ಆಯ೦ ನಿಜಃ ಪರೋ ವೇತಿ ಗಣನಾ ಲಘು ಚೇತಸಾಮ್|
ಉದಾರಚರಿತಾನಾ೦ ತು ವಸುಧೈವ ಕುಟು೦ಬಕಮ್||೧೬೩||
ಒಬ್ಬ ಮನುಷ್ಯನನ್ನು ಕ೦ಡಾಗ ಇವನು ನನ್ನವನೋ ಅಥವಾ ಬೇರೆಯವನೋ ಎ೦ಬ ಭಾವನೆ ಬರುತ್ತದೆ. ಆದರೆ ಉದಾರ ಸ್ವಭಾವದ ಮಹಾತ್ಮರಿಗಾದರೋ "ಭೂಮ೦ಡಲವೇ ತಮ್ಮ ಕುಟು೦ಬ" ಎ೦ಬ ಭಾವನೆ ಇರುತ್ತದೆ.
_ (( _
\_/?
ಭೋಜನಾ೦ತೇ ಚ ಕಿ೦ ಪೇಯ೦? ಜಯ೦ತಃ ಕಸ್ಯ ವೈ ಸುತಃ|
ಕಥ೦ ವಿಷ್ಣುಪದ೦ ಪ್ರೋಕ್ತ೦? ತಕ್ರ೦ ಶಕ್ರಸ್ಯ ದುರ್ಲಭಮ್||೧೬೪||
ಊಟದ ಕೊನೆಯಲ್ಲಿ ಏನನ್ನು ಕುಡಿಯಬೇಕು? ಮಜ್ಜಿಗೆಯನ್ನು. ಜಯ೦ತನು ಯಾರ ಮಗನು? ದೇವೇ೦ದ್ರನ ಮಗನು. ಇಷ್ಣುವಿನ ಪರಮ ಪದವು ಹೇಗಿದೆ? ದುರ್ಲಭವಾಗಿದೆ. ಮಜ್ಜಿಗೆಯೆ೦ಬುದು ದೇವೇ೦ದ್ರನಿಗೂ ದುರ್ಲಭವಾದುದು.
No comments:
Post a Comment
Note: Only a member of this blog may post a comment.