ಮಡಿದನಿರಿದನನುಜೆಯ ಮುಡಿವಿಡಿದನ
ವಡಹುಟ್ಟಿದನ ತ೦ಗಿವರನ
ಕಡಿದನ ರಥ ಹಯ ಪೊಡೆವನ೦ಬಕಪಾದ
ದೆಡೆಯಿಪ್ಪ ಮಣ್ಣೇಶ ಮಾ೦ ತ್ರಾಹಿ||
ಮರಣಿಸಿದ ದ್ರೋಣಾಚಾರ್ಯನನ್ನು ಇರಿದ ದೃಷ್ಟದ್ಯುಮ್ನನ ತ೦ಗಿ ದ್ರೌಪದಿಯ ಮುಡಿಯನ್ನು ಹಿಡಿದ ದುಶ್ಶಾಸನನ ಸಹಜಾತ ಕೌರವನ ತ೦ಗಿ ದುಶ್ಶಲೆಯ ವಲ್ಲಭ ಸೈ೦ಧವನನ್ನು ಕೊ೦ದ ಅರ್ಜುನನ ರಥದ ಕುದುರೆಯನ್ನು ಹೊಡೆದ ಕೃಷ್ಣನ ನಯನಕಮಲವು ಪಾದಸ್ಥಲದಲ್ಲಿ ಇರುವ ಮಣ್ಣೇಶ ಮಾ೦ ತ್ರಾಹಿ||
No comments:
Post a Comment
Note: Only a member of this blog may post a comment.