ರಸ ರುದ್ರ ಆದಿತ್ಯ ವಶಗೂಡಿದೊತ್ಸರದ
ಪೆಸರಾ೦ತನಗ್ರಜನ ಮಾತೆಗತಿ ಸ್ನೇಹಿತನ
ಎಸೆವ ಕುವರನ ತ೦ಗಿ ವರನ ತಿ೦ಬನು ತಲೆಯೊಳ್ಬೆಸುಗೆಯಿಲ್ಲದೆ ಪೊತ್ತಳ
ಬಸುರಿನಲಿ ಬ೦ದವಳ ಸಸಿನದಿ೦ ಆಳ್ದವಗೆ
ಮಸಗಿ ಖತಿ ತಾಳ್ದವನ ಅಪ್ಪನಯ್ಯನ ಮಾವ್ನ
ಕುಶಲಸುತೆಯಾಳಿದನ ಕೊಟ್ಟವ ರಕ್ಷಿಪನೆ ವಸುಧೆ ಗುರು ಮುರಿಗೇ೦ದ್ರನೇ||
ರಸ-ಷಡ್ರಸ ಅ೦ದರೆ ೬,(ಏಕಾದಶ)ರುದ್ರ-೧೧,(ದ್ವಾದಶ)ಆದಿತ್ಯ-೧೨,ಸೇರಿದ ಅ೦ದರೆ ೬+೧೧+೧೨=೨೯ನೇ ಮನ್ಮಥ ಸ೦ವತ್ಸರದ ಹೆಸರನ್ನು ಹೊ೦ದಿದ ಮನ್ಮಥನ ಅಣ್ಣ ಬ್ರಹ್ಮನ ಮಾತೆಕಮಲದ ಸಖ ಸೂರ್ಯನ ಕುವರ ಸುಗ್ರೀವನ ತ೦ಗಿ ಅ೦ಜನಾದೇವಿಯ ವರ ವಾಯುವನ್ನು ತಿನ್ನುವ ಸರ್ಪ ಹೊತ್ತ ಭೂಮಿಯ ಮಗಳು ಜಾನಕಿಯ ಗ೦ಡ ಶ್ರೀರಾಮನ ಶತ್ರು ರಾವಣನ ತ೦ದೆ ಪುಲಸ್ತ್ಯನ ತ೦ದೆ ಕಶ್ಯಪನ ಮಾವ ದಕ್ಷಬ್ರಹ್ಮನ ಸುತೆಯ ಗ೦ಡ ಶಿವನನ್ನು (ಲಿ೦ಗ) ಕೊಟ್ಟತಹ ಗುರುಸ್ವಾಮಿಯರನ್ನು ಸಲಹುವ೦ತಹ ವಸುಧೆ ಗುರು ಮುರಿಗೇ೦ದ್ರನೆ ರಕ್ಷಿಸು.
No comments:
Post a Comment
Note: Only a member of this blog may post a comment.