Thursday, August 5, 2010

Animuttu

ಬಾಯೊಳಗಿಹಳ ಗ೦ಡನ ನಿಜ ತಮ್ಮನ

ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪ ಪಡೆದನ

ದಾಯಾದ್ಯನ ಮಗನ

ಸಾಯಕವದು ತೀವ್ರದಿ ಬರುತಿರೆ ಕ೦ಡು

ಮಾಯಾಪತಿ ಭೂಮಿಯನೊತ್ತಿ ತನ್ನಯ

ಬೀಯಗಾರನ ತಲೆಗಾಯಿದ೦ಥರಾಯನ ಕ ರೆ ದು ತೋರೆ ರಮಣಿ ||||

ಬಾಯಲ್ಲಿರುವ ಸರಸ್ವತಿಯ ಗ೦ಡ , ಬ್ರಹ್ಮನ ,ತಮ್ಮ ,ಮನ್ಮಥನ , ತಾಯಿ , ಲ಼ಕ್ಷ್ಮಿಯ , ಪಿತನಾದ ಸಮುದ್ರ ರಾಜನ , ಮಡದಿ ಗ೦ಗೆಯನ್ನು , ಧರಿಸಿದ ಶಿವನ ,. ಸತಿ ಪಾರ್ವತಿಯ , ಮಗ ಗಣಪತಿಯಿ೦ದ , ಶಾಪ ಪಡೆದ ಚ೦ದ್ರನ , ದಾಯಾದಿ ಸೂರ್ಯನ , ಮಗ ಕರ್ಣನ , ಸರ್ಪಾಸ್ತ್ರವು ತೀವ್ರವಾಗಿ ಬರುತ್ತಿರಲು ಕ೦ಡು ಭೂಮಿಯನ್ನೊತ್ತಿತ ನ್ನ ತ೦ಗಿಯ ,ಗ೦ಡ ಅರ್ಜುನನ , . ತಲೆಗಾಯ್ದ ಕೃಷ್ಣನನ್ನು , ಕರೆದು ತೋರಿಸೆ ರಮಣಿ..

ನೋಡಿದಿರಾ, , ಇಲ್ಲಿ ಕವಿಯು ಜನಜೀವನದಲ್ಲಿಃ ಹಾಸುಹೊಕ್ಕಾದ

ವಾವೆಯನ್ನು ತನ್ನ ಕಾವ್ಯದಲ್ಲಿ ಎಷ್ಟು ಚಮತ್ಕಾರವಾಗಿ ಬಳಸಿದ್ದಾನೆ


No comments:

Post a Comment

Note: Only a member of this blog may post a comment.