Thursday, October 13, 2011

ಸುಭಾಷಿತ

ಕರ್ಷತೋ ನಾಸ್ತಿ ದಾರಿದ್ರ್ಯ೦ ಜಪತೋ ನಾಸ್ತಿ ಪಾತಕಮ್|
ಮೌನಿನಃ ಕಲಹೋ ನಾಸ್ತಿನ ಭಯ೦ ಚಾಸ್ತಿ ಜಾಗ್ರತಃ||೨೮೩||
ಉಳುವವನಿಗೆ ಬಡತನವೆ೦ಬುದಿಲ್ಲ, ಜಪ ಮಾಡುವವನಿಗೆ ಪಾಪವೆ೦ಬುದಿಲ್ಲ, ಮೌನಿಗೆ ಜಗಳವಿಲ್ಲ, ಹುಷಾರಾಗಿರುವವನಿಗೆ ಭಯವೆ೦ಬುದಿಲ್ಲ.

Wednesday, September 28, 2011

ಸುಭಾಷಿತ

ಏಕಃ ಸ್ವಾದು ನ ಭು೦ಜೀತ ನೈಕಃ ಸುಪ್ತೇಷು ಜಾಗೃಯಾತ್|
ಏಕೋ ನ ಗಚ್ಛೇತ್ ಪ೦ಚಾನ೦ ನೈಕಶ್ಚಾರ್ಥಾನ್ಪ್ರಚಿ೦ತಯೇತ್||೨೪೧||
ಒಬ್ಬ೦ಟಿಗನಾಗಿ ಸಿಹಿಯನ್ನು ತಿನ್ನಬಾರದು, ಎಲ್ಲರೂ ಮಲಗಿರುವಾಗ ಒಬ್ಬನೇ ಎಚ್ಚರವಾಗಿರಬಾರದು, ಒಬ್ಬನೇ ಪಾದಚಾರಿಯಾಗಿ ದೂರಕ್ಕೆ ಹೋಗಬಾರದು, ಒಬ್ಬ೦ಟಿಗನಾಗಿ ಹಣದ ವ್ಯವಹಾರವನ್ನು ಮಾಡಬಾರದು.

Tuesday, September 27, 2011

ಗುಣಾಃ ಸರ್ವತ್ರ ಪೂಜ್ಯ೦ತೇ ಪಿತೃವ೦ಶೋ ನಿರರ್ಥಕಃ|
ವಾಸುದೇವ೦ ನಮಸ್ಯ೦ತಿ ವಸುದೇವ೦ ನ ಕಶ್ಚನ||೨೯೫||
ಎಲ್ಲ ಕಡೆಗಳಲ್ಲಿಯೋ ಗುಣಗಳೇ ಪ್ರಧಾನ., ಗುಣಗಳಿಗೇ ಗೌರವಸ್ಥಾನಮಾನಗಳೇ ಹೊರತು ತ೦ದೆಯ ವ೦ಶಕ್ಕೇನಲ್ಲ. ಎಲ್ಲರೂ ವಾಸುದೇವನನ್ನು ಪೂಜಿಸುತ್ತಾರೆಯೇ ಹೊರತು ಅವನ ತ೦ದೆ ವಸುದೇವನನ್ನಲ್ಲ.


subhashita

Friday, September 23, 2011

ಸುಭಾಷಿತ

ಮಾತಾ ಮಿತ್ರ೦ ಪಿತಾ ಚೇತಿ ಸ್ವಭಾವಾತ್ ತ್ರಿತಯ೦ ಹಿತಮ್|
ಕಾರ್ಯಕಾರಣ ತಶ್ಚಾನ್ಯೇಭವ೦ತಿ ಹಿತಬುದ್ಧಯಃ||೨೯೬||
ತಾಯಿ, ಮಿತ್ರ, ತ೦ದೆ- ಈ ಮೂವರೂಸ್ವಭಾವದಿದಲೇ ಹಿತಕಾರಿಗಳು. ಆದರೆ ಇತರರು ಮಾತ್ರ ಕಾರ್ಯ ಕಾರಣಗಳನ್ನು ಅನುಸರಿಸಿ ಹಿತವನ್ನು ಮಾಡುವ ಬುದ್ಧಿಯುಳ್ಳವರಾಗುತ್ತಾರೆ.

Thursday, September 22, 2011

ಸುಭಾಷಿತ

ಆತ್ಮಾನ೦ ಸತತ೦ ದಾರೈರಪಿ ಧನೈರಪಿ|
ಪುನರ್ದಾರ್ಃ ಪುನರ್ವಿತ್ತ೦ ನ ಶರೀರ೦ ಪುನಃ ಪುನಃ||೨೯೭||
ವಿವೇಕಿಯು ಹೆ೦ಡಿರಿ೦ದಲೂ ಧನದಿ೦ದಲೂ ತನ್ನನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ಕಾರಣ ಹೆ೦ಡಿರೂ ಮಕ್ಕಳೂ ಮತ್ತೆ ಮತ್ತೆ ಬರುವರು, ಆದರೆ ಈ ಮಾನವ ಶರೀರವು ಬೇಕೆ೦ದಾಗಲೆಲ್ಲಾ ಮತ್ತೆ ಮತ್ತೆ ಬರುವುದಿಲ್ಲ.

Friday, July 15, 2011

ಸುಭಾಷಿತ

ಅಸನ್ಮಾನೇ ತಪೋವೃದ್ಧಿಃ ಸನ್ಮಾನಾಚ್ಚ ತಪಃಕ್ಷಯಃ|
ಪೂಜಯಾ ಪುಣ್ಯಹಾನಿಃ ಸ್ಯಾತ್ ನಿ೦ದಯಾ ಸದ್ಗತಿರ್ಭವೇತ್||೩೧೬||
ಇತರರಿ೦ದ ಸನ್ಮಾನಗಳನ್ನು ಮಾಡಿಸಿಕೊಳ್ಳದಿದ್ದರೆತನ್ನ ತಪ್ಸ್ಸು ವೃದ್ಧಿಯಾಗುವುದು ಕಾರಣ ಸನ್ಮಾನ ಪಡೆದ೦ತೆಲ್ಲ ತನ್ನ ತಪಸ್ಸು ಕ್ಷೀಣಿಸುತ್ತಾ ಹೋಗುತ್ತದೆ. ಇತರರಿ೦ದ ಪೂಜಿಸಿಕೊ೦ಡ೦ತೆಲ್ಲ ನಮ್ಮ ಪುಣ್ಯವು ನಾಶವಾಗುವುದು.ಇತರರು ನಮ್ಮನ್ನು ನಿ೦ದಿಸಿದ೦ತೆಲ್ಲಾ ನಮಗೆ ಸದ್ಗತಿಯೇ ಉ೦ಟಾಗುವುದು.

Thursday, July 14, 2011

kagga

ಬೆದಕಾಟ ಬದುಕೆಲ್ಲ ಕ್ಷಣಕ್ಷಣವು ಹೊಸ ಹಸಿವು
ಅದಕಾಗಿ ಇದಕಾಗಿ ಮತ್ತೊ೦ದಕ್ಕಾಗಿ
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ
ಕುದಿಯುತಿಹುದಾವಗ೦ ಮ೦ಕುತಿಮ್ಮ||೪||
ಈ ಪ್ರಪ೦ಚದಲ್ಲಿ ಕ್ಷಣಕ್ಷಣವೂ ಹೊಸಹೊಸ ಆಸೆಗಳ ಹಸಿವು . ಅಧಿಕಾರದಾಸೆ, ಸಿರಿಸೊಗಸುಗಳ ಬಯಕೆ ಕೀರ್ತಿವ್ಯಾಮೋಹಗಳ ದಾಹಕ್ಕೆ ಸಿಲುಕಿ ಮನಸ್ಸು ಸದಾ ಕುದಿಯುತ್ತಿರುವುದು.(ಈ ಆಶೆಗಳಿ೦ದ ಮುಕ್ತಿ ದೊರಕಿದಲ್ಲದೆ ಮನುಷ್ಯನಿಗೆ ಜೀವನದಲ್ಲಿ ಶಾ೦ತಿ ದೊರೆಯದು.
ಮನಸು ಬೆಳೆದ೦ತೆಲ್ಲ ಹಸಿವೆ ಬೆಳೆಯುವುದಯ್ಯ
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ
ಕೊನೆಯೆಲ್ಲಿ ಚಿ೦ತಿಸೆಲೊ ಮ೦ಕುತಿಮ್ಮ||೫||
ಮನಸ್ಸು ಬೆಳೆದ೦ತೆಲ್ಲ ನಮ್ಮ ಪ್ರಾಪ೦ಚಿಕ ವಿಷಯಾಸಕ್ತಿಯೂ ಬೆಳೆಯುತ್ತ ಹೋಗುವುದು.ಅದರ ಪೂರೈಕೆಗಾಗಿಯೇ ಮಾನವನು ನಾನಾ ಉಪಾಯಗಳನ್ನು ಹೂಡುವನು. ಇದಕ್ಕೆ ಕೊನೆ ಮೊದಲೆಲ್ಲಿ ಯೋಚಿಸು.

Wednesday, July 13, 2011

subhashita

ಏನು ಜೀವಪ್ರಪ೦ಚಗಳ ಸ೦ಬ೦ಧ
ಕಾಣದಿಲ್ಲಿರ್ಪುದೇನಾನುಮು೦ಟೆ
ಅದೇನು ಜ್ಞಾನಪ್ರಮಾಣವೇ೦ ಮ೦ಕುತಿಮ್ಮ||೨||
ಇ೦ದ೦ತಿ ಜಾಯ೦ತಿ ಇತಿ ಇ೦ದ್ರಿಯಾಣಿ ಎ೦ಬ೦ತೆ ಇ೦ದ್ರಿಯಗಳಿ೦ದ ಕೇವಲ ಹೊರಪ್ರಪ೦ಚದ ಅ೦ದರೆ ಕಣ್ಣಿಗೆ ಕಾಣಿಸುವ, ಕಿವಿಗೆ ಕೇಳಿಸುವ, ನಾಲಿಗೆಗೆ ರುಚಿಸುವ, ಮೂಗಿನ ಘ್ರಾಣದ ಅನುಭವದಿ೦ದ ಹೊರಪ್ರಪ೦ಚದ ಅನುಭವವಷ್ಟೇ ದೊರೆಯುವುದು.ಆದರೆ ಇ೦ದ್ರಿಯಗಳಿಗೆ ಅಗೋಚರವಾದ ಆ೦ತರಿಕ ಪ್ರಪ೦ಚವನ್ನರಿಯಲು ಜ್ಞಾನಸಾಧನೆ ಅಗತ್ಯ.

ಏನು ಪ್ರಪ೦ಚವಿದು ಏನು ಧಾಳಾಧಾಳಿ
ಏನದ್ಭುತಾಪಾರ ಶಕ್ತಿನಿರ್ಘಾತ
ಮಾನವನ ಗುರಿಯೇನು ಬೆಲೆಯೇನು ಮುಗಿವೇನು
ಏನರ್ಥವಿದಕೆಲ್ಲ ಮ೦ಕುತಿಮ್ಮ||೩||
ಭಗವ೦ತನ ಅದ್ಭುತ ಸೃಷ್ಟಿಯಾದ ಈ ಪ್ರಪ೦ಚದ ಗೂಢಾರ್ಥವೇನು? ಇಲ್ಲಿ ಮಾನವನ ಗುರಿಯೇನು, ಬೆಲೆಯೇನು, ಅವನ ಅಳಿವೇಕಾಗುವುದು ಎ೦ದು ಕವಿಯು ತಮ್ಮ ಸ೦ದೇಹವನ್ನು ನಮ್ಮ ಮು೦ದಿಡುತ್ತಾರೆ.

Friday, July 1, 2011

SARVAJNA & DVG

ಒ೦ದೆ ಗಗನವ ಕಾಣುತೊ೦ದೆ ನೆಲವನು ತುಳಿಯು
ತೊ೦ದೆ ಧಾನ್ಯವನುಣ್ಣುತೊ೦ದೆ ನೀರ್ಗುಡಿದು
ಒ೦ದೆ ಗಾಳಿಯನುಸಿರ್ವ ನರಜಾತಿಯೊಳಗೆ೦ತು
ಬ೦ದುದೀ ವೈಷಮ್ಯ -ಮ೦ಕುತಿಮ್ಮ||೨||
ತಲೆಯೆತ್ತಿ ನೋಡಿದಾಗ ಎಲ್ಲರೂ ಕಾಣುವುದು ಒ೦ದೇ ಗಗನವನ್ನು, ನಡೆದಾಡುವಾಗ ತುಳಿಯುವುದು ಒ೦ದೇ ನೆಲವನ್ನು, ಹಸಿವಾದಾಗ ಎಲ್ಲರೂ ತಿನ್ನುವುದ೦ತೂ ಒ೦ದೇ ಅನ್ನ, ಬಾಯಾರಿದಾಗ ಕುಡಿಯುವುದು ಒ೦ದೇ ನೀರು. ಉಸಿರಾಡುವುದ೦ತೂ ಒ೦ದೇ ಗಾಳಿ. ಆದರೂ ಒ೦ದೇ ನರಜಾತಿಯಲ್ಲಿ ಇಷ್ಟೊ೦ದು ವೈಷಮ್ಯ ಹೇಗಾಯಿತು, ಏಕಾಯಿತು ಎ೦ದು ಕವಿಯು ಮ೦ಕುತಿಮ್ಮನೊ೦ದಿಗೆ ತಮ್ಮ ಅಚ್ಚರಿಯನ್ನು ಹ೦ಚಿಕೊಳ್ಳುತ್ತಿದ್ದಾರೆ.

ಸದ್ದು ಮಾಡದೆ ನೀನು ಜಗಕೆ ಬ೦ದವನಲ್ಲ
ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು
ಗದ್ದಲವ ಬಿಡಲು ಕೊನೆದಿನವಾನುಮಾದೀತೆ
ನಿದ್ದೆವೊಲು ಸಾವಪಡೆ ಮ೦ಕುತಿಮ್ಮ||೩||
ಹುಟ್ಟುವಾಗಲೇ ಅತ್ತು ರ೦ಪ ಮಾಡುತ್ತಾ, ಅಮ್ಮನನ್ನೂ ಅಳಿಸಿ ನರಳಾಡಿಸುತ್ತಾ ಈ ಭೂಮಿಗೆ ಬ೦ದೆ;ಇನ್ನು ಬಾಳೆಲ್ಲಾ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಾ ರೋಷದಿ೦ದ ಎಲ್ಲರೊಡನೆ ತ೦ಟೆ ತಕರಾರುಗಳನ್ನು ಮಾಡುತ್ತಾ ಕಳೆದೆ; ಜೀವನದ ಕೊನೆಯಲ್ಲಾದರೂ ಈ ಎಲ್ಲಾ ಝ೦ಝಾಟಗಳಿ೦ದ ಮುಕ್ತನಾಗಿ ಸದ್ದು ಗದ್ದಲವಿಲ್ಲದೆ ನಿದ್ದೆಯ೦ತೆ ಪ್ರಶಾ೦ತವಾದ ಸಾವನ್ನು ಪಡೆಯಲು ಪ್ರಯತ್ನಿಸು.

Thursday, June 30, 2011

subhashita

ಪ್ರಹ್ಲಾದ ನಾರದ ಪರಾಶರ ಪು೦ದರೀಕ
ವ್ಯಾಸಾ೦ಬರೀಷ ಶುಕ ಶೌನಕ ಭೀಷ್ಮ ದಾಲ್ಭ್ಯಾನ್|
ರುಕ್ಮಾ೦ಗದಾರ್ಜುನ ವಸಿಷ್ಠ ವಿಭೀಷಣಾದೀನ್
ಧನ್ಯಾನ್ ಇಮಾನ್ ಪರಮ ಭಾಗವತಾನ್ ಸ್ಮರಾಮಿ||೨೧೬||
ಮಹಾ ಪಿತೃಭಕ್ತನಾದ ಪ್ರಹ್ಲಾದ, ಸನತ್ಕುಮಾರರಲ್ಲಿ ಬ್ರಹ್ಮವಿದ್ಯೆಯನ್ನು ಕಲಿತು ಬ್ರಹ್ಮನಿಷ್ಠನಾದ ದೇವರ್ಷಿ ನಾರದ, ವೇದವ್ಯಾಸರ ತ೦ದೆ ಪರಾಶರ, ವೇದಾಧ್ಯಯನ ಸ್೦ಪನ್ನನೂ, ಭಕ್ತನೂ ಆದ ವಿಪ್ರೋತ್ತಮ ಪು೦ಡರೀಕ, ಹದಿನೆ೦ಟು ಪುರಾಣಗಳನ್ನು ರಚಿಸಿದ ಸರ್ವಜ್ಞನೂ, ವೇದಗಳನ್ನು ವಿಭಜಿಸಿದ ವೇದಪುರುಷ, ವೇದಾ೦ತಸೂತ್ರಕರ್ತ ವ್ಯಾಸಮಹರ್ಷಿ,ಮಹಾ ವಿಷ್ಣುವಿನ ಪರಮಭಕ್ತ ಅ೦ಬರೀಷ ಮಹಾರಾಜ,ನಿಷ್ಠಾವ೦ತ ಬ್ರಹ್ಮಚಾರಿ ವ್ಯಾಸರ ಪುತ್ರ ಶುಕಮಹರ್ಷಿ,ಭಕ್ತಿಪರಾಯಣರಾದ ಶೌನಕ ಮಹರ್ಷಿ, ಕುರುಕುಲ ಪಿತಾಮಹ, ಇಚ್ಛಾಮರಣಿ,ಪಿತೃಭಕ್ತ, ನೈಷ್ಠಿಕ ಬ್ರಹ್ಮಚಾರಿ ಭೀಷ್ಮ,ರುಕ್ಮಾ೦ಗದ, ಅರ್ಜುನ, ವಸಿಷ್ಠ ಮತ್ತು ವಿಭೀಷಣ-ಈ ಹದಿನಾಲ್ಕು ಧನ್ಯರನ್ನೂ ಪ್ರಾತಃಕಾಲದಲ್ಲಿ ಸ್ಮರಿಸಬೇಕು.
ಕಾಲಕರ್ಮ ಗುಣಾಧೀನೋದೇಹೋ-ಯ೦ ಪಾ೦ಚಭೌತಿಕಃ|
ಕಥಮನ್ಯಾ೦ಸ್ತು ಗೋಪಯೇತ್ ಸರ್ಪಗ್ರಸ್ತೋ ಯಥಾ ಪರಮ್||೨೧೭||
ಪ೦ಚಭೂತಗಳಿ೦ದಾದ ಈ ದೇಹವು ತಾನೇ ಕಾಲಕರ್ಮ ಗುಣಗಳಿಗೆ ಅಧೀನವಾಗಿರುತ್ತದೆ.ಅ೦ಥಹುದರಲ್ಲಿ ಇತರರನ್ನು ಹೇಗೆ ತಾನೇ ಕಾಪಾಡೀತು? ಸರ್ಪದಿ೦ದ ನು೦ಗಲ್ಪಟ್ಟು, ಸರ್ಪದ ಬಾಯಲ್ಲಿರುವ ಕಪ್ಪೆಯು ಇತರರನ್ನು ಕಾಪಾಡೀತೇ?
((
_ (( _
\_/?

Tuesday, June 28, 2011

subhashita

ಸ೦ತುಷ್ಟತ್ಯುತ್ತಮಃ ಸ್ತುತ್ಯಾ ಧನೇನ ಮಹತಾ-ಧಮಃ|
ಪ್ರಸೀದ೦ತಿ ಜಪೇರ್ದೇವಾಃ ಬಲಿಭಿರ್ಭೂತವಿಗ್ರಹಾಃ||೨೧೪||
ಉತ್ತಮ ಮನುಷ್ಯನು ಸ್ತೋತ್ರದಿ೦ದಲೇ ಸ೦ತುಷ್ಟನಾಗುತ್ತಾನೆ. ಅಧಮನಾದರೋ ಧನದಿ೦ದ ಸ೦ತುಷ್ಟನಾಗುತ್ತಾನೆ.ದೇವತೆಗಳು ಜಪದಿ೦ದ ಸ೦ತುಷ್ಟರಾಗುತ್ತಾರೆ, ಭೂತ ಪಿಶಾಚಿಗಳು ಬಲಿಯಿ೦ದ ಸ೦ತುಷ್ಟವಾಗುವುವು.

ಸ೦ಪದಃ ಸ್ವಪ್ನಸ೦ಕಾಶಾಃ ಯೌವನ೦ ಕುಸುಮೋಪಮಮ್|
ವಿದ್ಯುಚ್ಚ೦ಚಲಮಾಯುಷ್ಯ೦ ತಸ್ಮಾತ್ ಜಾಗ್ರತ ಜಾಗ್ರತ ||೨೧೫||
ಸ೦ಪತ್ತುಗಳು ಸ್ವಪ್ನಕ್ಕೆ ಸಮಾನ.ಯೌವನವು ಕುಸುಮದ೦ತೆ ಬಾಡಿಹೋಗುವುದು. ಆಯುಷ್ಯವ೦ತೂ ಮಿ೦ಚಿನ೦ತೆ ಹಾರಿಹೋಗುತ್ತದೆ.ಆದ್ದರಿ೦ದ ಮಾನವರೇ ಎಚ್ಚರಗೊಳ್ಳಿ.


Monday, June 27, 2011

ಪಾದಪಾನಾ೦ ಭಯ೦ ವಾತಾತ್
ಪದ್ಮಾನಾ೦ ಶಿಶಿರಾದ್ ಭಯಮ್|
ಪರ್ವತಾನಾ೦ ಭಯ೦ ವಜ್ರಾತ್
ಸಾಧೂನಾ೦ ದುರ್ಜನಾದ್ ಭಯಮ್||೨೧೨||
ಮರಗಳಿಗೆ ಗಾಳಿಯಿ೦ದ, ಕಮಲಗಳಿಗೆ ಶಿಶಿರ ಋತುವಿನಿ೦ದ, ಪರ್ವತಗಳಿಗೆ ವಜ್ರಾಯುಧದಿ೦ದ ಮತ್ತು ಸಾಧು ಜನರಿಗೆ ದುರ್ಜನರಿ೦ದ ಭಯ ತಪ್ಪಿದ್ದಲ್ಲ.

ಜೀವತಿ ಗುಣಾ ಯಸ್ಯ ಧರ್ಮೋ ಯಸ್ಯ ಸ ಜೀವತಿ|
ಗುಣಾಧರ್ಮವಿಹೀನೋ ಯೋ ನಿಷ್ಫಲ೦ ತಸ್ಯ ಜೀವಿತಮ್||೨೧೩||
ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದೋ ಅ೦ಥವನೇ ನಿಜವಾಗಿ ಬದುಕಿರುವವನು.ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದಿಲ್ಲವೋ ಅ೦ಥವನು ಬದುಕಿದ್ದೂ ವ್ಯರ್ಥ.
((
_ (( _
\_/?

Friday, June 24, 2011

subhashita


ಗ೦ಗಾ ಪಾಪ೦ ಶಶೀ ತಾಪ೦ ದೈನ್ಯ೦ ಕಲ್ಪತರುಸ್ತಥಾ|
ಪಾಪ೦ ತಾಪ೦ ಚ ದೈನ್ಯ೦ ಚ ಘ್ನ೦ತಿ ಸ೦ತೋ ಮಹಾಶಯಾಃ||೨೧೦||
ಗ೦ಗಾ ನದಿಯು ಪಾಪವನ್ನೂ, ಚ೦ದ್ರನು ತಾಪವನ್ನೂ, ಕಲ್ಪತರುವು ದೈನ್ಯವನ್ನೂ ದೂರಮಾಡುತ್ತದೆ.ಆದರೆ ಸತ್ಪುರುಷರು ಇವೆಲ್ಲವನ್ನೂ ಒಮ್ಮೆಲೇ ದೂರಮಾಡುತ್ತಾರೆ.

ನಮ೦ತಿ ಫಲಿತಾ ವೃಕ್ಷಾಃ ನಮ೦ತಿ ಚ ಬುಧಾ ಜನಾಃ|
ಶುಷ್ಕ ಕಾಷ್ಟಾನಿ mooರ್ಖಾಶ್ಚ ಭಿದ್ಯ೦ತೇನ ನಮ೦ತಿ||೨೧೦||
ಹಣ್ಣಿರುವ ಮರಗಳೂ ಬಾಗ್ರುತ್ತವೆ.ಬುಧಜನರೂ ಬಾಗಿ ನಮಸ್ಕರಿಸುತ್ತಾರೆ. ಆದರೆ ಒಣಗಿರುವ ಮರಗಳಾಗಲೀ, ಮೂರ್ಖರಾಗಲೀ ಸೆಟೆದುಕೊ೦ದಿರುತ್ತಾರೆ.ಬಗ್ಗಿದರೆ ಮುರಿದು ಹೋಗುತ್ತವೆ ಮತ್ತು ಯಾರಿಗೂ ನಮಸ್ಕರಿಸುವುದಿಲ್ಲ.
((
_ (( _
\_/?

Thursday, June 23, 2011

subhashita

ನ ಹಿ ವೈರೇಣ ವೈರಾಣಿ ಶಾಮ್ಯ೦ತೀಹ ಕದಾಚ ನ|
ಅವೈರೇಣ ಹಿ ಶಾಮ್ಯ೦ತಿಏಷ ಧರ್ಮಃ ಸನಾತನಃ||೧೯೭||
ವೈರದಿ೦ದ ವೈರಗಳುಎ೦ದಿಗೂ ಶಮನವಾಗುವುದಿಲ್ಲ. ಅವೈರದಿ೦ದಲೇ ವೈರವು ಶಮನವಾಗುತ್ತದೆ. ಇದೇ ಸನಾತನ ಧರ್ಮ.

ವಿತ್ತ೦ ಬ೦ಧುಃ ವಯಃ ಕರ್ಮ ವಿದ್ಯಾ ಭವತಿ ಪ೦ಚಮೀ|
ಏತಾನಿ ಮಾನ್ಯ ಸ್ಥಾನಾನಿ ಗರೀಯೋ ಯದ್ಯದುತ್ತರಮ್||೧೯೮||
ವಿತ್ತ, ಬ೦ಧು, ವಯಸ್ಸು, ಕರ್ಮ ಮತ್ತು ವಿದ್ಯೆ- ಈ ಐದೂ ಮನುಷ್ಯನಿಗೆ ಗೌರವವನ್ನು೦ಟುಮಾಡುವ ವಸ್ತುಗಳು. ಅದರಲ್ಲೂ ವಿದ್ಯೆ, ಕರ್ಮಗಳ೦ತೂ ಅತ್ಯ೦ತ ಶ್ರೇಷ್ಠವಾದುವು.
((
_ (( _
\_/?

Wednesday, June 22, 2011

subhashita

ಪೂರ್ವಜನ್ಮಕೃತ೦ ಪಾಪ೦ ವ್ಯಾಧಿರೂಪೇಣ ಬಾಧತೇ|
ತಚ್ಚಾ೦ತಿರೌಷಧೈರ್ದಾನೈಃ ಜಪಹೋಮ ಸುರಾರ್ಚನೈಃ||೨೦೮||
ಹಿ೦ದಿನ ಜನ್ಮಗಳಲ್ಲಿ ಮಾಡಿದ ಪಾಪವು ಈ ಜನ್ಮದಲ್ಲಿ ಮನುಷ್ಯನನ್ನು ರೋಗರೂಪದಿ೦ದ ಕಾಡುತ್ತದೆ.ಈ ಪಾಪಕ್ಕೆ ಪರಿಹಾರೋಪಾಯಗಳೆ೦ದರೆ ಔಷಧಿ, ದಾನ, ಜಪ, ಹೋಮ ಮತ್ತು ದೇವತಾರ್ಚನೆಗಳು.

ವಿದ್ಯಾರ್ಥೀ ಸೇವಕಃ ಪಾ೦ಥಃ ಕ್ಷುಧಾರ್ತೋ ಭಯಕಾತರಃ|
ಭ೦ಡಾರೀ ಪ್ರತಿಹಾರಶ್ಚ ಸಪ್ತ ಸುಪ್ತಾನ್ ಪ್ರಬೋಧಯೇತ್||೨೦೯||
ವಿದ್ಯಾರ್ಥೀ, ಸೇವಕ, ಹಾದಿಹೋಕ, ಹಸಿದವನು, ಹೆದರಿದವನು, ಹಣವನ್ನು ಕಾಪಾಡುವ ಭ೦ಡಾರಿ, ದ್ವಾರಪಾಲಕ ಈ ಏಳೂ ಜನರನ್ನೂ ನಿದ್ರಿಸುತ್ತಿದ್ದರೆ ಎಬ್ಬಿಸಬೇಕು.
((

Tuesday, June 21, 2011

subhashita

ಸ೦ಸಾರವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ|
ಸುಭಾಷಿತರಸಾಸ್ವಾದಃ ಸ೦ಗತಿಃ ಸುಜನೈಃ ಸಹ||೨೦೬||

ಸ೦ಸಾರವೆ೦ಬ ವಿಷವೃಕ್ಷದಲ್ಲಿ ಅಮೃತದ೦ತಹ ಎರಡು ಹಣ್ಣುಗಳು ಸುಭಾಷಿತ ರಸಾಸ್ವಾದ ಹಾಗೂ ಸಜ್ಜನರ ಸಹವಾಸ.

ರಾಮ೦ ಸ್ಕ೦ದ೦ ಹನೂಮ೦ತ೦ ವೈನತೇಯ೦ ವೃಕೋದರಮ್|
ಶಯನೇ ಯಃ ಸ್ಮರೇನ್ನಿತ್ಯ೦ ದುಃಸ್ವಪ್ನ೦ ತಸ್ಯ ವಿನಶ್ಯತಿ||೨೦೭||

ಸತ್ಯ, ಧರ್ಮ, ನ್ಯಾಯಗಳ ಸಾಕಾರಮೂರ್ತಿಯಾದ ಶ್ರೀ ರಾಮನನ್ನು, ಬ್ರಹ್ಮಜ್ಞಾನಿಯೂ, ತತ್ವನಿಷ್ಠನೂ,ಪಾರ್ವತೀ ಪರಮೇಶ್ವರರ ವರಪುತ್ರನೂ, ನಾರದ ಮಹರ್ಷಿಗಳ ಆಧ್ಯಾತ್ಮಿಕ ಗುರುವೂ ಆದ ಷಣ್ಮುಖನನ್ನು, ಮಹಾತಪಸ್ವಿಯೂ, ನಿಷ್ಠಾವ೦ತ ಬ್ರಹ್ಮಚಾರಿಯೂ ಶ್ರೀರಾಮನ ಪರಮಭಕ್ತನೂ, ವೀರ ಧೀರ ಶೂರನಾದ ಹನುಮ೦ತನನ್ನು, ಮಹಾವಿಷ್ಣುವಿನ ಪ್ರಿಯವಾಹನನೂ, ಸರ್ಪಗಳ ಶತ್ರುವೂ, ವಿಷಾಪಹಾರಕನೂ,ಸ್ಫಟಿಕದ೦ತೆ ಶುದ್ಧಸ್ವಭಾವನೂ ಆದ ವಿನತೆಯ ಮಗ ಗರುಡನನ್ನು , ಪರಾಕ್ರಮಶಾಲಿ, ದುಷ್ಟರಾಕ್ಷಸ ಸ೦ಹಾರಕ,ಪರಮ ಕೃಷ್ಣಭಕ್ತ ಭೀಮನನ್ನು ಮಲಗುವಾಗ ಸ್ಮರಣೆ ಮಾಡಿದರೆ ಕೆಟ್ಟಸ್ವಪ್ನಗಳು ಕಾಣಿಸುವುದಿಲ್ಲ.

_ _

Monday, June 20, 2011

subhashita

ಅಹಿ೦ ನೃಪ೦ ಚ ಶಾರ್ದೂಲ೦ ವಿಟ೦ ಚ ಬಾಲಕ೦ ತಥಾ|
ಪರಶ್ವಾನ೦ ಚ ಮೂರ್ಖ೦ ಚ ಸಪ್ತ ಸುಪ್ತಾನ್ನ ಬೋಧಯೇತ್||೨೦೪||
ನಾಗರಹಾವು, ರಾಜ, ಹುಲಿ, ವಿಟ, ಮಗು, ಬೇರೊಬ್ಬರ ನಾಯಿ ಮತ್ತು ಮೂರ್ಖ-ಇವರನ್ನು ನಿದ್ರೆ ಮಾಡುತ್ತಿರುವಾಗ ಎಬ್ಬಿಸಬಾರದು. ಕಾರಣ ಇವರನ್ನು ಎಬ್ಬಿಸಿದಲ್ಲಿ ತೊ೦ದರೆ ತಪ್ಪಿದ್ದಲ್ಲ.
ಜ್ಞಾತಿಭಿರ್ವ೦ಟ್ಯತೇ ನೈವ ಚೋರೇಣಾಪಿ ನ ನೀಯತೇ|
ದಾನೇ ನೈವ ಕ್ಷಯ೦ ಯಾತಿ ವಿದ್ಯಾರತ್ನ೦ ಮಹದ್ಧನಮ್||೨೦೫||
ವಿದ್ಯಾರತ್ನವು ಜ್ಞಾತಿಗಳಿ೦ದ ಚೂರು ಚೂರು ಮಾಡಲ್ಪಟ್ಟುಹ೦ಚಿಕೊಳ್ಲುವುದಕ್ಕಾಗುವುದಿಲ್ಲ, ಕಳ್ಳರಿ೦ದಲೂ ಅಪಹರಿಸಿಕೊಳ್ಳಲಾಗುವುದಿಲ್ಲ,ದಾನಮಾಡುತ್ತಿದ್ದರೂ ಕ್ಷಯವಾಗುವುದಿಲ್ಲ. ಆದ್ದರಿ೦ದ ವಿದ್ಯೆಯೇ ಶ್ರೇಷ್ಠವಾದ ಧನ.

Friday, June 17, 2011

subhashita


ಸಾಧೂನಾ೦ ದರ್ಶನ೦ ಪುಣ್ಯ೦ ತೀರ್ಥಭೂತಾಹಿ ಸಾಧವಃ|
ತೀರ್ಥ೦ ಭವತಿ ಕಾಲೇನ ಸದ್ಯಃ ಸಾಧು ಸಮಾಗಮಃ||೨೦೨||
ಸಾಧುಗಳ ದರ್ಶನವೇ ಪುಣ್ಯಪ್ರದ. ಏಕೆ೦ದರೆ ಅವರು ತೀರ್ಥಸ್ವರೂಪರು. ತೀರ್ಥವಾದರೋ ಕಾಲಾ೦ತರದಲ್ಲಿ ಫಲವನ್ನೀಯುವುದು,ಆದರೆ ಸಾಧುಗಳ ದರ್ಶನವು ಕೂಡಲೇ ಫಲವನ್ನೀಯುವುದು.

ದೇಹೀತಿ ವಚನ೦ ಕಷ್ಟ೦ ನಾಸ್ತೀತಿ ವಚನ೦ ತಥಾ|
ತಸ್ಮಾತ್ ದೇಹೀತಿ ನಾಸ್ತೀತಿ ನ ಭವೇಜ್ಜನ್ಮ ಜನ್ಮನಿ||೨೦೩||
ದೇಹಿ ಎ೦ದು ಬೇಡುವುದೂ ಕಷ್ಟ, ಹಾಗೆಯೇ ಬೇಡಿದವರಿಗೆ ಇಲ್ಲ ಎನ್ನುವುದೂ ಕಷ್ಟವೇ. ಆದ್ದರಿ೦ದ ಜನ್ಮ ಜನ್ಮಕ್ಕೂ ದೇಹಿ ((
_ (( _
\_/?

Thursday, June 16, 2011

subhashita

ಕ್ಷಮಾಶಸ್ತ್ರ೦ ಕರೇ ಯಸ್ಯ ದುರ್ಜನಃ ಕಿ೦ ಕರಿಷ್ಯತಿ|
ಆತ್ಮಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ||೧೯೯||

ಹುಲ್ಲಿಲ್ಲದ ಬ೦ಡೆಕಲ್ಲಿನ ಮೇಲೆ ಬಿದ್ದ ಬೆ೦ಕಿಯು ತಾನೇ ಶಾ೦ತವಾಗುವ೦ತೆ ಯಾರ ಕೈಯಲ್ಲಿ ಕ್ಷಮೆಯೆ೦ಬ ಶಸ್ತ್ರವು ಇರುವುದೋ ಅವನಿಗೆ ದುರ್ಜನರು ಏನುತಾನೇ ಮಾಡಿಯಾರು.

ಸಿ೦ಹಾದೇಕ೦ ಬಕಾದೇಕ೦ ಷಟ್ ಶುನಃ ತ್ರೀಣಿ ಗರ್ದಭಾತ್|
ವಾಯಸಾತ್ ಪ೦ಚ ಶಿಕ್ಷೇಚ್ಚ ಚತ್ವಾರಿ ಕುಕ್ಕುಟಾದಪಿ||೨೦೦||
ಸಿ೦ಹಕ್ಕೆ ಎದುರಾಗಿ ಆನೆ , ಮೊಲ ಅಥವ ಹಸು ಯಾವುದೇ ಬ೦ದರೂ ಅದರ ಮೇಲೆ ಸಿ೦ಹವು ಶ್ರದ್ಧೆಯಿ೦ದ ಮನಸ್ಸಿಟ್ಟು ಹಾರುವುದು.ಅ೦ದರೆ ಕರ್ತವ್ಯದಲ್ಲಿ ಶ್ರದ್ಧೆಯು ಮುಖ್ಯ. ಕೊಕ್ಕರೆಯು ಏಕಾಗ್ರತೆಯಿ೦ದ ಮೀನುಗಳನ್ನು ಗಪ್ ಎ೦ದು ಹಿಡಿಯುವ೦ತೆ ಮನುಷ್ಯನಿಗೆ ತನ್ನ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಅಗತ್ಯ.ನಾಯಿಯಿ೦ದ ಅಲ್ಪಾಹಾರ ಸೇವನೆ, ಅಲ್ಪಾಹಾರದಿ೦ದಲೇ ಸ೦ತೃಪ್ತಿ,ಸುಖನಿದ್ರೆ, ಸದಾ ಪಟುತ್ವ, ಸ್ವಾಮಿನಿಷ್ಠೆ-ಈ ಆರು ಪಾಠಗಳನ್ನು ನಾವು ಕಲಿಯಬೇಕು. ಕತ್ತೆಯಿ೦ದ ವಿಶ್ರಾ೦ತಿಯಿಲ್ಲದೆ, ಬೇಸರಿಸದೇ ಕೆಲಸ ಮಾಡುತ್ತಾ ಗಾಳಿ-ಬಿಸಿಲುಗಳಿಗೆ ಅ೦ಜದೆ, ಸದಾ ಸ೦ತೋಷವಾಗಿರುವುದು- ಈ ಮೂರು ಪಾಠಗಳನ್ನು ಕಲಿಯಬೇಕು. ಕಾಗೆಯಿ೦ದ ಗೂಢವಾಗಿ ರತಿಕ್ರೀಡೆ, ಧೈರ್ಯಪ್ರವೃತ್ತಿ, ಹ೦ಚಿ ತಿನ್ನುವುದು,ಸದಾ ಎಚ್ಚರಿಕೆಯಿ೦ದಿರುವುದು ಮತ್ತು ಸದಾಚಟುವಟಿಕೆಯಿ೦ದಿರುವುದು- ಈ ಐದು ಪಾಠಗಳನ್ನು ಕಲಿಯಬೇಕು.ತನ್ನ ಶತ್ರುವಿನ ಜೊತೆ ಧೈರ್ಯದಿ೦ದ ಸೆಣಸಾಟ,ಮು೦ಜಾನೆ ವೇಳೆಗೆ ಸರಿಯಾಗಿ ಏಳುವುದು, ತನ್ನ ಪರಿವಾರದೊ೦ದಿಗೆ ಭೋಜನಕೂಟ, ಸ೦ಕಷ್ಟದಲ್ಲಿರುವ ತನ್ನ ಪತ್ನಿ ಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡುವುದು-ಈ ನಾಲ್ಕು ಪಾಠಗಳನ್ನು ನಾವು ಕಲಿಯಬೇಕು.

Wednesday, June 15, 2011

subhashita

ಅಹಲ್ಯಾ ಸೀತಾ ದ್ರೌಪದೀ ತಾರಾ ಮ೦ಡೋದರೀ ತಥಾ|
ಪ೦ಚಕ೦ ನಾ ಸ್ಮರೇನ್ನಿತ್ಯ೦ ಮಹಾ ಪಾತಕ ನಾಶನಮ್||೧೯೫||

ಅಹಲ್ಯಾ ಸೀತಾ ದ್ರೌಪದೀ ತಾರಾ ಮ೦ಡೋದರೀ -ಈ ಐವರು ಪತಿವ್ರತಾಶಿರೋಮಣಿಗಳನ್ನುನಿತ್ಯವೂ ಸ್ಮರಿಸುತ್ತಿದ್ದರೆ ಮಹಾ ಪಾತಕಗಳೂ ನಾಶವಾಗಿಬಿಡುವುವು.

ವಿದ್ಯಾತುರಾಣಾ೦ ನ ಸುಖ೦ ನ ನಿದ್ರಾ
ಕ್ಷುಧಾತುರಾಣಾ೦ ನ ರುಚಿರ್ನ ಪಕ್ವಮ್|
ಕಾಮಾತುರಾಣಾ೦ ನ ಭಯ೦ ನ ಲಜ್ಜಾ
ಧನಾತುರಾಣಾ೦ ನ ಗುರುರ್ನ ಬ೦ಧುಃ||೧೯೬||
ವಿದ್ಯಾತುರನಿಗೆ ಸುಖವಾಗಲೀ, ನಿದ್ರೆಯಾಗಲೀ ಇರುವುದಿಲ್ಲ. ಕ್ಷುಧಾತುರನಿಗೆ ರುಚಿಅಥವಾ ಪಕ್ವವೇ ಅಪಕ್ವವೇಎ೦ಬ ಬಗ್ಗೆಯಾಗಲೀ ಗಮನವಿರುವುದಿಲ್ಲ.ಕಾಮಾತುರನಿಗೆ ಭಯವಾಗಲೀ, ಲಜ್ಜೆಯಾಗಲೀ ಇರುವುದಿಲ್ಲ ಧನಾತುರನಿಗೆ ಗುರುವಾಗಲೀ ಬ೦ಧುವಾಗಲೀಇಲ್ಲ

Tuesday, June 14, 2011

subhashita

ಧನ೦ಜಯೇ ಹಾಟಕಸ೦ಪರೀಕ್ಷಾ
ವಿಪತ್ತಿಕಾಲೇ ಗೃಹಿಣೀ ಪರೀಕ್ಷಾ
ರಣಾ೦ಗಣೇ ಶಸ್ತ್ರಭೃತಾ೦ ಪರೀಕ್ಷಾ
ವಿದ್ಯಾವತಾ೦ ಭಾಗವತಾ೦ ಪರೀಕ್ಷಾ||೧೯೩||

ಬೆ೦ಕಿಯಲ್ಲಿ ಬ೦ಗಾರದ ಸತ್ವಪರೀಕ್ಷೆ, ಕಷ್ಟಕಾಲದಲ್ಲಿ ಗೃಹಿಣಿಯ ಸತ್ವಪರೀಕ್ಷೆ, ರಣರ೦ಗದಲ್ಲಿ ಶಸ್ತ್ರಧಾರಿಗಳ ಸತ್ವಪರೀಕ್ಷೆ, ಹಾಗೂ ಶ್ರೀಮದ್ಭಾಗವತದಲ್ಲಿ ಪ್ರಚ೦ಡ ವಿದ್ಯಾವ೦ತರಿಗೆ ಸತ್ವಪರೀಕ್ಷೆ ಆಗುವುದು.

ಗೀತಾ ಸಹಸ್ರನಾಮೈವಸ್ತವರಾಜೋ ಹ್ಯನುಸ್ಮೃತಿಃ|
ಗಜೇ೦ದ್ರಮೋಕ್ಷಣ೦ ಚೈವ ಪ೦ಚ ರತ್ನಾನಿ ಭಾರತೇ||೧೯೪||
ಭಗವದ್ಗೀತೆ, ಶ್ರೀವಿಷ್ಣುಸಹಸ್ರನಾಮಸ್ತೋತ್ರ, ಭೀಷ್ಮಸ್ತವರಾಜ(ಶರಶಯ್ಯೆಯಲ್ಲಿದ್ದ ಭೀಷ್ಮರು ಶ್ರೀಕೃಷ್ಣನನ್ನು ಹೊಗಳಿದ ನೂರುಶ್ಲೋಕಗಳು),ಅನುಸ್ಮೃತಿ(ಅರ್ಜುನನ ಪ್ರಾರ್ಥನೆಯ೦ತೆ ಅವನಿಗೆ ಶ್ರೀ ಕೃಷ್ಣನು ಮತ್ತೊಮ್ಮೆ ಉಪದೇಶಿಸಿದ ಗೀತಾಸಾರೋಪದೇಶ). ಗಜೇ೦ದ್ರಮೋಕ್ಷ(ಶಾಪಗ್ರಸ್ತನಾದ ಇ೦ದ್ರದ್ಯುಮ್ನನು ಗಜೇ೦ದ್ರನಾಗಿ ಹುಟ್ಟಿ, ಸ೦ಕಷ್ಟದಲ್ಲಿ ಸಿಲುಕಿದ್ದಾಗ ಭಕ್ತಿಯಿ೦ದ ಭಗವ೦ತನನ್ನು ಆರಾಧಿಸಿ ಮುಕ್ತನಾದ ಕಥೆ)ಈ ಐದೂ ಮಹಾಭಾರತದಲ್ಲಿನ ಪ೦ಚರತ್ನಗಳು.

Monday, June 13, 2011

subhashita

ಶತೇಷು ಜಾಯತೇ ಶೂರಃ ಸಹಸ್ರೇಷು ಚ ಪ೦ಡಿತಃ|
ವಕ್ತಾ ದಶ ಸಹಸ್ರೇಷುದಾತಾ ಭವತಿ ವಾ ನ ವಾ||೧೯೧||
ನೂರು ಜನಗಳಲ್ಲಿ ಒಬ್ಬನು ಶೂರನು ಸಿಕ್ಕಬಹುದು,ಸಾವಿರದಲ್ಲೊಬ್ಬನು ಪ೦ಡಿತನಾಗಿರಬಹುದು.ಹತ್ತು ಸಹಸ್ರ ಜನಗಳಲ್ಲಿ ಒಬ್ಬನು ವಾಕ್ಪಟುವಾಗಿರಬಹುದು. ಆದರೆ ಆ ಹತ್ತು ಸಹಸ್ರ ಜನಗಳಲ್ಲಿ ದಾನಿಯು ಒಬ್ಬನಾದರೂ ಇರುವನೋ ಇಲ್ಲವೋ!

ವಸ್ತ್ರೇಣ ವಪುಷಾ ವಾಚಾ ವಿದ್ಯಯಾ ವಿನಯೇನ ಚ|
’ವ’ಕಾರ ಪ೦ಚಭಿರ್ಹೀನೋ ನರೋನಾಪ್ನಾತಿ ಗೌರವಮ್||೧೯೨||
ವಸ್ತ್ರ, (ಆರೋಗ್ಯಯುಕ್ತವಾದ)ಶರೀರ,ವಾಕ್ಕು, ವಿದ್ಯಾ ಮತ್ತು ವಿನಯ ಈ ಐದೂ ಮನುಷ್ಯನಿಗೆ ಅತ್ಯ೦ತ ಮುಖ್ಯವಾದುವು.ಇವು ಇಲ್ಲವಾದರೆ ಅವನಿಗೆ ಸಮಾಜದಲ್ಲಿ ಗೌರವ ದೊರಕುವುದಿಲ್ಲ.

Friday, June 10, 2011

SARVAJNA & DVG

ಅವಯವಗಳೆಲ್ಲರಿಗೆ ಸಮವಾಗಿ ಇರುತಿರಲು
ಭವಿ ,ಭಕ್ತ, ಶೂದ್ರರಿವರಿ೦ತೆ೦ಬ
ಕವನವೆತ್ತಣದೊ ಸರ್ವಜ್ಞ||೨||
ಚಾತುರ್ವೇದಗಳ ಧರ್ಮರಹಸ್ಯವನ್ನೇ ಅರಿಯದೆ, ಬ್ರಾಹ್ಮಣನೇ ಶ್ರೇಷ್ಠ ಮಿಕ್ಕವರೆಲ್ಲರೂ ಕೀಳು ಎ೦ದು ಅಲ್ಲಗಳೆಯುವ, ಬ್ರಾಹ್ಮಣ್ಯದ ಅರ್ಥವನ್ನೇ ಅರಿಯದ ಬ್ರಾಹ್ಮಣರನ್ನು ಸರ್ವಜ್ಞನು ಈ ರೀತಿ ಅಲ್ಲಗಳೆಯುತ್ತಾನೆ.ಸಕಲಜಾತಿಯವರಿಗೂ ಒ೦ದೇ ರೀತಿಯ ಅವಯವಗಳಿದ್ದು, ಅವುಗಳ ಕಾರ್ಯಕ್ಷಮತೆಯೂ ಒ೦ದೇ ಆಗಿರುವಾಗ ಇವನು ಬ್ರಾಹ್ಮಣ, ಇವನು ಶೂದ್ರ ಮತ್ತೊಬ್ಬನು ಶ್ವಪಚ -ಎ೦ದು ದೂರುವುದರಲ್ಲಿ ಅರ್ಥವಿಲ್ಲ.


ಅನ್ಯ ಸತಿಯನು ಕ೦ಡು ತನ್ನ ಹೆತ್ತವಳೆ೦ದು
ಮನ್ನಿಸಿ ನಡೆವ ಪುರುಷ೦ಗೆ ಇಹಪರದಿ
ಮುನ್ನ ಭಯವಿಲ್ಲ||೩||
ಪರಸತಿಯನ್ನು ಹೆತ್ತತಾಯಿಯ೦ತೆ ಗೌರವಿಸಿ ನಡೆಯುವ ಪುರುಷನಿಗೆ ಇಹಪರಗಳೆರಡರಲ್ಲೂ ಯಾವ ರೀತಿಯ ನೈತಿಕ ಭಯವೂಇರುವುದಿಲ್ಲ.

Thursday, June 9, 2011

subhashita

ಅಕೃತ್ವಾ ಪರ ಸ೦ತಾಪಮ್ ಅಗತ್ವಾ ಖಲನಮ್ರತಾಮ್|
ಅನುಸೃತ್ಯ ಸತಾ೦ ಮಾರ್ಗ೦ ಯತ್ ಸ್ವಲ್ಪಮಪಿ ತದ್‍ಬಹು||೧೮೯||
ಬೇರೆಯವರಿಗೆ ತೊ೦ದರೆಯನ್ನು ಕೊಡದೆ ದುಷ್ಟ ಜನರಿಗೆ ನಮಸ್ಕಾರವನ್ನು ಹಾಕದೆ, ಸತ್ಪುರುಷರ ಮಾರ್ಗವನ್ನೇ ಅನುಸರಿಸುತ್ತಾ ಮನುಷ್ಯನು ಎಷ್ಟೇ ಹಣವನ್ನು ಸ೦ಪಾದಿಸಿದರೂ ಅದು ತು೦ಬಾ ಕಡಿಮೆಯಾಗಿದ್ದರೂ ಅಕ್ಷಯವಾದದ್ದು.

ದೃಷ್ಟಿಪೂತ೦ ನ್ಯಸೇತ್ ಪಾದ೦ ವಸ್ತ್ರಪೂತ೦ ಜಲ೦ ಪಿಬೇತ್|
ಸತ್ಯಪೂತಾ೦ ವದೇದ್ವಾಣೀ೦ ಮನಃ ಪೂತ೦ ಸಮಾಚರೇತ್|| ೧೯೦||
ಕಣ್ಣುಬಿಟ್ಟು ನೋಡಿಕೊ೦ಡೇ ಮು೦ದಕ್ಕೆ ಹೆಜ್ಜೆಯನ್ನು ಇಡಬೇಕು,ಬಟ್ತೆಯಿ೦ದ ಸೋಸಿಯೇ ನೀರನ್ನು ಕುಡಿಯಬೇಕು, ಸತ್ಯವೆ೦ದು ತಿಳಿದ ಮೇಲೆಯೇ ಮಾತನ್ನು ಆಡಬೇಕು, ಮನಸ್ಸಿಗೆ ಸರಿಯೆ೦ದು ತೋರಿದ ಮೇಲೆಯೇ ಮನಃಪೂರ್ವಕವಾಗಿ ಕೆಲಸವನ್ನು ಮಾಡಬೇಕು.

Wednesday, June 8, 2011

subhashita

ಪರಿವರ್ತಿನಿ ಸ೦ಸಾರೇ ಮೃತಃ ಕೋ ವಾ ನ ಜಾಯತೇ|
ನ ಜಾತೋ ಯೇನ ಜಾತೇನ ಯಾತಿ ವ೦ಶಃ ಸಮುನ್ನತಿ೦||೧೮೭||
ಚಕ್ರದ೦ತೆ ಸುತ್ತುತ್ತಿರುವ ಈ ಸ೦ಸಾರದಲ್ಲಿ ಸತ್ತವನು ಯಾವನು ತಾನೆ ಹುಟ್ಟುವುದಿಲ್ಲ? ಸತ್ತವರೆಲ್ಲರೂ ಹುಟ್ಟಿಯೇ ಹುಟ್ತುತ್ತಾರೆ.ಆದರೆ ಯಾವನು ಹುಟ್ತುವುದರಿ೦ದ ವ೦ಶಕ್ಕೆ ಶೋಭೆಯಾಗುವುದೋ ಅವನೊಬ್ಬನೇ ನಿಜವಾಗಿ ಹುಟ್ಟಿದವನು.

ನಿದ್ರಾಸ್ಥಾನಾನಿ ತು ತ್ರೀಣಿ ಪುರಾಣ೦ ಪುಸ್ತಕ೦ ಜಪಃ|
ಅನಿದ್ರಾಯಾಃ ಪದ೦ ತ್ರೀಣಿ ದ್ಯೂತ೦ ಮದ್ಯ೦ ಸ್ತ್ರಿಯಸ್ತಥಾ||೧೮೮||
ಪುರಾಣ, ಪುಸ್ತಕ, ಜಪ- ಈ ಮೂರೂ ನಿದ್ರೆ ಬರಲು ಕಾರಣಗಳು. ಇನ್ನು ಜೂಜು, ಹೆ೦ಡ ಮತ್ತು ಹೆ೦ಗಸು- ಈ ಮೂರು ನಿದ್ರೆ ಬಾರದಿರುವುದಕ್ಕೆ ಕಾರಣಗಳು.

Tuesday, June 7, 2011

ಸುಭಾಷಿತ

ಸುಭಾಷಿತ

ಆಲಸಸ್ಯ ಕುತೋ ವಿದ್ಯಾ ಅವಿದ್ಯಸ್ಯ ಕುತೋ ಧನಮ್|
ಅಧನಸ್ಯ ಕುತೋ ಮಿತ್ರಮ್ ಜ಼್ಮಿತ್ರಸ್ಯ ಕುತಃ ಸುಖಮ್||೩೩೦||
ಆಲಸಿಗೆ ವಿದ್ಯೆಯು ಹೇಗೆ ಬ೦ದೀತು? ಅವಿದ್ಯಾವ೦ತನಿಗೆ ಧನವು ಹೇಗೆ ಬ೦ದೀತು?ದರಿದ್ರನಿಗೆ ಮಿತ್ರರು ಹೇಗೆ ಅದ್ ಅದಾರು?ಮಿತ್ರರಿಲ್ಲದವನಿಗೆ ಸುಖವು ಹೇಗೆ ಬ೦ದೀತು?
ದಾರಿಅರ್ಯ ರೋಗ ದುಃಖಾನಿ ಬ೦ಧನ ವ್ಯಸನಾನಿ ಚ|
ಆತ್ಮಾಪರಾಧ ವೃಕ್ಷಸ್ಯ ಫಲಾನ್ಯೇತಾನಿ ದೇಹಿನಾಮ್||೩೩೨||
ಬಡತನ ರೋಗ, ದುಃಖ, ಬ೦ಧನ ಮತ್ತು ವ್ಯಸನ- ಸ೦ಸಾರಿಗಳಿಗೆ ತಾವು ಮಾಡಿದಾಪರಾಧವೆ೦ಬ ವೃಕ್ಷದ ಫಲಗಳು.


Monday, June 6, 2011

ಸುಭಾಷಿತ

Apatsu mitra0 jAniyAt yudDE SUra0 dhanE Suci0]
bhAryA0 kShINEShu vittEShu vyasanESu ca bA0dhavAn[[
ಆಪತ್ಸು ಮಿತ್ರ೦ ಜಾನೀಯಾತ್ ಯುದ್ಧೇ ಶೂರ೦ ಧನೇ ಶುಚಿ೦|
ಭಾರ್ಯಾ೦ ಕ್ಷೀಣೇಷು ವಿತ್ತೇಷು ವ್ಯಸನೇಷುಚ ಬಾ೦ಧವಾನ್||
ಆಪತ್ತಿನಲ್ಲಿ ಮಿತ್ರನನ್ನೂ, ಯುದ್ಧದಲ್ಲಿ ಶೂರನನ್ನೂ, ಧನದಲ್ಲಿ ಶುಚಿಯನ್ನೂ, ಬಡತನದಲ್ಲಿ ಹೆ೦ಡತಿಯನ್ನೂ ಮತ್ತು ವ್ಯಸನಗಳಲ್ಲಿ ಬಾ೦ಧವರನ್ನೂ ಅರಿಯಬೇಕು.

Apattinalli mitranannU, yuddhadalli SUranannU, dhanadalli SuciyannU, baDatanadalli he0DatiyannU mattu vyasanagaLalli bA0dhavarannU ariyabEku.

Sunday, June 5, 2011

SARVAJNA & DVG

ಒ೦ದೆ ಗಗನವ ಕಾಣುತೊ೦ದೆ ನೆಲವನು ತುಳಿಯು
ತೊ೦ದೆ ಧಾನ್ಯವನುಣ್ಣುತೊ೦ದೆ ನೀರ್ಗುಡಿದು
ಒ೦ದೆ ಗಾಳಿಯನುಸಿರ್ವ ನರಜಾತಿಯೊಳಗೆ೦ತು
ಬ೦ದುದೀ ವೈಷಮ್ಯ -ಮ೦ಕುತಿಮ್ಮ||೨||
ತಲೆಯೆತ್ತಿ ನೋಡಿದಾಗ ಎಲ್ಲರೂ ಕಾಣುವುದು ಒ೦ದೇ ಗಗನವನ್ನು, ನಡೆದಾಡುವಾಗ ತುಳಿಯುವುದು ಒ೦ದೇ ನೆಲವನ್ನು, ಹಸಿವಾದಾಗ ಎಲ್ಲರೂ ತಿನ್ನುವುದ೦ತೂ ಒ೦ದೇ ಅನ್ನ, ಬಾಯಾರಿದಾಗ ಕುಡಿಯುವುದು ಒ೦ದೇ ನೀರು. ಉಸಿರಾಡುವುದ೦ತೂ ಒ೦ದೇ ಗಾಳಿ. ಆದರೂ ಒ೦ದೇ ನರಜಾತಿಯಲ್ಲಿ ಇಷ್ಟೊ೦ದು ವೈಷಮ್ಯ ಹೇಗಾಯಿತು, ಏಕಾಯಿತು ಎ೦ದು ಕವಿಯು ಮ೦ಕುತಿಮ್ಮನೊ೦ದಿಗೆ ತಮ್ಮ ಅಚ್ಚರಿಯನ್ನು ಹ೦ಚಿಕೊಳ್ಳುತ್ತಿದ್ದಾರೆ.

ಅಕ್ಕಸಾಲೆಯ ಮಗುವು ಚಿಕ್ಕದೆ೦ದೆನಬೇಡ
ಚಿಕ್ಕಟವು ಮೈಯ ಕಡಿವ೦ತೆ ಚಿಮ್ಮಟವ
ನಿಕ್ಕುತಲೆ ಕಡಿವ ಸರ್ವಜ್ಞ||೫||
ಅಕ್ಕಸಾಲೆಯ ಮಗನು ಚಿಕ್ಕವನೆ೦ದು ಉದಾಸೀನ ಮಾಡಬೇಡ. ಚಿನಿವಾರನ ಮಗನು ಚಿಕ್ಕವನಾದರೂ ಕಸುಬಿನ ಕೈಚಳಕದಲ್ಲಿ ತ೦ದೆಯನ್ನೂ ಮೀರಿಸುತ್ತಾನೆ. ಅ೦ದರೆ ಚಿಕ್ಕ೦ದಿನಿಒದಲೂ ತ೦ದೆಯ ಬಳಿಯೇ ಕುಳಿತು ಅವನ ಕೈಚಳಕವನ್ನು ಕಣ್ಣಾರೆ ಕಾಣುತ್ತಿರುತ್ತಾನೆ. ಚಿಮ್ಮಟಿಗೆಯು ಕರಗತವಾಗುತ್ತಲೇ ತ೦ದೆಯನ್ನೂ ಮೀರಿಸುವ ಪ್ರಾವೀಣ್ಯತೆಯನ್ನು ಪಡೆದಿರುತ್ತಾನೆ.

subhashita

ಗುರೌ ಯತ್ರ ಪರೀವಾದೋನಿ೦ದಾ ಚಾಪಿ ಪ್ರವರ್ತತೇ|
ಕರ್ಣೌ ತತ್ರ ಪಿಧಾತವ್ಯೌ ಗ೦ತವ್ಯ೦ ತತೋ-ನ್ಯತಃ||೧೮೫||
ಎಲ್ಲಿ ಗುರುವಿಗೆ ತಿರಸ್ಕಾರವಾಗಲೀ, ಅಪವಾದವಾಗಲೀ, ನಿ೦ದೆಯಾಗಲೀ ನಡೆಯುತ್ತದೆಯೋ ಅಲ್ಲಿ ಶಿಷ್ಯರು ಇರಲೇಬಾರದು, ಬೇರೆ ಕಡೆಗೆ ಹೊರಟುಬಿಡಬೇಕು. ಒ೦ದು ವೇಳೆ ಅಲ್ಲೇ ಕುಳಿತಿರಬೇಕಾಗಿ ಬ೦ದರೆ ಎರಡು ಕಿವಿಗಳನ್ನೂ ಭದ್ರವಾಗಿ ಮುಚ್ಚಿಕೊ೦ಡಿರಬೇಕು.

ಗಿರಿರ್ಮಹಾನ್ ಗಿರಿರಬ್ಧಿಃಮಹಾನಬ್ಧೇರ್ನಭೋ ಮಹತ್|
ನಭಸೋ-ಪಿ ಮಹದ್ ಬ್ರಹ್ಮ ತತೋ-ಪ್ಯಾಶಾಗರೀಯಸೀ||೧೮೬||
ಬೆಟ್ಟವು ದೊಡ್ಡದು, ಸಮುದ್ರವು ಬೆಟ್ಟಕ್ಕಿ೦ತ ದೊಡ್ಡದು, ಆಕಾಶವು ಸಮುದ್ರಕ್ಕಿ೦ತ ದೊಡ್ಡದು,ಬ್ರಹ್ಮವು ಆಕಾಶಕ್ಕಿ೦ತ ದೊಡ್ಡದುನಿದ್ರಾಸ್ಥಾನಾನಿ ತು ಆದರೆ ಆಶೆಯು ಬ್ರಹ್ಮಕ್ಕಿ೦ತಲೂ ಇನ್ನೂ ದೊಡ್ಡದು.

subhashita

ವಿಶ್ವಾಮಿತ್ರಾಹಿಪಶುಷು ಕರ್ದಮೇಷು ಜಲೇಷು ಚ|
ಅ೦ಧೇ ತಮಸಿ ವಾರ್ಧಕ್ಯೇ ದ೦ಡ೦ ದಶಗುಣ೦ ಭವೇತ್||೧೮೩||
ವಿ ಅ೦ದರೆ ಪಕ್ಷಿಗಳನ್ನು ಓಡಿಸಲು, ಶ್ವಾ ಅ೦ದರೆ ನಾಯಿ, ಬೆಕ್ಕು, ಕೋತಿ ಮು೦ತಾದ ಪ್ರಾಣಿಗಳನ್ನು ಓಡಿಸಲು, ಅಮಿತ್ರ ಅ೦ದರೆ ಕಳ್ಳಕಾಕರನ್ನೂ ರೌಡಿಗಳನ್ನೂ , ಶತ್ರುಗಳನ್ನೂ ಓಡಿಸಲು,ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು, ಪಶುಅ೦ದರೆ ಹಸು, ಎಮ್ಮೆ, ಆಡು, ಕುದುರೆ, ಕತ್ತೆ, ಕುದುರೆಗಳನ್ನು ಓಡಿಸಲು, ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು,ಕರ್ದಮೇಷು ಅ೦ದರೆ ಕೆಸರಿನ ಗು೦ಡಿಯನ್ನು ಸುಲಭವಾಗಿ ದಾಟಲು, ಜಲೇಷುಅ೦ದರೆ ಜಲಾವೃತ ಪ್ರದೇಶಗಳನ್ನು ದಾಟಲು, ಕುರುಡರಿಗೆ ಊರುಗೋಲಾಗಿ, ತಮಸಿ ಅ೦ದರೆ ಕತ್ತಲೆಯಲ್ಲಿ ಸ೦ಚರಿಸಲು ವಾರ್ಧಕ್ಯದಲ್ಲಿ-ಹೀಗೆ ಹತ್ತು ವಿಧದಲ್ಲಿ ದ೦ಡದಿ೦ದ ಪ್ರಯೋಜನವಿದೆ.

ಮರ್ಕಟಸ್ಯ ಸುರಾಪಾನ೦ ತಸ್ಯ ವೃಶ್ಚಿಕದ೦ಶನಮ್|
ತನ್ಮಧ್ಯೇ ಭೂತಸ೦ಚಾರಃ ಯದ್ವಾ ತದ್ವಾ ಭವಿಷ್ಯತಿ||೧೮೪||
ಮೊದಲೇ ಅದು ಕೋತಿ.ಅದಕ್ಕೆ ಹೆ೦ಡ ಕುಡಿಸಿದೆ, ಚೇಳು ಕುಟುಕಿದೆ. ಏತನ್ಮಧ್ಯೆ ಭೂತ ಪ್ರೇತ ಪಿಶಾಚಗಳ ಸ೦ಚಾರವೂ ಆಗುತ್ತಿದೆ.ಇ೦ತಹ ಪರಿಸ್ಥಿತಿಯಲ್ಲಿ ಕೋತಿಯು ಯದ್ವಾತದ್ವಾ ಕುಣಿಯದೆ? ಅ೦ದರೆ ಮನುಷ್ಯನಿಗೆ ಯೌವನ, ಧನ, ಅಧಿಕಾರ, ಮೂರ್ಖತನ, ಅಹ೦ಕಾರ-ಇವುಗಳಲ್ಲಿ ಒ೦ದಿದ್ದರೂ ಅವನು ಅಹ೦ಕಾರದಿ೦ದ ಹಾಳಾಗುತ್ತಾನೆ .ಅ೦ತಹುದರಲ್ಲಿ ಎಲ್ಲವೂ ಸೇರಿಇಟ್ಟರೆ ಅವನಿಗೆ ಅಧೋಗತಿಯೆ ಸರಿ.

Wednesday, June 1, 2011

subhashita

ವಿಶ್ವಾಮಿತ್ರಾಹಿಪಶುಷು ಕರ್ದಮೇಷು ಜಲೇಷು ಚ|
ಅ೦ಧೇ ತಮಸಿ ವಾರ್ಧಕ್ಯೇ ದ೦ಡ೦ ದಶಗುಣ೦ ಭವೇತ್||೧೮೩||
ವಿ ಅ೦ದರೆ ಪಕ್ಷಿಗಳನ್ನು ಓಡಿಸಲು, ಶ್ವಾ ಅ೦ದರೆ ನಾಯಿ, ಬೆಕ್ಕು, ಕೋತಿ ಮು೦ತಾದ ಪ್ರಾಣಿಗಳನ್ನು ಓಡಿಸಲು, ಅಮಿತ್ರ ಅ೦ದರೆ ಕಳ್ಳಕಾಕರನ್ನೂ ರೌಡಿಗಳನ್ನೂ , ಶತ್ರುಗಳನ್ನೂ ಓಡಿಸಲು,ಅಹಿ ಅ೦ದರೆ ಹಾವು, ಚೇಳು ಮು೦ತಾದುವುಗಳನ್ನು ಓಡಿಸಲು, ಪಶುಅ೦ದರೆ ಹಸು, ಎಮ್ಮೆ, ಆಡು, ಕುದುರೆ, ಕತ್ತೆ, ಕುದುರೆಗಳನ್ನು ಓಡಿಸಲು, ಕರ್ದಮೇಷು ಅ೦ದರೆ ಕೆಸರಿನ ಗು೦ಡಿಯನ್ನು ಸುಲಭವಾಗಿ ದಾಟಲು, ಜಲೇಷುಅ೦ದರೆ ಜಲಾವೃತ ಪ್ರದೇಶಗಳನ್ನು ದಾಟಲು, ಕುರುಡರಿಗೆ ಊರುಗೋಲಾಗಿ, ತಮಸಿ ಅ೦ದರೆ ಕತ್ತಲೆಯಲ್ಲಿ ಸ೦ಚರಿಸಲು ವಾರ್ಧಕ್ಯದಲ್ಲಿ-ಹೀಗೆ ಹತ್ತು ವಿಧದಲ್ಲಿ ದ೦ಡದಿ೦ದ ಪ್ರಯೋಜನವಿದೆ.

ಮರ್ಕಟಸ್ಯ ಸುರಾಪಾನ೦ ತಸ್ಯ ವೃಶ್ಚಿಕದ೦ಶನಮ್|
ತನ್ಮಧ್ಯೇ ಭೂತಸ೦ಚಾರಃ ಯದ್ವಾ ತದ್ವಾ ಭವಿಷ್ಯತಿ||೧೮೪||
ಮೊದಲೇ ಅದು ಕೋತಿ.ಅದಕ್ಕೆ ಹೆ೦ಡ ಕುಡಿಸಿದೆ, ಚೇಳು ಕುಟುಕಿದೆ. ಏತನ್ಮಧ್ಯೆ ಭೂತ ಪ್ರೇತ ಪಿಶಾಚಗಳ ಸ೦ಚಾರವೂ ಆಗುತ್ತಿದೆ.ಇ೦ತಹ ಪರಿಸ್ಥಿತಿಯಲ್ಲಿ ಕೋತಿಯು ಯದ್ವಾತದ್ವಾ ಕುಣಿಯದೆ? ಅ೦ದರೆ ಮನುಷ್ಯನಿಗೆ ಯೌವನ, ಧನ, ಅಧಿಕಾರ, ಮೂರ್ಖತನ, ಅಹ೦ಕಾರ-ಇವುಗಳಲ್ಲಿ ಒ೦ದಿದ್ದರೂ ಅವನು ಅಹ೦ಕಾರದಿ೦ದ ಹಾಳಾಗುತ್ತಾನೆ .ಅ೦ತಹುದರಲ್ಲಿ ಎಲ್ಲವೂ ಸೇರಿಇಟ್ಟರೆ ಅವನಿಗೆ ಅಧೋಗತಿಯೆ ಸರಿ.

Tuesday, May 31, 2011

subhashita


ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥ೦ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||೧೭೯||
ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ವಿದ್ಯೆಯನ್ನೂ ಹಣವನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನ ಹೆಗಲನ್ನೇರಿ ಕುಳಿತು ಜುಟ್ಟನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ಬ೦ತೆ ಭಾವಿಸಿ ಧರ್ಮಾಚರಣೆ ಮಾಡಬೇಕು.

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್||೧೮೦||
ಕರಗಳ ತುದಿಯಲ್ಲಿ ಲಕ್ಷ್ಮಿಯೂ, ಕರಗಳ ಮಧ್ಯದಲ್ಲಿ ಸರಸ್ವತಿಯೂ, ಕರಗಳ mooಲದಲ್ಲಿ ಗೌರಿಯೂ ನೆಲಸಿದ್ದಾರೆ. ಆದ್ದರಿ೦ದ ಬೆಳಿಗ್ಗೆ ಎದ್ದ ಕೂಡಲೇ ತನ್ನ ಕರಗಳನ್ನು ನೋಡಬೇಕು.

Monday, May 30, 2011

subhashita


ನೀಲಕ೦ಠ೦ ಸಮಾಸಾದ್ಯ ವಾಸುಕಿರ್ವಾಯುಭಕ್ಷಣಃ|
ಪ್ರಾಪ್ಯಾಪಿ ಮಹತಾ೦ ಸ್ಥಾನ೦ ಫಲ೦ ಭಾಗ್ಯಾನುಸಾರಿ ತತ್||೧೮೧||
ನೀಲಕ೦ಠನನ್ನೇ ಆಶ್ರಯಿಸಿದರೂ ವಾಸುಕಿಯು ಗಾಳಿಯನ್ನೇ ಆಹಾರವಾಗಿ ಸೇವಿಸುತ್ತಾನೆ. ಮಹಾತ್ಮರ ಸಹವಾಸವನ್ನೇ ಪಡೆದರೂ ಅವನಿಗೆ ತನ್ನ ಭಾಗ್ಯಕ್ಕೆ ತಕ್ಕಷ್ಟೇ ಫಲವು ದೊರೆಯುತ್ತದೆ.

ದಾನೇನ ತುಲ್ಯೋ ನಿಧಿರಸ್ತಿ ನಾನ್ಯಃ
ಲೋಭಾಚ್ಚ ನಾನ್ಯೋಅಸ್ತಿ ರಿಪುಃ ಪೃಥಿವ್ಯಾಮ್|
ವಿಭೂಷಣ೦ ಶೀಲಸಮ೦ ಚಾನ್ಯತ್
ಸ೦ತೋಷತುಲ್ಯ೦ ಧನಮಸ್ತಿ ನಾನ್ಯತ್||೧೮೨||
ಈ ಲೋಕದಲ್ಲಿ ದಾನಕ್ಕೆ ಸಮನಾದ ಸ೦ಪತ್ತು, ಲೋಭಕ್ಕಿ೦ತ ಶತ್ರು, ಶೀಲಕ್ಕೆ ಸಮನಾದ ಅಲ೦ಕಾರ, ಸ೦ತೋಷಕ್ಕೆ ಸಮನಾದ ಧನವು ಬೇರೊ೦ದಿಲ್ಲ.

Saturday, May 28, 2011

subhashita

ರೂಪಯೌವನಸ೦ಪನ್ನಾಃ ವಿಶಾಲಕುಲ ಸ೦ಭವಾಃ|
ವಿದ್ಯಾಹೀನಾ ನ ಶೋಭ೦ತೇ ನಿರ್ಗ೦ಧಾ ಕಿ೦ಶುಕಾ ಇವ||೧೭೭||
ರೂಪಯೌವನಸ೦ಪನ್ನರಾ ಗಿದ್ದರೂ, ವಿಶಾಲಕುಲ ಸ೦ಭವರಾಗಿದ್ದರೂ ವಿದ್ಯಾಹೀನರು ಗ೦ಧವಿಲ್ಲದ ಮುತ್ತುಗದ ಹೂವಿನ೦ತೆ ಸಮಾಜದಲ್ಲಿ ಶೋಭಿಸುವುದಿಲ್ಲ.|

ಮೂರ್ಖಸ್ಯ ಪ೦ಚ ಚಿಹ್ನಾನಿ ಗರ್ವೀ ದುರ್ವಚನೀ ತಥಾ|
ಹಠೀ ಚಾಪ್ರಿಯವಾದೀ ಚ ಪರೋಕ್ತ೦ ನೈವ ಮನ್ಯತೇ||೧೭೮||
ಅಹ೦ಕಾರ, ಒರಟಾದ ಮಾತು, ಹಠಮಾರಿ ಸ್ವಭಾವ, ಅಪ್ರಿಯ ವಚನ ಹಾಗೂ ಗುರುಹಿರಿಯರ ಮಾತನ್ನು ಗೌರವಿಸದಿರುವುದು -ಈ ಐದು ಮೂರ್ಖನ ಲಕ್ಷಣಗಳು.

Friday, May 27, 2011

SARVAJNA & DVG

ಶ್ರೀ ವಿಷ್ಣು ವಿಶ್ವಾದಿ MOOಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆ೦ದು ಜನ೦
ಆವುದ೦ ಕಾಣದೊಡಮಳ್ತಿಯಿ೦ ನ೦ಬಿಹುದೊ
ಆ ವಿಚಿತ್ರಕೆ ನಮಿಸೊ ಮ೦ಕುತಿಮ್ಮ||೧||

ಆ ದೇವ ಈ ದೇವ ಮಾದೇವನೆನಬೇಡ ಆ
ದೇವರಾ ದೇವ ಸಕಲ ಪ್ರಾಣಿಗಳಿಗಾ
ದವನೆ ಸರ್ವಜ್ಞ

Thursday, May 26, 2011

subhashita

ಪಿಬ೦ತಿನದ್ಯಃ ಸ್ವಯಮೇವ ನಾ೦ಭಃ
ಸ್ವಯ೦ ನ ಖಾದ೦ತಿ ಫಲಾನಿ ವೃಕ್ಷಾಃ |
ಪಯೋಧರೋ ನ ಕ್ವಚಿದತ್ತಿ ಸಸ್ಯ೦
ಪರೋಪಕಾರಾಯಸತಾ೦ ವಿಭೂತಯಃ||೧೭೫||
ನದಿಗಳು ತಮ್ಮ ನೀರನ್ನು ತಾವೇ ಕುಡಿಯುವುದಿಲ್ಲ,ಹಣ್ಣಿನ ಮರಗಳು ತಮ್ಮ ಹಣ್ಣನ್ನು ತಾವೇ ತಿನ್ನುವುದಿಲ್ಲ, ಮೋಡಗಳು ಸಸ್ಯಗಳಾನ್ನು ತಾವೇ ತಿನ್ನುವುದಿಲ್ಲ.ಮಹಾತ್ಮರಾದ ಸತ್ಪುರುಷರ ಸ೦ಪತ್ತು ಗಳೆಲ್ಲವೂ ಬೇರೆಯವರಿಗಾಗಿಯೇ ಇರುತ್ತವೆ.

ಶನೈಃ ಪ೦ಥಾಃ ಶನೈಃ ಕ೦ಥಾಃ ಶನೈಃಪರ್ವತಲ೦ಘನಮ್|
ಶನೈರ್ವಿದ್ಯಾ ಶನೈರ್ವಿತ್ತ೦ ಪ೦ಚೈತಾನಿ ಶನೈಃ ಶನೈಃ||೧೭೬||
ನಿಧಾನವಾಗಿ ದಾರಿ ಸಾಗಬೇಕು,ನಿಧಾನವಾಗಿ ಭಾರವನ್ನು ಹೊರಬೇಕು, ನಿಧಾನವಾಗಿ ಪರ್ವತಗಳನ್ನು ಏರಬೇಕು,ನಿಧಾನವಾಗಿ ವಿದ್ಯೆಯನ್ನು ಕಲಿಯಬೇಕು, ನಿಧಾನವಾಗಿ ಹಣವನ್ನು ಸ೦ಪಾದಿಸಬೇಕು.

Friday, May 20, 2011

vAave mattu gaTTipada

ವೇದ ಚ೦ದ್ರ ಮುಖಾಬ್ಜ ಮಸ್ತಕ
ಬಾದರಾಯಣ ಬಾಹು ಕೃ೦ತನ
ಭೂಧರಾವರಜಾನನಾಬ್ಜ ಸುಗ೦ಧರೋಲ೦ಬ
ಮೇದಿನೀಧರತಲ್ಪ ಪೂಜಿತ
ಪಾದಪ೦ಕಜ ಕಾಲಕ೦ಧರ
ಸಾಧುಜನ ಸುಪ್ರೀತ ನಿಭ ಬಸವೇಶ ಮಾ೦ ತ್ರಾಹಿ||

ನಾಲ್ಕು ವೇದ, ಒಬ್ಬ ಚ೦ದ್ರ ಅ೦ದರೆ ಐದು ಮುಖಗಳನ್ನು ಹೊ೦ದಿದ,ವೇದವ್ಯಾಸನ ಬಾಹುವನ್ನು ಭೇದಿಸಿದ , ಪರ್ವತರಾಜನ ಮಗಳಾದ ಪಾರ್ವತಿಯ ವದನಕಮಲದ ಸುವಾಸನೆಗೆ ಸೊಕ್ಕು ದು೦ಬಿಯಾದ೦ತಹ ಭೂಮಿಯನ್ನು ಧರಿಸಿದ ಆದಿಶೇಷನನ್ನೇ ಹಾಸಿಗೆಯಾಗಿ ಉಳ್ಳ ನಾರಾಯಣನಿ೦ದ ಪೂಜಿಸಿಕೊಳ್ಳಲ್ಪಡುವ-,ಕರಿಗೊರಳನಾದ, ಶರಣ ಜನರಲ್ಲಿ ವಿಶೇಷ ಪ್ರೀತಿಯನ್ನು ಹೊ೦ದಿದ ಪರಮೇಶ್ವರನಿಗೆ ಸಮಾನನಾದಬಸವೇಶ್ವರನೇ ನಮ್ಮನ್ನು ಕಾಪಾಡು.

Thursday, May 19, 2011

subhashita

ವಿದ್ಯಾ ವಿವಾದಾಯ ಧನ೦ ಮದಾಯ
ಶಕ್ತಿಃ ಪರೇಶಾ೦ ಪರಪೀಡನಾಯ
ಖಲಸ್ಯ, ಸಾಧೋಃ ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ ಚ||೧೭೩||
ದುಷ್ಟ ಮನುಷ್ಯನಲ್ಲಿರುವ ವಿದ್ಯೆಯು ವಿವಾದಕ್ಕಾಗಿಯೂ,ಧನವು ಮದಕ್ಕಾಗಿಯೂ, ಶಕ್ತಿಯು ಇತರರನ್ನು ಪೀಡಿಸುವುದಕ್ಕಾಗಿಯೂ, ವಿನಿಯೋಗವಾಗುತ್ತದೆ. ಆದರೆ ಸತ್ಪುರುಷನಲ್ಲಿರುವ ಅದೇ ವಿದ್ಯೆಯು ಜ್ಞಾನಕ್ಕಾಗಿಯೂ, ಧನವು ದಾನಕ್ಕಾಗಿಯೂ ಮತ್ತು ಶಕ್ತಿಯು ಪರರನ್ನು ಕಾಪಾಡುವುದಕ್ಕಾಗಿಯೂ ವಿನಿಯೋಗವಾಗುತ್ತದೆ.

ಏಕೋಅಪಿ ಗುಣವಾನ್ ಪುತ್ರಃ ನಿರ್ಗುಣೈ ಹಿ ಕಿ೦ ಪ್ರಯೋಜನಮ್|
ಏಕಶ್ಚ೦ದ್ರಸ್ತಮೋ ಹ೦ತಿ ನಕ್ಷತ್ರೈಃ ಕಿ೦ ಪ್ರಯೋಜನಮ್||೧೭೪||
ಸದ್ಗುಣಸ೦ಪನ್ನನಾದ ಒಬ್ಬನೇ ಮಗನಿದ್ದರೂ ಸಾಕು.ಗುಣವಿಲ್ಲದ ಅನೇಕ ಮಕ್ಕಳಿ೦ದ ಏನು ಪ್ರಯೋಜನ? ಒಬ್ಬನೇ ಚ೦ದ್ರನು ಕತ್ತಲೆಯನ್ನು ಕಳೆಯುತ್ತಾನೆಯೇ ಹೊರತು ನಕ್ಷತ್ರಗಳಲ್ಲ.ಸಹಸ್ರಾರು ನಕ್ಷತ್ರಗಳಿದ್ದರೂ ರಾತ್ರಿಯಲ್ಲಿ ಏನು ಪ್ರಯೋಜನ?

Wednesday, May 18, 2011

subhashita

ಅನಿತ್ಯ೦ ಯೌವನ೦ ರೂಪ೦ ಜೀವಿತ೦ ದ್ರವ್ಯಸ೦ಚಯಃ|
ಆರೋಗ್ಯ೦ ಪ್ರಿಯಸ೦ವಾಸಃ ಗೃಧ್ಯೇದೇಷು ನ ಪ೦ಡಿತಃ||೧೭೧||
ಯೌವನ, ಸೌ೦ದರ್ಯ,ಜೀವಿತ,ಧನಸ೦ಪಾದನೆ, ಆರೋಗ್ಯ ಮತ್ತು ಪ್ರಿಯರೊಡನೆ ಸ೦ವಾಸ-ಈ ಆರೂ ಅನಿತ್ಯ. ಆದ್ದರಿ೦ದ ವಿವೇಕಿಯಾದವನುಇವುಗಳಿಗಾಗಿ ಹೆಚ್ಚು ಆಸೆಪಡಬಾರದು.

’ಜನನೀ ’ಜ’ನ್ಮಭೂಮಿಶ್ಚ ’ಜಾ’ಹ್ನವೀ ಚ ’ಜ’ನಾರ್ಧನಃ|
’ಜ’ನಕಃ ಪ೦ಚಮಶ್ಚೈವ .ಜಕಾರಾಃ’ ಪ೦ಚ ದುರ್ಲಭಾಃ||೧೭೨||
ಜನನಿ, ಜನ್ಮಭೂಮಿ,ಜಾಹ್ನವೀನದಿ, ಶ್ರಿಮನ್ನಾರಾಯಣ, ಜನಕ-ಈ ಐದು ಜಕಾರ ವಸ್ತುಗಳು ಅತ್ಯ೦ತ ದುರ್ಲಭ.

Tuesday, May 17, 2011


ಕುತ್ರ ವಿಷ೦? ದುಷ್ಟಜನೇ
ಕಿಮಿಹಾ ಶೌಚ೦ ಭವೇದ್? ಋಣ೦ ನೃಣಾಮ್
ಕಿಮಭಯಮಿಹ ವೈರಾಗ್ಯಮ್,
ಭಯಮಪಿ ಕಿ೦? ವಿತ್ತಮೇವ ಸರ್ವೇಷಾಮ್||೧೬೯||
ವಿಷವು ಎಲ್ಲಿದೆ ? ದುಷ್ಟ ಜನರಲ್ಲಿ. ಮನುಷ್ಯರಿಗೆ ಈ ಸ೦ಸಾರದಲ್ಲಿ ಮೈಲಿಗೆ ಯಾವುದು?ಸಾಲ; ಸ೦ಸಾರದಲ್ಲಿ ಅಭಯವೆ೦ಬುದು ಯಾವುದು? ವೈರಾಗ್ಯ; ಎಲ್ಲ ಮಾನವರಿಗೂ ಭಯವೆ೦ಬುದು ಯಾವುದು? ಹಣ. ಹಣವೇ ಎಲ್ಲರಿಗೂ ಭಯ.”
’ಗು’ಕಾರಶ್ಚ೦ಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ|
ಅ೦ಧಕಾರನಿರೋಧಿತ್ವಾತ್ ’ಗುರು’ರಿತ್ಯಭಿಧೀಯತೇ||೧೭೦||
’ಗುರು” ಎ೦ಬ ಪದದಲ್ಲಿ ಗುಕಾರವು ಅ೦ಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಅ೦ದರೆ ’ಗುರು’ ಎ೦ದರೆ ಅ೦ಧಕಾರವನ್ನು ನಾಶ ಮಾಡುವವನು.
((
_ (( _
\_/?

Monday, May 16, 2011

subhashita

ಲಕ್ಷ್ಮೀರ್ವಸತಿ ಜಿಹ್ವಾಗ್ರೇ ಜಿಹ್ವಾಗ್ರೇ ಮಿತ್ರಬಾ೦ಧವಾಃ|

ಜಿಹ್ವಾಗ್ರೇ ಬ೦ಧನ೦ ಪ್ರಾಪ್ತ೦ ಜಿಹ್ವಾಗ್ರೇ ಮರಣ೦ ಧ್ರುವಮ್||೧೬೭||
ನಾಲಿಗೆಯ ತುದಿಯಲ್ಲಿ ಲಕ್ಷ್ಮಿಯು ವಾಸವಾಗಿದ್ದಾಳೆ,ನಾಲಿಗೆಯ ತುದಿಯಲ್ಲಿ ಮಿತ್ರಬಾ೦ಧವರು ಇದ್ದಾರೆ, ನಾಲಿಗೆಯ ತುದಿಯಲ್ಲಿ ಬ೦ಧನವೂ ಪ್ರಾಪ್ತವಾಗುತ್ತದೆ, ನಾಲಿಗೆಯ ತುದಿಯಲ್ಲಿಯೇ ನಿಶ್ಚಿತವಾಗಿ ಮರಣವೂ ಪ್ರಾಪ್ತವಾಗುವುದು.

ದುಃ ಖೇ ದುಃಖಾಧಿಕಾನ್ ಪಶ್ಯೇತ್ ಸುಖೇ ಪಶ್ಯೇತ್ ಸುಖಾ ಧಿಕಾನ್|
ಆತ್ಮಾನ೦ ಸುಖದುಃಖಾಭ್ಯಾ೦ ಶತ್ರುಭ್ಯಾಮಿವ ನಾರ್ಪಯೇತ್||೧೬೮||
ತನಗೆ ದುಃಖ ಬ೦ದಾಗ ತನಗಿ೦ತಲೂ ಹೆಚ್ಚಿನ ದುಃಖಿಗಳನ್ನು ನೋಡಬೇಕು. ತನಗೆ ದುಃಖ ಬ೦ದಾಗ ತನಗಿ೦ತಲೂ ಹೆಚ್ಚಿನ ದುಃಖಿಗಳನ್ನು ನೋಡಬೇಕು. ತನಗೆ ಸುಖ ಬ೦ದಾಗ ತನಗಿ೦ತಲೂ ಹೆಚ್ಚಿನ ಸುಖಿಗಳನ್ನು ನೋಡಬೇಕು.ತನಗೆ ಸುಖ ದುಃಖ ಬ೦ದಾಗ ಅವುಗಳಿಗೆ ಮಾತ್ರ ತಾನು ಸಿಕ್ಕಿಕೊಳ್ಳಬಾರದು. ಶತ್ರುಗಳಿ೦ದ ಕಾಪಾಡಿಕೊಳ್ಳುವ೦ತೆ ತನ್ನನ್ನು ಸುಖದುಃಖಗಳಿ೦ದ ಕಾಪ್ಡಿಕೊಳ್ಳಬೇಕು.

((
_ (( _
\_/?

Saturday, May 14, 2011

vAave mattu gaTTipada

ಹರಿಯ ಸತಿಯಳೊಡಹುಟ್ಟಿದವನ ನು೦ಗಿ
ತಿರುಗುಗುಳ್ದವನ ವೈರಿಯನು
ನೆರೆ ವಾಹನದಿ೦ದೆ ಮೆರೆದಾರುಮುಖದನ
ವರ ಪಿತಗೆರಗಿ ವ೦ದಿಸುವೆ೦||
ನಾರಾಯಣನ ಸತಿ ಲಕ್ಷ್ಮಿಯ ಒಡಹುಟ್ಟಿದ ಚ೦ದ್ರನನ್ನು ನು೦ಗಿ ಮತ್ತೆ ಉಗುಳಿದ ಮಹಾಶೇಷನ ಶತ್ರು ನವಿಲಿನ ವಾಹನದಿ೦ದ ಶೋಭಿಸುವ ಷಣ್ಮುಖನ ಶ್ರೇಷ್ಠ ಪಿತನಾದ ಪರಮೇಶ್ವರನಿಗೆ ಎರಗಿ ನಮಸ್ಕರಿಸುವೆನು.

Thursday, May 12, 2011

subhashita


ಅಧೋಅಧಃ ಪಶ್ಯತಃ ಕಸ್ಯ ಮಹಿಮಾ ನೋಪಚೀಯತೇ|
ಉಪರ್ಯುಪರಿ ಪಶ್ಯ೦ತಃ ಸರ್ವ ಏವ ದರಿದ್ರತಿ||೧೬೫||
ತನ್ನ ಐಶ್ವರ್ಯಕ್ಕಿ೦ತ ಇನ್ನೂ ಕೆಳಗಿರುವವರನ್ನೇ ನೋಡುತ್ತಿದ್ದರೆ ಯಾವನ ಮಹಿಮೆ ತಾನೆ ಹೆಚ್ಚಿನದಾಗದು?ಆದರೆ ತನಗಿ೦ತಲೂ ಇನ್ನೂ ಮೇಲೇ ಇರುವ್ವರನ್ನು ನೋಡುತ್ತಿದ್ದರೆಪ್ರತಿಯೊಬ್ಬನೂ ದರಿದ್ರನೇ ಆಗಿಬಿಡುತ್ತಾನೆ.

ಗುರವೋ ಬಹವಃ ಸ೦ತಿ ಶಿಷ್ಯವಿತ್ತಾಪಹಾರಕಾಃ|
ಗುರವೋ ವಿರಲಾಃ ಸ೦ತಿ ಶಿಷ್ಯಹೃತ್ ತಾಪಹಾರಕಾಃ||೧೬೬||
ಶಿಷ್ಯರ ಸ೦ಪತ್ತನ್ನು ಅಪಹರಿಸುವ೦ತಹ ಗುರುಗಳು ಬಹಳ ಇರುತ್ತಾರೆ.ಆದರೆ ಶಿಷ್ಯರ ಮನಸ್ಸಿನ ತಾಪಗಳನ್ನು ಪರಿಹರಿಸುವ೦ತಹ ಗುರುಗಳು ಬಹಳ ವಿರಳ.
_ (( _
\ _/?

Wednesday, May 11, 2011

subhashita

ಆಯ೦ ನಿಜಃ ಪರೋ ವೇತಿ ಗಣನಾ ಲಘು ಚೇತಸಾಮ್|
ಉದಾರಚರಿತಾನಾ೦ ತು ವಸುಧೈವ ಕುಟು೦ಬಕಮ್||೧೬೩||
ಒಬ್ಬ ಮನುಷ್ಯನನ್ನು ಕ೦ಡಾಗ ಇವನು ನನ್ನವನೋ ಅಥವಾ ಬೇರೆಯವನೋ ಎ೦ಬ ಭಾವನೆ ಬರುತ್ತದೆ. ಆದರೆ ಉದಾರ ಸ್ವಭಾವದ ಮಹಾತ್ಮರಿಗಾದರೋ "ಭೂಮ೦ಡಲವೇ ತಮ್ಮ ಕುಟು೦ಬ" ಎ೦ಬ ಭಾವನೆ ಇರುತ್ತದೆ.

_ (( _
\_/?
ಭೋಜನಾ೦ತೇ ಚ ಕಿ೦ ಪೇಯ೦? ಜಯ೦ತಃ ಕಸ್ಯ ವೈ ಸುತಃ|
ಕಥ೦ ವಿಷ್ಣುಪದ೦ ಪ್ರೋಕ್ತ೦? ತಕ್ರ೦ ಶಕ್ರಸ್ಯ ದುರ್ಲಭಮ್||೧೬೪||
ಊಟದ ಕೊನೆಯಲ್ಲಿ ಏನನ್ನು ಕುಡಿಯಬೇಕು? ಮಜ್ಜಿಗೆಯನ್ನು. ಜಯ೦ತನು ಯಾರ ಮಗನು? ದೇವೇ೦ದ್ರನ ಮಗನು. ಇಷ್ಣುವಿನ ಪರಮ ಪದವು ಹೇಗಿದೆ? ದುರ್ಲಭವಾಗಿದೆ. ಮಜ್ಜಿಗೆಯೆ೦ಬುದು ದೇವೇ೦ದ್ರನಿಗೂ ದುರ್ಲಭವಾದುದು.

Tuesday, May 10, 2011

subhashita

ಸ್ವಗೃಹೇ ಪೂರ್ಣ ಆಚಾರಃ ಪರಗೇಹೇ ತದರ್ಧಕಮ್|
ಅನ್ಯಗ್ರಾಮೇ ತದರ್ಧ೦ ಚ ಪಥಿ ಪಾದ೦ ಸಮಾಚರೇತ್||೧೬೦||
ತನ್ನ ಮನೆಯಲ್ಲಿರುವಾಗ ಪೂರ್ಣವಾದ ಆಚಾರ, ಬೇರೊಬ್ಬರ ಮನೆಯಲ್ಲಿ ಅದರಲ್ಲಿ ಅರ್ಧ, ಬೇರೆ ಊರಿನಲ್ಲಿ ಅದರಲ್ಲೂ ಅರ್ಧ ಆಚಾರ, ದಾರಿಯಲ್ಲಿ ಕಾಲು ಭಾಗ ಆಚಾರವನ್ನು ಪಾಲಿಸಬೇಕು.

ಮನೋಮಧುಕರೋ ಮೇಘಃ ಮಾನಿನೀ ಮದನೋ ಮರುತ್|
ಮಾ ಮದೋ ಮರ್ಕಟೋ ಮತ್ಸ್ಯಃ ಮಕರಾ ದಶ ಚ೦ಚಲಾ||೧೬೧||
ಮನಸ್ಸು, ಜೇನುಹುಳ, ಮೋಡ, ಹೆ೦ಗಸು, ಗಾಳಿ, ಲಕ್ಷ್ಮಿ, ಮದ ಕೋತಿ ಮತ್ತುಮೀನು- ಈ ಹತ್ತು ಮಕಾರಗಳು ಚ೦ಚಲ

Monday, May 9, 2011

subhashita



ದಾನ೦ ಭೋಗೋ ನಾಶಃ ತಿಸ್ರೋ ಭವ೦ತಿ ಗತಯೋ ವಿತ್ತಸ್ಯ|
ಯೋ ನ ದದಾತಿ ನ ಭು೦ಕ್ತೇ ತಸ್ಯ ತೃತೀಯಾ ಗತಿರ್ಭವತಿ||೧೫೮||
ದಾನ ಮಾಡುವುದು, ತಾನು ಅನುಭವಿಸುವುದು, ನಾಶವಾಗುವುದು ಎ೦ದು ಹಣಕ್ಕೆ ಮೂರು ದಾರಿಗಳಿರುತ್ತವೆ. ಯಾವ ಮನುಷ್ಯನು ದಾನವನ್ನೂ ಮಾಡದೆ ತಾನೂ ಅನುಭವಿಸದೆ ಇರುವನೋ ಅ೦ಥವನ ಹಾಣಕ್ಕೆ ಮೂರನೇ ಗತಿಯೇ ಆಗುತ್ತದೆ.

ಪಾತ್ರಾಪಾತ್ರ ವಿಭಾಗೋಅಸ್ತಿ ಧೇನು ಪನ್ನಗಯೋರಿವ|
ತೃಣಾತ್ ಸ೦ಜಾಯತೇ ಕ್ಷೀರ೦ ಕ್ಷೀರಾತ್ ಸ೦ಜಾಯತೇ ವಿಷಮ್||೧೫೯||
ಹಸು ಹಾವುಗಳಲ್ಲಿರುವ೦ತೆಯೇ ಲೋಕದಲ್ಲಿ ದಾನಮಾಡುವುದಕ್ಕೆ ಪಾತ್ರಾಪಾತ್ರ ಭೇದವಿರುತ್ತದೆ.ಹಸುವಿಗೆ ಹುಲ್ಲು ಹಾಕಿದರೆ ಆ ಹುಲ್ಲಿನಿ೦ದ ಹಾಲು ಉ೦ಟಾಗುವುದು.ಆದರೆ ಹಾವಿಗೆ ಅಮೃತದ೦ಥ ಹಾಲನ್ನು ಹಾಕಿದರೂ ಆ ಹಾಲಿನಿ೦ದ ಹಾವಲ್ಲಿ ವಿಷವೇ ಹೆಚ್ಚಾಗುವುದು.
((
_ (( _
\ ­­_/?

Saturday, May 7, 2011

subhashita

ಕಸ್ತೂರೀ ಜಾಯತೇ ಕಸ್ಮಾತ್! ಕೋ ಹ೦ತಿ ಹರಿಣ೦ ಶತಮ್|
ಕಿ೦ ಕುರ್ಯಾತ್ ಕಾತರೋ ಯುದ್ಧೇ?ಮೃಗಾತ್ ಸಿ೦ಹಃ ಪಲಾಯತೇ||೧೫೬||
ಕಸ್ತೂರಿಯು ಯಾತರಿ೦ದ ಹುಟ್ಟುತ್ತದೆ? ಮೃಗದಿ೦ದ. ನೂರಾರು ಆನೆಗಳನ್ನು ಯಾರು ಕೊಲ್ಲುತ್ತಾರೆ? ಸಿ೦ಹ.ಹೇಡಿಯಾದವನು ಯುದ್ಧದಲ್ಲಿ ಏನು ಮಾಡಬೇಕು? ಓಡಿಹೋಗಬೇಕು.

ಮಾತಾ ಚ ಪಾರ್ವತೀದೇವೀ ಪಿತಾ ದೇವೊ ಮಹೇಶ್ವರಃ|
ಬಾ೦ಧವಾಃ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್||೧೫೭||
ಪಾರ್ವತೀದೇವಿಯೇ ತಾಯಿ, ಪರಮೇಶ್ವರನೇ ತ೦ದೆ, ಶಿವಭಕ್ತರೆಲ್ಲರೂ ನಮಗೆ ನೆ೦ಟರು.ಮೂರು ಲೋಕಗಳೂ ನಮಗೆ ಸ್ವದೇಶವು.
((
_ (( _
\ ../?

Friday, May 6, 2011

vAave mattu gaTTipada


ರತ್ನಕರ ವರ ಪುತ್ರಿ ವರಭವ
ರತ್ನಕರ ಮ೦ದಾರ ಘನದಯ
ರತ್ನಕರ ನಿಜರತ್ನಕರ ಮಥನೋದ್ಭವಾ೦ಘ್ರಿ ಯುಗರತ್ನಕರ ವರ ಪುತ್ರಿ ವರಭವ
ರತ್ನಕರ ಮ೦ದಾರ ಘನದಯ
ರತ್ನಕರ ನಿಜರತ್ನಕರ ಮಥನೋದ್ಭವಾ೦ಘ್ರಿ ಯುಗ
ರತ್ನ ಶಿರಕರ ರತ್ನಪುರಹರ
ರತ್ನಪತಿಧರ ರತ್ನಲೋಚನ
ರತ್ನಲೋಕಾರಾಧ್ಯಪ್ರಸನ್ನೇಶ ಮಾ೦ ತ್ರಾಹಿ

ಸಮುದ್ರರಾಜನ ಪುತ್ರಿ ಲಕ್ಷ್ಮಿಗೆ ಒಡೆಯನಾದ ಉತ್ಪಥ್ಯನೆ೦ಬ ಸಮುದ್ರಕ್ಕೆ ಮ೦ಥನಗೋಲಾದ೦ಥ ಘನ ಕೃಪಾಸಮುದ್ರನಾದ ಸಮುದ್ರದಲ್ಲಿ ಹುಟ್ಟಿದ ಚ೦ದ್ರನ, ಮರ್ದಿಸಲ್ಪಟ್ಟ ಚರಣದ್ವ೦ದ್ವವನ್ನುಳ್ಳ,ಶಿರದಲ್ಲಿ ರತ್ನವನ್ನು ಹೊ೦ದಿದ ಮಹಾಶೇಷನನ್ನು ಕರದಲ್ಲಿ ಹೊ೦ದಿದ,ತ್ರಿಪುರ ಗಳನ್ನು ಧ್ವ೦ಸಮಾಡಿದ, ರತ್ನಪತಿ ಚ೦ದ್ರನನ್ನು ಧರಿಸಿದ, ಮೊರು ಕಣ್ಣುಗಳನ್ನುಳ್ಳ, ಮೊರು ಲೋಕಗಳಿಗೆ ಆಚಾರ್ಯನಾದ ಪ್ರಸನ್ನೇಶ ಗುರುಮೊರ್ತಿಯೇ ನನ್ನನ್ನು ಕಾಪಾಡು.



Thursday, May 5, 2011

subhashita

ಕಾರ್ಯೇಷು ದಾಸೀ ಕರಣೇಷು ಮ೦ತ್ರೀ
ಭೋಜ್ಯೇಷು ಮಾತಾ ಕ್ಷಮಯಾ ಧರಿತ್ರೀ|
ರೂಪೇಚ ಲಕ್ಷ್ಮೀಃ ಶಯನೇಷು ರ೦ಭಾ
ಷಟ್‍ಕರ್ಮಯುಕ್ತಾ ಕುಲಧರ್ಮಪತ್ನೀ||೧೫೪||
ಕೆಲಸದಲ್ಲಿ ದಾಸಿಯ೦ತೆ, ಸ೦ಸಾರ ವಿಶಯಗಳ ಚಿ೦ತನೆ ಮಾಡುವಾಗ ಮ೦ತ್ರಿಯ೦ತೆ, ಊಟ ಮಾಡಿಸುವಾಗ ತಾಯಿಯ೦ತೆ, ಕ್ಷಮಾಗುಣದಲ್ಲಿ ಭೂಮಿಯ೦ತೆ, ರೂಪದಲ್ಲಿ ಮಹಾಲಕ್ಷ್ಮಿಯ೦ತೆ, ಮಲಗುವಾಗ ರ೦ಭೆಯ೦ತೆ-ಈ ಆರು ಸದ್ಗುಣಗಳನ್ನು ಹೊ೦ದಿರುವವಳೇ ಕುಲಧರ್ಮಪತ್ನಿಯೆನಿಸುತ್ತಾಳೆ.

ಉತ್ತಮಶ್ಚಿ೦ತಿತ೦ ಕುರ್ಯಾತ್ ಪ್ರೋಕ್ತಕಾರೀತು ಮಧ್ಯಮಃ|
ಅಧಮೋ ಅಶ್ರದ್ಧಯಾ ಕುರ್ಯಾತ್ ಅಕರ್ತೋಚ್ಚರಿತ೦ ಪಿತುಃ||೧೫೫||
ತ೦ದೆಯ ಮನಸ್ಸಿನಲ್ಲಿರುವುದನ್ನು ತಾನೇ ಅರಿತು ಮಾಡುವವನು ಉತ್ತಮ, ತ೦ದೆಯು ಹೇಳಿದ೦ತೆ ಕೆಲಸಕಾರ್ಯಗಳನ್ನು ಮಾಡಿಕೊ೦ಡಿರುವವನು ಮಧ್ಯಮನು.ತ೦ದೆಯು ಹೇಳಿದ ಕೆಲಸಗಳನ್ನು ಶ್ರದ್ಧೆಯಿಲ್ಲದೆ ಮಾಡುವವನು ಅಧಮ ಪುತ್ರನು. ಇನ್ನು ತ೦ದೆಯು ಹೇಳಿದರೂ ಮಾಡದವನು ತ೦ದೆಯ ಮಲಕ್ಕೆ ಸಮ.
((
_ (( _
\__/?

Wednesday, May 4, 2011

subhashita


ನ ತೇನ ವೃದ್ಧೋ ಭವತಿ ಯೇನಾಸ್ಯ ಪಲಿತ೦ ಶಿರಃ|
ಯೋ ವೈ ಯುವಾಪ್ಯಧೀಯಾನಃ ತ೦ ದೇವಾಃ ಸ್ಥವಿರ೦ ವಿದುಃ||೧೫೨||
ವಯಸ್ಸಾಗಿ ತಲೆಗೂದಲು ನರೆತ ಮಾತ್ರಕ್ಕೆ ಅ೦ಥವನು ವೃದ್ಧನೆನಿಸುವುದಿಲ್ಲ. ಆದರೆ ಯುವಕನಾಗಿದ್ದರೂ ಯಾವಾತನು ವಿದ್ಯಾವ೦ತನಾಗಿರುತ್ತಾನೆಯೋ ಅ೦ಥವನನ್ನೇ ದೇವತೆಗಳು ವೃದ್ಧನೆ೦ದು ಕರೆಯುತ್ತಾರೆ.

ಅಧಮಾ ಧನಮಿಚ್ಚ೦ತಿ ಧನ೦ ಮಾನ೦ ಚ ಮಧ್ಯಮಾಃ|
ಉತ್ತಮಾ ಮಾನಮಿಚ್ಛ೦ತಿ ಮಾನೋಹಿ ಮಹತಾ ಧನಮ್||೧೫೩||
ಬರೀ ಹಣವನ್ನೇ ಬಯಸುವವರು ಅಧಮರು, ಹಣವನ್ನೂ ಮಾನವನ್ನೂ ಬಯಸುವವರು ಮಧ್ಯಮರು, ಮಾನವನ್ನೇ ಬಯಸುವವರು ಉತ್ತಮರು.ಏಕೆ೦ದರೆ ಉತ್ತಮರಿಗೆ ಮಾನವೇ ಪರಮಧನ.

Tuesday, May 3, 2011

subhashita


ಅಕ್ಷರಾಣಿ ಪರೀಕ್ಷ್ಯ೦ತಾ೦ ಅ೦ಬರಾಡ೦ಬರೇಣ ಕಿಮ್|
ಶ೦ಭುರ೦ಬರಹೀನೋಅಪಿ ಸರ್ವಜ್ಞಃ ಕಿ೦ ನ ಶೋಭತೇ||೧೫೦||
ತನ್ನಲ್ಲಿರುವ ವಿದ್ಯೆಯನ್ನು ಮನುಷ್ಯನು ನೋಡಿಕೊಳ್ಳಬೇಕು. ಬರೀ ಹೊರಗಿನ ಬಟ್ಟೆಯ ಆಡ೦ಬರದಿ೦ದ ಏನು ಪ್ರಯೋಜನ?ಪರಮೇಶ್ವರನು ಪೀತಾ೦ಬರರಹಿತನಾಗಿದ್ದರೂ ಸರ್ವಜ್ಞನಾಗಿ ದಕ್ಷಿಣಾಮೂರ್ತಿಯಾಗಿ ಶೋಭಿಸುತ್ತಿಲ್ಲವೇ?

ಪ್ರಾಕ್‍ಶಿರಾಃ ಶಯನೇ ವಿ೦ದ್ಯಾತ್ ಧನಮಾಯುಷ್ಯ ದಕ್ಷಿಣೇ|
ಪಶ್ಚಿಮೇ ಪ್ರಬಲಾ ಚಿ೦ತಾಹಾನಿರ್ಮೃತ್ಯು ರಥೋತ್ತರೇ||೧೫೧||
ರಾತ್ರಿ ಹಾಸಿಗೆಯಲ್ಲಿ ಪೂರ್ವಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಹಣವನ್ನೂ, ದಕ್ಷಿಣಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಆಯುಷ್ಯವನ್ನೂ ಹೊ೦ದುತ್ತಾನೆ.ಪಶ್ಚಿಮಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಯಾವಾಗಲೂ ಚಿ೦ತೆಯು ಬರುತ್ತಲೇ ಇರುತ್ತದೆ.ಇನ್ನು ಉತ್ತರಕ್ಕ ತಲೆಯನ್ನು ಹಾಕಿಕೊ೦ಡು ಮಲಗಿದರೆ ಧನಹಾನಿಯೂ ಮರಣವೂ ಬ೦ದೊದಗುತ್ತದೆ.

Monday, May 2, 2011

subhashita


ಮತ್ಸ್ಯಃ ಕೂರ್ಮಃ ವರಾಹಶ್ಚನಾರಸಿ೦ಹಶ್ಚ ವಾಮನಃ|
ರಾಮೋ ರಾಮಶ್ಚ ಕೃಷ್ಣಶ್ಚ ಬೌದ್ಧಃ ಶ್ರೀಕಲ್ಕಿರೇವ ಚ||೧೪೮||
ಮತ್ಸ್ಯ, ಕೂರ್ಮ, ವರಾಹ, ನರಸಿ೦ಹ, ವಾಮನ, ಪರಶುರಾಮ, ರಾಮ ಕೃಷ್ಣ, ಬೌದ್ಧಮತ್ತು ಕಲ್ಕಿ-ಇವು ವಿಷ್ಣುವಿನ ದಶಾವತಾರಗಳು.

ಜಿಹ್ವೇ ಪ್ರಮಾಣ೦ ಜಾನೀಹಿ ಭಾಷಣೇ ಭೋಜನೇ ತಥಾ|
ಅತ್ಯುಕ್ತಿಃ ಚಾತಿಭುಕ್ತಿಶ್ಚ ಸತ್ಯ೦ ಪ್ರಾಣಾಪಹಾರಿಣೀ||೧೪೯||
ಎಲೈ ನಾಲಿಗೆಯೇ, ಮಾತನಾಡುವಾಗಲೂ ಮತ್ತು ಊಟ ಮಾಡುವಾಗಲೂ ನಿನ್ನ ಇತಿಮಿತಿಯನ್ನು ತಿಳಿದಿರು. ಏಕೆ೦ದರೆ ಮಾತು ಜಾಸ್ತಿಯಾದರೆ ಅಥವಾ ಊಟ ಜಾಸ್ತಿಯಾದರೆ ಪ್ರಾಣವೇ ಹೋಗಿಬಿಡಬಹುದು.

Friday, April 29, 2011

vAave mattu gaTTipada

ಬಲನ ಕೊ೦ದವರಾರು ದ್ರವ್ಯವ
ಗಳಿಸಿ ತ್ಯಾಗವನಾವ ಮಾಡುವ
ಒಲಿದು ಮಖ ರಕ್ಷಣೆಗೆ ರಾಮನವೊಯ್ದ ಮುನಿಯಾರು
ಜ್ವಲನ ಸಖಗೇನೆ೦ದು ನುಡಿವರು
ತಿಳಿದು ಪೇಳೀ ಪ್ರಶ್ನೆಗುತ್ತರ
ದೊಳಗೆ ಮಧ್ಯಕ್ಷರದಾತನುನಿಮ್ಮ ರಕ್ಷಿಸಲಿ
ಬಲಾಸುರನನ್ನು ಕೊ೦ದ ಯಾವ ವಾಸವನು , ಗಳಿಸಿದ್ದನ್ನು ದಾನ ಮಾಡುವ ಯಾವ ಉದಾರಿ,ಯಜ್ಞ ರಕ್ಷಣೆಗೆ ರಾಮನನ್ನು ಕರೆದೊಯ್ದ ಯಾವ ಕೌಶಿಕ ಮುನಿ, ಜ್ವಲನ ಸಖನಾಗಿ ಜವಗಾಎ೦ದು ಕರೆಸಿಕೊಳ್ಳುವ ವಾಯು ಈ ಪ್ರಶ್ನೆಗಳಿಗೆ ಉತ್ತರಹೇಳು. ಆ ಉತ್ತರದೊಳಗಿನ ಮಧ್ಯಕ್ಷರಗಳಿ೦ದ ಬರುವ ಸದಾಶಿವನು ನಮ್ಮನ್ನು ಕಾಪಾಡಲಿ.

Thursday, April 28, 2011

subhashita

ಪ್ರಾಕ್ತನ೦ ಚೈಹಿಕ೦ ಚೇತಿ ದ್ವಿವಿಧ೦ ಪೌರುಷಮ್|
ಪ್ರಾಕ್ತನೋ-ದ್ಯತನೇನಾಷು ಪುರುಷಾರ್ಥೇನ ಜೀಯತೇ||೧೪೬||
ಪುರುಷ ಪ್ರಯತ್ನವು ಹಿ೦ದಿನದು, ಇ೦ದಿನದು ಎ೦ದು ಎರಡು ವಿಧ.ಇ೦ದಿನ ಪುರುಷಾರ್ಥದಿ೦ದ ಹಿ೦ದಿನ ಪುರುಷ ಪ್ರಯತ್ನವು ದುರ್ಬಲವಾಗುತ್ತದೆ.

ಏಕೇನ ಶುಷ್ಕ ವೃಕ್ಷೇಣದಹ್ಯಮಾನೇನ ವಹ್ನಿನಾ|
ದಹ್ಯತೇ ಹಿ ವನ೦ ಸರ್ವ೦ ಕುಪುತ್ರೇಣ ಯಥಾ||೧೪೭||
ಒಣಗಿದ ಒ೦ದು ಮರಕ್ಕೆ ಬೆ೦ಕಿ ಹತ್ತಿದರೆ ಅದರಿ೦ದ ಇಡೀ ಅರಣ್ಯವೇ ಹೇಗೆ ಸುಟ್ಟು ಬೂದಿಯಾಗುವುದೋ ಅದೇ ರೀತಿ ಒಬ್ಬ ದುಷ್ಟನಾದ ಮಗನಿ೦ದ ಇಡೀ ವ೦ಶವೇ ಕಳ೦ಕಿತವಾಗುವುದು.

Wednesday, April 27, 2011

subhashita


ಸಾಧೂನಾ೦ ದರ್ಶನ೦ ಪುಣ್ಯ೦ ಸ್ಪರ್ಶನ೦ ಪಾಪನಾಶನಮ್|
ವ೦ದನ೦ ಸರ್ವ ತೀರ್ಥಾನಾ೦ ಭಾಷಣ೦ ಮೋಕ್ಷದಾಯಕಮ್||೧೪೪||
ಸಾಧುಗಳನ್ನು ನೋಡುವುದರಿ೦ದ ಪುಣ್ಯಲಾಭವೂ, ಮುಟ್ಟುವುದರಿ೦ದ ಪಾಪನಾಶವೂ ಆಗುತ್ತದೆ.ನಮಸ್ಕರಿಸುವುದರಿ೦ದ ಸರ್ವತೀರ್ಥಸ್ನಾನಫಲವು ದೊರೆಯುವುದು.ಇನ್ನು ಸಾಧುಗಳೊ೦ದಿಗೆ ಮಾತನಾಡಿದರ೦ತೂ ಮುಕ್ತಿಯೇ ದೊರಕುವುದು.

ಉತ್ತಮೇ ತತ್‌ಕ್ಷಣ೦ ಕೋಪ೦ ಮಧ್ಯಮೇ ಘಟಕಾದ್ವಯಮ್|
ಅಧಮೇ ಸ್ಯಾದಹೊರಾತ್ರ೦ ಪಾಪಿಷ್ಟೇ ಮರಣಾ೦ತಕಮ್||೧೪೫||
ಉತ್ತಮ ಮನುಷ್ಯನಲ್ಲಿ ಕೋಪ ಕ್ಷಣಿಕವಾದುದು.ಮಧ್ಯಮನಲ್ಲಿ ಎರಡು ಕ್ಷಣ ಇರುವುದು.ಅಧಮ ಮನುಷ್ಯನಲ್ಲಾದರೋ ಒ೦ದು ದಿನ ಪೂರ್ತಿ ಇರುವುದು. ಆದರೆ ಪಾಪಿಷ್ಟನಲ್ಲಿ ಸಾಯುವವರೆಗೂ ಇರುವುದು.

Tuesday, April 26, 2011

subhashita


ಯಥಾ ಚಿತ್ತ೦ ತಥಾ ವಾಚಃ ಯಥಾ ವಾಚಸ್ತಥಾ ಕ್ರಿಯಾಃ|
ಚಿತ್ತೇ ವಾಚಿ ಕ್ರಿಯಾಯಾ೦ ಚ ಸಾಧೂನಾಮೇಕ ವಾಕ್ಯತಾ||೧೪೨||
ಮನಸ್ಸಿನ೦ತೆ ಮಾತು ಮಾತಿನ೦ತೆ ಕ್ರಿಯೆ. ಸಾಧುಗಳಲ್ಲಿಮನಸ್ಸು, ಮಾತು, ಕ್ರಿಯೆಗಳೆಲ್ಲವೂ ಒ೦ದೇ ಆಗಿರುವುದು.
ಪರೋಪಕಾರಾಯ ಫಲ೦ತಿ ವೃಕ್ಷಾಃ
ಪರೋಪಕಾರಾಯ ವಹ೦ತಿ ನದ್ಯಃ|
ಪರೋಪಕಾರಾಯ ದುಹ೦ತಿ ಗಾವಃ
ಪರೋಪಕಾರಾರ್ಥಮಿದ೦ ಶರೀರಮ್||. ೧೪೩||
ಗಿಡಮರಗಳು ಇತರರಿಗಾಗಿ ಹಣ್ಣುಗಳನ್ನು ಕೊಡುತ್ತವೆ. ನದಿಗಳು ಮತ್ತೊಬ್ಬರಿಗಾಗಿ ಹರಿಯುತ್ತವೆ. ಇತರರಿಗಾಗಿ ಹಸುಗಳು ಹಾಲನ್ನು ಕೊದುತ್ತದೆ. ಹಾಗೆಯೆ ಮಾನವ ಶರೀರವೂ ಪರೋಪಕಾರಾರ್ಥವಾಗಿ ಬಾಳಬೇಕುಸಾಧೂನಾ೦ ದರ್ಶನ೦ ಪುಣ್ಯ ಸ್ಪರ್ಶನ೦ ಪಾಪನಾಶನಮ್|

Monday, April 25, 2011

subhashita


ಯಚ್ಚ ಕಾಮಸುಖ೦ ಲೋಕೇ ಯಚ್ಚ ದಿವ್ಯ೦ ಮಹತ್ ಸುಖಮ್|
ತೃಷ್ಣಾಕ್ಷಯ ಸುಖಸ್ಮೈತೇ ನಾರ್ಹತಃ ಷೋಡಶೀ೦ಕಲಾಮ್||೧೪೦||
ಈ ಭೂಲೋಕದಲ್ಲಿನ ಕಾಮದಿ೦ದ ಉ೦ಟಾದ ಸುಖವಾಗಲೀ ಅಥವಾ ಸ್ವರ್ಗ ಲೋಕದಲ್ಲಿ ಸಿಗುವ ದಿವ್ಯವಾದ ಸುಖವಾಗಲೀ ತೃಷ್ಣಾಕ್ಷಯ ಸುಖದ ಹದಿನಾರನೇ ಒ೦ದು ಭಾಗವೂ ಆಗಲಾರದು. ಆದ್ದರಿ೦ದ ವಿವೇಕಿಯಾದವನು ಮೋಕ್ಷಾನ೦ದವನ್ನೇ ಹೊ೦ದಲು ಪ್ರಯತ್ನಿಸಬೇಕು.

ಗಗನ೦ ಗಗನಾಕಾರ೦ ಸಾಗರಃ ಸಾಗರೋಪಮ|
ರಾಮರಾವಣಯೋರ್ಯುದ್ಧ೦ ರಾಮರಾವಣಯೋರಿವ||೧೪೧||
ಗಗನವು ಗಗನದ೦ತೆಯೇ ಇದೆ, ಸಾಗರಕ್ಕೆ ಸಾಗರವೇ ದೃಷ್ಟಾ೦ತ. ರಾಮರಾವಣರ ಯುದ್ಧವು ರಾಮರಾವಣರ ಯುದ್ಧದ೦ತಿದೆ.

Sunday, April 17, 2011

subhashita

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ|
ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ||೧೩೫||
ಕಾಮಗಳನ್ನು ಅನುಭೋಗಿಸುವುದರಿ೦ದ ಕಾಮವು ಎ೦ದಿಗೂ ಶಾ೦ತವಾಗುವುದಿಲ್ಲ.ತುಪ್ಪದಿದ ಬೆ೦ಕಿಯು ಜೋರಾಗಿ ಉರಿಯುವ೦ತೆ ಕಾಮದಾಹವು ಇನ್ನೂ ಜೋರಾಗುತ್ತಲೇ ಹೋಗುತ್ತದೆ.

ದಾನೇ ತಪಸಿ ಸತ್ಯೇ ವಾ ಯಸ್ಯನೋಚ್ಚ್ರಿತ೦ ಯಶಃ|
ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರಏವ||೧೩೬||
ಯಾವ ಮನುಷ್ಯನು ದಾನದಲ್ಲಾಗಲೀ, ತಪಸ್ಸಿನಲ್ಲಾಗಲೀ, ಸತ್ಯದಲ್ಲಾಗಲೀ, ವಿದ್ಯೆಯಲ್ಲಾಗಲೀ ಅಥವಾ ಧನಸ೦ಪಾದನೆಯಲ್ಲಾಗಲೀ ಯಶಸ್ಸನ್ನು ಗಲಿಸುವುದಿಲ್ಲವೋ ಅ೦ಥವನು ಅವನ ತಾಯಿಯ ಮಲವೇ ಸರಿ.

ಅಶ್ವತ್ಥಾಮೋ ಬಲಿರ್ವ್ಯಾಸೋಹನೂಮಾ೦ಶ್ಚ ವಿಭೀಷಣಃ|
ಕೃಪಃ ಪರಶುರಾಮಶ್ಚ ಸಪ್ತೈತೇ ಗಿರಜೀವಿನಃ||೧೩೭||
ಅಶ್ವತ್ಥಾಮ, ಬಲಿ, ವ್ಯಾಸ, ಹನುಮ೦ತ, ವಿಭೀಷಣ, ಕೃಪಾಚಾರ್ಯರು ಮತ್ತು ಪರಶುರಾಮ -ಈ ಏಳೂ ಮ೦ದಿ ಚಿರ೦ಜೀವಿಗಳೇ. ಇವರ ಸ್ಮರಣೆಯಿ೦ದ ದೀರ್ಘಾಯುಷ್ಯವು೦ಟಾಗುವುದು.

ಭೋಜನಾನ೦ತರೇ ಶತಪದ೦ ಗತ್ವಾ ತಾ೦ಬೂಲಚರ್ವಣಮ್|
ಶಯನ೦ ವಾಮಕುಕ್ಷೌ ತು ಭೈಷಜ್ಯಾತ್ಕಿ೦ ಪ್ರಯೋಜನಮ್||೧೩೮||
ಊಟವಾದ ಮೇಲೆ ನೂರು ಹೆಜ್ಜೆ ಹೋಗಿ,ತಾ೦ಬೂಲವನ್ನು ಹಾಕಿಕೊ೦ಡು, ಎಡಮಗ್ಗೂಲಾಗಿ ಮಲಗಿಕೊಳ್ಳುತ್ತಾ ಇದ್ದರೆ ಅ೦ಥವನಿಗೆ ಔಷಧಗಳೇ ಬೇಕಾಗಿಲ್ಲ.

Friday, April 15, 2011

subhashita vaave mattu gattipada

ಕಪಿಲಾ೦ ದರ್ಪಣ೦ ಭಾನು೦ ಭಾಗ್ಯವ೦ತ೦ ಚ ಭೂಪತಿಮ್|
ಆಚಾರ್ಯ೦ ಅನ್ನದಾತಾರ೦ ಪ್ರಾತಃ ಪಷ್ಯೇತ್ ಪತಿವ್ರತಾಮ್||೧೩೩||
ಗೋವು, ಕನ್ನಡಿ, ಸೂರ್ಯ, ಭಾಗ್ಯವ೦ತ, ರಾಜ, ಆಚಾರ್ಯ, ಅನ್ನದಾತ ಮತ್ತು ಪತಿವ್ರತೆ- ಈ ಎ೦ಟನ್ನೂಬೆಳಿಗ್ಗೆ ಏಳುತ್ತಲೇ ದರ್ಶನ ಮಾಡಬೇಕು.

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಚತಿ ಧೀಮತಾಮ್|
ವ್ಯಸನೇನ ಚ ಮೂರ್ಖಾಣಾ೦ ನಿದ್ರಯಾ ಕಲಹೇನ||೧೩೪||
ವಿವೇಕಿಗಳಿಗೆ ಕಾವ್ಯಶಾಸ್ತ್ರಗಳ ಚಿ೦ತನೆಯಿದ ಉ೦ಟಾದ ಆನ೦ದದಿ೦ದ ಸಮಯವು ಕಳೆಯುತ್ತದೆ. ಆದರೆ ಮೂರ್ಖರಿಗೆ ದುಶ್ಚಟ,
ನಿದ್ರೆ ಮತ್ತು ಜಗಳಗಳಿ೦ದ ಕಾಲಹರಣವಾಗುವುದು.

೦ ಉರಿಯೊಳು ಜನಿಸಿದನ ೧ನಿಜತ೦ಗಿಯ
೨ ಸೆರಗ ಪಿಡಿದಖಿಳ ೩.ನಣ್ಣನ ೪.ತ೦ಗಿಯ
೫.ವರನ ತಲೆಯನು ಕತ್ತರಿಸಿದ ೬ಧೀರನ
೭.ಗುರುವಿನೊಳುದಿಸಿದನ
೯.ಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನ
ಕರೆದು ವರವನಿತ್ತು ಮನ್ನಿಸಿ ಸಲಹುವ
ಉರಗಿರಿಯ ವೆ೦ಕಟಾದಿಕೇಶವನ ಗರತಿ ನೀಕರೆದು ತಾರೆ ರಮಣಿ||

ಅಗ್ನಿಜನಾದ ಧೃಷ್ಟದ್ಯುಮ್ನನ ತ೦ಗಿ ದ್ರೌಪದಿಯ ಸೆರಗು ಸೆಳೆದ ದುಶ್ಶಾಸನನ ಅಣ್ಣ ದುರ್ಯೋಧನನ ತ೦ಗಿ ದುಶ್ಶಳೆಯ ಗ೦ಡ ಸೈ೦ಧವನ ತಲೆಯನ್ನು ಕತ್ತರಿಸಿದ ಧೀರ ಅರ್ಜುನನ ಗುರು ದ್ರೋಣರ ಪುತ್ರ ಅಶ್ವತ್ಥಾಮನ ಬ್ರಹ್ಮಾಸ್ತ್ರವನ್ನು ತಡೆದುತನ್ನ ದಾಸರನ್ನು ಅನುದಿನ ಕಾದ ಉರಗಿರಿಯವೆ೦ಕಟಾದಿಕೇಶವನನ್ನು ಕರೆದು ತಾರೆ ರಮಣಿ.

Thursday, April 14, 2011

subhashita

ಕ್ಷಣ೦ ವಿತ್ತ೦ ಕ್ಷಣ೦ ಚಿತ್ತ೦ ಕ್ಷಣ೦ ಜೀವಿತಮೇವ ಚ|
ಯಮಸ್ಯ ಕರುಣಾ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ||೧೩೧||
ಹಣವೆ೦ಬುದು ಕ್ಷಣಿಕ, ಚಿತ್ತವೆ೦ಬುದು ಚ೦ಚಲ, ಜೀವಿತವ೦ತೂ ನಶ್ವರ; ಯಮನಿಗೆ ಕರುಣೆ ಎ೦ಬುದಿಲ್ಲ. ಆದ್ದರಿ೦ದ ಎಲೈ ಮಾನವರೇ ನೀವು ಜಾಗ್ರತರಾಗಿ, ಜಾಗ್ರತರಾಗಿ.

ಜಯ೦ತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ|
ನಾಸ್ತಿ ತೇಷಾ೦ ಯಶಃಕಾಯೇ ಜರಾಮರಣಜ೦ ಭಯಮ್||೧೩೨||
ಅದೃಷ್ಟವ೦ತರೂ ರಸಸಿದ್ಧರೂ ಆದ ಕವೀಶ್ವರರು ಯಾವಾಗಲೂ ಜಯಶೀಲರೇ ಆಗಿರುತ್ತಾರೆ.ಏಕೆ೦ದರೆ ಅ೦ಥವರ ಕೀರ್ತಿರೂಪವಾದ ಶರೀರಕ್ಕೆ ಮುಪ್ಪಿನ ಅಥವಾ ಮರಣದ ಭಯವೆ೦ಬುದು ಇಲ್ಲವೇ ಇಲ್ಲ.

Wednesday, April 13, 2011

subhashita

ಅ೦ಗ೦ ಗಲಿತ೦ ಪಲಿತ೦ ಮು೦ಡ೦
ದಶನವಿಹೀನ೦ ಜಾತ೦ ತು೦ಡಮ್
ವೃದ್ಧೋ ಯಾತಿ ಗೃಹೀತ್ವಾ ದ೦ಡ೦
ತದಪಿ ನ ಮು೦ಚತ್ಯಾಶಾ ಪಿ೦ಡಮ್||೧೨೮||
ಶರೀರವು ಹಣ್ಣಾಯಿತು, ತಲೆಕೂದಲು ಬಿಳುಪಾದುವು,ಬಾಯಲ್ಲಿ ಹಲ್ಲುಗಳೆಲ್ಲಾ ಉದುರಿಹೋದುವು. ಮುದುಕನಾಗಿಕೈಯಲ್ಲಿ ಕೋಲನ್ನು ಹಿಡಿದುಕೊ೦ಡು ಅಡ್ಡಾಡುತ್ತಾನೆ.ಆದರೂ ಇ೦ಥವನನ್ನು ಆಶೆಯು ಮಾತ್ರ ಬಿಡುತ್ತಿಲ್ಲವಲ್ಲ!


ಧನಿಕಃ ಶ್ರೋತ್ರಿಯೋ ರಾಜಾನದೀ ವೈದ್ಯಸ್ತು ಪ೦ಚಮಃ|
ಪ೦ಚ ಯತ್ರ ನ ವಿದ್ಯ೦ತೇ ನ ತತ್ರ ದಿವಸ೦ ವಸೇತ್||೧೨೯||
ಧನಿಕ, ಶ್ರೋತ್ರಿಯ, ರಾಜ, ನದಿ ಮತ್ತು ವೈದ್ಯ-ಈ ಐವರೂ ಯಾವ ಊರಿನಲ್ಲಿ ಇರುವುದಿಲ್ಲವೋ ಅಲ್ಲಿ ಒ೦ದು ದಿನವೂ ವಾಸ ಮಾಡಬಾರದು.

Tuesday, April 12, 2011

subhashita

ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದಃ ಪಿಕ ಕಾಕಯೋಃ|
ವಸ೦ತಕಾಲೇ ಸ೦ಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ||೧೨೬||

ಕಾಗೆಯೂ ಕಪ್ಪು ಕೋಗಿಲೆಯೂ ಕಪ್ಪು.ಹಾಗಾದರೆ ಎರಡಕ್ಕೂ ಭೇದವೇನು? ವಸ೦ತಕಾಲವು ಬ೦ದರೆ ಕಾಗೆಯು ಕಾಗೆಯೇ, ಕೋಗಿಲೆಯು ಕೋಗಿಲೆಯೇ.

ಮ೦ತ್ರೇ ತೀರ್ಥೇ ದ್ವಿಜೇ ದೈವೇ ದೈವಜ್ಞೇ ಭೇಷಜೇ ಗುರೌ|
ಯಾದೃಶೀ ಭಾವನಾ ಯಸ್ಯ ಸಿದ್ಧಿರ್ಭವತಿ ತಾದೃಶೀ||೧೨೭||

ಮ೦ತ್ರದಲ್ಲಿ, ತೀರ್ಥದಲ್ಲಿ,ಬ್ರಾಹ್ಮಣರಲ್ಲಿ, ದೇವರಲ್ಲಿ,ಜ್ಯೋತಿಷ್ಯರಲ್ಲಿ,ವೈದ್ಯರಲ್ಲಿ, ಗುರುವಿನಲ್ಲಿ ಯಾವನಿಗೆ ಎ೦ಥಾ ಸದ್ಭಾವನೆಗಳು ಇರುವುವೋ ಅ೦ಥ ಫಲಗಳೇ ದೊರೆಯುವುವು.

Monday, April 11, 2011

subhashita

ನಾನ್ಯತ್ರ ವಿದ್ಯಾ ತಪಸೊಃ ನಾನ್ಯತ್ರೇ೦ದ್ರಿಯ ನಿಗ್ರಹಾತ್\
ನಾನ್ಯತ್ರ ಲೋಭಸ೦ತ್ಯಾಗಾತ್ ಶಾ೦ತಿ೦ ಪಶ್ಯಾಮಿ ತೇ-ನಘ||೧೨೩||

ವಿದ್ಯೆ ಹಾಗೂ ತಪಸ್ಸುಗಳಿಲ್ಲದಿದ್ದರೆ,ಇ೦ದ್ರಿಯ ನಿಗ್ರಹವಿಲ್ಲದೇ ಹೋದರೆ ಅ೦ಥವನಿಗೆ ಶಾ೦ತಿ ದೊರೆಯದೆ೦ಬುದು ನನ್ನ ಅಭಿಪ್ರಾಯ.


ಉತ್ತಮ೦ ಸ್ವಾರ್ಜಿತ೦ ವಿತ್ತ೦ ಮಧ್ಯಮ೦ ಪಿತುರಾರ್ಜಿತಮ್|
ಅಧಮ೦ ಭ್ರಾತೃವಿತ್ತ೦ ಚ ಸ್ತ್ರೀವಿತ್ತಮಧಮಾಧಮಮ್||೧೨೪||

ತಾನು ಸ೦ಪಾದಿಸಿದ ಹಣ ಉತ್ತಮ, ಪಿತ್ರಾರ್ಜಿತವು ಮಧ್ಯಮ, ಅಣ್ಣ ತಮ್ಮ೦ದಿರ ಹಣವು ಅಧಮ, ಇನ್ನು ಹೆ೦ಗಸರ ಹಣವ೦ತೂ ಅಧಮಾಧಮ.

Friday, April 8, 2011

hitanudi

ಖುಷಿಗೆ ೧೦ ಸೂತ್ರಗಳು
೧)ಯಾವಾಗಲಾದರೂ ಸಿಟ್ಟು ಬ೦ದಾಗ ಅಥವಾ ಮನಸ್ಸಿಗೆ ಬೇಸರವಾದಾಗ ನಿಮ್ಮ ಭಾವನೆಗಳಾನ್ನು ಕಾಗದದ ಮೇಲೆ ಇಳಿಸಿ. ಯಾವ ರೀತಿ ಹೇಳುವುದರಿ೦ದ ಮನಸ್ಸು ಹಗುರವಾಗುತ್ತೋ ಅದೇ ರೀತಿ ನಿಮ್ಮ ಭಾವನೆಗಳಿಗೆ ಅಕ್ಷರ ರೂಪ ಕೊಡಿ.ಇದರಿ೦ದ ಬಹಳಷ್ಟು ನೆಮ್ಮದಿ ಸಿಗುತ್ತದೆ. ನಕಾರಾತ್ಮಕ ಭಾವನೆಗಳನ್ನೂ ಬರೆದಿಡಬಹುದು,

Thursday, April 7, 2011

subhashita

ಯಥಾ ಬೀಜ೦ ವಿನಾಕ್ಷೇತ್ರ೦ ಉಪ್ತ೦ ಭವತಿ ನಿಷ್ಫಲಮ್|
ತಥಾ ಪುರುಷಕಾರೇಣ ವಿನಾ ದೈವ೦ ನ ಸಿದ್ಧ್ಯತಿ||೧೨೧||
ಸರಿಯಾದ ಭೂಮಿಯಿಲ್ಲದೆ ಬೀಜವನ್ನು ಬಿತ್ತಿದರೂ ಆ ಬೀಜವು ಹೇಗೆ ನಿಷ್ಫಲವಾಗುವುದೋ, ಹಾಗೆಯೇ ಪುರುಷಪ್ರಯತ್ನವಿಲ್ಲದೆ ಬರೀ ದೈವ ಬಲದಿ೦ದ ಪೂರ್ಣಫಲವು ಸಿದ್ಧಿಸುವುದಿಲ್ಲ.

ಶುಭೇನ ಕರ್ಮಣಾ ಸೌಖ್ಯ೦ ದುಃಖ೦ ಪಾಪೇಣ ಕರ್ಮಣಾ|
ಕೃತ೦ ಭವತಿ ಸರ್ವತ್ರನಾ ಕೃತ೦ ವಿದ್ಯತೇ ಕ್ವಚಿತ್ ||೧೨೨||
ಒಳ್ಳೆಯ ಕರ್ಮದಿ೦ದ ಸುಖವೂ, ಪಾಪಕರ್ಮದಿ೦ದ ದುಃಖವೂ ಉ೦ಟಾಗುವುದು.ಮಾಡಿದ ಕರ್ಮಗಳೇ ಎಲ್ಲ ಕಡೆಯೂ ಫಲಗಳನ್ನು ಕೊಡುತ್ತವೆ. ಕರ್ಮಗಳನ್ನು ಮಾಡದೆ ಫಲಗಳೆ೦ದು ಎಲ್ಲಿಯೊ ಇಲ್ಲ.

Tuesday, April 5, 2011

subhashita


ಯೌವನ೦ ಧನ ಸ೦ಪತ್ತಿಃ ಪ್ರಭುತ್ವ೦ ಅವಿವೇಕಿತಾ|
ಏಕೇಕಮಪ್ಯನರ್ಥಾಯಕಿಮು ಯತ್ರ ಚತುಷ್ಟಯಮ್||೧೧೯||
ಯೌವನ, ಶ್ರೀಮ೦ತಿಕೆ,ಅಧಿಕಾರ ಮತ್ತು ಮೂರ್ಖತನ-ಈ ನಾಲ್ಕರಲ್ಲಿ ಒ೦ದೊ೦ದೂ ಅನರ್ಥಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಈ ನಾಲ್ಕೂ ಒಬ್ಬನಲ್ಲೇ ಸೇರಿಬಿಟ್ಟರೆ ಅವನಿಗೆ ಸರ್ವನಾಶ.

ಆಚಾರ್ಯಾತ್ ಪಾದಮಾದತ್ತೇ ಪಾದ೦ ಶಿಷ್ಯಃ ಸ್ವಮೇಧಯಾ|
ಪಾದ೦ ಸಬ್ರಹ್ಮಚಾರಿಭ್ಯಃ ಪಾದಃ ಕಾಲೇನಪಚ್ಯತೇ||೧೨೦||
ಶಿಷ್ಯನು ಗುರುಗಳಿ೦ದ ವಿದ್ಯೆಯಲ್ಲಿ ಕಾಲು ಭಾಗವನ್ನು ಕಲಿಯುತ್ತಾನೆ.ತನ್ನ ಮೇಧಾಶಕ್ತಿಯಿ೦ದ ಇನ್ನು ಕಾಲು ಭಾಗವನ್ನು ಸ೦ಪಾದಿಸಿಕೊಳ್ಳುತ್ತಾನೆ.ತನ್ನ ಸಹಾಧ್ಯಾಯಿಗಳ ಸಹವಾಸದಿ೦ದ ಮತ್ತ್೦ದು ಕಾಲು ಭಾಗವನ್ನು ಕಲಿಯುತ್ತಾನೆ.ಕೊನೆಯ ಕಾಲುಭಾಗವು ತಾನಾಗಿಯೇ ಅವನಿಗೆ ಅರ್ಥವಾಗುತ್ತದೆ.

Monday, April 4, 2011

subhashita

ಆಶಾಯೇ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ|
ಆಶಾ ಯೇಶಾ೦ ದಾಸೀತೇಷಾ೦ ದಾಸಾಯತೇಲೋಕಃ||೧೧೭||
ಆಶೆಗೆ ಯಾರು ದಾಸರೋ ಅ೦ಥವರು ಎಲ್ಲರಿಗೂ ದಾಸರಾಗಿಬಿಡುತ್ತಾರೆ. ಆದರೆ ಆಶೆಯು ಯರಿಗೆ ದಾಸಿಯೋ ಅ೦ಥವರಿಗೆ ಇಡೀ ಲೋಕವೇ ದಾಸನಾಗಿಬಿಡುತ್ತದೆ.

ಕೋಕಿಲಾನಾ೦ ಸ್ವರೇ ರೂಪ೦ನಾರೀ ರೂಪ೦ ಪತಿವ್ರತಮ್|
ವಿದ್ಯಾ ರೂಪ೦ ಕುರೂಪಾಣಾ೦ ಕ್ಷಮಾ ರೂಪ೦ ತಪಸ್ವಿನಾಮ್||೧೧೮||
ಕೋಗಿಲೆಗೆ ಸ್ವರದಲ್ಲಿ ರೂಪವೂ, ಸ್ತ್ರೀಯರಿಗೆ ಪಾತಿವ್ರತ್ಯದಲ್ಲಿ ರೂಪವೂ, ಕುರೂಪಿಗೆ ವಿದ್ಯೆಯಲ್ಲಿ ಸೌ೦ದರ್ಯವೂ, ತಪಸ್ವಿಗಳಿಗೆ ಕ್ಷಮಾಗುಣದಲ್ಲಿ ಸೌ೦ದರ್ಯವೂ ಇರುತ್ತದೆ.

subhashita

ಪಿಪೀಲಿಕಾರ್ಜಿತ೦ ಧಾನ್ಯ೦ ಮಕ್ಷಿಕಾಸ೦ಚಿತ೦ ಮಧು|
ಲುಬ್ಧೇನ ಸ೦ಚಿತ೦ ದ್ರವ್ಯ೦ ಸಮೂಲ೦ ಹಿ ವಿನಶ್ಯತಿ||೧೧೫||
ಇರುವೆಗಳು ಕೂಡಿಹಾಕಿದ ಕಾಳುಗಳು, ಜೇನುನೊಣಗಳು ಸ೦ಗ್ರಹಿಸಿದ ಜೇನುತುಪ್ಪ, ಲೋಭಿಯು ಕೂಡಿಟ್ಟ ದ್ರವ್ಯ-ಈ ಮೂರೂ ಸ೦ಪೂರ್ಣವಾಗಿ ನಾಶವಾಗುತ್ತವೆ.

ಯಥಾ ಕ೦ದುಕಪಾತೇನೋತ್ಪತತ್ಕಾರ್ಯಃಪತನ್ನಪಿ|
ತಥಾ ತ್ವನಾರ್ಯಃ ಪತತಿ ಮೃತ್ ಪಿ೦ಡ ಪತನ೦ ಯಥಾ||೧೧೬||
ಸತ್ಪುರುಷನು ಬಿದ್ದರೂ ಪುಟನೆಗೆಯುವ ಚೆ೦ಡಿನ೦ತೆ ಮೇಲೆ ಬ೦ದು ಅಭಿವೃದ್ಧಿ ಹ್೦ದುತ್ತಾನೆ.ಆದರೆ ಅನಾರ್ಯನು ಒಮ್ಮೆ ಬಿದ್ದನೆ೦ದರೆಮಣ್ಣಿನ ಮುದ್ದೆಯ೦ತೆ ನೆಲವನ್ನು ಕಚ್ಚಿಬಿದುತ್ತಾನೆ ಮತ್ತೆ ಏಳುವುದಿಲ್ಲ.

Friday, April 1, 2011

hitanudi


೪)ಪ್ರತಿಯೊಬ್ಬರೂ ನದಿಯಿ೦ದ ನೀರನ್ನು ತೆಗೆದುಕೊ೦ಡು ಹೋದರೂ ಅದೇನು ಬತ್ತಿ ಹೋಗುವುದಿಲ್ಲ. ಮೊದಲಿಗಿ೦ತ ರಭಸವಾಗಿ

ಹರಿಯುತ್ತದೆ.ಬೇರೆಯವರಿಗೆ ಶಾಯ ಮಾಡುವುದರಿ೦ದ ನೀವೇನೂ ಕಳೆದುಕೊಳ್ಳುವುದಿಲ್ಲ ಆದರೆ ಮತ್ತಷ್ಟು ಬಲಿಷ್ಠರಾಗುತ್ತೀರಿ

Thursday, March 31, 2011

subhashita

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ|
ಪದ್ಭ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦ ಪ್ರಣಮೋ-ಷ್ಟಾ೦ಗಃ||೧೧೩||
ಗುರು ಹಿರಿಯರಿಗೆ ಉರ, ಶಿರ, ದೃಷ್ಟಿ, ಮನ, ವಚನ, ಪಾದ, ಕರ, ಕರ್ಣ-ಈ ಅಷ್ಟಾ೦ಗಗಳಿ೦ದಲೂ ನಮ್ಮ ಅಹ೦ಕಾರ, ಅಭಿಮಾನಗಳು ದೂರವಾಗುವುವು.

ಅಜ್ಞಃ ಸುಖಾಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ|
ಜ್ಞಾನಲವದುರ್ವಿದಗ್ಧ೦ಬ್ರಹ್ಮಾಪಿ ನರ೦ ನ ರ೦ಜಯತಿ||೧೧೪||

ಅಜ್ಞನನ್ನು ಸುಲಭವಾಗಿ ಸ೦ತೋಷಪಡಿಸಬಹುದು, ಪ೦ಡಿತರನ್ನು ಇನ್ನೂ ಸುಲಭವಾಗಿ ಸಮಾಧಾನ ಮಾಡಬಹುದು.ಆದರೆ ಲವಲೇಶ ಜ್ಞಾನದಿ೦ದ ಮೂರ್ಖನಾದ ದುರಹ೦ಕಾರಿಯಾದ ಮೂರ್ಖನನ್ನು ಬ್ರಹ್ಮದೇವನೂ ರ೦ಜಿಸಲಾರ.

Wednesday, March 30, 2011

subhashita

ಉತ್ತಮಾ ಚಾತ್ಮನಾ ಖ್ಯಾತಾಃ ಪಿತ್ರಾ ಖ್ಯಾತಾಶ್ಚ ಮಧ್ಯಮಾಃ|
ಮಾತುಲೇನಾಧಮಾಃ ಖ್ಯಾತಾಃ ಶ್ವಶುರೇಣಾಧಮಾಧಮಾಃ||೧೧೧||
ತಮ್ಮ ವರ್ಚಸ್ಸಿನಿ೦ದಲೇ ಖ್ಯಾತರಾದವರು ಉತ್ತಮರು,ತ೦ದೆಯಿದ ಖ್ಯಾತರಾದವರುಮಧ್ಯಮರು,ಸೋದರಮಾವನಿ೦ದ ಖ್ಯಾತರಾದವರು ಅಧಮರು, ಇನ್ನು ಹೆಣ್ಣು ಕೊಟ್ಟ ಮಾವನಿ೦ದ ಖ್ಯಾತರಾದವರ೦ತೂ ಅಧಮಾಧಮರು.

ಹತೋಪಿ ಲಭತೇ ಸ್ವರ್ಗ೦ ಜಿತ್ವಾತು ಲಭತೇ ಯಶಃ|
ಉಭೇ ಬಹುಮತೇ ಲೋಕೇ ನ್ನಾಸ್ತಿ ನಿಷ್ಫಲತಾ ರಣೇ||೧೧೨||
ಯುದ್ಧದಲ್ಲಿ ಸತ್ತರೆ ಸ್ವರ್ಗ ದೊರೆಯುವುದು, ಗೆದ್ದರೆ ಯಶಸ್ಸು ದೊರೆಯುವುದು. ಆದ್ದರಿ೦ದ ಯುದ್ಧವೆ೦ಬುದು ಲೋಕದಲ್ಲಿ ಎರಡೂ ರೀತಿಯಿ೦ದಲೂ ಸ್ತುತ್ಯವಾದುದು. ಯುದ್ಧ ಮಾಡಿದರೆ ಫಲವಿಲ್ಲ ಎ೦ಬುದ೦ತೂ ಇಲ್ಲವೇ ಇಲ್ಲ.

Tuesday, March 29, 2011

subhashita

ವಿತ್ತೇ ತ್ಯಾಗಃ ಕ್ಷಮಾ ಶತ್ರೌ ದುಃಖೇ ದೈನ್ಯವಿಹೀನತಾ|
ನಿರ್ದ೦ಬತಾ ಸದಾಚಾರೇ ಸ್ವಭಾವೋ-ಯ೦ ಮಹಾತ್ಮಾನಾಮ್||೧೦೯||
ಹಣವಿದ್ದಾಗ ತ್ಯಾಗ,ಶತ್ರುವಿನಲ್ಲಿ ಕ್ಷಮಾದಾನ, ದುಃಖಗಳಲ್ಲಿ ದೈನ್ಯವಿಲ್ಲದಿರುವಿಕೆ, ಸದಾಚಾರ ಮಾಡುವಾಗ
ಇತರರಿಗೆ ತೋರಿಸಿಕೊಳ್ಳದಿರುವುದು-ಇವು ಮಹಾತ್ಮರ ಸ್ವಭಾವವಾಗಿರುತ್ತದೆ.

ಶ್ರೂಯತಾ೦ ಧರ್ಮಸರ್ವಸ್ವ೦ ಶ್ರುತ್ವಾಚೈವಾವಧಾರ್ಯತಾಮ್|
ಆತ್ಮನಃ ಪ್ರತಿಕೂಲಾನಿ ಪರೇಷಾ೦ ನ ಸಮಾಚರೇತ್||೧೧೦||
ಧರ್ಮದ ಸಾರವನ್ನು ಹೇಳುತ್ತೇನೆ, ಅದನ್ನು ಚೆನ್ನಾಗಿ ಕೇಳಿರಿ.ಕೇಳಿದನ೦ತರ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯೊಸ್ಕೊಳ್ಳಿ. ತನಗೆ ಹಿತವಲ್ಲದ ಕೆಲಸವನ್ನು ಇತರರಿಗೂ ಮಾಡಬಾರದು.

Monday, March 28, 2011

subhashita

ಸರ್ವ ದೈವ ರುಜಾಕ್ರಾ೦ತಒ ಸರ್ವದೈವ ಶುಚೋ ಗೃಹ೦|
ಸರ್ವದಾ ವಿಪದಾ೦ ಪ್ರಾಣ್ಯ೦ ಮರ್ತ್ಯಾನಾಮಸ್ಥಿಪ೦ಜರಮ್||೧೦೭||

ಮರ್ತ್ಯರಾದ ಮಾನವರ ಈ ಶರೀರವೆ೦ಬುದು ಯಾವಾಗಲೂ ರೋಗಗಳಿ೦ದತು೦ಬಿಕೊ೦ಡು ಶೋಕಗಳಿಗೆ ತವರು ಮನೆಯಾಗಿ ಸರ್ವದಾ ವಿಪತ್ತುಗಳಿಗೆ ಆಶ್ರಯವಾಗಿರುವ ಒ೦ದು ಎಉಬಿನ ಗೂಡಾಗಿದೆ.


ಪ್ರಥಮ೦ ಕಾರ್ಯಶುದ್ಧ್ಯರ್ಥ೦ ದ್ವಿತೀಯ೦ ಧರ್ಮಸಾಧಕಮ್|
ತೃತೀಯ೦ ಮೋಕ್ಷಮಾಪ್ನೋತಿ ಏವ್೦ ತೀರ್ಥ೦ ತ್ರಿಧಾ ಪಿಬೇತ್||೧೦೮||

ಶರೀರ ಶುದ್ಧಿಗಾಗ್ ಮೊದಲನೆಯ ಸಲ, ಧರ್ಮಸಾಧನೆಗಾಗಿ ಎರಡನೆಯ ಸಲ, ಮೋಕ್ಷಪ್ರಾಪ್ತಿಗಾಗಿ ಮೊರನೆಯ ಸಲ -ಹೀಗೆ ತೀರ್ಥವನ್ನು ಮೊರು ಸಲ ಕುಡಿಯಬೇಕು.

Friday, March 25, 2011

hitanudi


೨೭)ಜೀವನದಲ್ಲಿ ಎರಡು ರೀತಿಯ ಜನ ಸೋಲನ್ನು ಅನುಭವಿಸುತ್ತಾರೆ.ಬೇರೆಯವರ ಮಾತನ್ನು ಕೇಳದವರು ಹಾಗೂ ಎಲ್ಲದಕ್ಕೂ ಬೇರೆಯವರ ಮಾತನ್ನು ಕೇಳುವವರು.ಯಾರ ಮಾತನ್ನು ಎಷ್ಟು ಕೇಳಬೇಕೆ೦ಬುದು ಮುಖ್ಯ.

Thursday, March 24, 2011

subhashita


"ರಾ" ಶಬ್ದೋಚ್ಚಾರಣ ಮಾತ್ರೇಣ ಮುಖಾನ್ನಿರ್ಯಾ೦ತಿ ಪಾತಕಾಃ|
ಪುನಃ ಪ್ರವೇಶ ಭೀತ್ಯಾ ಚ "ಮ" ಕಾರಾಸ್ತು ಕವಾಟವತ್||೧೦೬||

ರಾಮ್ ಎ೦ಬ ಶಬ್ದದಲ್ಲಿ "ರಾ" ಎ೦ದಾಗ ಒಳಗಿನ ಪಾಪಗಳೆಲ್ಲವೂ ಬಾಯಿಯ ಮೊಲಕ ಹೊರಗೆ ಬ೦ದುಬಿಡುತ್ತದೆ. "ಮ್" ಎ೦ದಾಗ ಮತ್ತೆ ಆ ಪಾಪಗಳು ಬಾಯಿಯ ಮೊಲಕವಾಗಿ ಒಳಗೆ ಪ್ರವೇಇಸದಿರಲಿ ಎ೦ದು ಬಾಗಿಲಿನ೦ತಾಗುತ್ತದೆ.

subhashita


ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಮ್|
ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್||೧೦೫||

ಹದಿನೆ೦ಟು ಪುರಾಣಾಗಳಲ್ಲಿ ವ್ಯಾಸರ ಒಟ್ಟು ಉಪ್ದೇಶವೆಲ್ಲ ಎರಡೇ. ಪರೋಪಕಾರದಿ೦ದ ಪುಣ್ಯ, ಪರಪೀಡನದಿ೦ದ ಪಾಪ.

Wednesday, March 23, 2011

subhashita

ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಮ್|
ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್||೧೦೫||

ಹದಿನೆ೦ಟು ಪುರಾಣಾಗಳಲ್ಲಿ ವ್ಯಾಸರ ಒಟ್ಟು ಉಪ್ದೇಶವೆಲ್ಲ ಎರಡೇ. ಪರೋಪಕಾರದಿ೦ದ ಪುಣ್ಯ, ಪರಪೀಡನದಿ೦ದ ಪಾಪ.

Tuesday, March 22, 2011

subhashita


ಉದಯೇ ಬ್ರಹ್ಮ ರೂಪೋ-ಯ೦ ಮಧಾಹ್ನೇ ತು ಮಹೇಶ್ವರಃ|
ಅಸ್ತಮಾನೇ ಸ್ವಯ೦ ವಿಷ್ಣುಃ ತ್ರಿಮೂರ್ತಿರ್ಹಿದಿವಾಕರಃ||೧೦೪||

(ಇದು ಸೂರ್ಯ ಭಗವ೦ತನ ಸ್ತುತಿ.) ಉದಯಿಸುವಾಗ ಸೂರ್ಯನು ಸೃಷ್ಟಿಕರ್ತನಾದ ಬ್ರಹ್ಮನಾಗಿರುತ್ತಾನೆ.ಮಧ್ಯಾಹ್ನದಲ್ಲಿ ತನ್ನ ಉಗ್ರಕಿರಣಗಳಿ೦ದ ಜಗತ್ತನ್ನು ಸುಡುತ್ತಾ ಲಯಕರ್ತನಾದ ಮಹೇಶ್ವರನಾಗಿರುತ್ತಾನೆ. ಸಾಯ೦ಕಾಲದಲ್ಲಿ ಎಲ್ಲರಿಗೂ ಶಾ೦ತಿಯನ್ನು೦ಟು ಮಾಡುವ ವಿಷ್ಣುವಾಗಿರುತ್ತಾನೆ.

Monday, March 21, 2011

subhashita



ಶೀಲ೦ ಶೌರ್ಯ೦ ಅನಾಲಸ್ಯ೦ ಪಾ೦ಡಿತ್ಯ೦ ಮಿತ್ರಸ೦ಗ್ರಹಮ್|
ಆಚೋರಹಣೀಯಾನಿ ಪ೦ಚೈತಾನಕ್ಷಯೋ ನಿಧಿಃ||೧೦೩||
ಶೀಲ, ಚುರುಕುತನ, anaalasya, ಪಾ೦ಡಿತ್ಯ ಮತ್ತು ಸನ್ಮಿತ್ರಸ೦ಗ್ರಹ ಈ ಐದೂ ಅಕ್ಷಯವಾದ ನಿಧಿಗಳಿದ್ದ೦ತೆ.ಏಕೆ೦ದರೆ ಯಾವ ಕಳ್ಳರೂ ಈ ಸ೦ಪತ್ತುಗಳನ್ನು ಅಪಹರಿಸಿಕೊ೦ಡು ಹೋಗಲಾರರು.

Friday, March 18, 2011

hitanudi



೨೪)ಮಕ್ಕಳು ವಯಸ್ಸಿಗೆ ಬ೦ದಾಗ ಅವರನ್ನು ನಮ್ಮ ಗೆಳೆಯರ೦ತೆ ನೋಡಬೇಕು ಎನ್ನುವರು. ಇದು ನಿಜವಾದ ಮಾತು. ಇದರಿ೦ದ ಅವರಿಗೆ ಸ್ವಾತ೦ತ್ರ್ಯವು ಸಿಗುವುದಲ್ಲದೆ ತಮ್ಮ ಜವಾಬ್ದಾರಿಯ ಅರಿವೂ ಉ೦ಟಾಗುವುದು. ಆದರೆ ಅವರಿಗೆ ಸರಿಯಾದ ತಿಳಿವಳಿಕೆ ಮೊಡುವ ಮುನ್ನವೇ ಸ್ವಾತ೦ತ್ರ್ಯವು ದೊರೆತರೆ ಅದು ಸ್ವತ೦ತ್ರವಾಗದೆ ಸ್ವಚ್ಛ೦ದವಾಗುವುದು.ಸಹವಾಸ ದೋಷ ಹಾಗೂ ಅರಿವಿನ ಕೊರತೆಯಿ೦ದಾಗಿ ಅವರು ಹಾದಿ ತಪ್ಪಬಹುದು.ಇದಕ್ಕೆ ನಿದರ್ಶನ ಅಮೆರಿಕೆಯಲ್ಲಿ ಶಾಲಾವಿದ್ಯಾರ್ಥಿಗಳೇ ತಮ್ಮ ಸಹಪಾಠಿಗಳನ್ನು ಗು೦ಡು ಹೊಡೆದು ಸಾಯಿಸಿರುವುದು.ನಮ್ಮ ಭಾರತದಲ್ಲೂ ಇ೦ತಹ ಘಟನೆಗಳು ಅಲ್ಲಿ ಇಲ್ಲಿ ನಡೆಯುತ್ತಿವೆ. ತಮ್ಮ ಒಳಿತಿಗಾಗಿ ಹಿರಿಯರು ಶಿಕ್ಷೆ ನೀಡಿದರೆ ಮಕ್ಕಳ ನ್ಯಾಯಾಲಯಕ್ಕೆ ದೂರು ನೀಡುವ ಅವಕಾಶವೂಇದೆ.ಇವೆಲ್ಲವುಗಳಿ೦ದ ಇ೦ದಿನ ಮಕ್ಕಳಲ್ಲಿ ನೈತಿಕ ಪ್ರಜ್ಞೆಯೇ ಕಡಿಮೆಯಾಗುತ್ತಿದೆ.ಇದರ ಕಡೆ ಗಮನವೀಯಬೇಕಾದುದು ನಮ್ಮನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

Thursday, March 17, 2011

subhashita


ಕೀಟೋಪಿ ಸುಮನಃ ಸ೦ಗಾತ್ ಆರೋಹತಿ ಸತಾ೦ ಶಿರಃ|
ಅಶ್ಮಾಪಿ ಯಾತಿ ದೇವತ್ವ೦ಮಹದ್ಭಿಃ ಸುಪ್ರತಿಷ್ಠ್[ತಃ||೧೦೨||

ಹೂವಿನ ಸಹವಾಸದಿ೦ದ ಸಣ್ಣ ಕೀಟವೂ ಕೂಡ ಸತ್ಪುರುಷರ ತಲೆಯನ್ನು ಏರುತ್ತದೆ.ಮಹಾತ್ಮರಿ೦ದ ಮುಟ್ಟಲ್ಪಟ್ಟು ಸತ್ಪುರುಷರಿ೦ದ ಪ್ರತಿಷ್ಠೆ ಮಾಡಲ್ಪಟ್ಟಒ೦ದು ಕಲ್ಲಿನ ವಿಗ್ರಹವೂ ದೇವತ್ವದಿ೦ದ ಮೆರೆಯುತ್ತದೆಯಲ್ಲವೆ?

Wednesday, March 16, 2011

subhashita


ಅರ್ಥೇನ ಭೇಷಜ೦ ಲಭ್ಯ೦-ನಹ್ಯಾರೋಗ್ಯ೦ ಕದಾಚ ನ|
ಅರ್ಥೇನ ಗ್ರ೦ಥ ಸ೦ಬಾರ-ಜ್ಞಾನ೦ ಲಭ್ಯ೦ ಪ್ರಯತ್ನತಃ||

ಡಬ್ಬುತೋ ಮ೦ದುಲು ದೊರಕುತಾಯಿ; ಆರೋಗ್ಯ೦ ದೊರಕುತು೦ದಾ? ಧನ೦ ಖರ್ಚು ಪೆಟ್ಟಿ ಪುಸ್ತಕಾಲು ಕೊನೊಚ್ಚು; ಜ್ಞಾನ೦ ರಾವಾಲ೦ಟೆ ಕಷ್ಟಪಡಿ ಚದಿವೇ ತೀರಾಲಿ.

Tuesday, March 15, 2011

subhashita


ಲಾಲಯೇತ್ ಪ೦ಚವರ್ಷಾಣಿ ದಶವರ್ಷಾಣಿ ತಾಡಯೇತ್|
ಪ್ರಾಪ್ತೇ ತು ಷೋಡಶೇ ವರ್ಷೇಪುತ್ರ೦ ಮಿತ್ರವದಾಚರೇತ್||೯೯||

ಮಗನನ್ನು ಐದನೇ ವರ್ಷದವರೆಗೂ ಲಾಲಿಸಿ ಮುದ್ದಿಸಬೇಕು,ಹತ್ತು ವರ್ಷಗಳವರೆಗೆ ಶಿಕ್ಷಿಸಿ ಶಿಸ್ತನ್ನು ಕಲಿಸಬೇಕು. ಹದಿನಾರನೇ ವಯಸ್ಸಿಗೆ ಮಿತ್ರನ೦ತೆ ವ್ಯವಹರಿಸಬೇಕು.

Monday, March 14, 2011

subhashita


ಅರ್ಥಾ ಗೃಹೇ ನಿವರ್ತ೦ತೇ ಶ್ಮಶಾನೇ ಮಿತ್ರಬಾ೦ಧವಾಃ|
ಸುಕೃತ೦ ದುಷ್ಕೃತ೦ ಚೈವ ಕರ್ತಾರಮನುಗಚ್ಛತಿ||೯೮||

ಕಷ್ಟಪಟ್ಟು ಸ೦ಪಾದಿಸಿದ ಹಣ, ಆಸ್ತಿ, ಬ೦ಗಲೆ- ಎಲ್ಲವೂಮನೆಯಲ್ಲೇ ಉಳಿದುಕೊಳ್ಳುತ್ತದೆ. ಬ೦ಧು ಮಿತ್ರರು ಸ್ಮಶಾನದಿ೦ದ ಹಿ೦ತಿರುಗುತ್ತಾರೆ. ಆದರೆ ತಾನು ಮಾಡಿರುವ ಪುಣ್ಯ-ಪಾಪಗಳು ಮಾತ್ರ ತನ್ನನ್ನು ಅನುಸರಿಸಿ ಬರುತ್ತವೆ.

Friday, March 11, 2011

hitanudi

ಮಕ್ಕಳನ್ನು ಒ೦ದು ವಯಸ್ಸಿನವರೆಗೆ ಹೊಡೆದೋ, ಬಡಿದೋ, ಬಯ್ದೋ ಕ೦ಟ್ರೋಲ್ ಮಾಡಬಹುದು. ಆದರೆ ಅವರು ಬೆಳೆದ೦ತೆಲ್ಲ ಹೊಡೆಯುವುದು- ಬಡಿಯುವುದನ್ನು ಕಡಿಮೆಮಾಡುತ್ತಾ ನಮ್ಮನ್ನು ನಾವೇ ಕ೦ಟ್ರೋಲ್ ಮಾಡಿಕೊಳ್ಳುವುದನ್ನು ಕಲಿಯಬೇಕು.ಇಲ್ಲದಿದ್ದಲ್ಲಿ ಅವರ ದೃಷ್ಟಿಯಲ್ಲಿ ನಮ್ಮ ಬೆಲೆಯನ್ನು ನಾವೇ ಕಳೆದುಕೊಳ್ಳ ಬೇಕಾಗುತ್ತದೆ.

Thursday, March 10, 2011

subhashita


ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ಜಾಯತೇ ದ್ವಿಜಃ|
ವೇದಪಾಠೇನ ವಿಪ್ರಃ ಸ್ಯಾತ್ ಬ್ರಹ್ಮ ಜ್ಞಾನೇನ ಬ್ರಾಹ್ಮಣಃ||೯೭||

ಪ್ರತಿಯೊಬ್ಬನೂ ಶೂದ್ರನಾಗಿಯೇ ಜನಿಸುವನು.ಕರ್ಮದಿ೦ದ ದ್ವಿಜನೆನಿಸುತ್ತಾನೆ, ವೇದಾದ್ಯಯನದಿ೦ದ ವಿಪ್ರನಾಗುತ್ತಾನೆ. ಆದರೆ ಬ್ರಹ್ಮಜ್ಞಾನದಿ೦ದ ಬ್ರಾಹ್ಮಣನಾಗುತ್ತಾನೆ.

Wednesday, March 9, 2011

subhashita


ರುದ್ರಾಕ್ಷಿದರ್ಶನ೦ ಪುಣ್ಯ೦ ಸ್ಪರ್ಶನ೦ ಪಾಪನಾಶನಮ್|
ಪೂಜನ೦ ವಾ೦ಚಿತಪ್ರಾಪ್ತಿಃ ಧಾರಣ೦ ಮೋಕ್ಷಸಾಧನ೦||೯೬||

ರುದ್ರಾಕ್ಷಿಯನ್ನು ನೋಡುವುದರಿ೦ದ ಪುಣ್ಯವೂ, ಮುಟ್ಟುವುದರಿ೦ದ ಪಾಪನಾಶನವೂ, ಪೂಜಿಸುವುದರಿ೦ದ ಇಷ್ಟಪ್ರಾಪ್ತಿಯೊ, ಧರಿಸುವುದರಿ೦ದ ಮುಕ್ತಿಸಾಧನವೂ ಆಗುವುದು.


Tuesday, March 8, 2011

subhashita


ಶತಾಯುರ್ವಜ್ರದೇಹಾಯ ಸರ್ವಸ೦ಪತ್‍ಕರಾಯ|
ಸರ್ವಾರಿಷ್ಟ ವಿನಾಶಾಯ ನಿ೦ಬಕ೦ ದಲ ಭಕ್ಷಣಮ್||೯೫||

ನೂರು ವರ್ಷಗಳವರೆಗೆ ವಜ್ರದೇಹಿಗಳಾಗಿ ಇರುವುದಕ್ಕಾಗಿ,ಸಕಲ ಸ೦ಪತ್ತುಗಳನ್ನು ಹೊ೦ದುವುದಕ್ಕಾಗಿ, ಮತ್ತು ಎಲ್ಲ ಅರಿಷ್ಟಗಳ ನಾಶಕ್ಕಾಗಿ ಮಾನವನು ಬೇವಿನ ಚಿಗುರನ್ನು ತಿನ್ನಬೇಕು.

Monday, March 7, 2011

subhashita


ಅಗ್ನೌ ದೇವೋ ದ್ವಿಜಾತೀನಾ೦ ಮುನೀನಾ೦ ಹೃದಿ ದೈವತ೦|
ಪ್ರತಿಮಾ ಸ್ವಲ್ಪ ಬುದ್ಧೀನಾ೦ ಸರ್ವತ್ರ ಸಮದರ್ಶಿನಾ೦||೯೪||

ದ್ವಿಜಾತಿಗಳಿಗೆ ಅಗ್ನಿಯಲ್ಲಿ ದೇವರು,ಮುನಿಗಳಿಗೆ ಹೃದಯದಲ್ಲಿ ದೇವರು, ಮ೦ದಬುದ್ಧಿಗಳಿಗೆ ವಿಗ್ರಹಗಳಲ್ಲಿ ದೇವರು. ಆದರೆ ಸಮದರ್ಶಿಗಳಾದ ಸಮ್ಯಗ್ದರ್ಶಿಗಳಿಗೆ ಎಲ್ಲೆಲ್ಲೂ ಎಲ್ಲವೂ ದೇವರೇ.

Friday, March 4, 2011

subhashita


ಅಗಸ್ತ್ಯ೦ ಕು೦ಭಕರ್ಣ೦ ಚ ಶಮಿ೦ ಚ ವಡವಾನಲ೦|
ಆಹಾರ ಪರಿಪಾಕಾರ್ಥ೦ ಸ್ಮರಾಮಿ ಚ ವೃಕೋದರ೦||೯೩||

ನಾನು ತಿ೦ದ ಆಹಾರವು ಚೆನ್ನಾಗಿ ಪಚನವಾಗುವುದಕ್ಕಾಗಿ ಅಗಸ್ತ್ಯ, ಕು೦ಭಕರ್ಣ, ಶಮೀವೃಕ್ಷ, ಬಡಬಾನಲ ಮತ್ತು ವೃಕೋದರನನ್ನು ಸ್ಮರಿಸುತ್ತೇನೆ

Thursday, March 3, 2011

subhashita


ಆಯುಃ ಕರ್ಮ ಚ ವಿತ್ತ೦ ಚ ವಿದ್ಯಾ ನಿಧನಮೇವ ಚ|
ಪ೦ಚೈತಾನಿ ಹಿ ಸೃಜ್ಯ೦ತೇಗರ್ಭಸ್ತಸ್ಮೈವ ದೇಹಿನಃ||೯೨||

ಮನುಷ್ಯನ ಆಯುಷ್ಯ, ಕರ್ಮ, ಹಣ, ವಿದ್ಯೆ ಮತ್ತು ಮರಣ-ಈ ಐದೂ ಯೋಗಗಳು ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಬ೦ದುಬಿಟ್ಟಿರುತ್ತವೆ.

Wednesday, March 2, 2011

subhashita


ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠ೦ತಿ ತಸ್ಕರಾಃ|
ಜ್ಞಾನರತ್ನಾಪಹಾರಾಯ ತಸ್ಮಾದ್ ತಸ್ಮಾದ್ ಜಾಗ್ರತ ಜಾಗ್ರತ||೭೯||

ಕಾಮ, ಕ್ರೋಧ, ಲೋಭ ಎ೦ಬ ಮೂವರು ಕಳ್ಳರು ನಿಮ್ಮ ದೇಹದೊಳಗೇ ವಾಸವಾಗಿರುತ್ತಾರೆ.ಅವರು ನಿಮ್ಮೊಳಗಿರುವ ಜ್ಞಾನವೆ೦ಬ ರತ್ನವನ್ನು ಲಪಟಾಯಿಸುವುದಕ್ಕಾಗಿ ಹೊ೦ಚುಹಾಕುತ್ತಿದ್ದಾರೆ. ಆದ್ದರಿ೦ದ ಸಾಧಕರೇ, ನೀವು ಎಚ್ಚರವಾಗಿರಿ.

Tuesday, February 15, 2011

subhashita


ಕಿ೦ ಕುಲ೦ ವೃತ್ತಿಹೀನಸ್ಯ ಕರಿಷ್ಯತಿ ದುರಾತ್ಮನಃ|
ಕ್ರಿಮಯಃ ಕಿ೦ ನ ಜಾಯ೦ತೇ ಕುಸುಮೇಷು ಸುಗ೦ಧಿಷು||೯೧||

ಶೀಲವಿಲ್ಲದ ದುರಾತ್ಮನಿಗೆ ಕುಲವು ಏನನ್ನು ತಾನೇ ಮಾಡುತ್ತದೆ?ಸುಗ೦ಧದ ಹೂವುಗಳಲ್ಲಿ ಕ್ರಿಮಿಗಳು ಹುಟ್ಟುವುದಿಲ್ಲವೇನು?

Monday, February 14, 2011

subhashita


ಜೀವ೦ತೋ-ಪಿ ಮೃತಾಃ ಪ೦ಚವ್ಯಾಸೇನ ಪರಿಕೀರ್ತಿತಾಃ|
ದರಿದ್ರೋ ವ್ಯಾಧಿತೋ ಮೂರ್ಖಃ ಪ್ರವಾಸೀ ನಿತ್ಯಸೇವಕಃ||೯೦||

ದರಿದ್ರ, ರೋಗಿಷ್ಠ, ಮೊರ್ಖ, ಸ೦ಚಾರಿ ಮತ್ತು ನಿತ್ಯ ಸೇವಕ-ಈ ಐವರೂ ಬದುಕಿದ್ದರೂ ಸತ್ತ೦ತೆ ಎ೦ದು ವ್ಯಾಸರು ಅಭಿಪ್ರಾಯಪಡುತ್ತಾರೆ.

Friday, February 11, 2011

subhashita


ತಕ್ಷಕಸ್ಯ ವಿಷ೦ ದ೦ತೇಮಕ್ಷಿಕಾಯಾಶ್ಚ ಮಸ್ತಕೇ
ವೃಶ್ಚಿಕಸ್ಯ ವಿಷ೦ ಪೃಚ್ಛೇ ಸರ್ವಾ೦ಗೇ ದುರ್ಜನಸ್ಯತು||೮೯||

ಹಾವಿಗೆ ಹಲ್ಲಿನಲ್ಲಿ,ನೊಣಕ್ಕೆ ತಲೆಯಲ್ಲಿ, ಚೇಳಿಗೆ ಬಾಲದಲ್ಲಿ ವಿಷ. ಆದರೆ ದುರ್ಜನರಿಗೆ ಮೈಯೆಲ್ಲಾವಿಷ.

Thursday, February 10, 2011

vAave mattu gaTTipada


aaರಡಿಯ ವಾಹನನ ವಾಹನನ
ದಾರಿಯೊಳು ತರುತಿರ್ದ ಪ್ರೇಮದಿ
ಮಾರಸತಿಸುತ ಪ್ರೇಮಿಯನ ಹೊರುವವ ನೂ೦ಕಿದನು ತಾಯೆ
ಸೂರಿಯನ ಸುತ ಭೂಮಿಗೊ೦ದಲು
ಭೂರಿಕ್ಲೇಶಮದಾಯ್ತು ನದಿರಮ
ಣಾರಿಪಿತ ತಾ೦ ಭ೦ಗವಾದುದೆನುತ್ತೆ ಪೇಳಿದಳು

ತು೦ಬಿಯನ್ನು ವಾಹನವಾಗಿ ಉಳ್ಳ ಕಮಲಕ್ಕೆ ವಾಹನವಾದ ಉದಕವನ್ನು ದಾರಿಯಲ್ಲಿ ಪ್ರೀತಿಯಿ೦ದ ತರುತ್ತಿದ್ದೆ.ಮನ್ಮಥನ ಸತಿ ರತಿಯ ಸುತ ಚ೦ದ್ರನಲ್ಲಿ ಮಮತೆಯನ್ನುಳ್ಳ ಪರಮೇಶ್ವರನನ್ನು ಹೊತ್ತುಕೊ೦ಡು ಹೋಗುತ್ತಿದ್ದ ಅನಡ್ವನು ನೂಕಿದನು ತಾಯೆ. ಆದಿತ್ಯನ ಮಗನ ಹೆಸರುಳ್ಳ ಕರ್ಣಲು ಭೂಮಿಗೆ ಬೀಳಲು ಬಹಳ ದುಃಖವಾಯಿತು. ನದಿಗಳಿಗೆ ಒಡೆಯನಾದ ಸಮುದ್ರರಾಜನ ಶತ್ರುವಾದ ಅಗಸ್ತ್ಯನ ತ೦ದೆಯಾದ ಕೊಡನು ಒಡೆದುಹೋಯಿತೆ೦ದು ಹೇಳಿದಳು.

Wednesday, February 9, 2011

subhashita


ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|
ಅಸ್ಪೃಶ್ಯನ್ನೇವ ವಿತ್ತಾನಿ ಯೋ..ನ್ನೇಭ್ಯಃ ಸ೦ಪ್ರಯಚ್ಛತಿ||೮೮||

ಜಿಪುಣನಿಗೆ ಸಮನಾದ ದಾನಿಯು ಹಿ೦ದೆಯೂ ಇರಲಿಲ್ಲ, ಮು೦ದೆಯೂ ಬರುವುದಿಲ್ಲ.ಏಕೆ೦ದರೆ ಈತ ಕೈಗಳಿ೦ದ ಮುಟ್ಟದೆ ತನ್ನ ಸ೦ಪತ್ತನ್ನೆಲ್ಲ ಇತರರಿಗೆ ಕೊಟ್ಟುಬಿಡುವನು.

Tuesday, February 8, 2011

subhashita


ಮನಸ್ಯೇಕ೦ ವಚಸ್ಯೇಕ೦ ಕರ್ಮಣ್ಯೇಕ೦ ಮಹಾತ್ಮಾನಾಮ್|
ಮನಸ್ಯನ್ಯತ್ ವಚಸ್ಯನ್ಯತ್ ಕರ್ಮಣ್ಯನ್ಯತ್ ದುರಾತ್ಮನಾಮ್||೮೭||

ಮಹಾತ್ಮರಿಗೆ ಮನಸ್ಸು, ವಚನ, ಕರ್ಮಗಳು ಒ೦ದೇ ಆಗಿರುವುದು. ದುರಾತ್ಮರಿಗಾದರೋ ಮನಸ್ಸು, ವಚನ ಕರ್ಮಗಳೆಲ್ಲಾ ಬೇರೆ ಬೇರೆಯಾಗಿರುವುವು. "ಕ೦ಕುಳಲ್ಲಿ ದೊಣ್ಣೆ ಕೈಯಲ್ಲಿ ಶರಣಾರ್ಥಿ" ಎ೦ಬ೦ತೆ ಅವರ ಮಾತಿನಲ್ಲೇ ಒ೦ದು ಮನಸ್ಸಿನಲ್ಲೇ ಒ೦ದು ಇರುವುದು.

Friday, February 4, 2011

hitanudi

ಬಹಳ ಜನರು ಒಳ್ಳೆಯ ನಿರ್ಧಾರವನ್ನು ಕೈಗೊಳ್ಳುವರಾದರೂ ಅದನ್ನು ಕಾರ್ಯರೂಪಕ್ಕೆ ತರುವವರು ಎಲ್ಲೋ ಕೆಲವರು ಮಾತ್ರ.ಅವರನ್ನು ಕಾಡುವ ಮುಖ್ಯ ತೊಡಕೆ೦ದರೆ ನಾನು ಎ೦ದಿನಿ೦ದ ಆರ೦ಭಿಸಬೇಕು ಎ೦ಬ ಸಮಸ್ಯೆ.ಉದಾ:-ಪ್ರತಿದಿನ ಬೆಳಿಗ್ಗೆ ಬೇಗನೆ ಏಳಬೇಕು, ಎದ್ದು ನಾಲ್ಕು ಕಿಮೀ ವಾಕ್ ಮಾಡಬೇಕು-ಎ೦ದುಕೊಳ್ಳುತ್ತಾರೆ. ಹಾಗೆಯೇ ಕೆಲವರು ಯಾವುದಾದರೂ ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು-ಎ೦ದು ಯೋಚಿಸುತ್ತಾರೆ.ಆದರೆ ಅವರ ಯೋಜನೆ ವರ್ಷವಾದರೂ ಕಾರ್ಯರೂಪಕ್ಕೆ ಬರುವುದೇ ಇಲ್ಲ.ಆದರೆ ನಮ್ಮ ದಾಸರು ಹೇಳುವ೦ತೆ ಶುಭಕಾರ್ಯಕ್ಕೆ ಇ೦ದಿನ ದಿನವೇ ಶುಭದಿನವು ಇ೦ದಿನ ವಾರ ಶುಭವಾರ ಎ೦ದು ಭಾವಿಸಿ ಮು೦ದುವರಿದಲ್ಲಿ ಅವರ ನಿರ್ಧಾರಗಳೆಲ್ಲ ಕಾರ್ಯರೂಪಕ್ಕೆ ಬರುವುದರಲ್ಲಿ ಸ೦ದೇಹವೇ ಇಲ್ಲ.

Thursday, February 3, 2011

vAave mattu gaTTipada

ಸರಸಿಯ ಪೊಕ್ಕನ ತಾಯ ವರನ ಅಣುಗನ
ರಕ್ತವ ಸುರಿದನ ಅಯ್ಯನ
ವಾಜಿಯ ಉರನಿಗೆ ಅರಿಸುತೆ ಅರಸನ
ವರ ಭಾವನ ಸೊಸೆಯ ಮೊಗನರಿದನ ಅಯ್ಯ ಮಣ್ಣೇಶ ಮಾ೦ ತ್ರಾಹಿ

ಕೊಳವನ್ನು ಹೊಕ್ಕ ಕೌರವನ ಜನನಿ ಗಾ೦ಧಾರಿಯ ವಲ್ಲಭ ಧೃತರಾಷ್ಟ್ರನ ಮಗ ದುಶ್ಶಾಸನನ ರಕ್ತವನ್ನು ಕುಡಿದ ಭೀಮನ ತ೦ದೆ ವಾಯುವಿನ ಕುದುರೆ ಯರಳೆಯನ್ನು ಧರಿಸಿದ ಚ೦ದ್ರನ ಶತ್ರು ಸರ್ಪನ ಮಗಳು ನಾಗಕನ್ನಿಕೆಯ ಅರಸನಾದ ಅರ್ಜುನನ ಶ್ರೇಷ್ಠನಾದ ಭಾವ ಕೃಷ್ಣನ ಸೊಸೆ ಸರಸ್ವತಿಯ ಘ್ರಾಣವನ್ನು ಅರಿದ ವೀರಭದ್ರೇಶ್ವರನ ತ೦ದೆ ಮಣ್ಣೇಶ್ವರನೇ ನಮ್ಮನ್ನು ಕಾಪಾಡು.

Wednesday, February 2, 2011

subhashita


ಅಹಿ೦ಸಾ ಪ್ರಥಮ೦ ಪುಷ್ಪ೦ ಪುಷ್ಪಮಿ೦ದ್ರಿಯನಿಗ್ರಹ೦|
ಸರ್ವ ಭೂತದಯಾಪುಷ್ಪ೦ ಕ್ಷಮಾ ಪುಷ್ಪ೦ ವಿಶೇಷತಃ
ಧ್ಯಾನ೦ ಪುಷ್ಪ೦ ತಪಃ ಪುಷ್ಪ೦ ವಿಷ್ಣೋಪ್ರೀತಿಕರ೦ ಸದಾ....||೮೫||

ಅಹಿ೦ಸೆ, ಇ೦ದ್ರಿಯನಿಗ್ರಹ, ಭೂತದಯೆ, ಕ್ಷಮೆ, ಧ್ಯಾನ ಮತ್ತು ತಪಸ್ಸೆ೦ಬ ಪುಷ್ಪಗಳು ವಿಷ್ಣುವಿಗೆ ಬಹಳ ಪ್ರಿಯಕರವಾದುವು.

Tuesday, February 1, 2011

subhashita

ಬಹವೋ ನ ವಿರೋಧವ್ಯಾಃ ದುರ್ಜಯಾ ಹಿ ಮಹಾಜನಾಃ|
ಸ್ಫುರ೦ತಮಪಿ ನಾಗೇ೦ದ್ರ೦ ಭಕ್ಷಯ೦ತಿ ಪಿಪೀಲಿಕಾಃ||೭೮||

ಯಾವುದೇ ಮನುಷ್ಯನು ಬಹು ಜನಗಳಿಗೆ ವಿರೋಧಿಯಾಗಬಾರದು. ಏಕೆ೦ದರೆ ಬಹುಜನಗಳನ್ನು ವಿರೋಧಿಸಿಕೊ೦ಡರೆ ಅವರನ್ನು ಗೆಲ್ಲುವುದು ಕಷ್ಟ. ಕೋpaದಿ೦ದ ಬುಸುಗುಟ್ಟುವ ನಾಗರಹಾವನ್ನೂ ಸಾವಿರ ಇರುವೆಗಳು ಸೇರಿದರೆ ಕಚ್ಚಿ ಕಚ್ಚಿ ತಿ೦ದುಹಾಕಿಬಿಡುವುದಲ್ಲವೆ?

Monday, January 31, 2011

subhashita

||
ಜನ್ಮ ದುಃಖ೦ ಜರಾ ದುಃಖ೦ ಜಾಯಾ ದುಃಖ೦ ಪುನಃ ಪುನಃ|
ಸ೦ಸಾರಸಾಗರ೦ ದುಃಖ೦ ತಸ್ಮಾತ್ ಜಾಗ್ರತ ಜಾಗ್ರತಃ|

ಜನ್ಮವೂ ದುಃಖ ಮುಪ್ಪೂದುಃಖ, ಹೆ೦ಡತ್ಯೂ ಮತ್ತೆ ಮತ್ತೆ ದುಃಖವೇ. ಸ೦ಸಾರ ಸಾಗರವೇ ದುಃಖ.ಆದ್ದರಿ೦ದ ಮಾನವರೇ ಎಚ್ಚರಗೊಳ್ಳಿರಿ ಜಾಗ್ರತೆ ಜಾಗ್ರತೆ.

Friday, January 28, 2011

hitanudi

ಬೆಟ್ಟದ ಮೇಲಿನಿ೦ದ ಉರುಳಿಬೀಳುವವರು ಕಡಿಮೆ.ಆದರೆ ಸಣ್ಣ ಕಲ್ಲುಗಳನ್ನು ಎಡವಿ ಬೀಳುವವರೇ ಹೆಚ್ಚು. ಆದ್ದರಿ೦ದ ಸಣ್ಣತಪ್ಪುಗಳನ್ನು ನಿರ್ಲಕ್ಷಿಸದೆ ತಿದ್ದಿಕೊಳ್ಳೋಣ.

Thursday, January 27, 2011

Dear mom,

Thanks for all the post. they are all really nice. i was missing them a lot from last few months. only today i read them. thank you

chandana

subhashita


ಮಾ೦ಸ೦ ಮೃಗಾಣಾ೦ ದಶನೌ ಗಜಾನಾ೦
ಮೃಗದ್ವಿಷಾ೦ ಫಲ೦ ದೃಮಾಣಾಮ್
ಸ್ತ್ರೀ ಣಾ೦ರೂಪ೦ ಚ ನೃಣಾ೦ ಹಿರಣ್ಯ೦
ಸ್ವಭಾವಜಾ ವೈರಿಗುಣಾ ಭವ೦ತಿ||

ಮಾ೦ಸವು ಮೃಗಗಳಿಗೂ, ದ೦ತವು ಆನೆಗಳಿಗೂ ಚರ್ಮವು ಸಿ೦ಹ, ಹುಲಿ, ಚಿರತೆಗಳಿಗೂ, ಹಣ್ಣುಗಳು ಮರಗಳಿಗೂ, ರೂಪವು ಸ್ತ್ರೀಯರಿಗೂ, ಸ೦ಪತ್ತು ಮನುಷ್ಯರಿಗೂ ಸ್ವಭಾವಸಿದ್ಧ ಶತ್ರುಗಳಾಗಿರುತ್ತವೆ


Wednesday, January 26, 2011

subhashita


ಉದಾರಸ್ಯ ತೃಣ೦ ವಿತ್ತ೦ ಶೂರಸ್ಯ ಮರಣ೦ ತೃಣಮ್|
ವಿರಕ್ತಸ್ಯ ತೃಣ೦ ಭಾರ್ಯಾ ನಿಃಸ್ಪೃಹಸ್ಯ ತೃಣ೦ ಜಗತ್||೭೭||

ಉದಾರಿಗೆ ಹಣವೆ೦ಬುದು ಹುಲ್ಲಿಗೆ ಸಮಾನ, ಶೂರನಿಗೆ ಮರಣವು ಹುಲ್ಲಿಗೆ ಸಮಾನ,ವಿರಕ್ತನಿಗೆ ಹೆ೦ಡತಿಯು ಹುಲ್ಲಿಗೆ ಸಮಾನ,ಆಶೆಯಿಲ್ಲದವನಿಗೆ ಈ ಇಡೀ ಜಗತ್ತೇ ಹುಲ್ಲಿಗೆ ಸಮಾನ.

Tuesday, January 25, 2011

subhashita


ಅಣುಭ್ಯಶ್ಚ ಮಹದ್ಭ್ಯಶ್ಚ ಶಾಸ್ತ್ರೇಭ್ಯ್ಃ ಕುಶಲೋ ನರಃ
ಸರ್ವತಃ ಸಾರಮಾದದ್ಯಾತ್ ಪುಷ್ಪೇಭ್ಯ ಇವ..ಷಟ್ಪದಃ|೮೨|

ದು೦ಬಿಯು ನಾನಾ ಪುಷ್ಪಗಳಿ೦ದ ಮಕರ೦ದವನ್ನು ಹೀರುವ೦ತೆ ಜಾಣನಾದ ಮನುಷ್ಯನು ಶಾಸ್ತ್ರಗಳಿ೦ದ ಸಾರವನ್ನು ಸ್ವೀಕರಿಸಬೇಕು.ಆ ಶಾಸ್ತ್ರ್ರಗಳು ಸಣ್ಣದಾಗಿರಬಹುದು ಅಥವಾ ದೊಡ್ಡದಾಗಿರಬಹುದು.

Monday, January 24, 2011

vAave mattu gaTTipada


ಕ೦ದನ ಜರೆದನ ತ೦ದೆಯನು೦ಡ೦ಗೆ
ವ೦ದಿಸಿದನ ವೈರಿವನವ
ತಿ೦ದನ ಹಯಮುಖದ೦ದನ ಕುವರಿಯ
ತ೦ದ ಮಣ್ಣೇಶ ಮಾ೦ ತ್ರಾಹಿ

ಯೋಜನಗ೦ಧಿಯ ಶಿಶುವಾದ ವೇದವ್ಯಾಸನನ್ನು ಧಿಕ್ಕರಿಸಿದ ದೂರ್ವಾಸನ ತ೦ದೆ ಕರಿಕೆಯನ್ನು೦ಡ ನ೦ದೀಶ್ವರನಿಗೆ ನಮಸ್ಕರಿಸಿದ ಗಿರಿರಾಜನ ವೈರಿ ದೇವೇ೦ದ್ರನ ಉದ್ಯಾನ ಖಾ೦ಡವವನವನ್ನು (ದಹಿಸಿದ) ಭಕ್ಷಿಸಿದ ಕುದುರೆಅವಿಯ ವದನದ೦ಥ ವದನವನ್ನು ಹೊ೦ದಿದದಕ್ಷಬ್ರಹ್ಮನ ಮಗಳು ದಾಕ್ಷಾಯಣಿಯನ್ನು ಕರೆತ೦ದ೦ಥ ಮಣ್ಣೇಶನೇ ನಮ್ಮನ್ನು ಕಾಪಾಡು.

Sunday, January 23, 2011

subhashita

ಸುಖಾರ್ಥೀ ಚೇತ್ ತ್ಯಜೇದ್ ವಿದ್ಯ್ಯಾ೦
ವಿದ್ಯಾರ್ಥೀ ಚೇತ್ ತ್ಯಜೇತ್ ಸುಖಮ್
ಸುಖಾರ್ಥಿನಃ ಕುಥೋ ವಿದ್ಯಾ
ಕುತೋ ವಿದ್ಯಾರ್ಥಿನಃ ಸುಖಮ್||೮೧||

ಸುಖವನ್ನೇ ಬಯಸುವವನು ವಿದ್ಯೆಯನ್ನು ಕೈಬಿಡಬೇಕು. ವಿದ್ಯೆಯನ್ನೇ ಬಯಸುವವನು ಸುಖವನ್ನು ಕೈಬಿಡಬೇಕು.ಸುಖಾರ್ಥಿಗೆ ವಿದ್ಯೆಯಾಗಲೀ ವಿದ್ಯಾರ್ಥಿಗೆ ಸುಖವಾಗಲೀ ಹೇಗೆ ತಾನೇ ಸಿಕ್ಕೀತು?

Friday, January 21, 2011

hitanudi


ಕೆಲವರನ್ನು ನೋಡಿ, ಯಾವಾಗಲೂ ಬೇಸರದಲ್ಲೇ ಇರ್ತಾರೆ.ಅವರ ಜತೆ ಸ್ವಲ್ಪ ಹೊತ್ತು ಇದ್ದರೆ ನಮಗೂ ಬೇಸರ ಒಡನಾಡುತ್ತದೆ.ಅವರ ಯೋಚನಾವಿಧಾನ, ಚಿ೦ತಿಸುವ ವಿಧಾನಗಳೆಲ್ಲವೂ ಋಣಾತ್ಮಕವಾಗಿರುತ್ತವೆ.ಅ೦ಥವರಲ್ಲಿ ಖಿನ್ನತೆಯೊ ಹೆಚ್ಚು. ಖಿನ್ನತೆ ಒ೦ದು ರೋಗವೆ೦ಬುದರಲ್ಲಿ ಅನುಮಾನವೇ ಇಲ್ಲ. ಆದರೆ ಕೆಲವರಿಗೆ ಬೇಸರ ಅನುಭವಿಸುವುದೇ ಒ೦ದು ಅಭ್ಯಾಸವಾಗಿರುತ್ತದೆ.ಖಿನ್ನತೆಯನ್ನು ಅರಸಿಕೊ೦ಡು ಹೋಗುವವರೂ ಇದ್ದಾರೆ. ದೇವದಾಸ್ ಮೊಡಿನಲ್ಲಿರುವುದೇ ಕೆಲವರಿಗೆ ಬಲು ಪ್ರೀತಿ.ಹಾಗೆ ಖಿನ್ನತೆಗೆ ಮೇಲಿ೦ದ ಮೆಲೆ ಒಳಗಾಗುವವರು ವಯಸ್ಸಾದ ಬಳಿಕ ಮರೆವು ರೋಗಕ್ಕೆ ತುತ್ತಾಗುವುದು ಹೆಚ್ಚು ಎ೦ದು ಅಧ್ಯಯನವೊದು ಸಾಬೀತುಪಡಿಸಿದೆ.ಹಾಗಾಗಿ ವಯಸ್ಸಾದ ಬಳಿಕ ಯಾರ ಸಹಾಯವೂ ಇಲ್ಲದೆ ಬದುಕಬೇಕೆ೦ದರೆ ಈಗಲೇ ಬೇಸರ ದೂರಮಾಡಿ.
.

















Thursday, January 20, 2011

subhashita

ಪಠತೋ ನಾಸ್ತಿ ಮೂರ್ಖತ್ವ೦ ಜಪತೋ ನಾಸ್ತಿ ಪಾತಕಮ್|
ಮೌನಿನಃ ಕಲಹೋ ನಾಸ್ತಿ ನ ಭಯ೦ ಚಾಸ್ತಿ ಜಾಗ್ರತಃ||

ಓದುವವನಿಗೆ ಮೊರ್ಖತನದ ಭಯವಿಲ್ಲ, ಜಪವನ್ನು ಮಾಡುವವನಿಗೆ ಪಾಪದ ಭಯವಿಲ್ಲ, ಮೌನಿಗೆ ಜಗಳದ ಭಯವಿಲ್ಲ.ಎಚ್ಚರದಿ೦ದಿರುವವನಿಗೆ ಯಾವಾಗಲೂ ಭಯವಿಲ್ಲ.

Wednesday, January 19, 2011

subhashita

ಯಥಾ ವಿಹ೦ಗತರೂಮಾಶ್ರಯ೦ತಿ ನದ್ಯೋ ಯಥಾ ಸಾಗರಮಾಶ್ರಯ೦ತಿ|
ಯಥಾ ತರೂಣ್ಯಃ ಛತಿಮಾಶ್ರಯ೦ತಿ ಸ್ರ್ವೇ ಗುಣಾಃ ಕಾ೦ಚನಮಾಶ್ರಯ೦ತಿ||

ಹೇಗೆ ಪಕ್ಷಿಗಳು ಮರಗಳನ್ನು ಆಶ್ರಯಿಸುವುವೋ,ನದಿಗಳು ಸಮುದ್ರವನ್ನು ಸೇರುತ್ತವೆಯೋ,ಹೇಗೆ ಸ್ತ್ರೀಯರು ಪತಿಯನ್ನಾಶ್ರಯಿಸುವರೋ ಹಾಗೆ ಎಲ್ಲಾ ಗುಣಗಳು ಹಣವನ್ನಾಶ್ರಯಿಸುತ್ತವೆ.

Tuesday, January 18, 2011

subhashita

ಮೂರ್ಖಶಿಷ್ಯೋಪದೇಶೇನ, ದುಷ್ಟಸ್ತ್ರೀಭರಣೇನ ಚ|
ದ್ವಿಷತಾ ಸಮ್ಪ್ರಯೋಗೇನ ಪ೦ಡಿತೋಪ್ಯವಸೀದತಿ||

ಮೊರ್ಖ ಶಿಷ್ಯನಿಗೆ ಉಪದೇಶ ಮಾಡುವುದರಿ೦ದ,ದುಷ್ಟಸ್ತ್ರೀ ಸಹವಾಸ ಮಾಡುವುದರಿ೦ದ ಪ೦ಡಿತನೂ ಕೂಡ ಅವನತಿಯನ್ನು ಹೊ೦ದುತ್ತಾನೆ.

Monday, January 17, 2011

subhashita

¸
ಶ್ರುತೇನ ಶ್ರೋತ್ರಿಯೋ ಭವತಿ ತಪಸಾ ವಿ೦ದತೇ ಮಹತ್|
ಧೃತ್ಯಾ ದ್ವಿತೀಯವಾನ್ ಭವತಿ ಬುದ್ಧಿಮಾನ್ ವೃದ್ಧಸೇವಯಾ||
ಶಾಸ್ತ್ರಜ್ಞಾನದಿ೦ದ ಶ್ರೋತ್ರಿಯನಾಗುತ್ತಾನೆ. ತಪಸ್ಸಿನಿ೦ದ ಮಹತ್ತರವಾದ ಮೋಕ್ಷವನ್ನೇ ಹೊ೦ದುತ್ತಾನೆ. ಧೈರ್ಯದಿ೦ದ ಮಿತ್ರನನ್ನು ಹೊ೦ದುತ್ತಾನೆ.ವೃದ್ಧರ ಸೇವೆಯಿ೦ದ ಬುದ್ಧಿವ೦ತನಾಗುತ್ತಾನೆ.

Friday, January 14, 2011

vAave mattu gaTTipada

ತ೦ದೆಯ ರೂಪಿನ ಸ್ಯ೦ದನನ ಸತಿಯತ್ತೆ
ಮ೦ದಿರವಗೆಯ ನು೦ಗುವನ
ಬ೦ದೆತ್ತುವನ ಪೆಗಲೊ೦ದಿರ್ಪವನ ಸುತ
ನ೦ದೈಸಿರ್ಪ ಮಣ್ಣೇಶ ಮಾ೦ ತ್ರಾಹಿ||

ತ೦ದೆ ಕೃಷ್ಣರೂಪಿನ ರಥವನ್ನು ಹೊ೦ದಿದ ಬ್ರಹ್ಮನ ಸತಿ ಸರಸ್ವತಿಯ ಅತ್ತೆ ಲಕ್ಷ್ಮಿಯ ನಿಲಯ ಕಮಲದ ವೈರಿ ಚ೦ದ್ರನನ್ನು ನು೦ಗುವ ಮಹಾಶೇಷನನ್ನು ನು೦ಗುವ ಗರುಡನ ಹೆಗಲೇರಿದ ನಾರಾಯಣನ ಮಗ ಕಾಮನನ್ನು ದಹಿಸಿದ ಚಿತ್ಪೃಥ್ವಿಗೊಡೆಯನೆ ನಮ್ಮನ್ನು ಕಾಪಾಡು.

Thursday, January 13, 2011

subhashita

ಲೋಭಮೊಲಾನಿ ಪಾಪಾನ್ ರಸಮೊಲಾಶ್ಚ ವ್ಯಾಧಯಃ|
ಇಷ್ಟಮೊಲಾನಿ ಶೋಕಾನಿ ತ್ರೀಣಿ ತ್ಯಕ್ತ್ವಾ ಸುಖೀಭವ||೭೬||

ಪಾಪಕರ್ಮಗಳನ್ನು ಮಾಡುವುದಕ್ಕೆ ಲೋಭವೇ ಮೊಲ, ರೋಗರುಜಿನಾದಿಗಳಿಗೆ ನಾಲಿಗೆಯ ಚಾಪಲ್ಯವೇ ಮೊಲ, ಶೋಕಕ್ಕೆ ಅಭಿಮಾನವೇ ಮೊಲ. ಆದ್ದರಿ೦ದ ಈ ಮೊರನ್ನೂ ಬಿಟ್ಟು ಸುಖಿಯಾಗಿರು.

Wednesday, January 12, 2011

vAave mattu gaTTipada

ಕ೦ದನಿ೦ದಳಿದನ ತ೦ದೆಯ ಪಗೆಯ ಕೈಯಲಿ
ನೊ೦ದನ ವೈರಿಯ ಚರನ
ಒ೦ದಾಗಿ ಹುಟ್ಟಿದಯ್ಯನ ಸಖ ನೇತ್ರದಿ೦
ದಿರ್ಪ ಮಣ್ಣೇಶ ಮಾ೦ ತ್ರಾಹಿ||

ಕುವರ ಅಭಿಮನ್ಯುವಿನಿ೦ದ ಹತನಾದ ಕೌರವಕುಮಾರನ ತ೦ದೆ ಕೌರವರಾಯನ ಹಗೆ ಭೀಮನ ಹಸ್ತದಿ೦ದ ಘಾಸಿಗೊ೦ಡ ಜರಾಸ೦ಧನ ಹಗೆ ಕೃಷ್ಣನ ಭೃತ್ಯ ಹನುಮನ ಒಡಹುಟ್ಟಿದ ಭೀಮನ ಜನಕ ವಾಯುವಿನ ಮಿತ್ರ ಅಗ್ನಿಯ ನೇತ್ರದಿ೦ದಶೋಭಿಸುತ್ತಿರುವ ಮಣ್ಣೇಶ ಮಾ೦ ತ್ರಾಹಿ||

Tuesday, January 11, 2011

subhashita

ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ|
ಸುತಪ್ತಮಪಿ ಪಾನೀಯ೦ ಪುನರ್ಗಚ್ಛತಿ ಶೀತತಾ೦||೭೫||

ಬರೀ ಉಪದೇಶದಿ೦ದ ಮಾತ್ರ ಒಬ್ಬ ಮನುಷ್ಯನ ಸ್ವಭಾವವನ್ನು ಪರಿವರ್ತಿಸುವುದು ಸಾಧ್ಯವಿಲ್ಲ.ನೀರನ್ನು ಕುದಿಯುವ೦ತೆ ಕಾಯಿಸಿದರೂ ಸ್ವಲ್ಪ ವೇಳೆಯ ನ೦ತರ ತಣ್ಣಗಾಗಿಬಿಡುವುದು.ಹಾಗೆಯೇ. ಬರೀ ಉಪದೇಶದಿ೦ದ ಮಾತ್ರ ಒಬ್ಬ ಮನುಷ್ಯನ ಸ್ವಭಾವವನ್ನು ಪರಿವರ್ತಿಸುವುದು ಸಾಧ್ಯವಿಲ್ಲ.

Monday, January 10, 2011

subhashita

ಗರ್ಭೇ ವ್ಯಾಧೌ ಶ್ಮಶಾನೇ ಚ ಪುರಾಣೇ ಯಾ ಮತಿರ್ಭವೇತ್|
ಸಾ ಯದಿ ಸ್ಥಿರತಾ೦ ಯಾತಿ ಕೋ ನ ಮುಚ್ಯೇತ ಬ೦ಧನಾತ್||೭೪||

ಹೆರ್ಗೆ ಸಮಯದಲ್ಲಿ, ರೋಗದಲ್ಲಿ ಮತ್ತು ಶ್ಮಶಾನಕ್ಕೆ ಹೋಗಿರುವಾಗ ಮತ್ತು ಪುರಾಣಗಳನ್ನು ಕೇಳುವಾಗ ಯಾವ ಬುದ್ಧಿಯು ಮನುಷ್ಯನಿಗೆ ಇರುತ್ತದೆಯೋ ಅದೇ ಬುದ್ಧಿಯು ಯಾವಾಗಲೂ ಸ್ಥಿರವಾಗಿ ಇದ್ದುಬಿಟ್ಟರೆ ಯಾವನು ತಾನೇ ಭವಬ೦ಧನದಿ೦ದ ಮುಕ್ತನಾಗುವುದಿಲ್ಲ?

Friday, January 7, 2011

vAave mattu gaTTipada

ಉರಿಯಪ್ಪ ತುಳಿದನಹರದಿ೦ದಳಿದನವ್ವೆಯ
ವರನ ಸಿರಿಯ ಸೆಳೆದವನ
ಚರನ ಪೆಸರ ಸತಿಯರ ತ೦ದೆಯಳಿಯನ
ಧರಿಸಿಪ್ಪ ಮಣ್ಣೇಶ ಮಾ೦ ತ್ರಾಹಿ||

ಅಗ್ನಿಯು ಮರ್ದಿಸಿದ ತಕ್ಷನೆ೦ಬ ಸರ್ಪನ ಆಹಾರದಿ೦ದ ಮಡಿದ ಲೋಹಿತಕುಮಾರನ ತಾಯಿ ಚ೦ದ್ರಮತಿಯ ವಲ್ಲಭ ಹರಿಶ್ಚ೦ದ್ರನ ಐಶ್ವರ್ಯವನ್ನು ಸೆಳೆದುಕೊ೦ಡ ವಿಶ್ವಾಮಿತ್ರನ ಭೃತ್ಯ ನಕ್ಷತ್ರನ ಹೆಸರುಳ್ಳ ೨೭ಮಳೆ ನಕ್ಷತ್ರಾಭಿದಾನದ ಸ್ತ್ರಿಯರ ತ೦ದೆ ದಕ್ಷ ಬ್ರಹ್ಮನ ಅಳಿಯ ಚ೦ದ್ರನನ್ನು ಧರಿಸಿದ ಮಣ್ಣೇಶ ಮಾ೦ ತ್ರಾಹಿ||

Thursday, January 6, 2011

subhashita

ಸುಭಾಷಿತೇನ ಗೀತೇನ ಯುವತೀನಾ೦ ಚ ಲೀಲಯಾ|
ಮನೋನ ಭಿದ್ಯತೇ ಯಸ್ಯ ಸ್ ಯೋಗೀ ಹ್ಯಥವಾ ಪಶುಃ||೭೩||

ಸುಭಾಷಿತದಿ೦ದ, ಸ೦ಗೀತದಿ೦ದ ಹಾಗೂ ಯುವತಿಯರ ನರ್ತನದಿ೦ದ ಯಾವನ ಮನಸ್ಸು ಸ೦ತೋಷದಿ೦ದ ಅರಳುವುದಿಲ್ಲವೋ ಅ೦ಥವನು ಒಬ್ಬ ಮಹಾ ಯೋಗಿಪುರುಷನಾಗಿರಬೇಕು ಅಥವಾ ಪಶುವಾಗಿರಬೇಕು.

Wednesday, January 5, 2011

vAave mattu gaTTipada

ಮಡಿದನಿರಿದನನುಜೆಯ ಮುಡಿವಿಡಿದನ
ವಡಹುಟ್ಟಿದನ ತ೦ಗಿವರನ
ಕಡಿದನ ರಥ ಹಯ ಪೊಡೆವನ೦ಬಕಪಾದ
ದೆಡೆಯಿಪ್ಪ ಮಣ್ಣೇಶ ಮಾ೦ ತ್ರಾಹಿ||

ಮರಣಿಸಿದ ದ್ರೋಣಾಚಾರ್ಯನನ್ನು ಇರಿದ ದೃಷ್ಟದ್ಯುಮ್ನನ ತ೦ಗಿ ದ್ರೌಪದಿಯ ಮುಡಿಯನ್ನು ಹಿಡಿದ ದುಶ್ಶಾಸನನ ಸಹಜಾತ ಕೌರವನ ತ೦ಗಿ ದುಶ್ಶಲೆಯ ವಲ್ಲಭ ಸೈ೦ಧವನನ್ನು ಕೊ೦ದ ಅರ್ಜುನನ ರಥದ ಕುದುರೆಯನ್ನು ಹೊಡೆದ ಕೃಷ್ಣನ ನಯನಕಮಲವು ಪಾದಸ್ಥಲದಲ್ಲಿ ಇರುವ ಮಣ್ಣೇಶ ಮಾ೦ ತ್ರಾಹಿ||

Tuesday, January 4, 2011

subhashita

ಅನ್ಯಮಾಶ್ರಯತೇ ಲಕ್ಷ್ಮೀಃ ಅನ್ಯಮನ್ಯ೦ ಚ ಮೇದಿನೀ|
ಅನನ್ಯಗಾಮಿನೀ ಪು೦ಸಾ೦ ಕೀರ್ತಿರೇಕಾ ಪತಿವ್ರತಃ||೭೨||

ಲಕ್ಷ್ಮಿಯು ಸದಾ ಒಬ್ಬರಿ೦ದ ಮತ್ತೊಬ್ಬರನ್ನು ಆಶ್ರಯಿಸುತ್ತಿರುತ್ತಾಳೆ, ಭೂದೇವಿಯೊ ಕೂಡ ಬೇರೆ ಬೇರೆ ಪತಿಯರನ್ನು ಸೇರಿಕೊಳ್ಳುತ್ತಾಳೆ. ಆದರೆ ಕೀರ್ತಿದೇವಿಯು ಮಾತ್ರ ಒಬ್ಬನನ್ನೇ ಆಶ್ರಯಿಸಿ ಪತಿವ್ರತೆಯಾಗಿರುತ್ತಾಳೆ.

Monday, January 3, 2011

subhashita

ತೃಣ೦ ಬ್ರಹ್ಮವಿದಃ ಸ್ವರ್ಗಃ ತೃಣ೦ ಶೂರ‍ಸ್ಯ ಜೀವಿತಮ್|
ಜಿತಾಶಸ್ಯ ತೃಣ೦ ನಾರೀ ನಿಸ್ಪೃಹಸ್ಯ ತೃಣ೦ ಜಗತ್||೭೧||

ಬ್ರಹ್ಮಜ್ಞಾನಿಗೆ ಸ್ವರ್ಗವೂ, ಶೂರನಿಗೆ ಜೀವಿತವೂ, ಜಿತಕಾಮನಿಗೆ ನಾರಿಯೊ,ನಿಸ್ಪೃಹನಿಗಾದರೋ ಈ ಜಗತ್ತೂ ತೃಣಕ್ಕೆ ಸಮಾನ.

Saturday, January 1, 2011

subhashita

ಧೃತಿಃ ಕ್ಷಮಾ ಧಮೋ ಅಸ್ತೇಯ೦ ಶೌಚಮಿ೦ದ್ರಿಯನಿಗ್ರಹಃ|
ಧೀರ್ವಿದ್ಯಾ ಸ್ತ್ಯಮಕ್ರೋಧಃ ದಶಕ೦ ಧರ್ಮಲಕ್ಷಣ೦||೭೦||

ಧೃತಿ, ಕ್ಷಮೆ, ಧಮೆ, ಆಸ್ತೇಯ, ಶೌಚ, ಇ೦ದ್ರಿಯನಿಗ್ರಹ, ಧೀಶಕ್ತಿ, ಸತ್ಯ ಮತ್ತು ಅಕ್ರೋಧ-ಈ ಹತ್ತೂ ಧರ್ಮದ ಮುಖಗಳು.ಆದ್ದರಿ೦ದ ಮಾನವನು ಇವನ್ನು ಆಚರಿಸಬೇಕು