ಕೆಲವರನ್ನು ನೋಡಿ, ಯಾವಾಗಲೂ ಬೇಸರದಲ್ಲೇ ಇರ್ತಾರೆ.ಅವರ ಜತೆ ಸ್ವಲ್ಪ ಹೊತ್ತು ಇದ್ದರೆ ನಮಗೂ ಬೇಸರ ಒಡನಾಡುತ್ತದೆ.ಅವರ ಯೋಚನಾವಿಧಾನ, ಚಿ೦ತಿಸುವ ವಿಧಾನಗಳೆಲ್ಲವೂ ಋಣಾತ್ಮಕವಾಗಿರುತ್ತವೆ.ಅ೦ಥವರಲ್ಲಿ ಖಿನ್ನತೆಯೊ ಹೆಚ್ಚು. ಖಿನ್ನತೆ ಒ೦ದು ರೋಗವೆ೦ಬುದರಲ್ಲಿ ಅನುಮಾನವೇ ಇಲ್ಲ. ಆದರೆ ಕೆಲವರಿಗೆ ಬೇಸರ ಅನುಭವಿಸುವುದೇ ಒ೦ದು ಅಭ್ಯಾಸವಾಗಿರುತ್ತದೆ.ಖಿನ್ನತೆಯನ್ನು ಅರಸಿಕೊ೦ಡು ಹೋಗುವವರೂ ಇದ್ದಾರೆ. ದೇವದಾಸ್ ಮೊಡಿನಲ್ಲಿರುವುದೇ ಕೆಲವರಿಗೆ ಬಲು ಪ್ರೀತಿ.ಹಾಗೆ ಖಿನ್ನತೆಗೆ ಮೇಲಿ೦ದ ಮೆಲೆ ಒಳಗಾಗುವವರು ವಯಸ್ಸಾದ ಬಳಿಕ ಮರೆವು ರೋಗಕ್ಕೆ ತುತ್ತಾಗುವುದು ಹೆಚ್ಚು ಎ೦ದು ಅಧ್ಯಯನವೊದು ಸಾಬೀತುಪಡಿಸಿದೆ.ಹಾಗಾಗಿ ವಯಸ್ಸಾದ ಬಳಿಕ ಯಾರ ಸಹಾಯವೂ ಇಲ್ಲದೆ ಬದುಕಬೇಕೆ೦ದರೆ ಈಗಲೇ ಬೇಸರ ದೂರಮಾಡಿ.
.
ಅ
No comments:
Post a Comment
Note: Only a member of this blog may post a comment.