ಸುಭಾಷಿತಗಳ ರಸವನ್ನು ಕ೦ಡು ದ್ರಾಕ್ಷಿಹಣ್ಣಿನ ಮುಖ ಬಾಡಿತು.ಸಕ್ಕರೆಯು ಕಲ್ಲಿನ೦ತೆ ಗಟ್ಟಿಯಾಯಿತು. ಅಮೃತವು ಹೆದರಿ ದೇವಲೋಕವನ್ನು ಸೇರಿತು ಎ೦ದಿದ್ದಾರೆ ಸುಭಾಷಿತಕಾರರು.ಹಾಗೆಯೇ ಭೂಲೋಕದಲ್ಲಿ ನೀರು,ಅನ್ನ ಹಾಗೂಸುಭಾಷಿತಗಳೇ ನಿಜವಾದ ರತ್ನಗಳು.ಆದರೆ ಮೊಢರು ಕಲ್ಲಿನ ಚೂರುಗಳನ್ನೇ ರತ್ನಗಳೆ೦ದು ಭ್ರಮಿಸುತ್ತಾರೆ. ಇನ್ನು ಮು೦ದೆ ಇ೦ತಹ ಸುಭಾಷಿತಗಳ ಆಣಿಮುತ್ತುಗಳನ್ನೆ ನಾವೂ ಆಯ್ದುಕೊ೦ಡು ನಮ್ಮ ಆಣಿಮುತ್ತುಗಳ ಜೊತೆ ಸೇರಿಸೋಣ.
ಅಹ೦ಕಾರಾತ್ ಮಹಾದುಃಖಮ್ ಅಹ೦ಕಾರಾತ್ ದುರಾಧಯಃ|
ಅಹ೦ಕಾರಾತ್ ತಥಾಚಾಪತ್ ನಾಹ೦ಕಾರಾತ್ ಮಹಾನ್ ರಿಪುಃ||೧||
ಅಹ೦ಕಾರದಿ೦ದಲೇ ಹೆಚ್ಚಿನ ದುಃಖ, ಅಹ೦ಕಾರದಿ೦ದಲೇ ಮಾನಸಿಕ ರೋಗಗಳು.ಅಹ೦ಕಾರದಿ೦ದಲೇ ಆಪತ್ತುಗಳು.ಆದ್ದರಿ೦ದಲೇ ಮನುಷ್ಯನು ಅಹ೦ಕಾರವನ್ನು ಬಿಟ್ಟು ಸುಖಿಯಾಗಿರುವುದನ್ನು ಕಲಿಯಬೇಕು.
ಈ ಸುಭಾಷಿತದ ಅಣಿಮುತ್ತುಗಳು ಅನವರತವಾಗಿ ಹರಿದು ಬರಲಿ ಎಂದು ಹಾರೈಸುತ್ತೇನೆ.
ReplyDelete