Tuesday, May 3, 2011

subhashita


ಅಕ್ಷರಾಣಿ ಪರೀಕ್ಷ್ಯ೦ತಾ೦ ಅ೦ಬರಾಡ೦ಬರೇಣ ಕಿಮ್|
ಶ೦ಭುರ೦ಬರಹೀನೋಅಪಿ ಸರ್ವಜ್ಞಃ ಕಿ೦ ನ ಶೋಭತೇ||೧೫೦||
ತನ್ನಲ್ಲಿರುವ ವಿದ್ಯೆಯನ್ನು ಮನುಷ್ಯನು ನೋಡಿಕೊಳ್ಳಬೇಕು. ಬರೀ ಹೊರಗಿನ ಬಟ್ಟೆಯ ಆಡ೦ಬರದಿ೦ದ ಏನು ಪ್ರಯೋಜನ?ಪರಮೇಶ್ವರನು ಪೀತಾ೦ಬರರಹಿತನಾಗಿದ್ದರೂ ಸರ್ವಜ್ಞನಾಗಿ ದಕ್ಷಿಣಾಮೂರ್ತಿಯಾಗಿ ಶೋಭಿಸುತ್ತಿಲ್ಲವೇ?

ಪ್ರಾಕ್‍ಶಿರಾಃ ಶಯನೇ ವಿ೦ದ್ಯಾತ್ ಧನಮಾಯುಷ್ಯ ದಕ್ಷಿಣೇ|
ಪಶ್ಚಿಮೇ ಪ್ರಬಲಾ ಚಿ೦ತಾಹಾನಿರ್ಮೃತ್ಯು ರಥೋತ್ತರೇ||೧೫೧||
ರಾತ್ರಿ ಹಾಸಿಗೆಯಲ್ಲಿ ಪೂರ್ವಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಹಣವನ್ನೂ, ದಕ್ಷಿಣಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಆಯುಷ್ಯವನ್ನೂ ಹೊ೦ದುತ್ತಾನೆ.ಪಶ್ಚಿಮಕ್ಕೆ ತಲೆಯನ್ನು ಹಾಕಿಕೊ೦ಡು ಮಲಗಿದರೆ ಯಾವಾಗಲೂ ಚಿ೦ತೆಯು ಬರುತ್ತಲೇ ಇರುತ್ತದೆ.ಇನ್ನು ಉತ್ತರಕ್ಕ ತಲೆಯನ್ನು ಹಾಕಿಕೊ೦ಡು ಮಲಗಿದರೆ ಧನಹಾನಿಯೂ ಮರಣವೂ ಬ೦ದೊದಗುತ್ತದೆ.

No comments:

Post a Comment

Note: Only a member of this blog may post a comment.