Wednesday, May 19, 2010

dinakkondu Animuttu

೩)ನಮ್ಮ ಹಿರಿಯರು ಮಾತು ಆಡಿದರೆ ಹೋಯಿತು, ಮುತ್ತು ಜಾರಿದರೆ ಹೋಯಿತು- ಎ೦ದಿದ್ದಾರೆ.ಬಸವಣ್ಣನವರ೦ತೂ ಅಯ್ಯಾ ಎ೦ದಡೆ ಸ್ವರ್ಗ ಎಲವೋ ಎ೦ದರೆ ನರಕ- ಎ೦ದು ಮಾತಿನಲ್ಲಿರಬೇಕಾದ ಮಾರ್ದವತೆ ಅದುಇಲ್ಲದಿದ್ದರೆ ಆಗುವ ಅನಾಹುತವನ್ನು ತಿಳಿಸಿದ್ದಾರೆ.ಇನ್ನು ಸರ್ವಜ್ನನ ಮಾತಿನಲ್ಲಿ ಹೇಳುವುದಾದರೆ
ಮಾತಿನಿ೦ ನಡೆನುಡಿಯು ಮಾತಿನಿ೦ ಹಗೆ ಕೊಲೆಯು
ಮಾತಿನಿ೦ ಸರ್ವ ಸ೦ಪದವು ಲೋಕಕ್ಕೆ
ಮಾತೇ ಮಾಣಿಕ-ಎ೦ದು ಮಾತಿನಿ೦ದಾಗುವ ಸತ್ಪರಿಣಾಮ ಹಾಗೂ ದುಷ್ಪರಿಣಾಮಗಳನ್ನು ತಿಳಿಸಿದ್ದಾನೆ. ಆದ್ದರಿ೦ದ ನಾವು ಯಾವುದೇ ಮಾತನಾಡುವಾಗ ಅದರಲ್ಲೂ ಕೋಪಗೊ೦ಡಿರುವಾಗ ಯೋಚಿಸಿ ನಿಧಾನವಾಗಿ ಮಾತನಾಡಿದರೆ ಮು೦ದಾಗುವ
ಅನೇಕ ಅನಾಹುತಗಳನ್ನು ತಪ್ಪಿಸಬಹುದು.

1 comment:

  1. ಖಂಡಿತವಾಗಿಯೂ ಹೌದು. ಆದರೆ ಕೋಪ ಬಂದಾಗ ಇದೆಲ್ಲಾ ಮರೆತುಹೋಗುವುದು.:-)

    ReplyDelete

Note: Only a member of this blog may post a comment.