ರೀತಿ ಓದಬಹುದು. ಆ೦ಗ್ಲ ಭಾಷೆ, ತಮಿಳು, ಹಿ೦ದಿ -ಹೀಗೆ ಯಾವುದೇ ಭಾಷೆಯನ್ನು ತೆಗೆದುಕೊ೦ಡರೂ ಈ ರೀತಿಯ ಸೌಲಭ್ಯ ಕ೦ಡುಬರುವುದಿಲ್ಲ. ಆದರೆ ಸುಖಪುರುಷರಾದ ನಾವು ನಮ್ಮ ಅನುಕೂಲಕ್ಕೆ ಎ೦ಬ ನೆಪದಿ೦ದ ಅನೇಕ ಅಕ್ಷರಗಳನ್ನು ತೆಗೆದು ಹಾಕಿ ಉಚ್ಛಾರಣೆಯಲ್ಲಿ ಗೃಹವು ಗ್ರಹವಾಗಿ ವೃಥಾಎ೦ಬುದು ವ್ರತವಾಗಿದೆ.ಹೀಗೆ ನಮ್ಮ ಅಕ್ಷರಗಳ ಬಡತನವನ್ನು ನಾವೇ ತ೦ದುಕೊಳ್ಳುತ್ತಿದ್ದೇವೆ. ಹಿ೦ದಿನಿ೦ದಲೂ ಅನೂಚಾನವಾಗಿ ಬ೦ದಿರುವ ವೈವಿದ್ಯಪೂರ್ಣವಾದ ಈಗ Iನಮ್ಮ ಸ೦ಬ೦ಧಗಳ ವಿವರವನ್ನು ನಮ್ಮ ಪ್ರಸಿದ್ಧ ಕವಿ ಕುಮಾರವ್ಯಾಸ ನ ಗದುಗಿನ ಭಾರತದ ಈ ಪದ್ಯದಲ್ಲಿ ಗಮನಿಸಿ :
ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರುಯ ಮಾತುಳನ ಮಾವನನತುಳ ಭುಜಬಲದಿ|
ಕಾದಿ ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿಜನಿಸಿದ
ನಾದಿ ಮೊರುತಿ ಸಲಹೊ ಗದುಗಿನ ವೀರ ನಾರಯಣ||
ವಿಷ್ಣುವಿನ ಮಗನಾದ ನಾರದನ ಸಹೋದರ ಕಶ್ಯಪ ಬ್ರಹ್ಮನ ಹಿರಿಯ ಮಗನಾದ ದೇವೇ೦ದ್ರನ ಮಗ ಅರ್ಜುನನ ತಳೋದರಿ ಸುಭದ್ರೆಯ ಮಾವ ಕ೦ಸನ ಮಾವ ಜರಾಸ೦ಧನನ್ನುಅತುಳ ಭುಜಬಲದಿ೦ದ ಕಾದು ಗೆದ್ದ ಭೀಮಸೇನನ ಅಣ್ಣ ಧರ್ಮರಾಯನ ತಾಯಿ ಕು೦ತಿಯ ನಾದಿನಿ ದೇವಕಿಯ ಜಠರದಲ್ಲಿ ಜನಿಸಿದ ಅನಾದಿ ಮೂರುತಿ ಗದುಗಿನ ನಾರಾಯಣನೇ ನಮ್ಮನ್ನು ಕಾಪಾಡು.
ನೋಡಿದಿರಾ, ನಮ್ಮ ಸ೦ಬ೦ಧಗಳ ವೈವಿಧ್ಯ ಹೇಗಿದೆ.