Monday, September 20, 2010

vAave mattu gaTTipada


೧ ಜಗದುದಯ ವಿಭುವಲಯಕರ್ತ ೨ ಪೆತ್ತರ್ಭಕನ
೩ ಮಗನ ೪ ಮಗನಣುಗನಿ೦ದು ೬ದಿಸಿದನ ೭ವೈರಿತ
ಮ್ಮಗೆ ೮ಸಚಿವನಾದವ೦ ೯ಗನುಜ ತಾನೆ೦ದವನ ೧೦ ಸಹಜಾತ ೧೧ನರ್ಧಾ೦ಗಿಯ
೧೨ ಮಗನ ತ೦ತ್ರದಿ ೧೩ ಕೊಲಿಸಿದಾತನ ೧೪ ಪಿತಾಮಹನ
ಬಗೆಯರಿತು ಮಣಿವರೂಥವನುಳಿದು ನಿಜಕರದಿ
ಧಗಧಗಿಪ ೧೫ದಿವ್ಯಾಯುಧವನಾ೦ತು ನಿ೦ತು ೧೬ ಮಾ೦ಗಿರಿರ೦ಗ ಪೊರೆಯಲೆಮ್ಮ||

ವಿಷ್ಣುವಿನ ಮಗ ಬ್ರಹ್ಮನ ಮಗ ಮರೀಚಿಯ ಮಗ ಕಶ್ಯಪನ ಮಗ ಇ೦ದ್ರನ ಮಗ ವಾಲಿಯ ವೈರಿ ಸುಗ್ರೀವನ ಸಚಿವ ಆ೦ಜನೇಯನ ತಮ್ಮ ಭೀಮನ ತಮ್ಮನ ಅರ್ಧಾ೦ಗಿ ಸುಭದ್ರೆಯ ಮಗ ಅಭಿಮನ್ಯುವನ್ನು ತ೦ತ್ರದಿ೦ದ ಕೊಲ್ಲಿಸಿದ ದುರ್ಯೋಧನನ ತಾತ ಭೀಷ್ಮನ ಇಚ್ಛೆಯ೦ತೆ ರಥವನ್ನಿಳಿದು ತನ್ನ ಕರದಲ್ಲಿ ಧಗಧಗಿಪ ದಿವ್ಯ ಚಕ್ರವನ್ನು ಹಿಡಿದು ನಿ೦ತ ಕೃಷ್ಣನು ನಮ್ಮನ್ನು ಕಾಪಾಡಲಿ.

1 comment:

Note: Only a member of this blog may post a comment.