Tuesday, August 3, 2010

animuttu

ಬಾಹುಭ್ಯಾಮಥ ಜಾನುಭಾ೦ ಶಿರಸಾ ಮನಸಾ ಧಿಯಾ|

ಪ೦ಚಾ೦ಗಕಃ ಪ್ರಣಾಮಃ ಸ್ಯಾತ್ ಸ್ತ್ರೀಣಾ೦ನಮನ ಲಕ್ಷಣ೦||

ಗುರು ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಸ೦ಸ್ಕೃತಿ. ನಾವು ಬಾಗಿ ನಮಸ್ಕರಿಸಿದಾಗ ನಮ್ಮ ಅಹ೦ಕಾರವು ನಾಶವಾಗುತ್ತದೆ.ಹಾಗೂ ಹಿರಿಯರ ಬಗ್ಗೆ ಭಕ್ತಿ, ಶ್ರದ್ಧೆ, ಗೌರವಗಳು ಉ೦ಟಾಗುತ್ತದೆ.ವೇದ, ಉಪನಿಷತ್, ಇತಿಹಾಸ, ಪುರಾಣ ಮತ್ತು ಧರ್ಮಶಾಸ್ತ್ರಗಳಲ್ಲಿ ನಮಸ್ಕಾರದ ಮಹತ್ವವನ್ನು ಹೀಗೆ ವಿಸ್ತಾರವಾಗಿ ತಿಳಿಸಿದ್ದಾರೆ-

ಉರಸಾ ಶಿರಸಾ ದೃಷ್ಟ್ಯಾ

ಮನಸಾ ವಚಸಾ ತಥಾ|

ಪಾದ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦

ಪ್ರಣಾಮೋsಷ್ಟಾ೦ಗ ಉಚ್ಯತೇ||

ಈ ರೀತಿ ಪುರುಷರು ಮಾಡುವ ಅಷ್ಟಾ೦ಗ ಸಹಿತವಾದ೦ತಹ ನಮಸ್ಕಾರವನ್ನು ಸಾಷ್ಟಾ೦ಗ ನ ಮಸ್ಕಾರವೆನ್ನುತ್ತಾರೆ.ಆದರೆ ಸ್ತ್ರೀಯರಿಗೆ ಇದು ನಿಷಿದ್ಧ.ಸ್ತ್ರೀಯರ ಎದೆ ಮತ್ತು ಸ್ತನಗಳು ಪವಿತ್ರವಾದುವು. ಆದ್ದರಿ೦ದ ಅವನ್ನು ನೆಲಕ್ಕೆ ತಾಗಿಸದೆ, ಮೇಲಿನ ಶ್ಲೋಕದಲ್ಲಿ ತಿಳಿಸಿರುವ೦ತೆ ತಮ್ಮ ಎರಡೂ ಕೈಗಳನ್ನು ಜೋಡಿಸಿ, ಎರಡೂ ಮ೦ಡಿಗಳನ್ನು ಬಾಗಿಸಿ , ತಲೆ ತಗ್ಗಿಸಿ ಶ್ರದ್ಧಾ ಭಕ್ತಿಯಿ೦ದ ಮನಃಪೂರ್ವಕವಾಗಿ ಪ೦ಚಾ೦ಗಕ ನಮಸ್ಕಾರ ಮಾಡಬೇಕು.


1 comment:

  1. this is something interesting, i never knew the reason why ladies should not do saashtang pranaam.

    ReplyDelete

Note: Only a member of this blog may post a comment.