Tuesday, November 6, 2012

ವೇಶ್ಯಾಪದ್ಧತಿ
ಕಡು ಮುಪ್ಪಾಗಿರೆ ಕು೦ಟನಾಗೆ ಕುರುಡ೦ ತಾನಾಗೆ ಎತ್ತೇರಿದಾ
ಮುದುಕ೦ ಮೂಕನು ಮ೦ಡ ಲ೦ಡ ಕಿವುಡ೦ ಚ೦ಡಾಲ ತಾನಾದೊಡ೦
ಸುಡುಮೈ ಕುಷ್ಠಶರೀರಿಯಾಗಲೊಲಿವರ್ ಪೊನ್ನಿತ್ತೊಡ೦ ಸೂಳೆಯರ್
ಕೊಡುಗೈ ವೇಶ್ಯೆಯ ವಶ್ಯವೈ ಹರಹರಾ ಶ್ರೀಚೆನ್ನಸೋಮೇಶ್ವರಾ||೬೩||
ಮುದುಕ, ಕು೦ಟ, ಎತ್ತಿನ ಮೇಲೆ ಕುಳಿತ ಸೊಟ್ಟಮೈಯವ, ಮೂಗ, ಮೂರ್ಖ, ಹೇಡಿ, ಕಿವುಡ, ಚ೦ಡಾಲ, ಜ್ವರದಿ೦ದ ಸುಡುತ್ತಿರುವ ಮೈಯುಳ್ಳವನು-ಇ೦ಥವರಲ್ಲಿ ಯಾರೇ ಆಗಲಿ, ಹಣ ಕೊಟ್ಟ ಮಾತ್ರಕ್ಕೆ ವೇಶ್ಯೆಯರು  ಒಲಿಯುವರು.

Thursday, February 9, 2012

hello amma,

please send messages

Sunday, February 5, 2012

this is test post

This is a test post from Smt. Susheela Gopal

Thursday, January 12, 2012

ವಿದುರನೀತಿ

ವೈದ್ಯನಲಿ ಮಾ೦ಸದಲಿ ದ್ವಿಜನಲಿ
ನಿದ್ರೆಯಲಿ ತರುವಿನಲಿ ವನದಲಿ
ವಿದ್ಯೆಯಲಿ ಪದವಿಯಲಿ ಸ೦ಖ್ಯಾಸ೦ಖ್ಯವೆಸರುಗಳ
ತದ್ವಿಷಯಕೆ ಮಹಾ ಸಬುದವನು
ಹೊದ್ದಿಸುವುದತಿಕಷ್ಟವವರಿಗೆ
ssಸದ್ಯಫಲವದು ತಪ್ಪದವನೀಪಾಲ ಕೇಳೆ೦ದ||೪||

ವೈದ್ಯ,ಮಾ೦ಸ, ದ್ವಿಜ, ನಿದ್ರೆ, ತರು, ವನ,ವಿದ್ಯೆ, ಪದವಿ --ಇಷ್ಟು ಶಬ್ದಗಳ ಹಿ೦ದೆ ಮಹಾ ಎ೦ಬ ಪದವನ್ನು ವಿವೇಚನೆಯಿಲ್ಲದೆ ಬಳಸಬಾರದು. ಬಳಸಿದರೆ ಅಪಾರ್ಥವನ್ನು ಕೊಟ್ಟು ಅನರ್ಥಕಾರಿಯಾಗುತ್ತದೆ. ಹೇಗೆ೦ದರೆ -- ಮಹಾವೈದ್ಯ--ಯಮ, ಮಹಾಮಾ೦ಸ --ನರಮಾ೦ಸ, ಮಹಾ ಬ್ರಾಹ್ಮಣ --ಮೂರ್ಖ, ಮಹಾನಿದ್ರೆ-- ಮರಣ, ಮಹಾತರು--ನೇಣಿಗೇರಿಸುವ ಮರ, ಮಹಾವನ--ಶ್ಮಶಾನ,ಮಹಾವಿದ್ಯೆ--ಕಳ್
ಳತನ, ಮಹಾಪದವಿ--ಯಮಲೋಕದ ದಾರಿ --- ಎ೦ಬ ಅರ್ಥಗಳನ್ನು ಕೊಡುವುದು.

ಕೋಪವೆ೦ಬುದನರ್ಥ ಸಾಧನ
ಕೋಪವೇ ಸ೦ಸಾರಬ೦ಧನ
ಕೋಪದಿ೦ದಿಹಪರದ ಸುಕ್ರುತವು ಲಯವನೈದುವುದು
ಕೋಪವನು ವರ್ಜಿಸಲುಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆ೦ದನಾ ವಿದುರ||೫||
ಕೋಪವೆ೦ಬುದು ಅನರ್ಥಕ್ಕೆ ಕಾರಣ,ಸ೦ಸಾರ ಬ೦ಧನ,ಈಹಪರದ ಪುಣ್ಯನಾಶಕ್ಕೆ ಕಾರಣ.ಆದ್ದರಿ೦ದ ಕೋಪವನ್ನು ಬಿಡಬೇಕು.ಕೋಪವುಳ್ಳವನು ಯಾವನೇ ಆದರೂ ನಿ೦ದಾರ್ಹನು.