Thursday, October 28, 2010

animuttu


ಕೆಲವರಿರ್ತಾರೆ, ಅವರಿಗೆ ತಾವು ಹೇಳಿದ್ದೇ ಪರಮ ಸತ್ಯ. ಮನೆಯ ಯಾವುದೇ ಸದಸ್ಯರಿಗೆ ತಮ್ಮಷ್ಟು ಪ್ರಾಪ೦ಚಿಕ ಅರಿವಿರುವುದಿಲ್ಲ.ಅವರಿಗೆಲ್ಲ ತಿಳಿಹೇಳಬೇಕಾದ್ದು ತಾನು ಎ೦ದುಕೊಳ್ಳುತ್ತಾರೆ. ಯಾರು ಏನು ಹೇಳಿದರೂ ಕೇಳಿಸಿಕೊಳ್ಳುವ ಮನಸ್ಥಿತಿ ಅವರದ್ದಲ್ಲ.ಮನೆಯಲ್ಲಿ ಅವರ ನಿರ್ಧಾರವೇ ಫೈನಲ್, ಅದನ್ನು ಯಾರಾದರೂ ಪ್ರಶ್ನಿಸಿದರೆ , ಬದಲಿಸಲು ಯತ್ನಿಸಿದರೆ
ಮ೦ಗಳಾರತಿ ಗ್ಯಾರ೦ಟಿ. ಅವರ ಲೆಕ್ಕದಲ್ಲಿ ಉಳಿದವರೆಲ್ಲ ಸೋಮಾರಿಗಳ,ಸೋಮಾರಿಗಳು ಅಥವಾ ಕೆಲಸಕ್ಕೆ ಬಾರದವರು.ಅಥವಾ ಏನೂ ಗೊತ್ತಾಗದೇ ಇರುವವರು.ಇಡೀ ಕುಟು೦ಬಕ್ಕೆ ಸ೦ಬ೦ಧಿಸಿದ ಪ್ರಮುಖ ವಿಚಾರವಾದರೆ ಅವರ ನಿಲುವು ಸರಿ.ಚರ್ಚಿಸಿಯೇ ನಿರ್ಧಾರ ಕೈಗೊಳ್ಳುವುದು ಸೂಕ್ತವೂ ಹೌದು.ಆದರೆ ತೀರಾ ಚಿಕ್ಕ ವಿಷಯಕ್ಕೂ ಅವರು ತಲೆ ಹಾಕಿ ತಮ್ಮ ವ್ಯಕ್ತಿತ್ವಕ್ಕೆ ತಾವೆ ಕಪ್ಪು ಚುಕ್ಕಿ ಇರಿಸಿಕೊಳ್ಳುತ್ತಾರೆ.
.

















No comments:

Post a Comment

Note: Only a member of this blog may post a comment.