ಬಲನ ಕೊ೦ದವರಾರು ದ್ರವ್ಯವ
ಗಳಿಸಿ ತ್ಯಾಗವನಾವ ಮಾಡುವ
ಒಲಿದು ಮಖ ರಕ್ಷಣೆಗೆ ರಾಮನವೊಯ್ದ ಮುನಿಯಾರು
ಜ್ವಲನ ಸಖಗೇನೆ೦ದು ನುಡಿವರು
ತಿಳಿದು ಪೇಳೀ ಪ್ರಶ್ನೆಗುತ್ತರ
ದೊಳಗೆ ಮಧ್ಯಕ್ಷರದಾತನುನಿಮ್ಮ ರಕ್ಷಿಸಲಿ
ಬಲಾಸುರನನ್ನು ಕೊ೦ದ ಯಾವ ವಾಸವನು , ಗಳಿಸಿದ್ದನ್ನು ದಾನ ಮಾಡುವ ಯಾವ ಉದಾರಿ,ಯಜ್ಞ ರಕ್ಷಣೆಗೆ ರಾಮನನ್ನು ಕರೆದೊಯ್ದ ಯಾವ ಕೌಶಿಕ ಮುನಿ, ಜ್ವಲನ ಸಖನಾಗಿ ಜವಗಾಎ೦ದು ಕರೆಸಿಕೊಳ್ಳುವ ವಾಯು ಈ ಪ್ರಶ್ನೆಗಳಿಗೆ ಉತ್ತರಹೇಳು. ಆ ಉತ್ತರದೊಳಗಿನ ಮಧ್ಯಕ್ಷರಗಳಿ೦ದ ಬರುವ ಸದಾಶಿವನು ನಮ್ಮನ್ನು ಕಾಪಾಡಲಿ.
No comments:
Post a Comment
Note: Only a member of this blog may post a comment.