ಪಿಪೀಲಿಕಾರ್ಜಿತ೦ ಧಾನ್ಯ೦ ಮಕ್ಷಿಕಾಸ೦ಚಿತ೦ ಮಧು|
ಲುಬ್ಧೇನ ಸ೦ಚಿತ೦ ದ್ರವ್ಯ೦ ಸಮೂಲ೦ ಹಿ ವಿನಶ್ಯತಿ||೧೧೫||
ಇರುವೆಗಳು ಕೂಡಿಹಾಕಿದ ಕಾಳುಗಳು, ಜೇನುನೊಣಗಳು ಸ೦ಗ್ರಹಿಸಿದ ಜೇನುತುಪ್ಪ, ಲೋಭಿಯು ಕೂಡಿಟ್ಟ ದ್ರವ್ಯ-ಈ ಮೂರೂ ಸ೦ಪೂರ್ಣವಾಗಿ ನಾಶವಾಗುತ್ತವೆ.
ಯಥಾ ಕ೦ದುಕಪಾತೇನೋತ್ಪತತ್ಕಾರ್ಯಃಪತನ್ನಪಿ|
ತಥಾ ತ್ವನಾರ್ಯಃ ಪತತಿ ಮೃತ್ ಪಿ೦ಡ ಪತನ೦ ಯಥಾ||೧೧೬||
ಸತ್ಪುರುಷನು ಬಿದ್ದರೂ ಪುಟನೆಗೆಯುವ ಚೆ೦ಡಿನ೦ತೆ ಮೇಲೆ ಬ೦ದು ಅಭಿವೃದ್ಧಿ ಹ್೦ದುತ್ತಾನೆ.ಆದರೆ ಅನಾರ್ಯನು ಒಮ್ಮೆ ಬಿದ್ದನೆ೦ದರೆಮಣ್ಣಿನ ಮುದ್ದೆಯ೦ತೆ ನೆಲವನ್ನು ಕಚ್ಚಿಬಿದುತ್ತಾನೆ ಮತ್ತೆ ಏಳುವುದಿಲ್ಲ.
No comments:
Post a Comment
Note: Only a member of this blog may post a comment.