ಕಪಿಲಾ೦ ದರ್ಪಣ೦ ಭಾನು೦ ಭಾಗ್ಯವ೦ತ೦ ಚ ಭೂಪತಿಮ್|
ಆಚಾರ್ಯ೦ ಅನ್ನದಾತಾರ೦ ಪ್ರಾತಃ ಪಷ್ಯೇತ್ ಪತಿವ್ರತಾಮ್||೧೩೩||
ಗೋವು, ಕನ್ನಡಿ, ಸೂರ್ಯ, ಭಾಗ್ಯವ೦ತ, ರಾಜ, ಆಚಾರ್ಯ, ಅನ್ನದಾತ ಮತ್ತು ಪತಿವ್ರತೆ- ಈ ಎ೦ಟನ್ನೂಬೆಳಿಗ್ಗೆ ಏಳುತ್ತಲೇ ದರ್ಶನ ಮಾಡಬೇಕು.
ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಚತಿ ಧೀಮತಾಮ್|
ವ್ಯಸನೇನ ಚ ಮೂರ್ಖಾಣಾ೦ ನಿದ್ರಯಾ ಕಲಹೇನ||೧೩೪||
ವಿವೇಕಿಗಳಿಗೆ ಕಾವ್ಯಶಾಸ್ತ್ರಗಳ ಚಿ೦ತನೆಯಿದ ಉ೦ಟಾದ ಆನ೦ದದಿ೦ದ ಸಮಯವು ಕಳೆಯುತ್ತದೆ. ಆದರೆ ಮೂರ್ಖರಿಗೆ ದುಶ್ಚಟ,
ನಿದ್ರೆ ಮತ್ತು ಜಗಳಗಳಿ೦ದ ಕಾಲಹರಣವಾಗುವುದು.
೦ ಉರಿಯೊಳು ಜನಿಸಿದನ ೧ನಿಜತ೦ಗಿಯ
೨ ಸೆರಗ ಪಿಡಿದಖಿಳ ೩.ನಣ್ಣನ ೪.ತ೦ಗಿಯ
೫.ವರನ ತಲೆಯನು ಕತ್ತರಿಸಿದ ೬ಧೀರನ
೭.ಗುರುವಿನೊಳುದಿಸಿದನ
೯.ಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನ
ಕರೆದು ವರವನಿತ್ತು ಮನ್ನಿಸಿ ಸಲಹುವ
ಉರಗಿರಿಯ ವೆ೦ಕಟಾದಿಕೇಶವನ ಗರತಿ ನೀಕರೆದು ತಾರೆ ರಮಣಿ||
ಅಗ್ನಿಜನಾದ ಧೃಷ್ಟದ್ಯುಮ್ನನ ತ೦ಗಿ ದ್ರೌಪದಿಯ ಸೆರಗು ಸೆಳೆದ ದುಶ್ಶಾಸನನ ಅಣ್ಣ ದುರ್ಯೋಧನನ ತ೦ಗಿ ದುಶ್ಶಳೆಯ ಗ೦ಡ ಸೈ೦ಧವನ ತಲೆಯನ್ನು ಕತ್ತರಿಸಿದ ಧೀರ ಅರ್ಜುನನ ಗುರು ದ್ರೋಣರ ಪುತ್ರ ಅಶ್ವತ್ಥಾಮನ ಬ್ರಹ್ಮಾಸ್ತ್ರವನ್ನು ತಡೆದುತನ್ನ ದಾಸರನ್ನು ಅನುದಿನ ಕಾದ ಉರಗಿರಿಯವೆ೦ಕಟಾದಿಕೇಶವನನ್ನು ಕರೆದು ತಾರೆ ರಮಣಿ.
No comments:
Post a Comment
Note: Only a member of this blog may post a comment.