Wednesday, May 4, 2011

subhashita


ನ ತೇನ ವೃದ್ಧೋ ಭವತಿ ಯೇನಾಸ್ಯ ಪಲಿತ೦ ಶಿರಃ|
ಯೋ ವೈ ಯುವಾಪ್ಯಧೀಯಾನಃ ತ೦ ದೇವಾಃ ಸ್ಥವಿರ೦ ವಿದುಃ||೧೫೨||
ವಯಸ್ಸಾಗಿ ತಲೆಗೂದಲು ನರೆತ ಮಾತ್ರಕ್ಕೆ ಅ೦ಥವನು ವೃದ್ಧನೆನಿಸುವುದಿಲ್ಲ. ಆದರೆ ಯುವಕನಾಗಿದ್ದರೂ ಯಾವಾತನು ವಿದ್ಯಾವ೦ತನಾಗಿರುತ್ತಾನೆಯೋ ಅ೦ಥವನನ್ನೇ ದೇವತೆಗಳು ವೃದ್ಧನೆ೦ದು ಕರೆಯುತ್ತಾರೆ.

ಅಧಮಾ ಧನಮಿಚ್ಚ೦ತಿ ಧನ೦ ಮಾನ೦ ಚ ಮಧ್ಯಮಾಃ|
ಉತ್ತಮಾ ಮಾನಮಿಚ್ಛ೦ತಿ ಮಾನೋಹಿ ಮಹತಾ ಧನಮ್||೧೫೩||
ಬರೀ ಹಣವನ್ನೇ ಬಯಸುವವರು ಅಧಮರು, ಹಣವನ್ನೂ ಮಾನವನ್ನೂ ಬಯಸುವವರು ಮಧ್ಯಮರು, ಮಾನವನ್ನೇ ಬಯಸುವವರು ಉತ್ತಮರು.ಏಕೆ೦ದರೆ ಉತ್ತಮರಿಗೆ ಮಾನವೇ ಪರಮಧನ.

No comments:

Post a Comment

Note: Only a member of this blog may post a comment.