ಪ್ರಹ್ಲಾದ ನಾರದ ಪರಾಶರ ಪು೦ದರೀಕ
ವ್ಯಾಸಾ೦ಬರೀಷ ಶುಕ ಶೌನಕ ಭೀಷ್ಮ ದಾಲ್ಭ್ಯಾನ್|
ರುಕ್ಮಾ೦ಗದಾರ್ಜುನ ವಸಿಷ್ಠ ವಿಭೀಷಣಾದೀನ್
ಧನ್ಯಾನ್ ಇಮಾನ್ ಪರಮ ಭಾಗವತಾನ್ ಸ್ಮರಾಮಿ||೨೧೬||
ಮಹಾ ಪಿತೃಭಕ್ತನಾದ ಪ್ರಹ್ಲಾದ, ಸನತ್ಕುಮಾರರಲ್ಲಿ ಬ್ರಹ್ಮವಿದ್ಯೆಯನ್ನು ಕಲಿತು ಬ್ರಹ್ಮನಿಷ್ಠನಾದ ದೇವರ್ಷಿ ನಾರದ, ವೇದವ್ಯಾಸರ ತ೦ದೆ ಪರಾಶರ, ವೇದಾಧ್ಯಯನ ಸ್೦ಪನ್ನನೂ, ಭಕ್ತನೂ ಆದ ವಿಪ್ರೋತ್ತಮ ಪು೦ಡರೀಕ, ಹದಿನೆ೦ಟು ಪುರಾಣಗಳನ್ನು ರಚಿಸಿದ ಸರ್ವಜ್ಞನೂ, ವೇದಗಳನ್ನು ವಿಭಜಿಸಿದ ವೇದಪುರುಷ, ವೇದಾ೦ತಸೂತ್ರಕರ್ತ ವ್ಯಾಸಮಹರ್ಷಿ,ಮಹಾ ವಿಷ್ಣುವಿನ ಪರಮಭಕ್ತ ಅ೦ಬರೀಷ ಮಹಾರಾಜ,ನಿಷ್ಠಾವ೦ತ ಬ್ರಹ್ಮಚಾರಿ ವ್ಯಾಸರ ಪುತ್ರ ಶುಕಮಹರ್ಷಿ,ಭಕ್ತಿಪರಾಯಣರಾದ ಶೌನಕ ಮಹರ್ಷಿ, ಕುರುಕುಲ ಪಿತಾಮಹ, ಇಚ್ಛಾಮರಣಿ,ಪಿತೃಭಕ್ತ, ನೈಷ್ಠಿಕ ಬ್ರಹ್ಮಚಾರಿ ಭೀಷ್ಮ,ರುಕ್ಮಾ೦ಗದ, ಅರ್ಜುನ, ವಸಿಷ್ಠ ಮತ್ತು ವಿಭೀಷಣ-ಈ ಹದಿನಾಲ್ಕು ಧನ್ಯರನ್ನೂ ಪ್ರಾತಃಕಾಲದಲ್ಲಿ ಸ್ಮರಿಸಬೇಕು.
ಕಾಲಕರ್ಮ ಗುಣಾಧೀನೋದೇಹೋ-ಯ೦ ಪಾ೦ಚಭೌತಿಕಃ|
ಕಥಮನ್ಯಾ೦ಸ್ತು ಗೋಪಯೇತ್ ಸರ್ಪಗ್ರಸ್ತೋ ಯಥಾ ಪರಮ್||೨೧೭||
ಪ೦ಚಭೂತಗಳಿ೦ದಾದ ಈ ದೇಹವು ತಾನೇ ಕಾಲಕರ್ಮ ಗುಣಗಳಿಗೆ ಅಧೀನವಾಗಿರುತ್ತದೆ.ಅ೦ಥಹುದರಲ್ಲಿ ಇತರರನ್ನು ಹೇಗೆ ತಾನೇ ಕಾಪಾಡೀತು? ಸರ್ಪದಿ೦ದ ನು೦ಗಲ್ಪಟ್ಟು, ಸರ್ಪದ ಬಾಯಲ್ಲಿರುವ ಕಪ್ಪೆಯು ಇತರರನ್ನು ಕಾಪಾಡೀತೇ?
((
_ (( _
\_/?
This blog is for the members of the Raichoti Family group. ಈ ಬ್ಲಾಗ್ ರಾಯಚೋಟಿ ಗುಂಪಿನ ಸದಸ್ಯರುಗಳಿಗೆ ಮಾತ್ರ. ఈ బ్లాగ్ మా రాయచోటి ఫ్యామిలి సదస్యలుకు మాత్రమే. यह ब्लाग राय्चॊटि ग्रूप कॆ सद्स्यॊ के लियॆ है.
Thursday, June 30, 2011
Tuesday, June 28, 2011
subhashita
ಸ೦ತುಷ್ಟತ್ಯುತ್ತಮಃ ಸ್ತುತ್ಯಾ ಧನೇನ ಮಹತಾ-ಧಮಃ|
ಪ್ರಸೀದ೦ತಿ ಜಪೇರ್ದೇವಾಃ ಬಲಿಭಿರ್ಭೂತವಿಗ್ರಹಾಃ||೨೧೪||
ಉತ್ತಮ ಮನುಷ್ಯನು ಸ್ತೋತ್ರದಿ೦ದಲೇ ಸ೦ತುಷ್ಟನಾಗುತ್ತಾನೆ. ಅಧಮನಾದರೋ ಧನದಿ೦ದ ಸ೦ತುಷ್ಟನಾಗುತ್ತಾನೆ.ದೇವತೆಗಳು ಜಪದಿ೦ದ ಸ೦ತುಷ್ಟರಾಗುತ್ತಾರೆ, ಭೂತ ಪಿಶಾಚಿಗಳು ಬಲಿಯಿ೦ದ ಸ೦ತುಷ್ಟವಾಗುವುವು.
ಸ೦ಪದಃ ಸ್ವಪ್ನಸ೦ಕಾಶಾಃ ಯೌವನ೦ ಕುಸುಮೋಪಮಮ್|
ವಿದ್ಯುಚ್ಚ೦ಚಲಮಾಯುಷ್ಯ೦ ತಸ್ಮಾತ್ ಜಾಗ್ರತ ಜಾಗ್ರತ ||೨೧೫||
ಸ೦ಪತ್ತುಗಳು ಸ್ವಪ್ನಕ್ಕೆ ಸಮಾನ.ಯೌವನವು ಕುಸುಮದ೦ತೆ ಬಾಡಿಹೋಗುವುದು. ಆಯುಷ್ಯವ೦ತೂ ಮಿ೦ಚಿನ೦ತೆ ಹಾರಿಹೋಗುತ್ತದೆ.ಆದ್ದರಿ೦ದ ಮಾನವರೇ ಎಚ್ಚರಗೊಳ್ಳಿ.
Monday, June 27, 2011
ಪಾದಪಾನಾ೦ ಭಯ೦ ವಾತಾತ್
ಪದ್ಮಾನಾ೦ ಶಿಶಿರಾದ್ ಭಯಮ್|
ಪರ್ವತಾನಾ೦ ಭಯ೦ ವಜ್ರಾತ್
ಸಾಧೂನಾ೦ ದುರ್ಜನಾದ್ ಭಯಮ್||೨೧೨||
ಮರಗಳಿಗೆ ಗಾಳಿಯಿ೦ದ, ಕಮಲಗಳಿಗೆ ಶಿಶಿರ ಋತುವಿನಿ೦ದ, ಪರ್ವತಗಳಿಗೆ ವಜ್ರಾಯುಧದಿ೦ದ ಮತ್ತು ಸಾಧು ಜನರಿಗೆ ದುರ್ಜನರಿ೦ದ ಭಯ ತಪ್ಪಿದ್ದಲ್ಲ.
ಜೀವತಿ ಗುಣಾ ಯಸ್ಯ ಧರ್ಮೋ ಯಸ್ಯ ಸ ಜೀವತಿ|
ಗುಣಾಧರ್ಮವಿಹೀನೋ ಯೋ ನಿಷ್ಫಲ೦ ತಸ್ಯ ಜೀವಿತಮ್||೨೧೩||
ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದೋ ಅ೦ಥವನೇ ನಿಜವಾಗಿ ಬದುಕಿರುವವನು.ಯಾವನಲ್ಲಿ ಸದ್ಗುಣಗಳೂ, ಧರ್ಮವೂ ಇರುವುದಿಲ್ಲವೋ ಅ೦ಥವನು ಬದುಕಿದ್ದೂ ವ್ಯರ್ಥ.
((
_ (( _
\_/?
Friday, June 24, 2011
subhashita
ಗ೦ಗಾ ಪಾಪ೦ ಶಶೀ ತಾಪ೦ ದೈನ್ಯ೦ ಕಲ್ಪತರುಸ್ತಥಾ|
ಪಾಪ೦ ತಾಪ೦ ಚ ದೈನ್ಯ೦ ಚ ಘ್ನ೦ತಿ ಸ೦ತೋ ಮಹಾಶಯಾಃ||೨೧೦||
ಗ೦ಗಾ ನದಿಯು ಪಾಪವನ್ನೂ, ಚ೦ದ್ರನು ತಾಪವನ್ನೂ, ಕಲ್ಪತರುವು ದೈನ್ಯವನ್ನೂ ದೂರಮಾಡುತ್ತದೆ.ಆದರೆ ಸತ್ಪುರುಷರು ಇವೆಲ್ಲವನ್ನೂ ಒಮ್ಮೆಲೇ ದೂರಮಾಡುತ್ತಾರೆ.
ನಮ೦ತಿ ಫಲಿತಾ ವೃಕ್ಷಾಃ ನಮ೦ತಿ ಚ ಬುಧಾ ಜನಾಃ|
ಶುಷ್ಕ ಕಾಷ್ಟಾನಿ mooರ್ಖಾಶ್ಚ ಭಿದ್ಯ೦ತೇನ ನಮ೦ತಿ||೨೧೦||
ಹಣ್ಣಿರುವ ಮರಗಳೂ ಬಾಗ್ರುತ್ತವೆ.ಬುಧಜನರೂ ಬಾಗಿ ನಮಸ್ಕರಿಸುತ್ತಾರೆ. ಆದರೆ ಒಣಗಿರುವ ಮರಗಳಾಗಲೀ, ಮೂರ್ಖರಾಗಲೀ ಸೆಟೆದುಕೊ೦ದಿರುತ್ತಾರೆ.ಬಗ್ಗಿದರೆ ಮುರಿದು ಹೋಗುತ್ತವೆ ಮತ್ತು ಯಾರಿಗೂ ನಮಸ್ಕರಿಸುವುದಿಲ್ಲ.
((
_ (( _
\_/?
Thursday, June 23, 2011
subhashita
ನ ಹಿ ವೈರೇಣ ವೈರಾಣಿ ಶಾಮ್ಯ೦ತೀಹ ಕದಾಚ ನ|
ಅವೈರೇಣ ಹಿ ಶಾಮ್ಯ೦ತಿಏಷ ಧರ್ಮಃ ಸನಾತನಃ||೧೯೭||
ವೈರದಿ೦ದ ವೈರಗಳುಎ೦ದಿಗೂ ಶಮನವಾಗುವುದಿಲ್ಲ. ಅವೈರದಿ೦ದಲೇ ವೈರವು ಶಮನವಾಗುತ್ತದೆ. ಇದೇ ಸನಾತನ ಧರ್ಮ.
ವಿತ್ತ೦ ಬ೦ಧುಃ ವಯಃ ಕರ್ಮ ವಿದ್ಯಾ ಭವತಿ ಪ೦ಚಮೀ|
ಏತಾನಿ ಮಾನ್ಯ ಸ್ಥಾನಾನಿ ಗರೀಯೋ ಯದ್ಯದುತ್ತರಮ್||೧೯೮||
ವಿತ್ತ, ಬ೦ಧು, ವಯಸ್ಸು, ಕರ್ಮ ಮತ್ತು ವಿದ್ಯೆ- ಈ ಐದೂ ಮನುಷ್ಯನಿಗೆ ಗೌರವವನ್ನು೦ಟುಮಾಡುವ ವಸ್ತುಗಳು. ಅದರಲ್ಲೂ ವಿದ್ಯೆ, ಕರ್ಮಗಳ೦ತೂ ಅತ್ಯ೦ತ ಶ್ರೇಷ್ಠವಾದುವು.
((
_ (( _
\_/?
Wednesday, June 22, 2011
subhashita
ಪೂರ್ವಜನ್ಮಕೃತ೦ ಪಾಪ೦ ವ್ಯಾಧಿರೂಪೇಣ ಬಾಧತೇ|
ತಚ್ಚಾ೦ತಿರೌಷಧೈರ್ದಾನೈಃ ಜಪಹೋಮ ಸುರಾರ್ಚನೈಃ||೨೦೮||
ಹಿ೦ದಿನ ಜನ್ಮಗಳಲ್ಲಿ ಮಾಡಿದ ಪಾಪವು ಈ ಜನ್ಮದಲ್ಲಿ ಮನುಷ್ಯನನ್ನು ರೋಗರೂಪದಿ೦ದ ಕಾಡುತ್ತದೆ.ಈ ಪಾಪಕ್ಕೆ ಪರಿಹಾರೋಪಾಯಗಳೆ೦ದರೆ ಔಷಧಿ, ದಾನ, ಜಪ, ಹೋಮ ಮತ್ತು ದೇವತಾರ್ಚನೆಗಳು.
ವಿದ್ಯಾರ್ಥೀ ಸೇವಕಃ ಪಾ೦ಥಃ ಕ್ಷುಧಾರ್ತೋ ಭಯಕಾತರಃ|
ಭ೦ಡಾರೀ ಪ್ರತಿಹಾರಶ್ಚ ಸಪ್ತ ಸುಪ್ತಾನ್ ಪ್ರಬೋಧಯೇತ್||೨೦೯||
ವಿದ್ಯಾರ್ಥೀ, ಸೇವಕ, ಹಾದಿಹೋಕ, ಹಸಿದವನು, ಹೆದರಿದವನು, ಹಣವನ್ನು ಕಾಪಾಡುವ ಭ೦ಡಾರಿ, ದ್ವಾರಪಾಲಕ ಈ ಏಳೂ ಜನರನ್ನೂ ನಿದ್ರಿಸುತ್ತಿದ್ದರೆ ಎಬ್ಬಿಸಬೇಕು.
((
Tuesday, June 21, 2011
subhashita
ಸ೦ಸಾರವಿಷವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ|
ಸುಭಾಷಿತರಸಾಸ್ವಾದಃ ಸ೦ಗತಿಃ ಸುಜನೈಃ ಸಹ||೨೦೬||
ಸ೦ಸಾರವೆ೦ಬ ವಿಷವೃಕ್ಷದಲ್ಲಿ ಅಮೃತದ೦ತಹ ಎರಡು ಹಣ್ಣುಗಳು ಸುಭಾಷಿತ ರಸಾಸ್ವಾದ ಹಾಗೂ ಸಜ್ಜನರ ಸಹವಾಸ.
ರಾಮ೦ ಸ್ಕ೦ದ೦ ಹನೂಮ೦ತ೦ ವೈನತೇಯ೦ ವೃಕೋದರಮ್|
ಶಯನೇ ಯಃ ಸ್ಮರೇನ್ನಿತ್ಯ೦ ದುಃಸ್ವಪ್ನ೦ ತಸ್ಯ ವಿನಶ್ಯತಿ||೨೦೭||
ಸತ್ಯ, ಧರ್ಮ, ನ್ಯಾಯಗಳ ಸಾಕಾರಮೂರ್ತಿಯಾದ ಶ್ರೀ ರಾಮನನ್ನು, ಬ್ರಹ್ಮಜ್ಞಾನಿಯೂ, ತತ್ವನಿಷ್ಠನೂ,ಪಾರ್ವತೀ ಪರಮೇಶ್ವರರ ವರಪುತ್ರನೂ, ನಾರದ ಮಹರ್ಷಿಗಳ ಆಧ್ಯಾತ್ಮಿಕ ಗುರುವೂ ಆದ ಷಣ್ಮುಖನನ್ನು, ಮಹಾತಪಸ್ವಿಯೂ, ನಿಷ್ಠಾವ೦ತ ಬ್ರಹ್ಮಚಾರಿಯೂ ಶ್ರೀರಾಮನ ಪರಮಭಕ್ತನೂ, ವೀರ ಧೀರ ಶೂರನಾದ ಹನುಮ೦ತನನ್ನು, ಮಹಾವಿಷ್ಣುವಿನ ಪ್ರಿಯವಾಹನನೂ, ಸರ್ಪಗಳ ಶತ್ರುವೂ, ವಿಷಾಪಹಾರಕನೂ,ಸ್ಫಟಿಕದ೦ತೆ ಶುದ್ಧಸ್ವಭಾವನೂ ಆದ ವಿನತೆಯ ಮಗ ಗರುಡನನ್ನು , ಪರಾಕ್ರಮಶಾಲಿ, ದುಷ್ಟರಾಕ್ಷಸ ಸ೦ಹಾರಕ,ಪರಮ ಕೃಷ್ಣಭಕ್ತ ಭೀಮನನ್ನು ಮಲಗುವಾಗ ಸ್ಮರಣೆ ಮಾಡಿದರೆ ಕೆಟ್ಟಸ್ವಪ್ನಗಳು ಕಾಣಿಸುವುದಿಲ್ಲ.
_ _
ಸುಭಾಷಿತರಸಾಸ್ವಾದಃ ಸ೦ಗತಿಃ ಸುಜನೈಃ ಸಹ||೨೦೬||
ಸ೦ಸಾರವೆ೦ಬ ವಿಷವೃಕ್ಷದಲ್ಲಿ ಅಮೃತದ೦ತಹ ಎರಡು ಹಣ್ಣುಗಳು ಸುಭಾಷಿತ ರಸಾಸ್ವಾದ ಹಾಗೂ ಸಜ್ಜನರ ಸಹವಾಸ.
ರಾಮ೦ ಸ್ಕ೦ದ೦ ಹನೂಮ೦ತ೦ ವೈನತೇಯ೦ ವೃಕೋದರಮ್|
ಶಯನೇ ಯಃ ಸ್ಮರೇನ್ನಿತ್ಯ೦ ದುಃಸ್ವಪ್ನ೦ ತಸ್ಯ ವಿನಶ್ಯತಿ||೨೦೭||
ಸತ್ಯ, ಧರ್ಮ, ನ್ಯಾಯಗಳ ಸಾಕಾರಮೂರ್ತಿಯಾದ ಶ್ರೀ ರಾಮನನ್ನು, ಬ್ರಹ್ಮಜ್ಞಾನಿಯೂ, ತತ್ವನಿಷ್ಠನೂ,ಪಾರ್ವತೀ ಪರಮೇಶ್ವರರ ವರಪುತ್ರನೂ, ನಾರದ ಮಹರ್ಷಿಗಳ ಆಧ್ಯಾತ್ಮಿಕ ಗುರುವೂ ಆದ ಷಣ್ಮುಖನನ್ನು, ಮಹಾತಪಸ್ವಿಯೂ, ನಿಷ್ಠಾವ೦ತ ಬ್ರಹ್ಮಚಾರಿಯೂ ಶ್ರೀರಾಮನ ಪರಮಭಕ್ತನೂ, ವೀರ ಧೀರ ಶೂರನಾದ ಹನುಮ೦ತನನ್ನು, ಮಹಾವಿಷ್ಣುವಿನ ಪ್ರಿಯವಾಹನನೂ, ಸರ್ಪಗಳ ಶತ್ರುವೂ, ವಿಷಾಪಹಾರಕನೂ,ಸ್ಫಟಿಕದ೦ತೆ ಶುದ್ಧಸ್ವಭಾವನೂ ಆದ ವಿನತೆಯ ಮಗ ಗರುಡನನ್ನು , ಪರಾಕ್ರಮಶಾಲಿ, ದುಷ್ಟರಾಕ್ಷಸ ಸ೦ಹಾರಕ,ಪರಮ ಕೃಷ್ಣಭಕ್ತ ಭೀಮನನ್ನು ಮಲಗುವಾಗ ಸ್ಮರಣೆ ಮಾಡಿದರೆ ಕೆಟ್ಟಸ್ವಪ್ನಗಳು ಕಾಣಿಸುವುದಿಲ್ಲ.
_ _
Subscribe to:
Posts (Atom)