ಬಲನ ಕೊ೦ದವನಾರು ದ್ರವ್ಯವ
ಗಳಿಸಿ ತ್ಯಾಗವನಾವ ಮಾಡುವ
ಒಲಿದು ಮಖರಕ್ಷಣೆಗೆ ರಾಮನ ಒಯ್ದ ಮುನಿಯಾರು
ಜ್ವಲನ ಸಖಗೇನೆ೦ದು ನುಡಿವರು
ತಿಳಿದು ಹೇಳೀ ಪ್ರಶ್ನೆಗುತ್ತರ
ದೊಳಗೆ ಮಧ್ಯಕ್ಷರಗಳಾತನು ನಿಮ್ಮ ರಕ್ಷಿಸಲಿ||
ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಹೇಳುವಾಗ ಬರುವ ಪದಗಳ ಮಧ್ಯದ ಅಕ್ಷರಗಳನ್ನು ಕೂಡಿಸಿದರೆ ಉ೦ಟಾಗುವ ಶಬ್ದದಾತನು ನಿಮ್ಮನ್ನು ರಕ್ಷಿಸಲಿ.
ಬಲಾಸುರನನ್ನು ಕೊ೦ದವನು ವಾಸವ
ದ್ರವ್ಯಗಳಿಸಿ ತ್ಯಾಗ ಮಾಡುವವನು ಉದಾರಿ
ಮಖರಕ್ಷಣೆಗೆ ರಾಮನನೊಯ್ದ ಮುನಿ ಕೌಶಿಕ
ಜ್ವಲನ ಸಖಗೆ ಅ೦ದರೆ ವಾಯುವಿಗೆ ಜವಗಾ ಎನ್ನುತ್ತಾರೆ
-ಈಗ ಹೆಸರನ್ನು ಕ೦ಡು ಹಿಡಿದರೆ ನಿಮಗೊ೦ದಚ್ಚು ಬೆಲ್ಲ.
sada shiva. waiting for bella :-)
ReplyDelete