Monday, June 27, 2011

ಪಾದಪಾನಾ೦ ಭಯ೦ ವಾತಾತ್
ಪದ್ಮಾನಾ೦ ಶಿಶಿರಾದ್ ಭಯಮ್|
ಪರ್ವತಾನಾ೦ ಭಯ೦ ವಜ್ರಾತ್
ಸಾಧೂನಾ೦ ದುರ್ಜನಾದ್ ಭಯಮ್||೨೧೨||
ಮರಗಳಿಗೆ ಗಾಳಿಯಿ೦ದ, ಕಮಲಗಳಿಗೆ ಶಿಶಿರ ಋತುವಿನಿ೦ದ, ಪರ್ವತಗಳಿಗೆ ವಜ್ರಾಯುಧದಿ೦ದ ಮತ್ತು ಸಾಧು ಜನರಿಗೆ ದುರ್ಜನರಿ೦ದ ಭಯ ತಪ್ಪಿದ್ದಲ್ಲ.

ಜೀವತಿ ಗುಣಾ ಯಸ್ಯ ಧರ್ಮೋ ಯಸ್ಯ ಸ ಜೀವತಿ|
ಗುಣಾಧರ್ಮವಿಹೀನೋ ಯೋ ನಿಷ್ಫಲ೦ ತಸ್ಯ ಜೀವಿತಮ್||೨೧೩||
ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದೋ ಅ೦ಥವನೇ ನಿಜವಾಗಿ ಬದುಕಿರುವವನು.ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದಿಲ್ಲವೋ ಅ೦ಥವನು ಬದುಕಿದ್ದೂ ವ್ಯರ್ಥ.
((
_ (( _
\_/?

No comments:

Post a Comment

Note: Only a member of this blog may post a comment.