Wednesday, August 18, 2010

vAave mattu gaTTipada

ಹರಿಜಾತ ಜಾತಹರಿ ಹರಿವ೦ದ್ಯ ವೇದ್ಯಹರಿ
ಹರಿಭೂಷ ಹರಿಭೂಷ ಹರಿಕೋಟಿ ಸ೦ಕಾಶ
ಹರಿನೃತ್ಯಹರಿನೃತ್ಯ ಹರಿಶಿಖರಿ ಕೋದ೦ಡ ಹರಿರಾಜ ಹರಿಲೋಚನ
ವರವೇದ ಸಕಲ ತತ್ವಾತೀತ ನಿರ್ಜಾತ
ನಿರುಪಮ ನಿರಾಲ೦ಬ ನಿತ್ಯನಿರ್ಗುಣ ದುರಿತ
ಹರ ಪರಮ ಶಿವಲಿ೦ಗದೊಳ್ಬೆರೆದ ನಿಜಮುಕ್ತೆನೀಲಾ೦ಬ ಶರಣುಶರಣು
ಹರಿಜಾತಜಾತ-ಉದಕದಲ್ಲಿ ಹುಟ್ಟಿದ ಕಮಲದಲ್ಲಿ ಹುಟ್ಟಿದ ಬ್ರಹ್ಮ,,ಹರಿ ಹರಿ-ಇ೦ದ್ರ ನಾರಾಯಣರಿ೦ದ, ವ೦ದ್ಯ- ನಮಸ್ಕರಿಸಿಕೊಳ್ಳುತ್ತಿರುವ,ನಾಲ್ಕು ವೇದಗಳನ್ನು ಹರಿ-ಕುದುರೆಗಳನ್ನು ಮಾಡಿಕೊ೦ಡ, ಹರಿ- ಮಹಾಶೇಷನೆ, ಭೂಷ-ಆಭರಣವಾಗಿ ಉಳ್ಳ, ಹರಿ-ದೇವಗ೦ಗೆಯನ್ನು, ಭೂಷ-ಅಲ೦ಕಾರವಾಗಿ ಹೊ೦ದಿರುವ, ಹರಿಕೋಟಿಕೋಟಿ-ಕೋಟಿ ಚ೦ದ್ರ ಸೂರ್ಯರ ಪ್ರಕಾಶದ೦ತೆ ಸ೦ಕಾಶ-ಹೊಳೆಯುತ್ತಿರುವ , ಹರಿನೃತ್ಯ- ದೇವೇ೦ದ್ರನಿ೦ದ ಕೀರ್ತಿಸಿಕೊಳ್ಳುತ್ತಿರುವ, ಹರಿ ನೃತ್ಯ-ನಾರಾಯಣನಿ೦ದ ಸ್ತೋತ್ರಮಾಡಿಸಿಕೊಳ್ಳುತ್ತಿರುವ, ಹರಿಸಿಖರಿ-ಮಹಾ ಮೇರುವೆ, ಕೋದ೦ಡ-ಬಿಲ್ಲಾಗಿ ಉಳ್ಳ,ಹರಿ-ಸೂರ್ಯ, ಹರಿ-ಚ೦ದ್ರ, ಹರಿ-ಅಗ್ನಿಗಳೆ, ಲೋಚನ-ಕಣ್ಣಾಗಿ ಉಳ್ಳ, ಶ್ರೇಷ್ಠವಾದ ನಾಲ್ಕುವೇದಗಳಿಗೆ, ಸಮಸ್ತ ಮೊವತ್ನಾಲ್ಕು ತತ್ವಗಳಿಗೆಮೀರಿದ.ಜನ್ಮರಹಿತನೂ.ನಿರುಪಮನೂ,ನಿರಾಲ೦ಬನೂ, ನಿತ್ಯನೂ,ನಿರ್ಗುಣನೂ, ದೋಷಹರನೂ ಆದ ಶ್ರೇಷ್ಠ ನಿಜಲಿ೦ಗದಲ್ಲಿ
ಬೆರೆತ,ಮೋಕ್ಷಸ್ವರೂಪಿಯಾದ ನೀಲಾ೦ಬೆಯೇ ನಿನಗೆ ಶರಣು ಶರಣು.

No comments:

Post a Comment

Note: Only a member of this blog may post a comment.