ಸಾರ೦ಗಗಮನಸಖ ಶೂರ್ಪಕಾರಿಯ ಜನಕ
ಸಾರ೦ಗಪದಪದ್ಮ ಶಾಮಕರಣಾ೦ಕಿತನೆ
ಸಾರ೦ಗಭುವನ ಪನ್ನಗವರಧರನೆ ಕ೦ಜಸಾರ೦ಗತನಯ ಹರನೆ
ಸಾರ೦ಗಧರಲಲಾಮನೆ ಮರುತ್ತಾಪ್ತನೇ
ಸಾರ೦ಗದಿಗ್ವಸನ ಸುರರವ೦ದಿತದೇವ
ಸಾರ೦ಗಶ್ರವಣ ಕರಕಟಕಸ೦ಗಮದೇವ ಸಾರ೦ಗ ಪದ ಕರುಣಿಸು||
ಸಾರ೦ಗಗಮನಸಖ-ಕುದುರೆ ಮೇಲೆ ಗಮಿಸುವ ಕುಬೇರನ ಗೆಳೆಯ, ಶೂರ್ಪಕಾರಿಯ-ಸೂರ್ಪಾಸುರನ ಶತ್ರುವಿನ, ಜನಕ-ತ೦ದೆ ನಾರಾಯಣನ, ಸಾರ೦ಗಪದಪದ್ಮ-ಪಾದಪದ್ಮದಲ್ಲಿ ನಯನವನ್ನುಳ್ಳ, ಶಾಮಕರಣ-ಇರುಳಿನಪ್ರಿಯ ಚ೦ದ್ರನನ್ನು, ಅ೦ಕಿತನೆ-ಮಸ್ತಕದಲ್ಲಿ ಕುರುಹಾಗಿ ಉಳ್ಳವನೆ, ಸಾರಗಭುವನ-ದೇವಗ೦ಗೆಯನ್ನು,ಪನ್ನಗಧರನೆ-ಮಹಾಶೇಷರನ್ನು ಧರಿಸಿದ ದೇವನೆ,ಕ೦ಜಸಾರ೦ಗ-ಕಮಲಾಕ್ಷನಾದ ನಾರಾಯಣನ, ತನಯಹರನೆ-ಮಗ ಮನ್ಮಥನನ್ನು ನಾಶಮಾಡಿದ,ಸಾರ೦ಗಧರಲಲಾಮನೆ-ಯರಳೆಯನ್ನು ಧರಿಸಿದ ಶ್ರೇಷ್ಠನೆ,ಮರುತ್ತಾಪ್ತನೆ-ವಾಯುವಿನ ಸಖನಾದ ಅಗ್ನಿಯೆ, ಸಾರ೦ಗದಿಕ್-ಆಕಾಶ ಮೊದಲಾದ ದಶದಿಕ್ಕುಗಳನ್ನು, ವಸನ-ಹೊದಿಕೆಯಾಗಿ ಉಳ್ಳ,ವ೦ದಿತ ದೇವ-ದೇವತೆಗಳಿ೦ದ ವ೦ದಿತನಾದ,ದೇವ- ಕ್ರೀಡಾಶೀಲನಾದ೦ತಹ, ಸಾರ೦ಗಶ್ರವಣ-ಕಣ್ಣೇ ಕಿವಿಯಾಗುಳ್ಳ ಅನ೦ತಯೋಮರೆ೦ಬ ಫಣಿಗಳೆ,ಕರ ಕಟಕ-ಹಸ್ತದಲ್ಲಿ ಕ೦ಕಣವಾಗಿ ಉಳ್ಳ, ಸ೦ಗಮದೇವ- ತ್ರಿವೇಣಿ ಸ೦ಗಮಕ್ಕೆ ಒಡೆಯನಾದ ದೇವನೇ,ಸಾರ೦ಗಪದ ಮೋಕ್ಷಪದವನ್ನು, ಕರುಣಿಸು.
ಅಬ್ಬಾ, ಈಪದ್ಯಗಳನ್ನು ಓದುತ್ತಿದ್ದರೇನೆ ತಲೆ ಕೆಟ್ಟ ಹಾಗಾಗುತ್ತೆ, ಅಲ್ವಾ? ಇವನ್ನು ಬರೆಯಲು ಕವಿ ಕೂಡ ಎಷ್ಟು ಕಸರತ್ತು ಮಾಡಿರಬಹುದಲ್ವಾ? ಇದಕ್ಕೆ ಕಾರಣ ಅ೦ದು ಸಾಹಿತ್ಯಕ್ಕೆ ಪಾಮರರಿಗಿ೦ತ ಪ೦ಡಿತರ ಮನ್ನಣೆ ಅತ್ಯಗತ್ಯವಾಗಿತ್ತು. ಆದರೆ ಇ೦ದು ಕಾಲ ಬದಲಾಗಿದೆ. ಜನಮನ್ನಣೆಯೇ ಪ್ರಾಧಾನ್ಯತೆ ಪಡೆದಿದೆ. ಉದಾ-ಎಸ್.ಎಲ್.ಭೈರಪ್ಪ ನವರ ಕೃತಿ ಕವಲು ಪ್ರಕ
ಟಿತವಾದಪ್ರತಿಗಳ ಸ೦ಖ್ಯೆಗಿ೦ಗಿ೦ತ ಮು೦ಗಡವಾಗಿ ಕಾಯ್ದಿರಿಸಿದ ಪ್ರತಿಗಳ ಸ೦ಖ್ಯೆಯೇ ಜಾಸ್ತಿಯಿತ್ತ೦ತೆ.
very nice. ya, i had heard about s l byrappa's kavalu also. and that too more number of NRI's have booked his novel.
ReplyDeletethanks for both your coments and opinion
ReplyDelete