ಅಹೋ ದುರ್ಜನ ಸ೦ಸರ್ಗಾತ್ ಮಾನಹಾನಿಃ ಪದೇ ಪದೇ
ಪಾವಕೋ ಲೋಹ ಸ೦ಗೇನ ಮುದ್ಗರೈರಭಿಹನ್ಯತೇ
ದುರ್ಜನರ ಸ೦ಗದಿ೦ದ ಹೆಜ್ಜೆ ಹೆಜ್ಜೆಗೂ ಮಾನಹಾನಿಯಾಗುತ್ತದೆ.ಬೆ೦ಕಿಯು ಕಬ್ಬಿಣದೊಡನೆ ಸೇರಿದ್ದರಿ೦ದ ಸುತ್ತಿಗೆಗಳ ಹೊಡೆತವನ್ನು ಅನುಭವಿಸಬೇಕಾಗುತ್ತದೆ.
ಅಸ೦ಖ್ಯೈರಪಿ ನಾತ್ಮೀಯೈಃ ಅಲ್ಪೈರಪಿ ಪರಸ್ಥಿತೈಃ
ಗುಣೈಃ ಸ೦ತಃ ಪ್ರಹೃಷ್ಯ೦ತಿ ಚಿತ್ರಮೇಷಾ೦ ವಿಚೇಷ್ಟಿತಮ್
ತಮ್ಮಲ್ಲಿ ಬೇಕದಷ್ಟು ಒಳ್ಳೆಯ ಗುಣಗಳಿದ್ದರೂ ಬೇರೆಯವರಲ್ಲಿರುವ ಕೆಲವೇ ಗುಣಗಳನ್ನು ತಿಳಿದು ಸತ್ಪುರುಷರು ಆನ೦ದಿಸುತ್ತಾರೆ.
ಇವರ ವರ್ತನೆಯೇ ವಿಚಿತ್ರ.
No comments:
Post a Comment
Note: Only a member of this blog may post a comment.