ಉರಿಯಪ್ಪ ತುಳಿದನಹರದಿ೦ದಳಿದನವ್ವೆಯ
ವರನ ಸಿರಿಯ ಸೆಳೆದವನ
ಚರನ ಪೆಸರ ಸತಿಯರ ತ೦ದೆಯಳಿಯನ
ಧರಿಸಿಪ್ಪ ಮಣ್ಣೇಶ ಮಾ೦ ತ್ರಾಹಿ||
ಅಗ್ನಿಯು ಮರ್ದಿಸಿದ ತಕ್ಷನೆ೦ಬ ಸರ್ಪನ ಆಹಾರದಿ೦ದ ಮಡಿದ ಲೋಹಿತಕುಮಾರನ ತಾಯಿ ಚ೦ದ್ರಮತಿಯ ವಲ್ಲಭ ಹರಿಶ್ಚ೦ದ್ರನ ಐಶ್ವರ್ಯವನ್ನು ಸೆಳೆದುಕೊ೦ಡ ವಿಶ್ವಾಮಿತ್ರನ ಭೃತ್ಯ ನಕ್ಷತ್ರನ ಹೆಸರುಳ್ಳ ೨೭ಮಳೆ ನಕ್ಷತ್ರಾಭಿದಾನದ ಸ್ತ್ರಿಯರ ತ೦ದೆ ದಕ್ಷ ಬ್ರಹ್ಮನ ಅಳಿಯ ಚ೦ದ್ರನನ್ನು ಧರಿಸಿದ ಮಣ್ಣೇಶ ಮಾ೦ ತ್ರಾಹಿ||
No comments:
Post a Comment
Note: Only a member of this blog may post a comment.