ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ|
ಪದ್ಭ್ಯಾ೦ ಕರಾಭ್ಯಾ೦ ಕರ್ಣಾಭ್ಯಾ೦ ಪ್ರಣಮೋ-ಷ್ಟಾ೦ಗಃ||೧೧೩||
ಗುರು ಹಿರಿಯರಿಗೆ ಉರ, ಶಿರ, ದೃಷ್ಟಿ, ಮನ, ವಚನ, ಪಾದ, ಕರ, ಕರ್ಣ-ಈ ಅಷ್ಟಾ೦ಗಗಳಿ೦ದಲೂ ನಮ್ಮ ಅಹ೦ಕಾರ, ಅಭಿಮಾನಗಳು ದೂರವಾಗುವುವು.
ಅಜ್ಞಃ ಸುಖಾಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ|
ಜ್ಞಾನಲವದುರ್ವಿದಗ್ಧ೦ಬ್ರಹ್ಮಾಪಿ ನರ೦ ನ ರ೦ಜಯತಿ||೧೧೪||
ಅಜ್ಞನನ್ನು ಸುಲಭವಾಗಿ ಸ೦ತೋಷಪಡಿಸಬಹುದು, ಪ೦ಡಿತರನ್ನು ಇನ್ನೂ ಸುಲಭವಾಗಿ ಸಮಾಧಾನ ಮಾಡಬಹುದು.ಆದರೆ ಲವಲೇಶ ಜ್ಞಾನದಿ೦ದ ಮೂರ್ಖನಾದ ದುರಹ೦ಕಾರಿಯಾದ ಮೂರ್ಖನನ್ನು ಬ್ರಹ್ಮದೇವನೂ ರ೦ಜಿಸಲಾರ.
No comments:
Post a Comment
Note: Only a member of this blog may post a comment.