೨)ನಾಲಿಗೆ ಎರಡರವನ ಭು೦ಜಿಸುವನ
ಮೇಲೇರಿ ಬಹನ ತ೦ದೆಯ ಇಹಗಿರಿಯನು
ಲೀಲೆಯಿ೦ದಲಿ ಕೆತ್ತೆತ್ತಿದ ಧೀರನ
ಕಾಳಗದಲಿ ಕೊ೦ದನ
ಲೋಲಲೋಚನೆಯ ಮಾತೆಯ ಪುತ್ರನಣುಗನ
ಮೇಲು ಶಕ್ತಿಗೆ ಉರವಾ೦ತು ತನ್ನವರನ್ನು
ಪಾಲಿಸಿದ೦ತ ದಾತನಹ ದೇವನ ಲೋಲೆ ನೀ ಕರೆದು ತೋರೆ ರಮಣಿ||
ಹಾವನ್ನು ತಿನ್ನುವ ನವಿಲನ್ನೇರಿ ಬರುವ ಷಣ್ಮುಖನ ತ೦ದೆ ಶಿವನ ಕೈಲಾಸ ಪರ್ವತವನ್ನು ಎತ್ತಿದ ಧೀರ ರಾವಣನನ್ನು ಯುದ್ಧದಲ್ಲಿ ಕೊ೦ದ ರಾಮನ ಸತಿ ಸೀತೆಯ ತಾಯಿ ಭೂದೇವಿಯ ಮಗ ನರಕಾಸುರನನ್ನು ಕೊ೦ದು ತನ್ನವರನ್ನು ರಕ್ಷಿಸಿದ ಧೀರನನ್ನು ತೋರೆ
very very nice :-)
ReplyDelete