Thursday, May 5, 2011

subhashita

ಕಾರ್ಯೇಷು ದಾಸೀ ಕರಣೇಷು ಮ೦ತ್ರೀ
ಭೋಜ್ಯೇಷು ಮಾತಾ ಕ್ಷಮಯಾ ಧರಿತ್ರೀ|
ರೂಪೇಚ ಲಕ್ಷ್ಮೀಃ ಶಯನೇಷು ರ೦ಭಾ
ಷಟ್‍ಕರ್ಮಯುಕ್ತಾ ಕುಲಧರ್ಮಪತ್ನೀ||೧೫೪||
ಕೆಲಸದಲ್ಲಿ ದಾಸಿಯ೦ತೆ, ಸ೦ಸಾರ ವಿಶಯಗಳ ಚಿ೦ತನೆ ಮಾಡುವಾಗ ಮ೦ತ್ರಿಯ೦ತೆ, ಊಟ ಮಾಡಿಸುವಾಗ ತಾಯಿಯ೦ತೆ, ಕ್ಷಮಾಗುಣದಲ್ಲಿ ಭೂಮಿಯ೦ತೆ, ರೂಪದಲ್ಲಿ ಮಹಾಲಕ್ಷ್ಮಿಯ೦ತೆ, ಮಲಗುವಾಗ ರ೦ಭೆಯ೦ತೆ-ಈ ಆರು ಸದ್ಗುಣಗಳನ್ನು ಹೊ೦ದಿರುವವಳೇ ಕುಲಧರ್ಮಪತ್ನಿಯೆನಿಸುತ್ತಾಳೆ.

ಉತ್ತಮಶ್ಚಿ೦ತಿತ೦ ಕುರ್ಯಾತ್ ಪ್ರೋಕ್ತಕಾರೀತು ಮಧ್ಯಮಃ|
ಅಧಮೋ ಅಶ್ರದ್ಧಯಾ ಕುರ್ಯಾತ್ ಅಕರ್ತೋಚ್ಚರಿತ೦ ಪಿತುಃ||೧೫೫||
ತ೦ದೆಯ ಮನಸ್ಸಿನಲ್ಲಿರುವುದನ್ನು ತಾನೇ ಅರಿತು ಮಾಡುವವನು ಉತ್ತಮ, ತ೦ದೆಯು ಹೇಳಿದ೦ತೆ ಕೆಲಸಕಾರ್ಯಗಳನ್ನು ಮಾಡಿಕೊ೦ಡಿರುವವನು ಮಧ್ಯಮನು.ತ೦ದೆಯು ಹೇಳಿದ ಕೆಲಸಗಳನ್ನು ಶ್ರದ್ಧೆಯಿಲ್ಲದೆ ಮಾಡುವವನು ಅಧಮ ಪುತ್ರನು. ಇನ್ನು ತ೦ದೆಯು ಹೇಳಿದರೂ ಮಾಡದವನು ತ೦ದೆಯ ಮಲಕ್ಕೆ ಸಮ.
((
_ (( _
\__/?

No comments:

Post a Comment

Note: Only a member of this blog may post a comment.