Tuesday, August 10, 2010

ವಾವೆ ಮತ್ತು ಗಟ್ಟಿ ಪದ

ಬಲನ ಕೊ೦ದವನಾರು ದ್ರವ್ಯವ

ಗಳಿಸಿ ತ್ಯಾಗವನಾವ ಮಾಡುವ

ಒಲಿದು ಮಖರಕ್ಷಣೆಗೆ ರಾಮನ ಒಯ್ದ ಮುನಿಯಾರು

ಜ್ವಲನ ಸಖಗೇನೆ೦ದು ನುಡಿವರು

ತಿಳಿದು ಹೇಳೀ ಪ್ರಶ್ನೆಗುತ್ತರ

ದೊಳಗೆ ಮಧ್ಯಕ್ಷರಗಳಾತನು ನಿಮ್ಮ ರಕ್ಷಿಸಲಿ||

ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಹೇಳುವಾಗ ಬರುವ ಪದಗಳ ಮಧ್ಯದ ಅಕ್ಷರಗಳನ್ನು ಕೂಡಿಸಿದರೆ ಉ೦ಟಾಗುವ ಶಬ್ದದಾತನು ನಿಮ್ಮನ್ನು ರಕ್ಷಿಸಲಿ.

ಬಲಾಸುರನನ್ನು ಕೊ೦ದವನು ವಾ

ದ್ರವ್ಯಗಳಿಸಿ ತ್ಯಾಗ ಮಾಡುವವನು ಉದಾರಿ

ಮಖರಕ್ಷಣೆಗೆ ರಾಮನನೊಯ್ದ ಮುನಿ ಕೌಶಿ

ಜ್ವಲನ ಸಖಗೆ ಅ೦ದರೆ ವಾಯುವಿಗೆ ಜಗಾ ಎನ್ನುತ್ತಾರೆ

-ಈಗ ಹೆಸರನ್ನು ಕ೦ಡು ಹಿಡಿದರೆ ನಿಮಗೊ೦ದಚ್ಚು ಬೆಲ್ಲ.



1 comment:

Note: Only a member of this blog may post a comment.