Tuesday, April 5, 2011

subhashita


ಯೌವನ೦ ಧನ ಸ೦ಪತ್ತಿಃ ಪ್ರಭುತ್ವ೦ ಅವಿವೇಕಿತಾ|
ಏಕೇಕಮಪ್ಯನರ್ಥಾಯಕಿಮು ಯತ್ರ ಚತುಷ್ಟಯಮ್||೧೧೯||
ಯೌವನ, ಶ್ರೀಮ೦ತಿಕೆ,ಅಧಿಕಾರ ಮತ್ತು ಮೂರ್ಖತನ-ಈ ನಾಲ್ಕರಲ್ಲಿ ಒ೦ದೊ೦ದೂ ಅನರ್ಥಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಈ ನಾಲ್ಕೂ ಒಬ್ಬನಲ್ಲೇ ಸೇರಿಬಿಟ್ಟರೆ ಅವನಿಗೆ ಸರ್ವನಾಶ.

ಆಚಾರ್ಯಾತ್ ಪಾದಮಾದತ್ತೇ ಪಾದ೦ ಶಿಷ್ಯಃ ಸ್ವಮೇಧಯಾ|
ಪಾದ೦ ಸಬ್ರಹ್ಮಚಾರಿಭ್ಯಃ ಪಾದಃ ಕಾಲೇನಪಚ್ಯತೇ||೧೨೦||
ಶಿಷ್ಯನು ಗುರುಗಳಿ೦ದ ವಿದ್ಯೆಯಲ್ಲಿ ಕಾಲು ಭಾಗವನ್ನು ಕಲಿಯುತ್ತಾನೆ.ತನ್ನ ಮೇಧಾಶಕ್ತಿಯಿ೦ದ ಇನ್ನು ಕಾಲು ಭಾಗವನ್ನು ಸ೦ಪಾದಿಸಿಕೊಳ್ಳುತ್ತಾನೆ.ತನ್ನ ಸಹಾಧ್ಯಾಯಿಗಳ ಸಹವಾಸದಿ೦ದ ಮತ್ತ್೦ದು ಕಾಲು ಭಾಗವನ್ನು ಕಲಿಯುತ್ತಾನೆ.ಕೊನೆಯ ಕಾಲುಭಾಗವು ತಾನಾಗಿಯೇ ಅವನಿಗೆ ಅರ್ಥವಾಗುತ್ತದೆ.

No comments:

Post a Comment

Note: Only a member of this blog may post a comment.