Wednesday, May 5, 2010

dinakkondu Animuttu

೪೫)ಸು೦ದರವಾದುದೆಲ್ಲವೂ ಸತ್ಯ ಎನ್ನುವುದಕ್ಕಾಗುವುದಿಲ್ಲ.ಹಾಗೆಯೆ ರುಚಿಯಾದುದೆಲ್ಲವೂ ಹಿತವಲ್ಲ. ಮ್ರದುವಾದುದು ಮನಕ್ಕೊಪ್ಪಬಹುದು, ಆದರೆ ಅದು ಮಾರಕವಾಗಿಯೂ ಇರಬಹುದು.ಜೀವನದ ವೈವಿಧ್ಯ ಅ೦ದರೆ ಇದೇ ಇರಬಹುದು.ಮೇಲ್ನೋಟಕ್ಕೆ ಕ೦ಡದ್ದೇ ಸತ್ಯಎ೦ಬ ಭ್ರಮೆಗೆ ಬಿದ್ದ೦ತೆ ಬಹುತೇಕ ಸ೦ದರ್ಭದಲ್ಲಿನಾವು ವರ್ತಿಸುತ್ತಿರುತ್ತೇವೆ. ಆದ್ದರಿ೦ದ ಸನ್ನಿವೇಶಕ್ಕನುಗುಣವಾಗಿ ಗುಣಾವಗುಣಗಳನ್ನು ಅರ್ಥೈಸಬೇಕಾಗುತ್ತದೆ.ಉದಾ- ಕಳ್ಳಿಗಿಡದಲ್ಲಿ ಅತ್ಯ೦ತ ಸು೦ದರವಾದ ಹೂ ಬಿಡುತ್ತದೆ.ಫಕ್ಕನೆ ನೋಡಿದರೆ ತಾವರೆಯ೦ತೆಯೇ ಕ೦ಗೊಳಿಸುತ್ತದೆ. ಸ್ವಲ್ಪಮಟ್ಟಿಗೆ ಸುವಾಸನೆಯನ್ನೂ ಹೊ೦ದಿರುತ್ತದೆ.ಆದರೆ ಎ೦ದಿಗೂ ನಾವು ಅದನ್ನು ಪೂಜಾಪುಷ್ಪವಾಗಿ ಸ್ವೀಕರಿಸುವುದೇ ಇಲ್ಲ. ಗಿಡದಿ೦ದ ಕಿತ್ತ ಮರುಕ್ಷಣವೇ ಅದು ಬಾಡಲಾರ೦ಭಿಸುತ್ತದೆ.ಇದಕ್ಕಿ೦ತ ಹೆಚ್ಚಾಗಿ ಈ ಹೂವಿನಿ೦ದ ಒಡಮೂಡುವ ಹೀಚು ವಿಷಕಾರಕ ಫಲವೊ೦ದಕ್ಕೆ ಬುನಾದಿಯಾಗುತ್ತದೆ. ಹೀಗಾಗಿಯೇಆ ಹೂವು ಎಷ್ಟು ಸು೦ದರವಾಗಿದ್ದರೂ ಅದನ್ನು ಆದರಿಸುವುದಿಲ್ಲ.ಸೌ೦ದರ್ಯವೆ೦ಬುದು ಗುಣಗ್ರಾಹಿಯಾಗಿರಬೇಕು.ಆಗಲೇ ಅದರ ಸೌ೦ದರ್ಯದ ಸಾರ್ಥಕತೆ.

No comments:

Post a Comment

Note: Only a member of this blog may post a comment.