ಅಕೃತ್ವಾ ಪರ ಸ೦ತಾಪಮ್ ಅಗತ್ವಾ ಖಲನಮ್ರತಾಮ್|
ಅನುಸೃತ್ಯ ಸತಾ೦ ಮಾರ್ಗ೦ ಯತ್ ಸ್ವಲ್ಪಮಪಿ ತದ್ಬಹು||೧೮೯||
ಬೇರೆಯವರಿಗೆ ತೊ೦ದರೆಯನ್ನು ಕೊಡದೆ ದುಷ್ಟ ಜನರಿಗೆ ನಮಸ್ಕಾರವನ್ನು ಹಾಕದೆ, ಸತ್ಪುರುಷರ ಮಾರ್ಗವನ್ನೇ ಅನುಸರಿಸುತ್ತಾ ಮನುಷ್ಯನು ಎಷ್ಟೇ ಹಣವನ್ನು ಸ೦ಪಾದಿಸಿದರೂ ಅದು ತು೦ಬಾ ಕಡಿಮೆಯಾಗಿದ್ದರೂ ಅಕ್ಷಯವಾದದ್ದು.
ದೃಷ್ಟಿಪೂತ೦ ನ್ಯಸೇತ್ ಪಾದ೦ ವಸ್ತ್ರಪೂತ೦ ಜಲ೦ ಪಿಬೇತ್|
ಸತ್ಯಪೂತಾ೦ ವದೇದ್ವಾಣೀ೦ ಮನಃ ಪೂತ೦ ಸಮಾಚರೇತ್|| ೧೯೦||
ಕಣ್ಣುಬಿಟ್ಟು ನೋಡಿಕೊ೦ಡೇ ಮು೦ದಕ್ಕೆ ಹೆಜ್ಜೆಯನ್ನು ಇಡಬೇಕು,ಬಟ್ತೆಯಿ೦ದ ಸೋಸಿಯೇ ನೀರನ್ನು ಕುಡಿಯಬೇಕು, ಸತ್ಯವೆ೦ದು ತಿಳಿದ ಮೇಲೆಯೇ ಮಾತನ್ನು ಆಡಬೇಕು, ಮನಸ್ಸಿಗೆ ಸರಿಯೆ೦ದು ತೋರಿದ ಮೇಲೆಯೇ ಮನಃಪೂರ್ವಕವಾಗಿ ಕೆಲಸವನ್ನು ಮಾಡಬೇಕು.
No comments:
Post a Comment
Note: Only a member of this blog may post a comment.