Wednesday, August 4, 2010

animuttu

ಗೀ"ತಾ ""೦ಗಾ ಚ "ಗಾ" ಯತ್ರೀ "ಗೋ"ವಿ೦ದೇತಿ ಹೃದಿ ಸ್ಥಿತೇ|

ಚತುರ್ಗಕಾರ ಸ೦ಯುಕ್ತೇ ಪುನರ್ಜನ್ಮ ನ ವಿದ್ಯತೇ||

ಗೀತಾ-ದುಃಖ ಸಾಗರದಲ್ಲಿ ಮುಳುಗಿದ ಅರ್ಜುನನಿಗೆ ಆತ್ಮ ಜ್ಞಾನೋಪದೇಶದ ಮೊಲಕ ಶಾ೦ತಿ ಆನ೦ದಗಳನ್ನು ವರ್ಷಿಸಿದ

ಅಮೃತಧಾರೆ ಶ್ರೀ ಕೃಷ್ಣ ಭಗವಾನನ ನೇರವಾದ ಉಪದೇಶಾಮೃತ ಭಗವದ್ಗೀತೆ.

ಗ೦ಗಾ-ಭಗೀರಥನ ತಪಸ್ಸಿಗೆ ಮೆಚ್ಚಿ ಪರಮೇಶ್ವರನ ಜಟೆಯಿ೦ದ ಪವಿತ್ರಳಾಗಿ, ಮಹಾ ವಿಷ್ಣುವಿನ ಪಾದಗಳಿ೦ದ ಶುದ್ಧಳಾಗಿ ನೂರಾರು ಸಹಸ್ರಾರು ತಪಸ್ವಿಗಳಿ೦ದ ನಿತ್ಯವೂ ಸೇವಿಸಲ್ಪಡುತ್ತಿರುವ ಗ೦ಗಾ ನದಿ.

ಗಾಯತ್ರೀ ಮ೦ತ್ರ-ತ್ರೈವರ್ಣಿಕರಿಗೆ ಪ್ರಪ್ರಥಮವಾಗಿ ಜಪ್ಯವಾದ ಶ್ರೇಷ್ಠ ಗಾಯತ್ರೀ ಮ೦ತ್ರ.

ಗೋವಿ೦ದ- ಲೋಕಕಲ್ಯಾಣಕಾರಕ ಗೋವಿ೦ದ

ಈ ನಾಲ್ಕು "" ಕಾರಗಳನ್ನು ಸ್ಮರಿಸುವವನಿಗೆ ಪುನರ್ಜನ್ಮವಿಲ್ಲ.

No comments:

Post a Comment

Note: Only a member of this blog may post a comment.