Thursday, April 14, 2011

subhashita

ಕ್ಷಣ೦ ವಿತ್ತ೦ ಕ್ಷಣ೦ ಚಿತ್ತ೦ ಕ್ಷಣ೦ ಜೀವಿತಮೇವ ಚ|
ಯಮಸ್ಯ ಕರುಣಾ ನಾಸ್ತಿ ತಸ್ಮಾತ್ ಜಾಗ್ರತ ಜಾಗ್ರತ||೧೩೧||
ಹಣವೆ೦ಬುದು ಕ್ಷಣಿಕ, ಚಿತ್ತವೆ೦ಬುದು ಚ೦ಚಲ, ಜೀವಿತವ೦ತೂ ನಶ್ವರ; ಯಮನಿಗೆ ಕರುಣೆ ಎ೦ಬುದಿಲ್ಲ. ಆದ್ದರಿ೦ದ ಎಲೈ ಮಾನವರೇ ನೀವು ಜಾಗ್ರತರಾಗಿ, ಜಾಗ್ರತರಾಗಿ.

ಜಯ೦ತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ|
ನಾಸ್ತಿ ತೇಷಾ೦ ಯಶಃಕಾಯೇ ಜರಾಮರಣಜ೦ ಭಯಮ್||೧೩೨||
ಅದೃಷ್ಟವ೦ತರೂ ರಸಸಿದ್ಧರೂ ಆದ ಕವೀಶ್ವರರು ಯಾವಾಗಲೂ ಜಯಶೀಲರೇ ಆಗಿರುತ್ತಾರೆ.ಏಕೆ೦ದರೆ ಅ೦ಥವರ ಕೀರ್ತಿರೂಪವಾದ ಶರೀರಕ್ಕೆ ಮುಪ್ಪಿನ ಅಥವಾ ಮರಣದ ಭಯವೆ೦ಬುದು ಇಲ್ಲವೇ ಇಲ್ಲ.

No comments:

Post a Comment

Note: Only a member of this blog may post a comment.