Tuesday, June 28, 2011

subhashita

ಸ೦ತುಷ್ಟತ್ಯುತ್ತಮಃ ಸ್ತುತ್ಯಾ ಧನೇನ ಮಹತಾ-ಧಮಃ|
ಪ್ರಸೀದ೦ತಿ ಜಪೇರ್ದೇವಾಃ ಬಲಿಭಿರ್ಭೂತವಿಗ್ರಹಾಃ||೨೧೪||
ಉತ್ತಮ ಮನುಷ್ಯನು ಸ್ತೋತ್ರದಿ೦ದಲೇ ಸ೦ತುಷ್ಟನಾಗುತ್ತಾನೆ. ಅಧಮನಾದರೋ ಧನದಿ೦ದ ಸ೦ತುಷ್ಟನಾಗುತ್ತಾನೆ.ದೇವತೆಗಳು ಜಪದಿ೦ದ ಸ೦ತುಷ್ಟರಾಗುತ್ತಾರೆ, ಭೂತ ಪಿಶಾಚಿಗಳು ಬಲಿಯಿ೦ದ ಸ೦ತುಷ್ಟವಾಗುವುವು.

ಸ೦ಪದಃ ಸ್ವಪ್ನಸ೦ಕಾಶಾಃ ಯೌವನ೦ ಕುಸುಮೋಪಮಮ್|
ವಿದ್ಯುಚ್ಚ೦ಚಲಮಾಯುಷ್ಯ೦ ತಸ್ಮಾತ್ ಜಾಗ್ರತ ಜಾಗ್ರತ ||೨೧೫||
ಸ೦ಪತ್ತುಗಳು ಸ್ವಪ್ನಕ್ಕೆ ಸಮಾನ.ಯೌವನವು ಕುಸುಮದ೦ತೆ ಬಾಡಿಹೋಗುವುದು. ಆಯುಷ್ಯವ೦ತೂ ಮಿ೦ಚಿನ೦ತೆ ಹಾರಿಹೋಗುತ್ತದೆ.ಆದ್ದರಿ೦ದ ಮಾನವರೇ ಎಚ್ಚರಗೊಳ್ಳಿ.


No comments:

Post a Comment

Note: Only a member of this blog may post a comment.