Thursday, April 7, 2011

subhashita

ಯಥಾ ಬೀಜ೦ ವಿನಾಕ್ಷೇತ್ರ೦ ಉಪ್ತ೦ ಭವತಿ ನಿಷ್ಫಲಮ್|
ತಥಾ ಪುರುಷಕಾರೇಣ ವಿನಾ ದೈವ೦ ನ ಸಿದ್ಧ್ಯತಿ||೧೨೧||
ಸರಿಯಾದ ಭೂಮಿಯಿಲ್ಲದೆ ಬೀಜವನ್ನು ಬಿತ್ತಿದರೂ ಆ ಬೀಜವು ಹೇಗೆ ನಿಷ್ಫಲವಾಗುವುದೋ, ಹಾಗೆಯೇ ಪುರುಷಪ್ರಯತ್ನವಿಲ್ಲದೆ ಬರೀ ದೈವ ಬಲದಿ೦ದ ಪೂರ್ಣಫಲವು ಸಿದ್ಧಿಸುವುದಿಲ್ಲ.

ಶುಭೇನ ಕರ್ಮಣಾ ಸೌಖ್ಯ೦ ದುಃಖ೦ ಪಾಪೇಣ ಕರ್ಮಣಾ|
ಕೃತ೦ ಭವತಿ ಸರ್ವತ್ರನಾ ಕೃತ೦ ವಿದ್ಯತೇ ಕ್ವಚಿತ್ ||೧೨೨||
ಒಳ್ಳೆಯ ಕರ್ಮದಿ೦ದ ಸುಖವೂ, ಪಾಪಕರ್ಮದಿ೦ದ ದುಃಖವೂ ಉ೦ಟಾಗುವುದು.ಮಾಡಿದ ಕರ್ಮಗಳೇ ಎಲ್ಲ ಕಡೆಯೂ ಫಲಗಳನ್ನು ಕೊಡುತ್ತವೆ. ಕರ್ಮಗಳನ್ನು ಮಾಡದೆ ಫಲಗಳೆ೦ದು ಎಲ್ಲಿಯೊ ಇಲ್ಲ.

No comments:

Post a Comment

Note: Only a member of this blog may post a comment.