ಮತ್ಸ್ಯಃ ಕೂರ್ಮಃ ವರಾಹಶ್ಚನಾರಸಿ೦ಹಶ್ಚ ವಾಮನಃ|
ರಾಮೋ ರಾಮಶ್ಚ ಕೃಷ್ಣಶ್ಚ ಬೌದ್ಧಃ ಶ್ರೀಕಲ್ಕಿರೇವ ಚ||೧೪೮||
ಮತ್ಸ್ಯ, ಕೂರ್ಮ, ವರಾಹ, ನರಸಿ೦ಹ, ವಾಮನ, ಪರಶುರಾಮ, ರಾಮ ಕೃಷ್ಣ, ಬೌದ್ಧಮತ್ತು ಕಲ್ಕಿ-ಇವು ವಿಷ್ಣುವಿನ ದಶಾವತಾರಗಳು.
ಜಿಹ್ವೇ ಪ್ರಮಾಣ೦ ಜಾನೀಹಿ ಭಾಷಣೇ ಭೋಜನೇ ತಥಾ|
ಅತ್ಯುಕ್ತಿಃ ಚಾತಿಭುಕ್ತಿಶ್ಚ ಸತ್ಯ೦ ಪ್ರಾಣಾಪಹಾರಿಣೀ||೧೪೯||
ಎಲೈ ನಾಲಿಗೆಯೇ, ಮಾತನಾಡುವಾಗಲೂ ಮತ್ತು ಊಟ ಮಾಡುವಾಗಲೂ ನಿನ್ನ ಇತಿಮಿತಿಯನ್ನು ತಿಳಿದಿರು. ಏಕೆ೦ದರೆ ಮಾತು ಜಾಸ್ತಿಯಾದರೆ ಅಥವಾ ಊಟ ಜಾಸ್ತಿಯಾದರೆ ಪ್ರಾಣವೇ ಹೋಗಿಬಿಡಬಹುದು.
No comments:
Post a Comment
Note: Only a member of this blog may post a comment.