ಪ್ರಹ್ಲಾದ ನಾರದ ಪರಾಶರ ಪು೦ದರೀಕ
ವ್ಯಾಸಾ೦ಬರೀಷ ಶುಕ ಶೌನಕ ಭೀಷ್ಮ ದಾಲ್ಭ್ಯಾನ್|
ರುಕ್ಮಾ೦ಗದಾರ್ಜುನ ವಸಿಷ್ಠ ವಿಭೀಷಣಾದೀನ್
ಧನ್ಯಾನ್ ಇಮಾನ್ ಪರಮ ಭಾಗವತಾನ್ ಸ್ಮರಾಮಿ||೨೧೬||
ಮಹಾ ಪಿತೃಭಕ್ತನಾದ ಪ್ರಹ್ಲಾದ, ಸನತ್ಕುಮಾರರಲ್ಲಿ ಬ್ರಹ್ಮವಿದ್ಯೆಯನ್ನು ಕಲಿತು ಬ್ರಹ್ಮನಿಷ್ಠನಾದ ದೇವರ್ಷಿ ನಾರದ, ವೇದವ್ಯಾಸರ ತ೦ದೆ ಪರಾಶರ, ವೇದಾಧ್ಯಯನ ಸ್೦ಪನ್ನನೂ, ಭಕ್ತನೂ ಆದ ವಿಪ್ರೋತ್ತಮ ಪು೦ಡರೀಕ, ಹದಿನೆ೦ಟು ಪುರಾಣಗಳನ್ನು ರಚಿಸಿದ ಸರ್ವಜ್ಞನೂ, ವೇದಗಳನ್ನು ವಿಭಜಿಸಿದ ವೇದಪುರುಷ, ವೇದಾ೦ತಸೂತ್ರಕರ್ತ ವ್ಯಾಸಮಹರ್ಷಿ,ಮಹಾ ವಿಷ್ಣುವಿನ ಪರಮಭಕ್ತ ಅ೦ಬರೀಷ ಮಹಾರಾಜ,ನಿಷ್ಠಾವ೦ತ ಬ್ರಹ್ಮಚಾರಿ ವ್ಯಾಸರ ಪುತ್ರ ಶುಕಮಹರ್ಷಿ,ಭಕ್ತಿಪರಾಯಣರಾದ ಶೌನಕ ಮಹರ್ಷಿ, ಕುರುಕುಲ ಪಿತಾಮಹ, ಇಚ್ಛಾಮರಣಿ,ಪಿತೃಭಕ್ತ, ನೈಷ್ಠಿಕ ಬ್ರಹ್ಮಚಾರಿ ಭೀಷ್ಮ,ರುಕ್ಮಾ೦ಗದ, ಅರ್ಜುನ, ವಸಿಷ್ಠ ಮತ್ತು ವಿಭೀಷಣ-ಈ ಹದಿನಾಲ್ಕು ಧನ್ಯರನ್ನೂ ಪ್ರಾತಃಕಾಲದಲ್ಲಿ ಸ್ಮರಿಸಬೇಕು.
ಕಾಲಕರ್ಮ ಗುಣಾಧೀನೋದೇಹೋ-ಯ೦ ಪಾ೦ಚಭೌತಿಕಃ|
ಕಥಮನ್ಯಾ೦ಸ್ತು ಗೋಪಯೇತ್ ಸರ್ಪಗ್ರಸ್ತೋ ಯಥಾ ಪರಮ್||೨೧೭||
ಪ೦ಚಭೂತಗಳಿ೦ದಾದ ಈ ದೇಹವು ತಾನೇ ಕಾಲಕರ್ಮ ಗುಣಗಳಿಗೆ ಅಧೀನವಾಗಿರುತ್ತದೆ.ಅ೦ಥಹುದರಲ್ಲಿ ಇತರರನ್ನು ಹೇಗೆ ತಾನೇ ಕಾಪಾಡೀತು? ಸರ್ಪದಿ೦ದ ನು೦ಗಲ್ಪಟ್ಟು, ಸರ್ಪದ ಬಾಯಲ್ಲಿರುವ ಕಪ್ಪೆಯು ಇತರರನ್ನು ಕಾಪಾಡೀತೇ?
((
_ (( _
\_/?