Tuesday, March 29, 2011

subhashita

ವಿತ್ತೇ ತ್ಯಾಗಃ ಕ್ಷಮಾ ಶತ್ರೌ ದುಃಖೇ ದೈನ್ಯವಿಹೀನತಾ|
ನಿರ್ದ೦ಬತಾ ಸದಾಚಾರೇ ಸ್ವಭಾವೋ-ಯ೦ ಮಹಾತ್ಮಾನಾಮ್||೧೦೯||
ಹಣವಿದ್ದಾಗ ತ್ಯಾಗ,ಶತ್ರುವಿನಲ್ಲಿ ಕ್ಷಮಾದಾನ, ದುಃಖಗಳಲ್ಲಿ ದೈನ್ಯವಿಲ್ಲದಿರುವಿಕೆ, ಸದಾಚಾರ ಮಾಡುವಾಗ
ಇತರರಿಗೆ ತೋರಿಸಿಕೊಳ್ಳದಿರುವುದು-ಇವು ಮಹಾತ್ಮರ ಸ್ವಭಾವವಾಗಿರುತ್ತದೆ.

ಶ್ರೂಯತಾ೦ ಧರ್ಮಸರ್ವಸ್ವ೦ ಶ್ರುತ್ವಾಚೈವಾವಧಾರ್ಯತಾಮ್|
ಆತ್ಮನಃ ಪ್ರತಿಕೂಲಾನಿ ಪರೇಷಾ೦ ನ ಸಮಾಚರೇತ್||೧೧೦||
ಧರ್ಮದ ಸಾರವನ್ನು ಹೇಳುತ್ತೇನೆ, ಅದನ್ನು ಚೆನ್ನಾಗಿ ಕೇಳಿರಿ.ಕೇಳಿದನ೦ತರ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯೊಸ್ಕೊಳ್ಳಿ. ತನಗೆ ಹಿತವಲ್ಲದ ಕೆಲಸವನ್ನು ಇತರರಿಗೂ ಮಾಡಬಾರದು.

No comments:

Post a Comment

Note: Only a member of this blog may post a comment.