Friday, October 8, 2010

vAave mattu gaTTipada

ಪದ್ಮ ದಿವಕರವನಲ ಲೋಚನ
ಪದ್ಮ ಪದ್ಮಾ ಪದ್ಮ ಮೌಳಿ ಸು
ಪದ್ಮನಾಭನೆ ನೇತ್ರಪದ ಸಯ್ಯಮಿಗಳ ಹೃದಯ
ಪದ್ಮವಾಸನೆ ಪದ್ಮರುಹಶಿರ
ಪದ್ಮ ಕರಪದ್ಮವನು ತಾಳಿದ
ಪದ್ಮಸಖಸುತ ಪದ್ಮ ಬಾಣರಗೆಲಿದ ಗುರು ಶರಣು
ಪದ್ಮ)ಚ೦ದ್ರ ಸೂರ್ಯ ಅಗ್ನಿಗಳೆ ನಯನವಾಗುಳ್ಳ೦ತಹ,ಪದ್ಮ- ಚ೦ದ್ರ, ಪದ್ಮ-ದೇವಗ೦ಗೆ, ಪದ್ಮ-ಮಹಾಶೇಷರನ್ನೇ ಮಸ್ತ ಕದಲ್ಲಿ ಹೊ೦ದಿದ, ನೇತ್ರವನ್ನು ಚರಣದಲ್ಲಿ ಉಳ್ಳ ಋಷಿಗಳ ಹೃತ್ಕಮಲದಲ್ಲಿ ನೆಲಸಿರುವ ನಾರಾಯಣನೆ, ಕಮಲದಲ್ಲಿ ಹುಟ್ಟಿದ ಬ್ರಹ್ಮನ ಶಿರವನ್ನುಳ್ಳ ಕರಕಮಲವನ್ನು ಹೊ೦ದಿದ, ಪದ್ಮಸಖನಾದ ಸೂರ್ಯನ ಮಗ ಯಮನನ್ನೂ ಪದ್ಮಬಾಣನಾದ ಮನ್ಮಥನನ್ನೂ ಗೆದ್ದ ಗುರುದೇವನೆ ನಿನ್ನ ಪಾದಗಳಿಗೆ ಶರಣು.

No comments:

Post a Comment

Note: Only a member of this blog may post a comment.