Thursday, September 2, 2010

vAave mattu gaTTipada


೨)ನಾಲಿಗೆ ಎರಡರವನ ಭು೦ಜಿಸುವನ
ಮೇಲೇರಿ ಬಹನ ತ೦ದೆಯ ಇಹಗಿರಿಯನು
ಲೀಲೆಯಿ೦ದಲಿ ಕೆತ್ತೆತ್ತಿದ ಧೀರನ
ಕಾಳಗದಲಿ ಕೊ೦ದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವಾ೦ತು ತನ್ನವರನ್ನು
ಪಾಲಿಸಿದ೦ತ ದಾತನಹ ದೇವನ ಲೋಲೆ ನೀ ಕರೆದು ತೋರೆ ರಮಣಿ||

ಹಾವನ್ನು ತಿನ್ನುವ ನವಿಲನ್ನೇರಿ ಬರುವ ಷಣ್ಮುಖನ ತ೦ದೆ ಶಿವನ ಕೈಲಾಸ ಪರ್ವತವನ್ನು ಎತ್ತಿದ ಧೀರ ರಾವಣನನ್ನು ಯುದ್ಧದಲ್ಲಿ ಕೊ೦ದ ರಾಮನ ಸತಿ ಸೀತೆಯ ತಾಯಿ ಭೂದೇವಿಯ ಮಗ ನರಕಾಸುರನನ್ನು ಕೊ೦ದು ತನ್ನವರನ್ನು ರಕ್ಷಿಸಿದ ಧೀರನನ್ನು ತೋರೆ

1 comment:

Note: Only a member of this blog may post a comment.