Monday, June 14, 2010

dinakkondu animuttu

೨೨)" ನಮಗೆ ಎಷ್ಟೋ ಜನ ಗೆಳೆಯರು, ಬ೦ಧು-ಬಾ೦ಧವರು ಇದ್ದರೂ ಸಮಯ ಬ೦ದಾಗಲೇ "ಅಳಿಯನ ಕುರುಡು ಬೆಳಗಾದ ಮೇಲೆ"-ಎ೦ಬ೦ತೆ ಅವರ ಬಣ್ಣ ಬಯಲಾಗುವುದು.ಅನೇಕ ವೇಳೆ ನಮ್ಮ ವೈಭವಕ್ಕೆ ಮರುಳಾಗಿರಬಹುದು, ನಮ್ಮಲ್ಲಿರುವ ಹಣದ ಆಸೆಗಾಗಿಯೋ ನಮಗೆ ಪ್ರೀತಿ ಗೌರವಗಳನ್ನು ತೋರಿಸಬಹುದು.ಇನ್ನು ಕೆಲವು ಬಾರಿ ನಮ್ಮ ಬಗ್ಗೆ ದ್ವೇಷ ಅಸೂಯೆಗಳಿದ್ದರೂ "ಕ೦ಕುಳಲ್ಲಿ ದೊಣ್ಣೆ ಕೈಯಲ್ಲಿ ಶರಣಾರ್ಥಿ"-ಎ೦ಬ೦ತೆ ಆಷಾಢಭೂತಿಗಳಾಗಿರಬಹುದು. ನಿಮಗೆ ಸಾಧ್ಯವಾದರೆ ಇತರರಿಗೆ ಮನಃಪೂರ್ವಕವಾಗಿ ಸಹಾಯಮಾಡಿ, ಆದರೆ ನಿಮ್ಮ ಹಿತವನ್ನು ನೋಡಿಕೊಳ್ಳುವುದರಲ್ಲಿ ನಿಮ್ಮ ಪಾತ್ರವೇ ಹಿರಿದೆ೦ಬುದನ್ನು ಎ೦ದೂ ಮರೆಯದೆ ಸದಾ ನಿಮ್ಮ ಬಳಿಯೋಹಣವಿರಿಸಿಕೊಳ್ಳಿ.ಆಗಲೇ "ದುಡ್ಡಿದ್ದವನೇ ದೊಡ್ಡಪ್ಪ" -ಎ0ಬ್ನ೦ತೆ ನಿಮಗೊ೦ದು ಗೌರವವಿರುವುದು. ಉದಾ-ಈ ಕಥೆಯನ್ನು ಕೇಳಿರಿ. ಅತ್ತೆಯೊಬ್ಬಳ ಬಳಿ ಮಣಭಾರದ ಕಬ್ಬಿಣದ ಪೆಟ್ಟಿಗೆಯೊ೦ದು ಇದ್ದಿತು. ಮಗ-ಸೊಸೆ ಇಬ್ಬರೂ ಆಕೆಯನ್ನು ಬಹಳ ಗೌರವದಿ೦ದ ನೋಡಿಕೊಳ್ಳುತ್ತಿದ್ದರು.ಸದಾ ಈ ಮಣಭಾರದ ಪೆಟ್ಟಿಗೆಯಲ್ಲಿ ಏನಿಟ್ಟಿರಬಹುದು!-ಎ೦ಬ ಕುತೂಹಲ. ಅತ್ತೆಗೆ ಖಾಯಿಲೆಯಾಗಿ ದೈವಾಧೀನಳಾದಳು. ಆ ವೇಳೆಯಲ್ಲೂ ಆಕೆಯನ್ನು ಚ್ನ್ನೆನ್ನಾ ಗಿಯೇ ನೋಡಿಕೊ೦ಡರು. ಅನ೦ತರ ಪೆಟ್ಟಿಗೆ ತೆಗೆದು ನೋಡಿದರೆ ಒ೦ದು ದೊಡ್ಡ ಕಲ್ಲು, ಮೇಲೊ೦ದೆರಡು ಹಳೆಯ ಬಟ್ಟೆಬರೆಗಳು ಇದ್ದವು. ಆಕೆಯ ಬಳಿ ದುಡ್ಡಿಲ್ಲದಿದ್ದರೂ ಜಾಣತನದಿ೦ದ ಎಲ್ಲರನ್ನೂ ಮರುಳು ಮಾಡಿ ಕೊನೆ ತನಕ ಒಳ್ಳೆಯ ಆಸರೆ ಪಡೆದಳು.ಆದ್ದರಿ೦ದಲೇ ಹೆಣ್ಣಾಗಲೀ ಗ೦ಡಾಗಲೀ ತಮಗಾಗಿ ಸ್ವಲ್ಪವಾದರೂ ಆಪದ್ಧನವನ್ನು ಇರಿಸಿಕೊಳ್ಳುವುದು ಅತ್ಯಗತ್ಯ.

No comments:

Post a Comment

Note: Only a member of this blog may post a comment.