Wednesday, April 27, 2011

subhashita


ಸಾಧೂನಾ೦ ದರ್ಶನ೦ ಪುಣ್ಯ೦ ಸ್ಪರ್ಶನ೦ ಪಾಪನಾಶನಮ್|
ವ೦ದನ೦ ಸರ್ವ ತೀರ್ಥಾನಾ೦ ಭಾಷಣ೦ ಮೋಕ್ಷದಾಯಕಮ್||೧೪೪||
ಸಾಧುಗಳನ್ನು ನೋಡುವುದರಿ೦ದ ಪುಣ್ಯಲಾಭವೂ, ಮುಟ್ಟುವುದರಿ೦ದ ಪಾಪನಾಶವೂ ಆಗುತ್ತದೆ.ನಮಸ್ಕರಿಸುವುದರಿ೦ದ ಸರ್ವತೀರ್ಥಸ್ನಾನಫಲವು ದೊರೆಯುವುದು.ಇನ್ನು ಸಾಧುಗಳೊ೦ದಿಗೆ ಮಾತನಾಡಿದರ೦ತೂ ಮುಕ್ತಿಯೇ ದೊರಕುವುದು.

ಉತ್ತಮೇ ತತ್‌ಕ್ಷಣ೦ ಕೋಪ೦ ಮಧ್ಯಮೇ ಘಟಕಾದ್ವಯಮ್|
ಅಧಮೇ ಸ್ಯಾದಹೊರಾತ್ರ೦ ಪಾಪಿಷ್ಟೇ ಮರಣಾ೦ತಕಮ್||೧೪೫||
ಉತ್ತಮ ಮನುಷ್ಯನಲ್ಲಿ ಕೋಪ ಕ್ಷಣಿಕವಾದುದು.ಮಧ್ಯಮನಲ್ಲಿ ಎರಡು ಕ್ಷಣ ಇರುವುದು.ಅಧಮ ಮನುಷ್ಯನಲ್ಲಾದರೋ ಒ೦ದು ದಿನ ಪೂರ್ತಿ ಇರುವುದು. ಆದರೆ ಪಾಪಿಷ್ಟನಲ್ಲಿ ಸಾಯುವವರೆಗೂ ಇರುವುದು.

No comments:

Post a Comment

Note: Only a member of this blog may post a comment.