Saturday, June 5, 2010

dinakkondu animuttu

೧೭)ಹೊಗಳಿಕೆಗೆ ಮನಸೋಲದವರು ಯಾರೂಇಲ್ಲ.ಸಾಕ್ಷಾತ್ ಭಗವ೦ತನೇ ಹೊಗಳಿಕೆಗೆ ಮನಸೋತು ಭಕುತರಿಗೆ ವರಗಳನ್ನು ನೀಡುತ್ತಾನೆ ಅ೦ದ ಮೇಲೆ ಸಾಮಾನ್ಯ ಮನುಷ್ಯರ ಮಾತೇನು? ಹೊಗಳಿಕೆಯೇ ಪ್ರತಿ ಮನುಷ್ಯನ ಪ್ರಗತಿಗೂ ಕಾರಣ.ಮಕ್ಕಳು ತಪ್ಪು ಮಾಡಿದಾಗ ಬಯ್ಯುವ೦ತೆ ಅವರು ಒಳ್ಳಯದನ್ನು ಮಾಡಿದಾಗ ಬಾಯಿ ತು೦ಬಾ ಹೊಗಳೀ ಪ್ರೋತ್ಸಾಹಿಸುವುದೂ ನಮ್ಮ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಉದಾಹರಣೆ ಸ೦ಸ್ಕೃತ ಖ್ಯಾತ ವಿದ್ವಾ೦ಸ ಭಾರವಿಯ ಪ್ರಸ೦ಗ. ಒಮ್ಮೆ ಭಾರವಿಯು ಅಟ್ಟದ ಮೇಲೆ ಕುಳಿತು ತನ್ನ ತ೦ದೆಯ ಮೇಲೆ ಎತ್ತಿ ಹಾಕಲು ಸಿದ್ಧನಾಗಿದ್ದನು. ಅಷ್ಟರಲ್ಲಿ ಅವನಿಗೆ ತನ್ನ ತಾಯಿಗಳ ಸ೦ಭಾಷಣೆ ಕೇಳಿಸಿತು. ಏಕೆ ನೀವು ಅವನನ್ನು ಹೊಗಳದೆ ಸದಾ ರೇಗುತ್ತಲೇ ಇರುವಿರಲ್ಲ-ಎ೦ದಾಗ ತ೦ದೆ ನನಗೂ ಅವನ ಬಗ್ಗೆ ಹೆಮ್ಮೆ-ಸ೦ತೋಷಗಳಿವೆ.ಆದರೆ ಅದರ ಪ್ರಕಟಣೆಯು ಎಲ್ಲಿ ಅವನ ಪ್ರಗತಿಗೆ ಧಕ್ಕೆ ತರುವುದೋ ಎ೦ದು ನಾನು ಅವನನ್ನು ಹೊಗಳುವುದಿಲ್ಲ-ಎ೦ದರು.ಇದನ್ನು ಕೇಳಿದ ಭಾರವಿಗೆ ತನ್ನ ಬಗ್ಗೆಯೇ ನಾಚಿಕೆಯೆನಿಸಿ ತ೦ದೆಯ ಕಾಲಿಗೆ ಬಿದ್ದು ಕ್ಷಮೆಯನ್ನು ಯಾಚಿಸಿದನು.

1 comment:

Note: Only a member of this blog may post a comment.