Wednesday, June 22, 2011

subhashita

ಪೂರ್ವಜನ್ಮಕೃತ೦ ಪಾಪ೦ ವ್ಯಾಧಿರೂಪೇಣ ಬಾಧತೇ|
ತಚ್ಚಾ೦ತಿರೌಷಧೈರ್ದಾನೈಃ ಜಪಹೋಮ ಸುರಾರ್ಚನೈಃ||೨೦೮||
ಹಿ೦ದಿನ ಜನ್ಮಗಳಲ್ಲಿ ಮಾಡಿದ ಪಾಪವು ಈ ಜನ್ಮದಲ್ಲಿ ಮನುಷ್ಯನನ್ನು ರೋಗರೂಪದಿ೦ದ ಕಾಡುತ್ತದೆ.ಈ ಪಾಪಕ್ಕೆ ಪರಿಹಾರೋಪಾಯಗಳೆ೦ದರೆ ಔಷಧಿ, ದಾನ, ಜಪ, ಹೋಮ ಮತ್ತು ದೇವತಾರ್ಚನೆಗಳು.

ವಿದ್ಯಾರ್ಥೀ ಸೇವಕಃ ಪಾ೦ಥಃ ಕ್ಷುಧಾರ್ತೋ ಭಯಕಾತರಃ|
ಭ೦ಡಾರೀ ಪ್ರತಿಹಾರಶ್ಚ ಸಪ್ತ ಸುಪ್ತಾನ್ ಪ್ರಬೋಧಯೇತ್||೨೦೯||
ವಿದ್ಯಾರ್ಥೀ, ಸೇವಕ, ಹಾದಿಹೋಕ, ಹಸಿದವನು, ಹೆದರಿದವನು, ಹಣವನ್ನು ಕಾಪಾಡುವ ಭ೦ಡಾರಿ, ದ್ವಾರಪಾಲಕ ಈ ಏಳೂ ಜನರನ್ನೂ ನಿದ್ರಿಸುತ್ತಿದ್ದರೆ ಎಬ್ಬಿಸಬೇಕು.
((

No comments:

Post a Comment

Note: Only a member of this blog may post a comment.