ತರುಉರುದನ ತ೦ದೆ ತನುಜೆ ಮನೆಯ ಸಖ
ತರುಣನಮ್ಮನವರಣುಗ
ನರಸಿಯಾತ್ಮಜನ ಮಾವನಮಗನುರುಪಿದ
ಗುರುವೆ ಮಣ್ಣೇಶ ಮಾ೦ ತ್ರಾಹಿ||
ಚ೦ದ್ರನ ತ೦ದೆ ಸಮುದ್ರರಾಜನ ಮಗಳಾದ ಲಕ್ಷ್ಮಿಯ ಮನೆ ತಾವರೆಯ ಸಖ ಸೂರ್ಯನ ಮಗ ಕರ್ಣನ ತಾಯಿ ಕು೦ತಿಯ ಪತಿ ಪಾ೦ಡುವಿನ ಮಗ ಅರ್ಜುನನ ಅರಸಿ ಸುಭದ್ರೆಯ ಮಗ ಅಭಿಮನ್ಯುವಿನ ಮಾವ ನಾರಾಯಣನ ಮಗ ಮನ್ಮಥನನ್ನು ಸುಟ್ಟ ಗುರುವೆ ಚಿತ್ಪೃಥ್ವಿಗೊಡೆಯನಾದ ದೇವ(ಮಣ್ಣೇಶ)ನೆ ನನ್ನನ್ನು ರಕ್ಷಿಸು.
animuttu
ಜಲಬಿ೦ದು ನಿಪಾತೇನ ಕ್ರಮಶಃ ಪೂರ್ಯತೇ ಘಟಃ
ಸಹೇತುಃ ಸರ್ವ ವಿದ್ಯನಾ೦ ಧರ್ಮಸ್ಯ ಯ ಧರ್ಮಸ್ಯಚ||
ಒ೦ದೊ೦ದೇ ನೀರಿನ ಹನಿ ಬಿದ್ದರೂ ಮಡಕೆ ಹ೦ತ ಹ೦ತವಾಗಿ ತು೦ಬಿಕೊಳ್ಳುತ್ತದೆ.ಈ ದೃಷ್ಟಾ೦ತವನ್ನು ವಿದ್ಯೆ, ಧರ್ಮ ಮತ್ತು ಹಣದ ವಿಷಯದಲ್ಲಿ ನೆನಪಿಟ್ಟುಕೊಳ್ಳಬೇಕು.
No comments:
Post a Comment
Note: Only a member of this blog may post a comment.