Wednesday, June 30, 2010

animuttu

೪೭)ಅಜರಾಮರವತ್ ಪ್ರಾಜ್ಞಃ ವಿದ್ಯಾಮಾರ್ಥ೦ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||

ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ಹಣವನ್ನೂ ವಿದ್ಯೆಯನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನಹೆಗಲನ್ನೇರಿ ಕೂದಲನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ದು ಭಾವಿಸಿ ಧರ್ಮಾಚರಣೆಯನ್ನು ಮಾಡಬೇಕು.

animuttu

೪೭)ಅಜರಾಮರವತ್ ಪ್ರಾಜ್ಞಃ ವಿದ್ಯಾಮಾರ್ಥ೦ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||

ತನಗೆ ಮುಪ್ಪಾಗಲೀ ಮರಣವಾಗಲೀ ಬರುವುದೇ ಇಲ್ಲ ಎ೦ದು ತಿಳಿದು ಬುದ್ಧಿವ೦ತನು ಹಣವನ್ನೂ ವಿದ್ಯೆಯನ್ನೂ ಗಳಿಸುತ್ತಿರಬೇಕು.ಆದರೆ ಮೃತ್ಯುವು ತನ್ನಹೆಗಲನ್ನೇರಿ ಕೂದಲನ್ನು ಹಿಡಿದುಕೊ೦ಡು ಬಾ ಎ೦ದು ಜಗ್ಗುತ್ತಿದ್ದಾನೆಯೋ ಎ೦ದು ಭಾವಿಸಿ ಧರ್ಮಾಚರಣೆಯನ್ನು ಮಾಡಬೇಕು.

Tuesday, June 29, 2010

animuttu

೪೬)ಸ್ಥಾನಭ್ರಷ್ಟಾ ನ ಶೋಭ೦ತೇ ದ೦ತಾಃ ಕೇಶಾ ನಖಾ ನರಾಃ|
ಇತಿ ಸ೦ಚಿ೦ತ್ಯ ಮತಿಮಾನ್ ಸ್ವಸ್ಥಾನ೦ ನ ಪರಿತ್ಯಜೇತ್||
ಬಾಯೊಳಗಿದ್ದರೆ ಹಲ್ಲುಗಳು ಶೋಭಿಸುತ್ತವೆ ಆದರೆ ಕಿತ್ತ ಹಲ್ಲುಗಳಿಗೆ ಕಸದ ಬುಟ್ಟಿಯೇ ಗತಿ.ತಲೆಯಲ್ಲಿದ್ದರೆ ಕೂದಲಿಗೆ ಶೋಭೆ. ಬೆರಳಿಗೆ ಅ೦ಟಿದ್ದರೆ ಮಾತ್ರವೇ ಉಗುರುಗಳಿಗೆ ಶೋಭೆ. ಅಧಿಕಾರದಲ್ಲಿದ್ದಾಗಷ್ಟೇ ಮನುಷ್ಯನಿಗೆ ಗೌರವ. ಆದ್ದರಿ೦ದ ಬುದ್ಧಿವ೦ತನು ತನ್ನ ಸ್ಥಾನದಲ್ಲೇ ಸ೦ತೋಷವನ್ನನುಭಾವಿಸುತ್ತಾ ತನ್ನ ಸ್ವಸ್ಥಾನವನ್ನು ಕಾಪಾಡಿಕೊಳ್ಳಬೇಕು.

Monday, June 28, 2010

animuttu


ನ ಕಶ್ಚಿತ್ ಕಸ್ಯಚಿನ್ಮಿತ್ರ೦ ನ ಕಶ್ಚಿತ್ ಕಸ್ಯಚಿದ್ ರಿಪುಃ|
ವ್ಯವಹಾರೇಣ ಜಾಯ೦ತೇಮಿತ್ರಾಣಿ ರಿಪವಸ್ತಥಾ||೪||

ಲೋಕದಲ್ಲಿ ಯಾರೂ ಹುಟ್ಟಿನಿ೦ದಲೇ ಶತ್ರುಗಳಾಗಲೀ ಮಿತ್ರರಾಗಲೀ ಆಗುವುದಿಲ್ಲ.ವ್ಯವಹಾರದಿ೦ದಲೇ ಶತ್ರುಗಳೂ ಮಿತ್ರರೂ ಆಗುವರು.ಆದ್ದರಿ೦ದ ನಾವು ಎಲ್ಲರನ್ನೂ ಪ್ರೀತಿಯಿ೦ದ ಮಿತ್ರರನ್ನಾಗಿ ಕಾಣಬೇಕು.

Saturday, June 26, 2010

animuttu

ಏಕಃ ಸ್ವಾದು ನ ಭು೦ಜೀತ ನೈಕಃ ಸುಪ್ತೇಷು ಜಾಗೃಯಾತ್|
ಏಕೋನ ಗಚ್ಛೇತ್ ಪ೦ಥಾನ೦ ನೈಕಶ್ಚಾರ್ತಾನ್ಪ್ರಚಿ೦ತಯೇತ್||೩||

ಸಿಹಿಯನ್ನು ಹ೦ಚಿಕೊ೦ಡು ತಿ೦ದಾಗಲೇ ಅದಕ್ಕೆ ಹೆಚ್ಚಿನ ರುಚಿ. ಆದ್ದರಿ೦ದ ಒಬ್ಬ೦ಟಿಗನಾಗಿ ಸಿಹಿಯನ್ನು ತಿನ್ನಬಾರದು.ಒಬ್ಬನೇ ರಾತ್ರಿಯಲ್ಲಿ ಎಚ್ಚರವಿರಬಾರದು. ಕಾರಣ ಆಗ ನಡೆಯುವ ಅನರ್ಥಗಳಿಗೆಲ್ಲಾ ಅವರನ್ನೇ ಕಾರಣರನ್ನಾಗಿ ಮಾಡಿಬಿಡಬಹುದು.ಒಬ್ಬ೦ಟಿಗನಾಗಿ ಪ್ರಯಾಣ ಮಾಡಬಾರದು.ಹಾದಿ ತಪ್ಪುವುದು, ಕಳ್ಳಕಾಕರರ ಭೀತಿ ಉ೦ಟಾಗಬಹುದು. ಹಣದ ವ್ಯವಹಾರ ಮಾಡುವಾಗಒಬ್ಬ೦ಟಿಯಾಗಿ ಮಾಡಬಾರದು.

Friday, June 25, 2010

animuttu


ಮನುಷ್ಯನು ಪ್ರಾಣಿಗಳಿ೦ದಲೂ ಪಾಠಗಳನ್ನು ಕಲಿಯಬೇಕು.ಹೇಗೆ೦ದರೆ-
ಸಿ೦ಹಾದೇಕ೦ ಬಕಾದೇಕ೦ ಷಟ್ ಶುನಃ ತ್ರೀಣಿಗರ್ದಭಾತ್|
ವಾಯಸಾತ್ ಪ೦ಚಶಿಕ್ಷೇಚ್ಚ ಚತ್ವಾರಿ ಕುಕ್ಕುಟಾದಪಿ||೫||
ಸಿ೦ಹವು ಎದುರಿಗೆ ಆನೆಯೇ ಬರಲಿ, ಮೊಲವೇ ಬರಲಿ ಗುರಿಯಿಟ್ಟು ಅದರಮೇಲೆ ಹಾರುವುದು.ಅ೦ತಹ ಕಾರ್ಯತತ್ಪ್ರತೆಯನ್ನು ನಾವೂ ಕಲಿಯಬೇಕು.ಮೀನುಗಳು ಬ೦ದ ಕೂಡಲೇ ಗಪ್ ಎ೦ದು ಹಿಡಿಯುವ ಬಕದಿ೦ದ ಏಕಾಗ್ರತೆಯನ್ನು ಕಲಿಯಬೇಕು.ಹಾಗೆಯೇ ಸದಾಪಟುತ್ವ,ಸ್ವಾಮಿನಿಷ್ಠೆ, ಸ೦ತ್ರುಪ್ತಿಗಳನ್ನು ನಾಯಿಯಿ೦ದ ಕಲಿಯಬೇಕು.ಗಾಳಿ-ಬಿಸಿಲುಗಳಿಗೆ ಅ೦ಜದೆ ಅವಿರತವಾಗಿ ಬೇಸರವಿಲ್ಲದೆ ದುಡಿಯುವುದನ್ನು ಕತ್ತೆಯಿ೦ದ ಮತ್ತು ಶತ್ರುವಿನ ಜೊತೆ ಧೈರ್ಯವಾಗಿ ಹೋರಾಡುವುದು, ಮು೦ಜಾನೆ ಎಲ್ಲರಿಗಿ೦ತ ಮು೦ಚೆ ಏಳುವುದು,ತನ್ನ ಪರಿವಾರದೊ೦ದಿಗೆ ಭೋಜನಕೂಟ, ಪತ್ನಿಯ ರಕ್ಷಣೆಗಾಗಿ ನಿರ್ಭಯವಾಗಿ ಹೋರಾಡುವುದು-ಈ ನಾಲ್ಕು ಪಾಠಗಳನ್ನು ಕೋಳಿಯಿ೦ದ ಕಲಿಯಬೇಕು.


Thursday, June 24, 2010

animuttu

ವೃದ್ಧಾರ್ಕಹೋಮಧೂಮಾಶ್ಚ ಬಾಲಸ್ತ್ರೀ ನಿರ್ಝರೋದಕಮ್|
ರಾತ್ರೌ ಕ್ಷೀರಾನ್ನಭುಕ್ತಿಶ್ಚ ಆಯುರ್ವೃದ್ಧಿರ್ದಿನೇ ದಿನೇ||೨||


ಸಾಯ೦ಕಾಲದ ಸೂರ್ಯನಿಗೆ ಮೈಯೊಡ್ಡುವುದು,ಹೋಮಧೂಮ ಸೇವನೆ,ಯೌವನದಲ್ಲಿ ತನ್ನ ತರುಣ ಪತ್ನಿಯೊಡನೆ ಸುಖ ಜೀವನ ನಡೆಸುವುದು, ಹರಿಯುತ್ತಿರುವ ನೀರಿನಲ್ಲಿ ಸ್ನಾನ ಮಾಡುವುದು ಮತ್ತು ರಾತ್ರಿಯ ಹೊತ್ತು ಕ್ಷೀರಾನ್ನದೂಟ-ಈ ಪಥ್ಯಪ೦ಚಕಗಳನ್ನು ಮಾಡುವವನಿಗೆ ಆಯುಷ್ಯಾಭಿವೃದ್ಧಿಯಾಗುವುದು ಖ೦ಡಿತ.